Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಂತಸ ತಂದ ಸಾತ್ವಿಕ್: ಆದರೆ ಭಾರತದಲ್ಲಿ ಈ ಬೋರ್ವೆಲ್ ಘಟನೆ ಮರುಕಳುಹಿಸುತ್ತಿರಲು ಕಾರಣವೇನು?
ಸತತ 20 ಗಂಟೆ 10 ನಿಮಿಷ ಸತತ ಪ್ರಯತ್ನ, ಊಟ, ನಿದ್ದೆ ಎಲ್ಲಾ ಬದಿಗುಟ್ಟು SDRF ಗಾಗೂ ಸ್ಥಳೀಯ ಪೊಲೀಸರ ನಿರಂತರ ಶ್ರಮ, ಕಣ್ಣೀರಿಟ್ಟು ದೇವರಲ್ಲಿ ನನ್ನ ಮಗುವನ್ನು ಬದುಕಿಸಿ ಕೊಡು ಎಂದ ಬೇಡುತ್ತಿರುವ ಕರುಳು ಹಿಂಡುವ ದೃಶ್ಯ, ನೆಂಟರಿಷ್ಟರು, ಊರಿನವರು ಮಾತ್ರ ಇಡೀ ಕರ್ನಾಟಕದ ಜನತೆ ಆ ಮಗುವಿನ ಜೀವ ಉಳಿಸು ದೇವರೇ ಎಂದು ಪ್ರಾರ್ಥಿಸಿತು...
ಮಗು ಜೀವಂತವಾಗಿ ಇದೆ ಎಂದು SDRF ತಂಡ ಎಂದು ಹೇಳುತ್ತಿದ್ದರೂ ಮನಸ್ಸಿನ ಮೂಲೆಯಲ್ಲಿ ಎಲ್ಲೋ ಆತಂಕ, ಏಕೆಂದರೆ ಈ ಹಿಂದೆ ನಡೆದ ಎಷ್ಟೋ ಘಟನೆಗಳ ಜನರ ನೆನಪಿನಲ್ಲಿ ಬಂದು ಹೋಯ್ತು, ಮಧ್ಯಪ್ರದೇಶದಲ್ಲಿ 5 ಗಂಟೆ ಶ್ರಮಿಸಿ ಮಗುವನ್ನು ಬೋರೆವೆಲ್ನಿಂದ ಹೊರತೆಗೆದಾಗ ಜನರಿಗೆ ಖುಷಿಯಾಗಿತ್ತು.

ಏಕೆಂದರೆ ಹೊರ ತೆಗೆಯುವಾಗ ಬದುಕಿದ್ದ ಮಗು, ಬೋರ್ವೆಲ್ನಿಂದ ಹೊರಬಂದ ಕೆಲವೇ ನಿಮಿಷದಲ್ಲಿ ಸಾವನ್ನಪ್ಪಿತ್ತು. ಹಾಗಾಗಿ ಮನಸ್ಸಿನ ಮೂಲೆಯಲ್ಲಿ ಏನೋ ಒಂದು ರೀತಿಯ ಕಳವಳ. ಕೊನೆಗೂ ದೇವರು ದೊಡ್ಡವನು ಸಾತ್ವಿಕ್ ಪುರ್ನಜನ್ಮ ಪಡೆದು ಬಂದ... ಎಲ್ಲರ ಮುಖದಲ್ಲಿ ನಗು ಮೂಡಿತು.
ಭಾರತದಲ್ಲಿ ಈ ರೀತಿಯ ಘಟನೆ ಪದೇ ನಡೆಯುತ್ತಿರುವುದೇಕೆ?
ವರ್ಷದಲ್ಲಿ ಒಂದಾದರೂ ಮಗು ಬೋರ್ವೆಲ್ಗೆ ಬೀಳುತ್ತಿರುವ ಘಟನೆ ನಡೆಯುತ್ತಲೇ ಇರುತ್ತದೆ. ಜನರ ನಿರ್ಲಕ್ಷ್ಯವೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಭಾರತದ್ಯಾಂತ ಸುಮಾರು 27 ಮಿಲಿಯನ್ಗಿಂತಲೂ ಅಧಿಕ ಬೋರ್ವೆಲ್ಗಳಿದೆ ಆದರೆ ಅವುಗಳಲ್ಲಿ ಸಾಕಷ್ಟು ಬೋರ್ವೆಲ್ಗಳಿಗೆ ನೀರು ಸಿಗದೆ ಹಾಗೇ ಬಿಟ್ಟಿದ್ದಾರೆ. ಅದನ್ನು ಸರಿಯಾಗಿ ಮುಚ್ಚದೆ ಇರುವ ಕಾರಣ ಮಕ್ಕಳು ಆಟವಾಡುತ್ತಾ ಅಲ್ಲಿಗೆ ಬಂದಾಗ ಬೋರ್ವೆಲ್ನಲ್ಲಿ ಬೀಳುವ ಸಾಧ್ಯತೆ ಹೆಚ್ಚಿರುತ್ತದೆ.
ಯಾವ ಬೋರ್ವೆಲ್ ಹೆಚ್ಚು ಅಪಾಯಕಾರಿ?
ಬೋರ್ವೆಲ್ನಲ್ಲಿ ನೀರು ಬತ್ತಿದಾಗ ಅದರಲ್ಲಿದ್ದ ಪಿವಿಸಿ ಪೈಪ್ ತೆಗೆಯುತ್ತಾರೆ, ಇದರಿಂದ ಭೂಮಿಯಲ್ಲಿ ದೊಡ್ಡ ಗುಂಡಿ ಹಾಗೆಯೇ ಉಳಿಯುತ್ತದೆ, ಇಂಥ ಬೋರ್ವೆಲ್ಗಳೇ ಅಪಾಯಕಾರಿ. ಎಲ್ಲಿಯೇ ಇಂಥದ್ದೇ ಬೋರ್ವೆಲ್ ಕಂಡರೆ ಅದನ್ನು ಮುಚ್ಚಿಸುವಂತೆ ಹೇಳಬೇಕು, ಅವರು ನಿಮ್ಮ ಮಾತು ಕೇಳದಿದ್ದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ.
ಸುಪ್ರೀಂಕೋರ್ಟ್ 2010ರಲ್ಲಿಯೇ ಯಾವೆಲ್ಲಾ ಸುರಕ್ಷತೆಕ್ರಮ ಅನುಸರಿಸಬೇಕು ಎಂದು ಹೇಳಿದೆ:
ಒಂದು ವೇಳೆ ಬೋರ್ವೆಲ್ನಲ್ಲಿ ನೀರಿಲ್ಲ ಎಂದಾದರೆ ಅದನ್ನು ಹಾಗೆಯೇ ಬಿಡುವಂತಿಲ್ಲ, ಸಂಬಂಧ ಪಟ್ಟ ಇಲಾಖೆಯಿಂದ ಸರ್ಟಿಫಿಕೇಟ್ ನೀಡಬೇಕು. ಜಿಲ್ಲಾಧಿಕಾರಿ ಅಥವಾ ಬ್ಲಾಕ್ ಡೆವಲೆಪ್ಮೆಂಟ್ ಆಫೀಸ್ ಈ ಬಗ್ಗೆ ಗಮನಹರಿಸಬೇಕು. ಇಂಥ ಬೋರ್ವೆಲ್ ಸುತ್ತ ತಂತಿ ಬೇಲೆ ಹಾಕಬೇಕು.
ಬೋರ್ವೆಲ್ನೊಳಗೆ ಮಣ್ಣು, ಮರಳು, ಕಲ್ಲು ಹಾಕಿ ತುಂಬಿದರೆ ತುಂಬಾ ಒಳ್ಳೆಯದು.
ಸಾತ್ವಿಕ್ ಘಟನೆ ದೇಶದ ಗಮನ ಸೆಳೆದಿದೆ
ಹೌದು ಪುಟ್ಟ ಬಾಲಕ ಪವಾಡದಂತೆ ಪಾರಾಗಿರುವುದು ಜನತೆಗೆ ಖುಷಿ ತಂದಿದ್ದು ದೇಶದ ಗಮನ ಸೆಳೆದಿದೆ ಈ ರಕ್ಷಣಾ ಕಾರ್ಯ ಮಾಡಿದವರ ಬುದ್ಧಿವಂತೆಕೆಯನ್ನು ಅವರ ಶ್ರಮವನ್ನು ಜನರು ಕೊಂಡಾಡುತ್ತಿದ್ದಾರೆ. ಪೋಷಕರ ಚಿಕ್ಕ ನಿರ್ಲಕ್ಷ್ಯದಿಂದಾಗಿ ಮಗು ಬೋರ್ವೆಲ್ಗೆ ಬಿತ್ತು, ಮನೆ ಸಮೀಪ ಅಥವಾ ತೋಟದಲ್ಲಿ ಬೋರ್ವೆಲ್ ಮುಚ್ಚಿರದಿದ್ದರೆ ಅದನ್ನು ಮುಚ್ಚಿ, ಇಲ್ಲಾಂದ್ರೆ ಇಂಥ ಅವಘಡಗಳು ಮುಂದುವರೆಯುತ್ತೆ. ಈ ಮಗು ದೇವರ ಕರುಣೆಯಿಂದ ಬದುಕಿ ಬಂದಿದೆ, ತಲೆ ಕೆಳಗಾದ ಸ್ಥಿತಿಯಲ್ಲಿ, ಹೊಟ್ಟೆಗೆ ಆಹಾರವಿಲ್ಲದೆ 20 ಗಂಟೆ ಮಗು ಬೋರ್ವೆಲ್ ಒಳಗಿತ್ತು.
ಸಾತ್ವಿಕ್ ಈಗ ಎಲ್ಲರ ಮುಖದಲ್ಲಿ ನಗು ಮೂಡಿಸಿದ್ದಾನೆ, ಆದರೆ ಇನ್ಮುಂದೆ ಈ ರೀತಿಯ ಘಟನೆ ಉಂಟಾಗದಂತೆ ಜನರು ತುಂಬಾನೇ ಎಚ್ಚರವಹಿಸಬೇಕು. ಸಾತ್ವಿಕ್ದ್ದೇ ಕೊನೆಯ ಪ್ರಕರಣ ಆಗಲಿ.



Click it and Unblock the Notifications