Latest Updates
-
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು! -
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು?
ಚುಂಯ್ : ಗರಿಗರಿ ಜೀರಿಗೆ ರವಾದೋಸೆ!
ಮಸಾಲೆ ದೋಸೆ ಗೊತ್ತು, ಪೇಪರ್ ದೋಸೆ ಗೊತ್ತು, ಈರುಳ್ಳಿ ದೋಸೆ ಗೊತ್ತು, ಜೀರಿಗೆ-ರವೆ ದೋಸೆ ಗೊತ್ತಿಲ್ಲವೇ? ಸರಿ ಈಗಲೇ ಟ್ರೇಮಾಡಿ. ಬೆಳಗಿನ ತಿಂಡಿಗೆ ಅದರಲ್ಲೂ ಉದ್ಯೋಗಸ್ಥರಿಗೆ ಈ ದೋಸೆ ಕ್ಷಿಪ್ರ ಉಪಾಹಾರ!
- ಚೈತ್ರಾ ಕೌಡ್ಲೆ, ಡ್ಯೂಸ್ಬರಿ, ಯು ಕೆ
ಸಾಮಗ್ರಿಗಳು :
ಅಕ್ಕಿ ಹಿಟ್ಟು -3 ಕಪ್(ಮೀಡಿಯಂ ಸೈಜ್)
ರವೆ(ಮೀಡಿಯಂ) -1/2 ಕಪ್(ಅದೇ ಸೈಜ್)
ತುರಿದ ತೆಂಗಿನಕಾಯಿ -ಒಂದು ಹಿಡಿ/ಒಂದೂವರೆ ಹಿಡಿ
ಜೀರಿಗೆ -2 ಟೇಬಲ್ ಸ್ಪೂನ್
ಹಸಿ ಮೆಣಸಿನಕಾಯಿ -2(ಹೆಚ್ಚಿರೋದು)
ಕೊತ್ತಂಬರಿ ಸೊಪ್ಪು -ಸ್ವಲ್ಪ
ಉಪ್ಪು-ರುಚಿಗೆ ತಕ್ಕಷ್ಟು
(ಇಷ್ಟು ಪದಾರ್ಥಗಳು ಇಬ್ಬರಿಗೆ ಸಾಕಾಗುತ್ತವೆ)
ಮಾಡುವ ವಿಧಾನ :
ಮೇಲೆ ತಿಳಿಸಿದ ಎಲ್ಲ ಪದಾರ್ಥಗಳನ್ನು ಒಂದು ಪಾತ್ರೆಯಲ್ಲಿ ಹಾಕಿ. ನಂತರ ಅವುಗಳನ್ನು ಸ್ವಲ್ಪ ಉಗುರು ಬೆಚ್ಚಗಿನ ನೀರಿನಲ್ಲಿ ಕಲಸಿಕೊಳ್ಳಬೇಕು. ಹೆಚ್ಚು ನೀರು ಹಾಕಬಾರದು.
ಈ ಮಿಶ್ರಣವನ್ನು ಮಿಕ್ಸಿಯಲ್ಲಿ ಹಾಕಿ ಸ್ವಲ್ಪ ನೀರಿನ ಜೊತೆ ನುಣ್ಣಗೆ ರುಬ್ಬಿ. ಆನಂತರ ಹಿಟ್ಟನ್ನು ಪಾತ್ರೆಯಲ್ಲಿ ಹಾಕಿ, ಅಗತ್ಯಕ್ಕೆ ತಕ್ಕಷ್ಟು ನೀರು ಸೇರಿಸಿ, ಸ್ವಲ್ಪ ತೆಳ್ಳಗೆ ಮಾಡಿಕೊಳ್ಳಿ. ಗ್ಯಾಸ್ ಸ್ಟವ್ ಮೇಲೆ ತವೆಯನ್ನು ಇಟ್ಟು (ನಾನ್ ಸ್ಟಿಕ್ ಅಥವಾ ದೋಸೆ ಕಾವಲಿ) ತವೆ ಕಾದ ಮೇಲೆ ತೆಳ್ಳಗೆ ದೋಸೆ ಹಾಕಿ.
ಜೀರಿಗೆ-ರವೆ ದೋಸೆ ತಿನ್ನಲು ರುಚಿ, ಅದರಲ್ಲೂ ಬಿಸಿಬಿಸಿಯಾಗಿದ್ದಾಗ ಇನ್ನೂ ತುಂಬಾ ರುಚಿ. ಯಾವುದೇ ಚಟ್ನಿಯ ಜೊತೆಗಾದರೂ ಜೀರಿಗೆ ದೋಸೆ ಜೋಡಿಯಾಗುತ್ತದೆ. ಜೀರಿಗೆ ದೋಸೆ ಮಾಡೋದು ಎಷ್ಟು ಸುಲಭ ಅಲ್ವಾ, ಇವತ್ತೇ ಟ್ರೆೃ ಮಾಡಿ!



Click it and Unblock the Notifications