Latest Updates
-
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ! -
ಕರಾವಳಿ ರೆಡ್ ಅಲರ್ಟ್: ಮನೆಯಲ್ಲೇ ಸುರಕ್ಷಿತವಾಗಿ ಫಿಟ್ ಆಗಿರಲು ಈ 12 ನಿಮಿಷಗಳ ವರ್ಕೌಟ್ ಟ್ರೈ ಮಾಡಿ!
Zero Shadow Day: ಬೆಂಗಳೂರಲ್ಲಿ ಇಂದು ಶೂನ್ಯ ನೆರಳು ದಿನ.! ಯಾವ ಸಮಯದಲ್ಲಿ ಗೊತ್ತಾ?
ಆಕಾಶದಲ್ಲಿ ಯಾವಾಗಲು ಅಚ್ಚರಿಯ ವಿದ್ಯಮಾನಗಳು ನಡೆಯುತ್ತಲೇ ಇರುತ್ತವೆ. ಕೆಲವೊಮ್ಮೆ ಗ್ರಹಣಗಳು, ಉಲ್ಕೆಗಳ ಹಾರಾಟ, ವಿಚಿತ್ರ ವಸ್ತುಗಳು ಕಾಣಿಸಿಕೊಳ್ಳುವುದು, ವಿಚಿತ್ರ ಕಾಮನಬಿಲ್ಲು, ಸೂರ್ಯನಿಗೆ ಕೊಡೆ ಹಿಡಿದ ರೀತಿಯ ಆಕೃತಿಗಳು, ಈಗ ಈ ಸಾಲಿಗೆ ಶೂನ್ಯ ನೆರಳು ಸಹ ಸೇರಿಕೊಂಡಿದೆ.
ಈ ವಿದ್ಯಮಾನ ಆಕಾಶದಲ್ಲಿಯೇ ನಡೆದರು ಅದರ ಪರಿಣಾಮ ಭೂಮಿ ಮೇಲೆ ಬೀಳುತ್ತದೆ. ಇಂದು ಬೆಂಗಳೂರು ಈ ಶೂನ್ಯ ನೆರಳಿನ ವಿದ್ಯಮಾನಕ್ಕೆ ಸಾಕ್ಷಿಯಾಗುತ್ತಿದೆ. ಹೌದು ಬೆಂಗಳೂರಿನಲ್ಲಿ ಸುಮಾರು 12:17 ರಿಂದ 12:24ರ ವರೆಗೆ 6 ನಿಮಿಷಗಳ ಕಾಲ ಶೂನ್ಯ ನೆರಳಿನ ವಿದ್ಯಮಾನ ಸಂಭವಿಸುತ್ತಿದೆ.

ಈ ಶೂನ್ಯ ನೆರಳಿನ ವೇಳೆ ನಿಮ್ಮ ನೆರಳು ಸಂಪೂರ್ಣವಾಗಿ ಮಾಯವಾಗುತ್ತದೆ. ನೀವು ಬಿಸಿಲಿನಲ್ಲಿ ಹೊರಬಂದರೆ ನಿಮ್ಮ ನೆರಳು ಭೂಮಿಯ ಮೇಲೆ ಬೀಳದೆ ಇರುವ ವಿದ್ಯಮಾನ ಇದಾಗಿದೆ. ಇದೊಂದು ಅಚ್ಚರಿಯ ವಿದ್ಯಮಾನವಾಗಿದ್ದು, ಕೆಲವು ಬಾರಿ ಮಾತ್ರ ಸಂಭವಿಸುತ್ತದೆ. ಅಂದರೆ ಬಹುತೇಕ ವರ್ಷದಲ್ಲಿ ಎರಡು ಬಾರಿ ಈ ಶೂನ್ಯ ನೆರಳಿನ ವಿದ್ಯಮಾನ ಸಂಭವಿಸಲಿದೆ. ಸೂರ್ಯನು ನೇರವಾಗಿ ತಲೆಯೆ ಮೇಲೆ ಬಂದಾಗ ಈ ವಿದ್ಯಮಾನಕ್ಕೆ ನಾವು ಸಾಕ್ಷಿಯಾಗುತ್ತೇವೆ.
ಸೂರ್ಯನ ಕೋನವು ಭೂಮಿಯ ಮೇಲ್ಮೈಗೆ ಬಹುತೇಕ ಲಂಬವಾಗಿರುವಾಗ ಸಮಭಾಜಕ ವೃತ್ತದ ಪ್ರದೇಶದಲ್ಲಿರುವ ಎಲ್ಲಾ ಪ್ರದೇಶಗಳು ಶೂನ್ಯ ನೆರಳಿನ ವಿದ್ಯಮಾನಕ್ಕೆ ಸಾಕ್ಷಿಯಾಗಲಿವೆ. ಇಂದು (ಏಪ್ರಿಲ್ 24) ಬೆಂಗಳೂರು ಸೇರಿ ಸಮೀಪದ ಹಲವು ನಗರಗಳಲ್ಲಿ ಶೂನ್ಯ ನೆರಳು ಕಾಣಿಸಲಿದೆ.
ಶೂನ್ಯ ನೆರಳು ದಿನ ಎಂದರೇನು?
ಆಸ್ಟ್ರೋನಾಮಿಕಲ್ ಸೊಸೈಟಿ ಆಫ್ ಇಂಡಿಯಾ (ASI) ಪ್ರಕಾರ, +23.5 ಮತ್ತು -23.5 ಡಿಗ್ರಿ ಅಕ್ಷಾಂಶದ ಸಮೀಪ ಇರುವ ಪ್ರದೇಶಗಲ್ಲಿ ವರ್ಷಕ್ಕೆ ಎರಡು ಬಾರಿ ಈ ಶೂನ್ಯ ನೆರಳು ವಿದ್ಯಮಾನ ಘಟಿಸಲಿದೆ. ಈ ಸಮಯದಲ್ಲಿ ಸೂರ್ಯ ನೇರವಾಗಿ ತಲೆಯ ಮೇಲಿರುತ್ತಾನೆ. ಹೀಗಾದಾಗ ನಮ್ಮ ನೆರಳು ನೇರವಾಗಿ ಬೀಳಬೇಕಾಗುತ್ತದೆ. ಹೀಗೆ ಬಿದ್ದಾಗ ಭೂಮಿ ಮೇಲೆ ನೆರಳು ಮೂಡುವುದಿಲ್ಲ. ಈ ವೇಳೆ ನೆರಳು ಮಾಯವಾಗಿರುವಂತಹ ಅನುಭವವಾಗುತ್ತದೆ. ಇಂದು ಉತ್ತರಾಯಣದಲ್ಲಿ ಸೂರ್ಯ ಇರುವ ಕಾರಣದಿಂದ ಉಂಟಾಗುತ್ತಿದೆ. ಮುಂದೆ ಆಗಸ್ಟ್ ತಿಂಗಳಲ್ಲಿ ಸೂರ್ಯ ದಕ್ಷಿಣಾಯಣದಲ್ಲಿರುವಾಗಲು ಇದೇ ವಿದ್ಯಮಾನ ಮತ್ತೊಮ್ಮೆ ಎದುರಾಗಲಿದೆ.
ಕಳೆದ ವರ್ಷ ಅಂದರೆ ಸರಿಯಾಗಿ ಏಪ್ರಿಲ್ 25, 2023ರಂದು ಹಾಗೂ ಅದೇ ವರ್ಷ ಆಗಸ್ಟ್ 18ರಂದು ಸಹ ಈ ಘಟನೆಗೆ ಬೆಂಗಳೂರು ಸಾಕ್ಷಿಯಾಗಿತ್ತು. ಏಪ್ರಿಲ್ 25ಕ್ಕೆ ಬೆಂಗಳೂರಿನಲ್ಲಿ ಶೂನ್ಯ ನೆರಳಿನ ಅಪರೂಪದ ಘಟನೆ ನಡೆದಿತ್ತು. ಇದಾದ ಬಳಿಕ ಆಗಸ್ಟ್ 18ರಂದು ಸಹ ಶೂನ್ಯ ನೆರಳು ದಿನ ನಡೆದಿತ್ತು.
ಶೂನ್ಯ ನೆರಳು ವಿದ್ಯಮಾನ ವೀಕ್ಷಿಸಲು ಯಾವ ಉಪಕರಣವೂ ಬೇಕಿಲ್ಲ
ಇನ್ನು ಈ ವಿಶೇಷ ವಿದ್ಯಮಾನ ವೀಕ್ಷಿಸಲು ಯಾವ ಉಪಕರಣಗಳ ಅಗತ್ಯವಿರುವುದಿಲ್ಲ. ಗ್ರಹಣ, ಗ್ರಹ, ಉಲ್ಕೆ ನೋಡಲು ಕೆಲವು ಉಪಕರಣಗಳ ಅಗತ್ಯವಿದೆ. ಆದರೆ ಈ ಶೂನ್ಯ ನೆರಳಿನ ವಿದ್ಯಮಾನ ನಮ್ಮ ಕಣ್ಣ ಮುಂದೆಯೇ ಜರುಗುತ್ತದೆ. ಜೊತೆಗೆ ಇದರಿಂದ ಯಾವ ಹಾನಿಯಾಗಲಿದೆ ಅಥವಾ ಯಾವುದೇ ಕೆಟ್ಟದ್ದಾಗಲಿ ಆಗುವುದಿಲ್ಲ.



Click it and Unblock the Notifications