Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ?
ಎಚ್ಚರ.. ಮಾರ್ಚ್ 13 ರಿಂದ ಶನಿ ಅಸ್ತನಾಗುತ್ತಿದ್ದಾನೆ! ಈ ರಾಶಿಯವರಿಗೆ ಸಂಕಷ್ಟ.. ಶನಿದೇವನ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳುವುದು ಹೇಗೆ? ನಿಮ್ಮ ರಾಶಿ ಪ್ರಕಾರ ಕೈಗೊಳ್ಳಬೇಕಾದ ಪರಿಹಾರಗಳು ಇಲ್ಲಿವೆ. ಹೌದು, ಜ್ಯೋತಿಷ್ಯದಲ್ಲಿ ಗ್ರಹಗಳ ರಾಜ ಮತ್ತು ನ್ಯಾಯದ ದೇವತೆ ಶನಿದೇವರು ತಮ್ಮ ಸಂಚಾರದಿಂದ ದ್ವಾದಶ ರಾಶಿಗಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದ್ದಾರೆ. ಅವರ ಅಸ್ತ ಅಥವಾ ಉದಯ ಸ್ಥಿತಿಗಳು ಜೀವನದ ಮೇಲೆ ಪ್ರಭಾವ ಬೀರುತ್ತವೆ.
ಮಾರ್ಚ್ 13, 2026 ರಂದು ಶನಿದೇವರು ಮೀನ ರಾಶಿಯಲ್ಲಿ (saturn combust in pisces) 'ಅಸ್ತ'ನಾಗಲಿದ್ದಾರೆ. ಶನಿಗ್ರಹವು ಅಸ್ತ ಸ್ಥಿತಿಗೆ ಬಂದಾಗ ಅದರ ಶಕ್ತಿ ಕಡಿಮೆಯಾಗಿ, ಕೆಲವಕ್ಕೆ ಶುಭ ಫಲ ನೀಡಿದರೆ, ಇನ್ನು ಕೆಲವಕ್ಕೆ ಸವಾಲು ತಂದೊಡ್ಡುತ್ತದೆ. ಈ ಶನಿ ಅಸ್ತ ಸ್ಥಿತಿಯು ಏಪ್ರಿಲ್ 22, 2026 ರವರೆಗೆ, ಸುಮಾರು 40 ದಿನಗಳ ಕಾಲ ಮುಂದುವರಿಯಲಿದೆ. ಈ ಅವಧಿಯಲ್ಲಿ, ಮೂರು ರಾಶಿಯವರು (shani ast effects on zodiac signs) ಅತ್ಯಂತ ಜಾಗರೂಕರಾಗಿರಬೇಕು.

ತುಲಾ ರಾಶಿ
ತುಲಾ ರಾಶಿಯಲ್ಲಿ ಶನಿದೇವರಿಗೆ ಉಚ್ಚ ಸ್ಥಾನವಿದೆ, ಹೀಗಾಗಿ ಸಾಮಾನ್ಯವಾಗಿ ಶುಭ ಫಲಗಳು ದೊರೆಯುತ್ತವೆ. ಆದರೆ, ಶನಿಯ ಅಸ್ತ ಸ್ಥಿತಿಯು ಈ ಪ್ರಭಾವವನ್ನು ಉಲ್ಟಾ ಮಾಡಿ, ಶುಭ ಫಲಗಳು ವ್ಯತಿರಿಕ್ತವಾಗಬಹುದು. ಮಾರ್ಚ್ 13ರ ನಂತರ ತುಲಾ ರಾಶಿಯವರು ಹಣಕಾಸಿನ ವಿಚಾರದಲ್ಲಿ ಅತೀವ ಜಾಗ್ರತೆ ವಹಿಸಬೇಕು. ಅನಿರೀಕ್ಷಿತ ಖರ್ಚುಗಳು ಎದುರಾಗಿ, ಉಳಿತಾಯ ಖರ್ಚಾಗುವ ಸಂಭವವಿದೆ. ಅನಗತ್ಯ ವೆಚ್ಚಗಳನ್ನು ನಿಯಂತ್ರಿಸುವುದು ಮುಖ್ಯ.
ಹಣಕಾಸಿನ ವಹಿವಾಟು ಅಥವಾ ಸಾಲ ನೀಡುವ ಮುನ್ನ ನೂರು ಬಾರಿ ಯೋಚಿಸಿ. ಸಾಮಾಜಿಕವಾಗಿ ಮಾತನಾಡುವಾಗ ಸಂಯಮ ಇರಲಿ, ಇಲ್ಲದಿದ್ದರೆ ಅನಗತ್ಯ ವಿವಾದಗಳಿಗೆ ಸಿಲುಕುವ ಸಾಧ್ಯತೆಯಿದೆ. ಪರಿಹಾರವಾಗಿ, ಪ್ರತಿ ಶನಿವಾರದಂದು ದೇವಸ್ಥಾನದಲ್ಲಿ ಅಥವಾ ಅಗತ್ಯವಿರುವವರಿಗೆ ಸಾಸಿವೆ ಎಣ್ಣೆಯನ್ನು ದಾನ ಮಾಡುವುದು ಉತ್ತಮ ಫಲ ನೀಡುತ್ತದೆ.
ಮಕರ ರಾಶಿ
ಮಕರ ರಾಶಿಯ ಅಧಿಪತಿ ಸ್ವತಃ ಶನಿದೇವರೇ ಆಗಿರುವುದರಿಂದ, ಅವರ ಅಸ್ತ ಸ್ಥಿತಿಯು ಈ ರಾಶಿಯವರಿಗೆ ಮಾನಸಿಕ ಹಾಗೂ ವೃತ್ತಿಪರ ಜೀವನದಲ್ಲಿ ಅಡೆತಡೆಗಳನ್ನು ತರಬಹುದು. ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸ ಕುಸಿಯಬಹುದು. ಕೆಲಸದ ಸ್ಥಳದಲ್ಲಿ ಮೇಲಧಿಕಾರಿಗಳೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಸಮಾಧಾನದಿಂದ ವರ್ತಿಸುವುದು ಒಳಿತು.
ನ್ಯಾಯಾಲಯದ ಕೇಸುಗಳಲ್ಲಿ ಅಡೆತಡೆಗಳು ಎದುರಾಗಬಹುದು. ಈ ಸಮಯದಲ್ಲಿ ಸಾಲದ ವ್ಯವಹಾರಗಳಿಂದ ದೂರವಿರಿ. ಹಣಕಾಸಿನ ನಿರ್ಧಾರದಲ್ಲಿ ಎಚ್ಚರವಿರಲಿ. ಮಹಿಳೆಯರೊಂದಿಗೆ ಗೌರವದಿಂದ ವರ್ತಿಸಿ, ಇಲ್ಲದಿದ್ದರೆ ನಿಮ್ಮ ಸಾಮಾಜಿಕ ಪ್ರತಿಷ್ಠೆಗೆ ಧಕ್ಕೆ ಬರಬಹುದು. ನಿರುದ್ಯೋಗಿಗಳು ಕೆಲಸಕ್ಕಾಗಿ ಇನ್ನಷ್ಟು ಕಠಿಣ ಶ್ರಮ ಪಡಬೇಕು. ಸಂಕಷ್ಟಗಳನ್ನು ಕಡಿಮೆ ಮಾಡಲು, ಪ್ರತಿದಿನ ಅಥವಾ ಕನಿಷ್ಠ ಶನಿವಾರದಂದಾದರೂ 'ಹನುಮಾನ್ ಚಾಲೀಸಾ' ಪಠಿಸುವುದು ಪರಿಣಾಮಕಾರಿ.
ಕುಂಭ ರಾಶಿ
ಕುಂಭ ರಾಶಿಯ ಅಧಿಪತಿಯೂ ಶನಿದೇವನೇ ಆಗಿದ್ದಾನೆ. ಶನಿಯ ಅಸ್ತ ಸ್ಥಿತಿಯು ನಿಮ್ಮ ವೃತ್ತಿಜೀವನ ಮತ್ತು ಪ್ರಮುಖ ಜೀವನ ನಿರ್ಧಾರಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ದೊಡ್ಡ ಹೂಡಿಕೆ ಅಥವಾ ಹೊಸ ಉದ್ಯೋಗ ನಿರ್ಧಾರಗಳನ್ನು ಅವಸರದಲ್ಲಿ ತೆಗೆದುಕೊಳ್ಳಬೇಡಿ. ವ್ಯಾಪಾರದಲ್ಲಿ ನಿರೀಕ್ಷಿತ ಲಾಭ ತಡವಾಗುವ ಸಾಧ್ಯತೆಯಿದ್ದು, ತಾಳ್ಮೆ ಅಗತ್ಯ. ನಿಮ್ಮ ಸ್ವಭಾವದಲ್ಲಿ ಕಠಿಣತೆ ಅಥವಾ ಸಿಟ್ಟು ಹೆಚ್ಚಾಗಬಹುದು, ಇದು ವೈಯಕ್ತಿಕ ಸಂಬಂಧಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.
ಭಾವನೆಗಳನ್ನು ನಿಯಂತ್ರಿಸಿ ಸಮಾಧಾನದಿಂದಿರಿ. ಪ್ರೇಮ ಜೀವನ ಮತ್ತು ದಾಂಪತ್ಯದಲ್ಲಿ ಸಣ್ಣಪುಟ್ಟ ಕಿರಿಕಿರಿಗಳು ಉಂಟಾಗಬಹುದು. ಪರಸ್ಪರ ತಿಳುವಳಿಕೆ ಮುಖ್ಯ. ಆರ್ಥಿಕ ಅಶಿಸ್ತು ಸಂಕಷ್ಟಕ್ಕೆ ತಳ್ಳಬಹುದು, ಜವಾಬ್ದಾರಿಯುತವಾಗಿ ವರ್ತಿಸಿ. ಪರಿಹಾರವಾಗಿ, ಶನಿವಾರದಂದು ಶನಿ ದೇವಸ್ಥಾನಕ್ಕೆ ಭೇಟಿ ನೀಡಿ ಕಪ್ಪು ಎಳ್ಳನ್ನು ಅರ್ಪಿಸಿ ಮತ್ತು ಶನಿ ಮಂತ್ರವನ್ನು ಜಪಿಸುವುದು ಉತ್ತಮ.
ಶನಿ ಅಸ್ತನಾದಾಗ ಸಾಮಾನ್ಯ ಮುನ್ನೆಚ್ಚರಿಕೆಗಳು
ಶನಿ ಅಸ್ತನಾದ ಈ ಅವಧಿಯಲ್ಲಿ ಎಲ್ಲಾ ರಾಶಿಗಳ ಜನರಿಗೆ ಕೆಲವು ಸಾಮಾನ್ಯ ಮುನ್ನೆಚ್ಚರಿಕೆಗಳು ಇಲ್ಲಿವೆ. ಇವುಗಳನ್ನು ಪಾಲಿಸುವುದರಿಂದ ನಕಾರಾತ್ಮಕ ಪ್ರಭಾವವನ್ನು ಕಡಿಮೆ ಮಾಡಬಹುದು.
- ಅಸಹಾಯಕರು ಮತ್ತು ಹಿರಿಯರಿಗೆ ಗೌರವ ನೀಡಿ.
- ಯಾವುದೇ ಅಡ್ಡ ಮಾರ್ಗದಲ್ಲಿ ಹಣ ಗಳಿಸಲು ಪ್ರಯತ್ನಿಸಬೇಡಿ.
- ಶನಿವಾರದಂದು ಮಾಂಸಾಹಾರ ಮತ್ತು ಮದ್ಯಪಾನದಿಂದ ದೂರವಿರುವುದು ಶ್ರೇಯಸ್ಕರ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications