Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮನೆ ಔಷಧ: ಗಂಟಲ ಕಿರಿಕಿರಿ ಸಮಸ್ಯೆಗೆ ಒಂದೇ ಗಂಟೆಯಲ್ಲಿ ಪರಿಹಾರ
ಸಾಮಾನ್ಯ ಶೀತ ಅಥವಾ ಫ್ಲೂ ಪರಿಣಾಮವಾಗಿ ಗಂಟಲಬೇನೆಯೂ ಆವರಿಸಿಕೊಳ್ಳುತ್ತದೆ. ಕೆಲವು ಇತರ ಅನಾರೋಗ್ಯಗಳಿಂದಲೂ ಗಂಟಲಬೇನೆ ಎದುರಾಗಬಹುದು. ಗಂಟಲ ಒಳಭಾಗದಲ್ಲಿರುವ ತೇವವಿರುವ ಅಂಗಗಳ ಮೇಲೆ ಬ್ಯಾಕ್ಟೀರಿಯಾ ಅಥವಾ ವೈರಸ್ಸು ಬೀಡು ಬಿಡುತ್ತದೆ ಹಾಗೂ ಈ ತೇವವಿರುವಲ್ಲಿ ತಮ್ಮ ಸಂಖ್ಯೆಯನ್ನು ಅಪಾರವಾಗಿ ವೃದ್ದಿಸಿಕೊಂಡು ಸೋಂಕು ಉಂಟುಮಾಡುತ್ತವೆ.
ಗಂಟಲ ಒಳಭಾಗ, ಮೂಗಿನ ಮೇಲ್ಭಾಗ, ಶ್ವಾಸನಾಳ ಮೊದಲಾದ ತೇವವಿರುವ ಭಾಗವೆಲ್ಲಾ ಈ ಸೋಂಕಿನಿಂದ ಉರಿಯೂತಕ್ಕೆ ಒಳಗಾಗುತ್ತದೆ. ಪರಿಣಾಮವಾಗಿ ತೇವವಾಗಿರಬೇಕಾಗಿದ್ದ ಗಂಟಲ ಒಣಭಾಗ ಶುಷ್ಕವಾಗುವುದು, ಗಂಟಲ ಕೆರೆತ, ನೋವು, ಉರಿ, ಆಹಾರ ನುಂಗಲು ಕಷ್ಟವಾಗುವುದು ಮೊದಲಾದ ತೊಂದರೆಗಳು ಎದುರಾಗುತ್ತವೆ... ಮುಂದೆ ಓದಿ..

ಇದಕ್ಕೆಲ್ಲಾ ಮನೆಔಷಧಿಯೇ ಬೆಸ್ಟ್!
ಸಾಮಾನ್ಯವಾಗಿ ಜ್ವರ ಬಂದಾಗ ಗಂಟಲಬೇನೆ ಎದುರಾಗುತ್ತದೆಯೋ ಅಥವಾ ಇದಕ್ಕೆ ತದ್ವಿರುದ್ದವೋ ಹೇಳಲು ಬರುವುದಿಲ್ಲ. ಈ ಸೋಂಕು ವೈರಸ್ಸು ಗಳ ಹೊರತಾಗಿ ಸೂಕ್ಷ್ಮಜೀವಿಗಳಿಂದಲೂ ಆಗಮಿಸಬಹುದು. ಹಾಗಾಗಿ ವೈದ್ಯರು ಇವೆರಡಕ್ಕೂ ಮದ್ದು ನೀಡುತ್ತಾರೆ. ಇನ್ನು ಔಷಧಿಗಳ ಜೊತೆಗೇ ಕೆಲವು ಗಂಟಲನ್ನು ಸ್ವಚ್ಛಗೊಳಿಸುವ ದ್ರವಗಳನ್ನು ಗಳಗಳ ಮಾಡುವ ಮೂಲಕವೂ ಗಂಟಲ ಬೇನೆಯನ್ನು ಶೀಘ್ರವಾಗಿ ಗುಣಪಡಿಸಬಹುದು. ಒಂದು ವೇಳೆ ನಿಮಗೆ ಎದುರಾಗ ಗಂಟಲಬೇನೆ ಸೂಕ್ಷ್ಮಜೀವಿಗಳಿಂದ ಎಂದು ತಿಳಿದುಬಂದರೆ, ಇದನ್ನು ಪರಿಹರಿಸಲು ಕೆಳಗೆ ವಿವರಿಸಿರುವ ಕೆಲವು ನೈಸರ್ಗಿಕ ವಿಧಾನಗಳನ್ನು ಅನುಸರಿಸಬಹುದು...

ಉಪ್ಪು ನೀರಿನ ಗಳಗಳ
ಗಂಟಲಬೇನೆ ಎದುರಾದ ಬಳಿಕ ತಕ್ಷಣವೇ ಅನುಸರಿಸಬೇಕಾದ ಈ ವಿಧಾನಕ್ಕಿಂತ ಸುಲಭವಾದದ್ದು ಇನ್ನಾವುದೂಇಲ್ಲ. ಈ ವಿಧಾನವನ್ನು ಬಲು ಪ್ರಾಚೀನ ಕಾಲದಿಂದಲೇ ನಮ್ಮ ಹಿರಿಯರು ಅನುಸರಿಸಿಕೊಂಡು ಬರುತ್ತಿದ್ದಾರೆ. ಇದಕ್ಕಾಗಿ ಒಂದರಿಂದ ಎರಡು ದೊಡ್ಡ ಚಮಚ ಉಪ್ಪನ್ನು ಉಗುರುಬೆಚ್ಚನೆನ ನೀರಿನಲ್ಲಿ (ಅಥವಾ ನಿಮಗೆ ಸಹಿಸಲು ಸಾಧ್ಯವಾಗುವಷ್ಟು ಬಿಸಿಯಾಗಿರುವ ) ನೀರಿನಲ್ಲಿ ಬೆರೆಸಿ ಈ ನೀರಿನಿಂದ ಸುಮಾರು ಐದು ನಿಮಿಷಗಳವರೆಗಾದರೂ ಗಳಗಳ ಮಾಡುವ ಮೂಲಕ ಗಂಟಲ ಬೇನೆ ಕಡಿಮೆ ಮಾಡಬಹುದು. ಉಪ್ಪಿನ ಆವರಣದಲ್ಲಿ ಸೋಂಕು ಹರಡುವ ಬ್ಯಾಕ್ಟೀರಿಯಾ ಅಥವಾ ಸೂಕ್ಷ್ಮಜೀವಿಗಳು ಜೀವಂತ ಉಳಿಯುವುದಿರುವುದೇ ಇದರ ಗುಟ್ಟು.

ಹಸಿಶುಂಠಿಯ ನೀರು:
ಈ ನೀರಿನಿಂದ ಗಳಗಳ ಮಾಡುವ ಮೂಲಕವೂ ಸೂಕ್ಷ್ಮಜೀವಿಗಳನ್ನು ಕೊಂದು ಉರಿಯೂತ ನಿವಾರಿಸಿ ಗಂಟಲಬೇನೆಯಿಂದ ಶಮನ ಪಡೆಯಬಹುದು. ಇದಕ್ಕಾಗಿ ಒಂದು ಚಿಕ್ಕ ಚಮಚ ಜೇನು, ಅರ್ಧ ಚಿಕ್ಕ ಚಮಚ ಬೆಲ್ಲ ಅಥವಾ ಸಕ್ಕರೆ ಹಾಗೂ ಒಂದು ದೊಡ್ಡ ಚಮಚ ಲಿಂಬೆರಸವನ್ನು ಒಂದು ಲೋಟ ಬಿಸಿನೀರಿನಲ್ಲಿ ಹಾಕಿ ಸುಮಾರು ಅರ್ಧ ಇಂಚಿನಷ್ಟು ಹಸಿಶುಂಠಿಯನ್ನು ಜಜ್ಜಿ ಬೆರೆಸಿ ಈ ನೀರಿನಿಂದ ಸುಮಾರು ಐದರಿಂದ ಹತ್ತು ನಿಮಿಷಗಳವರೆಗೆ ಗಳಗಳ ಮಾಡಬೇಕು.

ಶಿರ್ಕಾ:
ಅಡುಗೆಮನೆಯಲ್ಲಿ ಲಭ್ಯವಿರುವ ಈ ಶಿರ್ಕಾ ಕ್ಷಾರೀಯವಾಗಿದ್ದು ಇದರಲ್ಲಿ ಬ್ಯಾಕ್ಟೀರಿಯಾ ನಿವಾರಕ ಹಾಗೂ ಉರಿಯೂತ ನಿವಾರಕ ಗುಣಗಳಿವೆ. ಈ ಗುಣ ಗಂಟಲಬೇನೆ ಕಡಿಮೆಗೊಳಿಸಲೂ ನೆರವಾಗುತ್ತದೆ. ಎರಡು ದೊಡ್ಡ ಚಮಚ ಶಿರ್ಕಾವನ್ನು ಒಂದು ಕಪ್ ಬಿಸಿನೀರಿನಲ್ಲಿ ಬೆರೆಸಿ ಈ ನೀರಿನಿಂದ ಸುಮಾರು ಐದು ನಿಮಿಷ ಗಳಗಳ ಮಾಡಿ.

ಪುದಿನಾ ಎಣ್ಣೆ:
ಇದೊಂದು ಅವಶ್ಯಕ ತೈಲವಾಗಿದ್ದು ಗಂಟಲಬೇನೆಯನ್ನು ಶೀಘ್ರವಾಗಿ ಕಡಿಮೆಗೊಳಿಸಲು ಸಮರ್ಥವಾಗಿದೆ. ಒಂದು ಕಪ್ ಬಿಸಿನೀರಿನಲ್ಲಿ ನಾಲ್ಕೈದು ತೊಟ್ಟು ಈ ಎಣ್ಣೆಯನ್ನು ಮಿಶ್ರಣ ಮಾಡಿ ದಿನಕ್ಕೆರಡು ಬಾರಿ ಸುಮಾರು ಐದು ನಿಮಿಷಗಳ ಕಾಲ ಗಳಗಳ ಮಾಡಿ.

ಅಡುಗೆ ಸೋಡಾ:
ಇದರಲ್ಲಿರುವ ಸಂಯುಕ್ತಗಳು ಗಂಟಲಿನಲ್ಲಿರುವ ಸೋಂಕನ್ನು ಕಡಿಮೆ ಮಾಡಿ ಗಂಟಲಬೇನೆಯಿಂದ ಪರಿಹಾರ ಒದಗಿಸುತ್ತವೆ. ಇದಕ್ಕಾಗಿ ಒಂದು ಲೋಟ ಬಿಸಿನೀರಿಗೆ ಕಾಲು ದೊಡ್ಡ ಚಮಚ ಅಡುಗೆ ಸೋಡಾ ಮತ್ತು ಕಾಲು ಚಿಕ್ಕ ಚಮಚ ಉಪ್ಪು ಬೆರೆಸಿ ನಿತ್ಯವೂ ಬೆಳಿಗ್ಗೆ ಐದು ನಿಮಿಷಗಳ ಕಾಲ ಗಳಗಳ ಮಾಡಿ. ಬೇನೆ ಇಲ್ಲವಾಗುವವರೆಗೂ ಮುಂದುವರೆಸಿ.

ಅರಿಶಿನದ ನೀರು:
ಗಂಟಲಬೇನೆಗೆ ಆಯುರ್ವೇದ ಸೂಚಿಸುವ ಚಿಕಿತ್ಸೆ ಎಂದರೆ ಅರಿಶಿನದ ನೀರು. ಈಗ ಈ ವಿಧಾನವನ್ನು ಅಧುನಿಕ ವಿಜ್ಞಾನವೂ ಪುರಸ್ಕರಿಸಿದೆ. ಅರಿಶಿನ ಒಂದು ಪ್ರಬಲ ಬ್ಯಾಕ್ಟೀರಿಯಾ ನಿವಾರಕವಾಗಿದ್ದು ಗಂಟಲ ತೇವಭಾಗದಲ್ಲಿ ಆಶ್ರಯ ಪಡೆದಿದ್ದ ಬ್ಯಾಕ್ಟೀರಿಯಾಗಳನ್ನೂ ನಿವಾರಿಸಲು ಸಮರ್ಥವಾಗಿದೆ. ಇದಕ್ಕಾಗಿ ಒಂದು ದೊಡ್ಡ ಚಮಚ ಅರಿಶಿನ ಪುಡಿಯನ್ನು ಒಂದು ಕಪ್ ಬಿಸಿನೀರಿನಲ್ಲಿ ಬೆರೆಸಿ ಈ ನೀರಿನಿಂದ ಐದರಿಂದ ಹತ್ತು ನಿಮಿಷ ಗಳಗಳ ಮಾಡಿ.

ಮೆಂತೆ:
ಮೆಂತೆಯಲ್ಲಿರುವ ಅಪಾರವಾದ ಗುಣಗಳಿಂದಾಗಿ ಇದಕ್ಕೆ ಸುಪರ್ ಫುಡ್ ಎಂಬ ಅನ್ವರ್ಥನಾಮವೂ ದಕ್ಕಿದೆ. ಗಂಟಲಬೇನೆ ನಿವಾರಿಸಲೂ ಮೆಂತೆ ಉತ್ತಮ ಆಯ್ಕೆಯಾಗಿದೆ. ಇದರ ಉರಿಯೂತ ನಿವಾರಕ ಗುಣ ಬೇನೆಯನ್ನು ಶೀಘ್ರವಾಗಿ ಗುಣಪಡಿಸಲು ನೆರವಾಗುತ್ತದೆ. ಒಂದು ದೊಡ್ಡ ಚಮಚ ಮೆಂತೆಯನ್ನು ಕುಟ್ಟಿ ಪುಡಿ ಮಾಡಿ ಒಂದು ಲೋಟ ಬಿಸಿನೀರಿನಲ್ಲಿ ಬೆರೆಸಿ ಈ ನೀರಿನಿಂದ ಸುಮಾರು ಐದು ನಿಮಿಷ ಗಳಗಳ ಮಾಡಬೇಕು.

ಲವಂಗದ ಎಣ್ಣೆ:
ಬ್ಯಾಕ್ಟೀರಿಯಾಗಳ ಮೂಲಕ ಎದುರಾಗಿದ್ದ ಸೋಂಕು ಮತ್ತು ಇದರ ನೋವನ್ನು ಇಲ್ಲವಾಗಿಸಲು ಲವಂಗದ ಎಣ್ಣೆಯೂ ಉತ್ತಮ ಆಯ್ಕೆಯಾಗಿದೆ. ಒಂದು ಕಪ್ ಬಿಸಿನೀರಿಗೆ ನಾಲ್ಕೈದು ತೊಟ್ಟು ಲವಂಗದ ಎಣ್ಣೆಯನ್ನು ಬೆರೆಸಿ ಈ ನೀರಿನಿಂದ ಸುಮಾರು ಐದು ನಿಮಿಷಗಳವರೆಗೆ ಗಳಗಳ ಮಾಡುವ ಮೂಲಕ ಗಂಟಲಬೇನೆಯನ್ನು ಸುಲಭವಾಗಿ ನಿವಾರಿಸಬಹುದು.

ಟೊಮಾಟೋ ಜ್ಯೂಸ್:
ಟೊಮಾಟೋಗಳಲ್ಲಿ ವಿಟಮಿನ್ ಸಿ ಹಾಗೂ ಲೈಕೋಪೀನ್ ಎಂಬ ಪೋಷಕಾಂಶ ಹೆಚ್ಚಿನ ಪ್ರಮಾಣದಲ್ಲಿವೆ. ಇವು ಬ್ಯಾಕ್ಟೀರಿಯಾಗಳನ್ನು ಕೊಂದು ಸೋಂಕನ್ನು ಇಲ್ಲವಾಗಿಸುವ ಮೂಲಕ ಗಂಟಲಬೇನೆಯನ್ನು ನಿವಾರಿಸುತ್ತವೆ. ಇದಕ್ಕಾಗಿ ಅರ್ಧ ಕಪ್ ಟೊಮಾಟೋ ರಸವನ್ನು ಅರ್ಧ ಕಪ್ ನೀರಿಗೆ ಬೆರೆಸಿ ಈ ಮಿಶ್ರಣವನ್ನು ನೀವು ಸಹಿಸುವಷ್ಟು ಬಿಸಿಮಾಡಿ. ಈ ಮಿಶ್ರಣದಿಂದ ಐದು ನಿಮಿಷ ಗಳಗಳ ಮಾಡುವ ಮೂಲಕ ಗಂಟಲಬೇನೆ ಶೀಘ್ರವಾಗಿ ಕಡಿಮೆಯಾಗುತ್ತದೆ.
ಸಲಹೆ: ಈ ಲೇಖನದಲ್ಲಿ ಮುಕ್ಕಳಿಸುವ ಬದಲು ಗಳಗಳ ಎಂಬ ಪದವನ್ನು ಉಪಯೋಗಿಸಲಾಗಿದೆ. ಏಕೆಂದರೆ ಮುಕ್ಕಳಿಸು ಎಂದರೆ ತಲೆ ಎತ್ತದೇ ಕೆನ್ನೆಗಳಿಂದ ಬಾಯಿಯಲ್ಲಿರುವ ದ್ರವವನ್ನು ಬಾಯಿಯ ತುಂಬಾ ಹೊರಳಾಡಿಸುವುದಾಗಿದೆ. ಆದರೆ ಗಳಗಳ ಎಂದರೆ ನೀರನ್ನು ಬಾಯಿಯಲ್ಲಿ ಹಾಕಿದ ಬಳಿಕ ಸಾಧ್ಯವಾದಷ್ಟು ತಲೆಯನ್ನು ಹಿಂದಕ್ಕೆ ಬಾಗಿಸಿ ಉಸಿರನ್ನು ನಿಧಾನವಾಗಿ ಬಾಯಿಯ ಮೂಲಕ ಹೊರಬಿಡುವಾಗ ಗಳಗಳ ಸದ್ದು ಬರಬೇಕು. ಈ ಸದ್ದಿನಿಂದಾಗಿಯೇ ಗಳಗಳ ಎಂದು ನಮ್ಮ ಹಿರಿಯರು ಕರೆದಿದ್ದಾರೆ.



Click it and Unblock the Notifications











