Just In
Don't Miss
- News Karnataka LS Election 2024 LIVE: ಇಂದು ದೇಶದಲ್ಲಿ ಎರಡನೇ ಹಂತದ, ರಾಜ್ಯದಲ್ಲಿ ಮೊದಲ ಹಂತದ ಮತದಾನ
- Movies Shobha Shetty ; ನಿಶ್ಚಿತಾರ್ಥದ ಬಗ್ಗೆ ಮಾಹಿತಿ ನೀಡಿದ ನಟಿ ಶೋಭಾ ಶೆಟ್ಟಿ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಚ್ಚರಿ ಜಗತ್ತು: ಮಹಿಳೆಯ ಹೃದಯವನ್ನೇ ಅಡುಗೆ ಮಾಡಿ ಸೇವಿಸಿದ ನರರಾಕ್ಷಸ!!
ಈ ಲೇಖನ ದುರ್ಬಲ ಹೃದಯಗಳಿಗಾಗಿ ಅಲ್ಲ, ಎಂದು ಮೊದಲೇ ಹೇಳಿಬಿಡುತ್ತೇವೆ. ಏಕೆಂದರೆ ಈ ಮಾಹಿತಿ ಮಾನವತೆಯಲ್ಲಿರುವ ನಿಮ್ಮ ನಂಬುಗೆಯನ್ನೆ ಅಲ್ಲಾಡಿಸಬಹುದು. ಈ ಜಗತ್ತಿನಲ್ಲಿ ಎಷ್ಟು ಒಳ್ಳೆಯದು ನಡೆಯುತ್ತದೆಯೋ ಅಷ್ಟೇ ಕ್ರೂರವಾದದ್ದೂ ನಡೆಯುತ್ತದೆ. ಕೆಲವು ಪ್ರಕರಣಗಳಂತೂ ಬೆನ್ನುಹುರಿಯನ್ನೇ ಚುರುಗುಟ್ಟಿಸುವಂತಹದ್ದಾಗಿದ್ದು ಎಂತಹ ಧೈರ್ಯವಂತರನ್ನೇ ಅಲ್ಲಾಡಿಸಿಬಿಡುತ್ತದೆ.
ಭಾರತದಲ್ಲಿಯೇ ಒಬ್ಬ ನರರಾಕ್ಷಸನಿಗೆ ಜನರ ಮೆದುಳನ್ನು ತಿನ್ನುವ ವಿಚಿತ್ರ ಬಯಕೆಯಿಂದ ಸರಣಿ ಕೊಲೆಗಾರನಾಗಿರಲಿಲ್ಲವೇ? ಅಂತಹದ್ದೇ ಇನ್ನೊಂದು ಪ್ರಕರಣ ರಷ್ಯಾದಿಂದ ವರದಿಯಾಗಿದೆ. ಈ ಪ್ರಕರಣದಲ್ಲಿ ನರರಾಕ್ಷಸನೊಬ್ಬ ಯುವ ಮಹಿಳೆಯೊಬ್ಬಳನ್ನು ಕೊಂದು ಆಕೆಯ ಹೃದಯವನ್ನು ಅಡುಗೆ ಮಾಡಿ ತಿಂದ ವಿದ್ರಾವಕ ಘಟನೆ ವರದಿಯಾಗಿದೆ. ಬನ್ನಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡೋಣ....
ಇದು ನಡೆದದ್ದು ರಷ್ಯಾದಲ್ಲಿ
ಅಲೆಕ್ಸೀ ಯೆಸ್ತ್ರೆಬೋವ್ ಎಂಬ ನರಭಕ್ಷಕನೊಬ್ಬ ತನ್ನ ನಾಲಿಗೆಯ ಚಪಲ ತೀರಿಸಲೆಂದು ಮಹಿಳೆಯೊಬ್ಬಳನ್ನು ಬರ್ಬರವಾಗಿ ಕೊಂದ ಘಟನೆ ರಷ್ಯಾದಿಂದ ವರದಿಯಾಗಿದೆ. ಹೀಗೆ ಕೊಲೆಯಾಗಲ್ಪಟ್ಟ ಮಹಿಳೆ ಇನ್ನೂ ಕೇವಲ ಇಪ್ಪತ್ತೇಳು ವರ್ಷದವಳಾಗಿದ್ದು ಇಬ್ಬರು ಸುಂದರ ಮಕ್ಕಳ ತಾಯಿಯೂ ಆಗಿದ್ದಳು.
ಕೊಲೆಯ ವಿವರ
ವರದಿಗಳ ಪ್ರಕಾರ ಈ ನರಭಕ್ಷಕ ಮಹಿಳೆಯ ಕತ್ತಿನ ಮೇಲೆ ಅಡುಗೆಮನೆಯಲ್ಲಿ ಸಾಮಾನ್ಯವಾಗಿ ಬಳಸುವ ಕತ್ತಿಯಿಂದ ಪ್ರಹಾರ ಮಾಡಿ ಆಕೆಯ ಧ್ವನಿಪೆಟ್ಟಿಗೆಯನ್ನೇ ಕತ್ತರಿಸಿ ಹೊರತೆಗೆದಿದ್ದ.
ಇನ್ನೂ ಹೆಚ್ಚಿನ ಗಾಯ ಮಾಡುವುದೇ ಆತನ ಉದ್ದೇಶವಾಗಿತ್ತು
ಆಕೆ ಮೃತಳಾದ ಬಳಿಕ ಆತ ಎದೆಗೂಡನ್ನು ಬಗೆದು ಹೃದಯ ಮತ್ತು ಎಡಶ್ವಾಸಕೋಶವನ್ನು ಹೊರತೆಗೆದ ಹಾಗೂ ಪಕ್ಕದಲ್ಲಿಯೇ ಇದ್ದ ಒಲೆಯ ಮೇಲೆ ಒಂದು ಪಾತ್ರೆಯಲ್ಲಿ ನೀರು ಬಿಸಿಮಾಡಲಿಟ್ಟು ಬೇಯಿಸಿದ ಸಹಾ! ಬಳಿಕ ಆರಾಮವಾಗಿ ತನ್ನ ಫ್ಲಾಟ್ ನ ಮಾಲೀಕನಿಗೆ ಕರೆ ಮಾಡಿ ತಣ್ಣಗೇ ಹೇಗೆಂದ."ಪೋಲೀಸರನ್ನು ಮತ್ತು ಆಂಬ್ಯುಲೆನ್ಸ್ ವಾಹನವೊಂದನ್ನು ಕರೆಸಿ, ನಾನಿಲ್ಲಿ ರಕ್ತದಲ್ಲಿ ಬಿದ್ದಿದ್ದೇನೆ, ಪಕ್ಕದಲ್ಲೊಂದು ಶವವಿದೆ"
ಪೋಲೀಸರು ಬಂದಾಗ
ಪೋಲೀಸರು ಹಾಗೂ ತುರ್ತುಘಟಕದ ವೈದ್ಯರ ತಂಡ ಈ ಕೋಣೆಗ ಆಗಮಿಸಿದಾಗ ಎಲ್ಲೆಲ್ಲೂ ರಕ್ತ ಚೆಲ್ಲಾಡಿದ್ದನ್ನು ಗಮನಿಸಿದರು. ಈ ಸಿಬ್ಬಂದಿಯನ್ನು ಆರಾಮವಾಗಿ ಸ್ವಾಗತಿಸಿದ ಅಲೆಕ್ಸೀ ಹೀಗೆಂದ "ಒಲೆಯ ಮೇಲೊಂದು ಹೃದಯ ಬೇಯುತ್ತಿದೆ"
ಆದರೆ, ಆಮೇಲೇನಾಯ್ತು?
ಈ ಕೃತ್ಯಕ್ಕೆ ಏನು ಕಾರಣ ಎಂದು ಇದುವರೆಗೆ ಸ್ಪಷ್ಟವಾಗಿಲ್ಲ. ಆದರೆ ಕಿಡಿ ಇಲ್ಲದೆಯೇ ಹೊಗೆ ಏಳುತ್ತದೆಯೇ? ಈತನ ಈ ಕೃತ್ಯಕ್ಕೂ ಯಾವುದೋ ಒಂದು ಅಗೋಚರ ಕಾರಣವಿರಬಹುದು. ಮಾನವರಿಗೆ ಅತಿಯಾದ ನಿರಾಶೆಯಾದಾಗ ಅಥವಾ ದಮನಿಸಲಪಟ್ಟಾಗ ಸಹನೆಯ ಕಟ್ಟೆಯೊಡೆದು ಊಹಿಸಲೂ ಸಾಧ್ಯವಿಲ್ಲದ ಕುಕೃತ್ಯಗಳನ್ನು ಎಸಗುವುದನ್ನು ಮನಃಶಾಸ್ತ್ರಜ್ಞರು ಕಂಡುಕೊಂಡಿದ್ದಾರೆ.
ಈ ವ್ಯಕ್ತಿ ಯಾರು?
ಈ ವ್ಯಕ್ತಿ ಹೀಗೆ ಮಾಡಲು ಏನು ಕಾರಣ ಎಂಬುದನ್ನು ಕಂಡುಹಿಡಿಯಲು ಹಲವಾರು ಪ್ರಯೋಗಗಳನ್ನು ನಡೆಸಲಾಯ್ತಾದರೂ ಸ್ಪಷ್ಟವಾದ ವಿವರಣೆ ಇದುವರೆಗೆ ಸಿಕ್ಕಿಲ್ಲ.
ಈತನಿಗೆ ಮಾನಸಿಕ ಸಮಾಲೋಚನೆ ಅಗತ್ಯ
ಈತನನ್ನು ಹೊಡೆದು ಬಡಿದು ಮಾಡಿದರೂ ಯಾವುದೇ ಕಾರಣಕ್ಕೂ ಈತ ಈ ಕೃತ್ಯ ಏಕೆ ಮಾಡಿದೆ ಎಂದು ಹೇಳುತ್ತಿಲ್ಲ. ಹಾಗಾಗಿ ಮುಂದಿನ ಕ್ರಮವಾಗಿ ಈತನಿಗೆ ಮಾನಸಿಕ ಸಮಾಲೋಚನೆಯ ಮೂಲಕ ಇದರ ಮೂಲವನ್ನು ಅರಿಯುವುದು ಮುಂದಿನ ಕ್ರಮವಾಗಿದೆ. ಈ ಕೃತ್ಯದ ಮೂಲಕ ನಾವು ಕಲಿಯಬೇಕಾಗಿರುವ ಪಾಠವೆಂದರೆ, ಒಂದು ವೇಳೆ ನಮ್ಮಲ್ಲಿ ಯಾವುದೋ ಅವ್ಯಕ್ತ ಭೀತಿ, ತಿರಸ್ಕಾರ, ದ್ವೇಶ ಮೊದಲಾದವುಗಳಿದ್ದರೆ ಇವುಗಳನ್ನು ಪ್ರಕಟಿಸಿ ಇದಕ್ಕೊಂದು ಪರಿಹಾರ ಕಂಡುಕೊಳ್ಳವುದೇ ಶ್ರೇಯಸ್ಕರ. ಏಕೆಂದರೆ ಮನಸ್ಸಿನಾಳದಲ್ಲಿ ಹುದುಗಿರುವ ದ್ವೇಶ, ಹತಾಶೆ, ಸಿಟ್ಟು, ಸೇಡಿನ ಮನೋಭಾವನೆ ಮೊದಲಾದವು ಮುಂದಿನ ದಿನಗಳಲ್ಲಿ ಜ್ವಾಲಾಮುಖಿಯಾಗಿ ನಿಮ್ಮಿಂದ ಯಾವ ಕೆಲಸ ಮಾಡಿಸಬಹುದು ಎಂದು ಊಹಿಸಲೂ ಸಾಧ್ಯವಿಲ್ಲ!