Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದ್ವಾರಕೀಶ್ ಲವ್ ಸ್ಟೋರಿ ಏನು ಗೊತ್ತಾ.? ಎರಡನೇ ಮದ್ವೆಗೆ ಮೊದಲ ಪತ್ನಿ ಗ್ರೀನ್ ಸಿಗ್ನಲ್..!
ಕನ್ನಡ ಚಿತ್ರರಂಗದ ಹಿರಿನ ನಟ- ನಿರ್ದೇಶಕ-ನಿರ್ಮಾಪಕ ದ್ವಾರಕೀಶ್ ನಿಧನರಾಗಿದ್ದಾರೆ. ಕರ್ನಾಟಕದ ಕುಳ್ಳ ಎಂದೇ ಖ್ಯಾತಿ ಗಳಿಸಿದ್ದ ಅವರು ಕಳೆದ ಕೆಲವು ದಿನಗಳಿಂದ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಅವರಿಗೆ 81 ವರ್ಷ ವಯಸ್ಸಾಗಿತ್ತು. ಕನ್ನಡದಲ್ಲಿ ನಾಲ್ಕೈದು ದಶಕಗಳ ಕಾಲ ಕನ್ನಡ ಚಿತ್ರರಂಗದ ಸೇವೆ ಮಾಡಿದ್ದಾರೆ. ನಟರಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದ ದ್ವಾರಕೀಶ್ ನಿರ್ದೇಶಕರಾಗಿ, ನಿರ್ಮಾಪಕರಾಗಿಯೂ ಯಶಸ್ಸು ಕಂಡಿದ್ದರು.
ಕಳೆದ ಕೆಲವು ದಿನಗಳ ಹಿಂದೆ ದ್ವಾರಕೀಶ್ ನಿಧನ ಸುಳ್ಳು ಸುದ್ದಿಗಳು ಹರಿದಾಡಿದ್ದವು. ಈ ವೇಳೆ ದ್ವಾರಕೀಶ್ ಅವರೇ ವಿಡಿಯೋ ಮಾಡುವ ಮೂಲಕ ಆರೋಗ್ಯವಾಗಿ ಇರುವುದಾಗಿ ತಮ್ಮ ಅಭಿಮಾನಿಗಳಿಗೆ ಹೇಳಿಕೊಂಡಿದ್ದರು.

ನಿನ್ನೆ ರಾತ್ರಿ (ಏಪ್ರಿಲ್ 15) ದ್ವಾರಕೀಶ್ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಸಣ್ಣ ಪ್ರಮಾಣದಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ರಾತ್ರಿಯಿಡಿ ನಿದ್ದೇ ಮಾಡಿರಲಿಲ್ಲ. ಬೆಳಗ್ಗೆ ಕಾಫಿ ಕುಡಿದು ಸ್ವಲ್ಪ ಹೊತ್ತು ನಿದ್ದೆ ಮಾಡುತ್ತೇನೆ ಎಂದು ಮಲಗಿದ್ದರು. ಆ ವೇಳೆ ಹಾರ್ಟ್ ಅಟ್ಯಾಕ್ ಆಗಿದ್ದಾಗಿ ದ್ವಾರಕೀಶ್ ಪುತ್ರ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ದ್ವಾರಕೀಶ್ 1942 ಆಗಸ್ಟ್ 19ರಂದು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಜನಿಸಿದರು. ಇವರ ತಂದೆ ಶಾಮರಾವ್ ಮತ್ತು ತಾಯಿ ಜಯಮ್ಮ. ಶಾರದ ವಿಲಾಸ್ & ಬನುಮ್ಯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಇವರು, ಫ್ರೌಡಶಿಕ್ಷಣದ ನಂತರ ಸಿಪಿಸಿ ಪಾಕಿಟೆಕ್ನಿಕ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿದರು. ನಂತರ ತಮ್ಮ ಸಹೋದರನ ಜೊತೆ ಸೇರಿ ಭಾರತ್ ಆಟೋ ಸ್ಪೇರ್ ಸ್ಟೋರ್ ಆರಂಭಿಸಿದರು. 1963ರಲ್ಲಿ ವ್ಯಾಪಾರ ಬಿಟ್ಟು ನಟನೆಯತ್ತ ಮುಖ ಮಾಡಿದರು.
ಆಪ್ತಮಿತ್ರ ಸಿನಿಮಾ ಮಾಡಿ ಮನೆ ಖರೀದಿಸಿದ್ದ ದ್ವಾರಕೀಶ್
ದ್ವಾರಕೀಶ್ ಆರಂಭದ ದಿನದಿಂದಲೂ ಕಷ್ಟಪಟ್ಟು ಬೆಳೆದವರು. ವಿಷ್ಣುವರ್ಧನ್, ಸೌಂದರ್ಯ, ರಮೇಶ್ ಅರವಿಂದ್ ನಟನೆಯ ಆಪ್ತಮಿತ್ರ ಸಿನಿಮಾ ಮಾಡಿದ್ದ ದ್ವಾರಕೀಶ್ ಗೆಲುವು ಕಂಡಿದ್ದರು. ಈ ಸಿನಿಮಾ ಹಣದಿಂದ ಹೆಚ್ಎಸ್ಆರ್ ಲೇಔಟ್ನಲ್ಲಿ ಅವರು ಸ್ವಂತ ಮನೆ ಖರೀದಿಸಿದ್ದರಯ.
ಗೌರವ ಡಾಕ್ಟರೇಟ್ ಒಲಿದಿತ್ತು
ಕಳೆದ 2022ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಘೋಷಿಸಿತ್ತು. ಸಿನಿಮಾ ಕ್ಷೇತ್ರಕ್ಕೆ ಅವರು ನೀಡುರುವ ಕೊಡುಗೆಯನ್ನು ಮನಗಂಡು ಈ ಗೌರವ ಡಾಕ್ಟರೇಟ್ ನೀಡುತ್ತಿರುವುದಾಗಿ ತಿಳಿಸಿತ್ತು. ನಟರಾಗಿ, ನಿರ್ದೇಶಕ, ನಿರ್ಮಾಪಕರಾಗಿ ಹಲವಾರು ಚಿತ್ರಗಳ ಕೊಡುಗೆ ನೀಡಿರುವ ಅವರು ಕನ್ನಡ ಚಿತ್ರರಂಗಕ್ಕೆ ಕಲಾಸೇವೆ ಸಲ್ಲಿಸಿದ್ದಾರೆ. ಡಾ. ವಿಷ್ಣುವರ್ಧನ್, ಡಾ. ರಾಜ್ಕುಮಾರ್ ಹಾಗೂ ಅಂಬರೀಶ್ರಂತಹ ಮೇರು ನಟರೊಂದಿಗೆ ಹಿರಿಯ ತೆರೆಯಲ್ಲಿ ಮಿಂಚಿರುವ ನಟ ದ್ವಾರಕೀಶ್ ಅವರು ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬರೋಬ್ಬರಿ 40ಕ್ಕೂ ಹೆಚ್ಚು ಸಿನಿಮಾಗಳ ನಿರ್ಮಾಣ ಮಾಡಿ ಸೈ ಎನಿಸಿಕೊಂಡಿದ್ದರು.
ಎರಡು ಮದುವೆಯಾಗಿದ್ದ ದ್ವಾರಕೀಶ್
ಮೊದಲ ಪತ್ನಿಗೆ ಮಕ್ಕಳಿದ್ದಾಗಲೇ ದ್ವಾರಕೀಶ್ ಎರಡನೇ ಮದುವೆಯಾಗಿದ್ದರು. ಆದರೆ ಅವರ ಪ್ರೇಮ ಕಥೆ ಬಹಳ ಚರ್ಚೆ ಹುಟ್ಟುಹಾಕಿತ್ತು. ಒಮ್ಮೆ ಅವರೇ ಈ ಕುರಿತು ಹೀಗೆ ಹೇಳಿಕೊಂಡಿದ್ದರು. "ಎಲ್ಲರನ್ನು ಮದರಾಸಿನ ಫೈವ್ ಸ್ಟಾರ್ ಹೋಟೆಲೊಂದಕ್ಕೆ ಕರೆದುಕೊಂದು ಹೋದೆ. ಊಟ ಮಾಡುವ ಮೊದಲು ಒಂದು ನೋಟ್ ಪುಸ್ತಕವನ್ನು ಅಂಬುಜಾ ಮುಂದಿಟ್ಟು ಹೇಳಿದೆ : ಇದೊಂದು ಕಾದಂಬರಿ ಅಂತಿಟ್ಕೋ. ಇದು ನನ್ನ ಲೈಫ್ ಸ್ಟೋರಿ. ಲವ್ನಲ್ಲಿ ಬಿದ್ದಿದ್ದೇನೆ. ಆಕೆಯ ಹೆಸರು ಶೈಲಜಾ. ನೀನು ಒಪ್ಪಿದರೆ ಮದುವೆಯಾಗಬೇಕೂಂತಿದ್ದೇನೆ. ಇಲ್ಲವದರೆ ಇಲ್ಲ. ಮರೆತುಬಿಡಲು ಪ್ರಯತ್ನಿಸುತ್ತೇನೆ. ಈ ನೋಟ್ ಪುಸ್ತಕದ ಕೊನೆಯ ಪುಟದಲ್ಲಿ ನಿನಗೆ ಏನನ್ನಿಸುತ್ತದೋ ಅದನ್ನು ಬರೆ.
ಕಾದಂಬರಿ ಸುಖಾಂತವಾಗಿದ್ದರೂ ಸ್ವೀಕರಿಸುತ್ತೇನೆ. ದುಃಖಾಂತವಾಗಿದ್ದರೂ ಸ್ವೀಕರಿಸುತ್ತೇನೆ. ಇಷ್ಟನ್ನು ಹೇಳಿ ಮೌನವಾದೆ. ಐದೇ ಐದು ನಿಮಿಷ ಯೋಚಿಸಿದ ಅಂಬುಜಾ ಆ ನೋಟ್ ಪುಸ್ತಕವನ್ನು ಹತ್ತಿರ ಎಳೆದುಕೊಂಡು ಕೊನೆಯ ಪುಟದಲ್ಲಿ ಅದೇನನ್ನೋ ಬರೆದಳು. ನಾನು ಓದಿದೆ : ನಿಮ್ಮ ಸಂತೋಷವೇ ನನ್ನ ಸಂತೋಷ. ಹೆಂಡತಿಯ ಗ್ರೀನ್ ಸಿಗ್ನಲ್ ಸಿಕ್ಕಿದ ಕೂಡಲೆ ಅಲ್ಲಿಂದಲೇ ಫೋನ್ ಮಾಡಿ ಶೈಲಜಾಗೆ ವಿಷಯ ತಿಳಿಸಿದೆ.
ಅಂಬುಜಾ ಕೂಡಾ ಆಕೆಯ ಜೊತೆ ಮಾತನಾಡಿದಳು. ಐವರು ಮಕ್ಕಳೂ ಕಂಗ್ರಾಟ್ಸ್ ಹೇಳಿದರು. ನೀವು ನಂಬುವುದಿಲ್ಲ. ಆದರೆ ಇದು ನಿಜ. ಎಲ್ಲರ ಹಾಜರಿಯಲ್ಲೇ ನಾನು ಶೈಲಜಾಳ ಕುತ್ತಿಗೆಗೆ ತಾಳಿ ಕಟ್ಟಿದೆ. ಮೊದಲ ಹೆಂಡತಿ, ಮಕ್ಕಳೆಲ್ಲಾ ಶುಭ ಹಾರೈಸಿದರು. ಸಿನಿಮಾದಲ್ಲಾದರೆ ದುಃಖಾಂತವಾಗಬಹುದಾಗಿದ್ದ ಕಥೆ ನನ್ನ ಸ್ವಂತ ಬದುಕಿನಲ್ಲಿ ಸುಖಾಂತವಾಯಿತು ಎಂದಿದ್ದರು.



Click it and Unblock the Notifications











