Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಎಲೆಕೋಸಿಗೆ ಕೆಮಿಕಲ್ ಮಿಶ್ರಣ ಮಾಡ್ತಾರೆ ಹುಷಾರ್..! ವಿಡಿಯೋ ವೈರಲ್..!
ಇತ್ತೀಚಿನ ದಿನಗಳಲ್ಲಿ ನಾವು ಸೇವಿಸುವ ಪ್ರತಿಯೊಂದು ಆಹಾರವು ಕಲಬೆರಕೆ ಆಗಿಯುತ್ತದೆ, ಇಲ್ಲವೆ ಕೆಮಿಕಲ್ಯುಕ್ತವಾಗಿರುತ್ತದೆ. ಸಾವಯವವಾಗಿ ಬೆಳೆದು ಮಾರುಕಟ್ಟೆಗೆ ತಂದು ಮಾರಾಟ ಮಾಡುವವರು ಬೆರಳೆಣಿಕೆ ಜನರಷ್ಟೇ ಸಿಗುತ್ತಾರೆ. ಅದರಲ್ಲೂ ನಾವು ಸೇವಿಸುವ ತರಕಾರಗಳ ಕುರಿತು ಕೇಳೋದೆ ಬೇಡ.
ತರಕಾರಿಗಳ ಬೆಳೆಯುವಾಗಲೂ ಹತ್ತಾರು ರೀತಿಯ ರಾಸಾಯನಿಕ ಬಳಸುತ್ತಾರೆ. ಬೆಳೆದ ಮೇಲೆ ಅದನ್ನು ಕೊಯ್ಲು ಮಾಡುವಾಗಲು ಕೆಮಿಕಲ್ ಬಳಸುತ್ತಾರೆ. ಜೊತೆಗೆ ಮಾರುಕಟ್ಟೆಗೆ ತಂದಾಗಲು ಅದನ್ನು ಕೆಮಿಕಲ್ ಬಳಸಿಯೇ ಹೆಚ್ಚು ದಿನ ಹಾಳಾಗದಂತೆ ಇಡುತ್ತಾರೆ. ಇದೇ ತರಕಾರಿಯನ್ನು ನಾವು ಖರೀದಿಸಿ ತಂದು ಸೇವಿಸಿ ಕಾಯಿಲೆಗೆ ಬೀಳುತ್ತಿದ್ದೇವೆ.

ಹೌದು ಇತ್ತೀಚಿಗೆ ಸಾಮಾನ್ಯವಾಗಿ ಚಿಕ್ಕ ವಯಸ್ಸಿನಲ್ಲಿಯೇ ತೂಕ ಹೆಚ್ಚಾಗುವುದು, ಹೃದಯ ಸಂಬಂಧಿ ಕಾಯಿಲೆ, ಹೃದಯಾಘಾತ, ಕಿಡ್ನಿ ವೈಫಲ್ಯಗಳು ಸೇರಿದಂತೆ ಹತ್ತಾರು ಸಮಸ್ಯೆಯನ್ನು ಯುವ ಜನತೆ ಎದುರಿಸುತ್ತಿವೆ. ಇದಕ್ಕೆಲ್ಲ ಪರೋಕ್ಷವಾಗಿ ನಮ್ಮ ದೈನಂದಿನ ಜೀವನ ಕ್ರಮವೂ ಕಾರಣವಾಗಿರುತ್ತದೆ. ನಾವು ಸೇವಿಸುವ ಆಹಾರದಲ್ಲಿಯೇ ಕೆಮಿಕಲ್ಗಳು ನಮ್ಮ ದೇಹ ಸೇರುತ್ತಿವೆ.
ನೀವು ಯಾವುದೇ ತರಕಾರಿ, ಹಣ್ಣು ಅಥವಾ ತಿಂಡಿ, ತಿನಿಸು ಖರೀದಿಸಿದರು ಅದರಲ್ಲಿ ರಾಸಾಯನಿಕದ ಅಂಶವನ್ನು ನಾವು ನೋಡಬಹುದು. ಆದರೆ ಕೆಮಿಕಲ್ ಹಾಕದೆಯೇ ಬೆಳೆಯುವ ಯಾವುದೇ ಪದಾರ್ಥಗಳು ಕಡಿಮೆ ದರಕ್ಕೆ ಸಿಗುವುದೂ ಇಲ್ಲ.
ಇದೆಲ್ಲದರ ನಡುವೆ ಈಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಎಲೆಕೋಸಿಗೆ ವ್ಯಕ್ತಿಯಿಬ್ಬ ಕೆಮಿಕಲ್ ಬೆರೆಸುತ್ತಿರುವುದು ಕಂಡುಬಂದಿದೆ. ಎಲೆಕೋಸು ಕೊಯ್ಲು ಮಾಡಿ ವಾಹನದಲ್ಲಿ ಮಾರುಕಟ್ಟೆಗೆ ಸಾಗಿಸುವ ಮುನ್ನ ಆತ ಕೆಮಿಕಲ್ ಸಿಂಪಡಿಸುತ್ತಿರುವುದನ್ನು ನಾವು ನೋಡಬಹುದು.
ಆತ ಬಿಳಿ ಬಣ್ಣದ ಪೌಡರ್ನಂತೆ ಕಾಣುತ್ತಿರುವ ಕೆಮಿಕಲ್ ಅನ್ನು ಎಲೆಕೋಸುಗಳಿಗೆ ಹಾಕುತ್ತಿರುವುದ ನೋಡಬಹುದು. ಆದರೆ ಆತ ಯಾವ ರಾಸಾಯನಿಕ ಬೆರೆಸಿ ಈ ಪೌಡರ್ ತಯಾರಿಸಿದ್ದಾನೆ ಎಂಬುದು ಪತ್ತೆಯಾಗಿಲ್ಲ. ಆದರೆ ಎಲೆ ಕೋಸುಗಳು ಬಹುಬೇಗ ಹಾಳಾಗದಂತೆ ತಡೆಯಲು ಆತ ಈ ರೀತಿ ಮಾಡುತ್ತಿದ್ದಾನೆ.
ಅಂತಹ ತರಕಾರಿಗಳು ಹೃದಯಾಘಾತ, ಚರ್ಮದ ಸಮಸ್ಯೆಗಳು ಮತ್ತು ಕ್ಯಾನ್ಸರ್ ಅಪಾಯವನ್ನೂ ಸಹ ತರಬಹುದು ಎಂದು ವಿಡಿಯೋ ಹಂಚಿಕೊಂಡಿರುವ ಮಹಿಳೆ ಹೇಳುತ್ತಿದ್ದಾರೆ. ಇನ್ನು ಮಾರುಕಟ್ಟೆಯಿಂದ ನಾವು ಖರೀದಿಸುವ ತರಕಾರಿನಲ್ಲಿ ಬಿಸಿ ನೀರಿಗೆ ಉಪ್ಪು ಹಾಕಿ ಒಂದು ನಿಮಿಷ ಬಿಟ್ಟು ಬಳಿಕ ಚೆನ್ನಾಗಿ ತೊಳೆದ ಬಳಿಕ ಸೇವಿಸಬೇಕು ಎಂದು ವಿಡಿಯೋದಲ್ಲಿ ಸಲಹೆ ನೀಡುತ್ತಿದ್ದಾರೆ.
ಈ ವಿಡಿಯೋ ವೈರಲ್ ಆದ ಬಳಿಕ ನೆಟ್ಟಿಗರು ಶಾಕ್ ಆಗಿದ್ದು, ಮಾರುಕಟ್ಟೆಯಲ್ಲಿ ಒಂದು ವಾರದಿಂದಲೂ ಇಟ್ಟುಕೊಂಡು ಮಾರುವ ತರಕಾರಿಗಳಿಗೆ ಈ ರೀತಿಯ ಪುಡಿ ಬಳಸುತ್ತಾರೆಯೇ ಎಂಬ ಪ್ರಶ್ನೆ ಮೂಡಿದೆ. ಜೊತೆಗೆ ಯಾವ ತರಕಾರಿಗಳನ್ನೂ ಈಗ ಧೈರ್ಯವಾಗಿ ಖರೀದಿಸಲು ಸಾಧ್ಯವಾಗುತ್ತಿಲ್ಲ, ಕಾರಣ ಎಲ್ಲದಕ್ಕು ರಾಸಾಯನಿಕ ಬಳಸಿಸುತ್ತಾರೆ. ತರಕಾರಿ ಮಾತ್ರವಲ್ಲ ಹಣ್ಣುಗಳಿಗೂ ಸಹ ವಿಪರೀತ ಕೆಮಿಕಲ್ ಬಳಸಿ ಅವು ಕೆಡದಂತೆ ಬಹಳ ದಿನಕಾಲ ಇಡುತ್ತಾರೆ. ಆದರೆ ಈ ಹಣ್ಣುಗಳ ಖರೀದಿಸಿ ಸೇವಿಸುವ ಮಂದಿ ಒಂದಲ್ಲಾ ಒಂದು ರೀತಿಯ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ ಎಂಬುದು ಬಳಕೆದಾರರ ವಾದವಾಗಿದೆ.
ಇಂತಹ ಜನಬಳಕೆಯ ವಸ್ತುಗಳಿಗೆ ರಾಸಾಯನಿಕ ಹಾಕುವುದನ್ನು ತಡೆಯಬೇಕು ಎನ್ನುವುದು ಮತ್ತೊಬ್ಬ ಬಳಕೆದಾರರ ಸಲಹೆಯಾಗಿದೆ. ಇಂತಹ ತರಕಾರಿಗಳ ಪರೀಕ್ಷೆಗೆ ಒಳಪಡಿಸಿ ಅದರಲ್ಲಿ ಯಾವ ರಾಸಾಯನಿಕ ಬಳಕೆ ಹೆಚ್ಚಾಗಿ ಮಾಡುತ್ತಾರೋ ಅಂತಹ ರಾಸಾಯನಿಕಗಳ ನಿಷೇಧ ಮಾಡಬೇಕು. ಯಾವೆಲ್ಲಾ ಮಾನವರು ಹಾಗೂ ಪ್ರಾಣಿಗಳ ಆರೋಗ್ಯಕ್ಕೆ ಸಮಸ್ಯೆ ತಂದೊಡ್ಡಲಿವೆಯೋ ಅಂತಹ ಕೆಮಿಕಲ್ಗಳ ಬಳಕೆ ನಿಷೇಧಿಸಿ ಬಳಸಿದರೆ ಕಠಿಣ ಶಿಕ್ಷೆ ವಿಧಿಸುವ ಕಾನೂನು ಜಾರಿ ಮಾಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.



Click it and Unblock the Notifications