Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಸಾಟಿಯಿಲ್ಲದ ನಾಟಿಬದನೆ ಗೊಜ್ಜು

ಗುಳ್ಳ ಬದನೆಕಾಯಿ 10
ಅರ್ಧ ಚಮಚ ಕೊತ್ತಂಬರಿ ಪುಡಿ
ಅರ್ಧ ಚಮಚ ಖಾರದ ಪುಡಿ
ಒಂದು ಚಮಚ ಉದ್ದು, ಕಡಲೆಬೇಳೆ
ಚಿಟಿಕೆ ಹುಣಿಸೆಹಣ್ಣಿನ ಪೇಸ್ಟ್
ಚಿಟಿಕೆ ಇಂಗು
ಉಪ್ಪು ಮತ್ತು ಒಗ್ಗರಣೆಗೆ ಸಾಸಿವೆ, ಕರಿಬೇವು
ಮಾಡುವ ರೀತಿ :
ಬದನೆಕಾಯಿಯ ಕೊಂಬು ಅಥವಾ ತೊಟ್ಟು ಮತ್ತು ಕೊಂಬಿನ ಜತೆಗಿರುವ ಶಂಖಪುಷ್ಪಾಕಾರದ ದಪ್ಪಸಿಪ್ಪೆಯನ್ನು ಚಾಕುವಿನಿಂದ ಕತ್ತರಿಸಿ ಕ.ಬು.ಗೆ ಹಾಕಬೇಕು. ಗುಳ್ಳ ಬದನೆ ಆಕೃತಿಯಲ್ಲಿ ಗಿಡ್ಡಗೆ, ದುಂಡಗೆ, ನೈಸಾಗಿರುತ್ತದೆ. ಕೆಳಗೆ ಬಿದ್ದರೆ ಉರುಳಿಕೊಂಡು ಹೋಗುವ ಗುಣ. ಗುಳ್ಳನ ಹೊರಮೈಯಲ್ಲಿ ತಿಳಿ ಹಸುರು, ನಡುವೆ ಹಾಲು ಚೆಲ್ಲಿದಂತೆ ಅಲ್ಲಲ್ಲಿ ಬಿಳಿಬಿಳಿ ಗೆರೆಗಳು ಕಾಣಸಿಗುತ್ತವೆ. ಇಂಥ ಬದನೆಯನ್ನು ಎರಡೇ ಹೋಳಾಗುವಂತೆ ಕತ್ತರಿಸಿ ನೀರಿನ ಪಾತ್ರೆಯಲ್ಲಿ ಹಾಕಬೇಕು. ಹೆಚ್ಚಿದ ಬದನೆಯನ್ನು ನೀರಿಗೆ ಹಾಕದಿದ್ದರೆ ನೀರಿನಿಂದ ಹೊರಬಿದ್ದ ಮೀನಿನಂತೆ ಚಡಪಡಿಸುವ ಬದನೆ ಬಲುಬೇಗ ಕಪ್ಪಾಗಿಬಿಡುತ್ತದೆ.
ಪಾತ್ರೆಯಲ್ಲಿ ಹೊಸ ನೀರು ಹಾಕಿ ಸ್ಟೌವ್ ಮೇಲೆ ಇಡತಕ್ಕದ್ದು. ಬದನೆಕಾಯಿಯ ಒಳಮೈ ಮೃದುವಾಗಿರುವುದರಿಂದ ಯಾವತ್ತೂ, ಆದಷ್ಟೂ, ಕುಕ್ಕರ್ ಹೊಟ್ಟೆಗೆ ಹಾಕಬಾರದು. ಸ್ಟೌವ್ ಉರಿಯಲ್ಲಿ ಅರ್ಧ, ಮುಕ್ಕಾಲು ಪಾಲು ಬೆಂದ ಬದನೆಯನ್ನು ಸೋಸಿ ನೀರು ಬಗ್ಗಿಸಿ ಒಂದು ಕಡೆ ಇಟ್ಟುಕೊಳ್ಳಿ. ಈ ಕಡೆ, ಬಾಣಲೆಗೆ ನಾಲಕ್ಕು ಚಮಚ ಸನ್ ಫ್ಲವರ್ ಎಣ್ಣೆ ಹಾಕಿ ಸಾಸಿವೆ, ಕರಿಬೇವು, ಬೇಳೆಗಳನ್ನು ಹಾಕಿ ಲೋ ಫ್ಲೇಮಿನಲ್ಲಿ ಒಗ್ಗರಿಸಿಕೊಳ್ಳಿರಿ.
ಈ ಹಂತದಲ್ಲಿ ಹುಣಿಸೆ ಪೇಸ್ಟ್, ಇಂಗು, ದನಿಯ ಪುಡಿ ಮತ್ತು ಖಾರದ ಪುಡಿಯನ್ನು ಒಂದೊಂದಾಗಿ ಬೆರೆಸಿ ಮರದ ಸೌಟಿನಿಂದ ಕಲಸಿರಿ. ಅರ್ಧ ಸ್ಪೂನ್ ಸಕ್ಕರೆ ಹಾಕಿದರೂ ಹಾಕಬಹುದು, ನಿಮ್ಮಿಷ್ಟ. ಒಗ್ಗರಣೆಗೆ ಬೆಂದ ಬದನೆ ಹೋಳುಗಳನ್ನು ಸುರಿಯಿರಿ. ಪಲ್ಯದ ಲುಕ್ ಅಂಡ್ ಫೀಲ್ ಬರುತ್ತಿದ್ದಂತೆಯೇ ಒಂದು ಲೋಟ ಬಿಸಿನೀರು ಬೆರೆಸಿರಿ. ಉಪ್ಪು ಹಾಕಿ. ನಿಧಾನವಾಗಿ ಕುದಿಯಲಿ. ಹೆಚ್ಚು ಬೆಂದರೆ ಬದನೆ ಕರಗಿ ನೀರಾಗುತ್ತದೆ. ತಿನ್ನುವಾಗ ಬಾಯಿಗೆ ಹೋಳು ಸಿಗುವಂತೆ ಬದನೆ ಗೊಜ್ಜು ಮಾಡುವುದು ಒಂದು ಕಲೆ. ನಮ್ಮ ಲೆಕ್ಕದಲ್ಲಿ ಈ ಪ್ರಮಾಣದ ಗೊಜ್ಜು ಇಬ್ಬರಿಗೆ ಸಾಕಾಗುತ್ತದೆ. ಎಣ್ಣೆ ಹಾಕಿ ಲೇಯರ್ ಮೇಲೆ ಲೇಯರ್ ಲಟ್ಟಿಸಿಕೊಂಡ ಚಪಾತಿಯನ್ನೂ ಮಾಡಿದರೆ ಗೊಜ್ಜು ಮಾಡಿದ್ದಕ್ಕೂ ಸಾರ್ಥಕ.
ಸೂಚನೆ : ಖಾರದ ಪುಡಿ ಎಂದರೆ ಕೇವಲ ಒಣಮೆಣಸಿನ ಕಾಯಿಯನ್ನು ಕುಟ್ಟಿ ಮಾಡಿಕೊಂಡ ಪುಡಿ.
(ದಟ್ಸ್ ಕನ್ನಡ ಅಡುಗೆಶಾಲೆ)



Click it and Unblock the Notifications
