Latest Updates
-
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ? -
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ? -
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್! -
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ?
Zero Shadow Day: ಬೆಂಗಳೂರಲ್ಲಿ ಇಂದು ಶೂನ್ಯ ನೆರಳು ದಿನ.! ಯಾವ ಸಮಯದಲ್ಲಿ ಗೊತ್ತಾ?
ಆಕಾಶದಲ್ಲಿ ಯಾವಾಗಲು ಅಚ್ಚರಿಯ ವಿದ್ಯಮಾನಗಳು ನಡೆಯುತ್ತಲೇ ಇರುತ್ತವೆ. ಕೆಲವೊಮ್ಮೆ ಗ್ರಹಣಗಳು, ಉಲ್ಕೆಗಳ ಹಾರಾಟ, ವಿಚಿತ್ರ ವಸ್ತುಗಳು ಕಾಣಿಸಿಕೊಳ್ಳುವುದು, ವಿಚಿತ್ರ ಕಾಮನಬಿಲ್ಲು, ಸೂರ್ಯನಿಗೆ ಕೊಡೆ ಹಿಡಿದ ರೀತಿಯ ಆಕೃತಿಗಳು, ಈಗ ಈ ಸಾಲಿಗೆ ಶೂನ್ಯ ನೆರಳು ಸಹ ಸೇರಿಕೊಂಡಿದೆ.
ಈ ವಿದ್ಯಮಾನ ಆಕಾಶದಲ್ಲಿಯೇ ನಡೆದರು ಅದರ ಪರಿಣಾಮ ಭೂಮಿ ಮೇಲೆ ಬೀಳುತ್ತದೆ. ಇಂದು ಬೆಂಗಳೂರು ಈ ಶೂನ್ಯ ನೆರಳಿನ ವಿದ್ಯಮಾನಕ್ಕೆ ಸಾಕ್ಷಿಯಾಗುತ್ತಿದೆ. ಹೌದು ಬೆಂಗಳೂರಿನಲ್ಲಿ ಸುಮಾರು 12:17 ರಿಂದ 12:24ರ ವರೆಗೆ 6 ನಿಮಿಷಗಳ ಕಾಲ ಶೂನ್ಯ ನೆರಳಿನ ವಿದ್ಯಮಾನ ಸಂಭವಿಸುತ್ತಿದೆ.

ಈ ಶೂನ್ಯ ನೆರಳಿನ ವೇಳೆ ನಿಮ್ಮ ನೆರಳು ಸಂಪೂರ್ಣವಾಗಿ ಮಾಯವಾಗುತ್ತದೆ. ನೀವು ಬಿಸಿಲಿನಲ್ಲಿ ಹೊರಬಂದರೆ ನಿಮ್ಮ ನೆರಳು ಭೂಮಿಯ ಮೇಲೆ ಬೀಳದೆ ಇರುವ ವಿದ್ಯಮಾನ ಇದಾಗಿದೆ. ಇದೊಂದು ಅಚ್ಚರಿಯ ವಿದ್ಯಮಾನವಾಗಿದ್ದು, ಕೆಲವು ಬಾರಿ ಮಾತ್ರ ಸಂಭವಿಸುತ್ತದೆ. ಅಂದರೆ ಬಹುತೇಕ ವರ್ಷದಲ್ಲಿ ಎರಡು ಬಾರಿ ಈ ಶೂನ್ಯ ನೆರಳಿನ ವಿದ್ಯಮಾನ ಸಂಭವಿಸಲಿದೆ. ಸೂರ್ಯನು ನೇರವಾಗಿ ತಲೆಯೆ ಮೇಲೆ ಬಂದಾಗ ಈ ವಿದ್ಯಮಾನಕ್ಕೆ ನಾವು ಸಾಕ್ಷಿಯಾಗುತ್ತೇವೆ.
ಸೂರ್ಯನ ಕೋನವು ಭೂಮಿಯ ಮೇಲ್ಮೈಗೆ ಬಹುತೇಕ ಲಂಬವಾಗಿರುವಾಗ ಸಮಭಾಜಕ ವೃತ್ತದ ಪ್ರದೇಶದಲ್ಲಿರುವ ಎಲ್ಲಾ ಪ್ರದೇಶಗಳು ಶೂನ್ಯ ನೆರಳಿನ ವಿದ್ಯಮಾನಕ್ಕೆ ಸಾಕ್ಷಿಯಾಗಲಿವೆ. ಇಂದು (ಏಪ್ರಿಲ್ 24) ಬೆಂಗಳೂರು ಸೇರಿ ಸಮೀಪದ ಹಲವು ನಗರಗಳಲ್ಲಿ ಶೂನ್ಯ ನೆರಳು ಕಾಣಿಸಲಿದೆ.
ಶೂನ್ಯ ನೆರಳು ದಿನ ಎಂದರೇನು?
ಆಸ್ಟ್ರೋನಾಮಿಕಲ್ ಸೊಸೈಟಿ ಆಫ್ ಇಂಡಿಯಾ (ASI) ಪ್ರಕಾರ, +23.5 ಮತ್ತು -23.5 ಡಿಗ್ರಿ ಅಕ್ಷಾಂಶದ ಸಮೀಪ ಇರುವ ಪ್ರದೇಶಗಲ್ಲಿ ವರ್ಷಕ್ಕೆ ಎರಡು ಬಾರಿ ಈ ಶೂನ್ಯ ನೆರಳು ವಿದ್ಯಮಾನ ಘಟಿಸಲಿದೆ. ಈ ಸಮಯದಲ್ಲಿ ಸೂರ್ಯ ನೇರವಾಗಿ ತಲೆಯ ಮೇಲಿರುತ್ತಾನೆ. ಹೀಗಾದಾಗ ನಮ್ಮ ನೆರಳು ನೇರವಾಗಿ ಬೀಳಬೇಕಾಗುತ್ತದೆ. ಹೀಗೆ ಬಿದ್ದಾಗ ಭೂಮಿ ಮೇಲೆ ನೆರಳು ಮೂಡುವುದಿಲ್ಲ. ಈ ವೇಳೆ ನೆರಳು ಮಾಯವಾಗಿರುವಂತಹ ಅನುಭವವಾಗುತ್ತದೆ. ಇಂದು ಉತ್ತರಾಯಣದಲ್ಲಿ ಸೂರ್ಯ ಇರುವ ಕಾರಣದಿಂದ ಉಂಟಾಗುತ್ತಿದೆ. ಮುಂದೆ ಆಗಸ್ಟ್ ತಿಂಗಳಲ್ಲಿ ಸೂರ್ಯ ದಕ್ಷಿಣಾಯಣದಲ್ಲಿರುವಾಗಲು ಇದೇ ವಿದ್ಯಮಾನ ಮತ್ತೊಮ್ಮೆ ಎದುರಾಗಲಿದೆ.
ಕಳೆದ ವರ್ಷ ಅಂದರೆ ಸರಿಯಾಗಿ ಏಪ್ರಿಲ್ 25, 2023ರಂದು ಹಾಗೂ ಅದೇ ವರ್ಷ ಆಗಸ್ಟ್ 18ರಂದು ಸಹ ಈ ಘಟನೆಗೆ ಬೆಂಗಳೂರು ಸಾಕ್ಷಿಯಾಗಿತ್ತು. ಏಪ್ರಿಲ್ 25ಕ್ಕೆ ಬೆಂಗಳೂರಿನಲ್ಲಿ ಶೂನ್ಯ ನೆರಳಿನ ಅಪರೂಪದ ಘಟನೆ ನಡೆದಿತ್ತು. ಇದಾದ ಬಳಿಕ ಆಗಸ್ಟ್ 18ರಂದು ಸಹ ಶೂನ್ಯ ನೆರಳು ದಿನ ನಡೆದಿತ್ತು.
ಶೂನ್ಯ ನೆರಳು ವಿದ್ಯಮಾನ ವೀಕ್ಷಿಸಲು ಯಾವ ಉಪಕರಣವೂ ಬೇಕಿಲ್ಲ
ಇನ್ನು ಈ ವಿಶೇಷ ವಿದ್ಯಮಾನ ವೀಕ್ಷಿಸಲು ಯಾವ ಉಪಕರಣಗಳ ಅಗತ್ಯವಿರುವುದಿಲ್ಲ. ಗ್ರಹಣ, ಗ್ರಹ, ಉಲ್ಕೆ ನೋಡಲು ಕೆಲವು ಉಪಕರಣಗಳ ಅಗತ್ಯವಿದೆ. ಆದರೆ ಈ ಶೂನ್ಯ ನೆರಳಿನ ವಿದ್ಯಮಾನ ನಮ್ಮ ಕಣ್ಣ ಮುಂದೆಯೇ ಜರುಗುತ್ತದೆ. ಜೊತೆಗೆ ಇದರಿಂದ ಯಾವ ಹಾನಿಯಾಗಲಿದೆ ಅಥವಾ ಯಾವುದೇ ಕೆಟ್ಟದ್ದಾಗಲಿ ಆಗುವುದಿಲ್ಲ.



Click it and Unblock the Notifications