Just In
- 1 hr ago ಮೊಲದ ಜೊತೆ ಓಡಿ ಮತ್ತೊಮ್ಮೆ ರೇಸ್ ಗೆದ್ದ ಆಮೆ..! ಈ ಕಥೆ ನಿಜವಾಗಿದ್ದು ಹೇಗೆ ನೋಡಿ.!
- 2 hrs ago ಗುರು ಸಂಚಾರ: ಮೇ 1ರಿಂದ 3ನೇ ಸ್ಥಾನದಲ್ಲಿರುವ ಗುರು ಮೀನ ರಾಶಿಯವರಿಗೆ ಅದೃಷ್ಟವೇ?
- 14 hrs ago ಗುರು ಸಂಚಾರದಿಂದ ಕುಂಭ ರಾಶಿಯವರ ಆರ್ಥಿಕ ಬದುಕು ಸುಧಾರಿಸಲಿದೆಯೇ?
- 14 hrs ago ಮೇ 1ರಿಂದ ಗುರು ಮಕರ ರಾಶಿಯಲ್ಲಿ ಪಂಚಮ ಸ್ಥಾನದಲ್ಲಿ ಇರುವುದರಿಂದ ಈ ರೀತಿಯೆಲ್ಲಾ ಪ್ರಯೋಜನಗಳಿವೆ
Don't Miss
- Sports IPL 2024: ಆರ್ಸಿಬಿ ಕಪ್ ಗೆಲ್ಲದಿರಲು ಅತಿಯಾದ ಪಾರ್ಟಿ ಕಾರಣವೇ?; ರೈನಾ ಬಿಚ್ಚಿಟ್ಟ ಸತ್ಯ
- News Bengaluru Heat Wave: ಮಳೆಯ ನಡುವೆ ಮತ್ತೆ ದಾಖಲೆಯ ಗರಿಷ್ಠ ತಾಪಮಾನ: ಶಾಖದ ಅಲೆ ಮುನ್ಸೂಚನೆ
- Automobiles Ola: ಓಲಾದಿಂದ ಕಡಿಮೆ ಬೆಲೆಯ 'ಎಸ್1 ಎಕ್ಸ್' ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ದೊಡ್ಡ ಘೋಷಣೆ.. ಏನದು?
- Technology ನಾಳೆ ವಿವೋದ ಈ ಹೊಸ ಫೋನ್ ಫಸ್ಟ್ ಸೇಲ್!..ಬಜೆಟ್ ಬೆಲೆಗೆ ಲಭ್ಯ!
- Movies ಕಲರ್ಫುಲ್ ಲೈಟು.. ಡಿಂಪಲ್ ಸ್ಮೈಲು.. 'ಸಂಜು ವೆಡ್ಸ್ ಗೀತಾ 2' ಒಂದು ಹಾಡಿನ ಸೆಟ್ಟಿಗೆ ಬರೋಬ್ಬರಿ ₹50 ಲಕ್ಷ!
- Finance Bengaluru Karaga: ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್, ಬದಲಿ ಮಾರ್ಗ ವಿವರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
2023ರಲ್ಲಿ ನೀವು ಬೆಳಗ್ಗೆ ಹೀಗೆ ಮಾಡಿ, ಬದುಕೇ ಬದಲಾಗುವುದು
ನಿಮ್ಮ ಜೀವನದಲ್ಲಿ ಒಳ್ಳೆಯ ಬದಲಾವಣೆ ನಿರೀಕ್ಷಿಸುತ್ತಿದ್ದೀರಾ? ಹೊಸ ವರ್ಷದಲ್ಲಿ ನಿಮ್ಮ ಜೀವನಶೈಲಿಯಲ್ಲಿ ಕೆಲವೊಂದು ಒಳ್ಳೆಯ ಬದಲಾವಣೆ ಕಾಣಲು ಬಯಸುವುದಾದರೆ ಬೆಳಗ್ಗೆ ಈ ಅಭ್ಯಾಸ ರೂಢಿಸಿ, ನಿಮ್ಮ ಬದುಕಿನಲ್ಲಿ ತುಂಬಾ ಬದಲಾವಣೆಯಾಗುವುದು:
1. ಒಳ್ಳೆಯ ನಿದ್ದೆ
ನಿದ್ದೆ ತುಂಬಾನೇ ಮುಖ್ಯ, ದಿನದಲ್ಲಿ 8 ತಾಸು ನಿದ್ದೆ ಮಾಡಿ. ನಿದ್ದೆ ಮಾಡುವುದರಲ್ಲಿ ಶಿಸ್ತು ಪಾಲಿಸಿ, ಅಂದ್ರೆ ದಿನಾ ಒಂದೇ ಸಮಯಕ್ಕೆ ನಿದ್ದೆ ಮಾಡಿ, ಆದಷ್ಟು 10 ಗಂಟೆಯ ಒಳಗಡೆ ನಿದ್ದೆ ಮಾಡಲು ಪ್ರಯತ್ನಿಸಿ.
ನಿದ್ದೆ ಸರಿಯಾಗಿ ಮಾಡದಿದ್ದರೆ, ನಿದ್ರಾ ಹೀನತೆ ಸಮಸ್ಯೆಯಿದ್ದರೆ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುವುದು. ಆದ್ದರಿಂದ ನಿದ್ದೆಗೆ ತುಂಬಾನೇ ಪ್ರಾಮುಖ್ಯತೆ ಕೊಡಬೇಕು. ಮಲಗಲು ಹೋಗುವಾಗ ಮೊಬೈಲ್ ಹಿಡಿದುಕೊಂಡು ಹೋಗಬೇಡಿ, ಮೊಬೈಲ್ ಎಲ್ಲಾ ದೂರವಿಟ್ಟು ಮಲಗಲು ಹೋಗಿ. ಮಲಗುವ ಮುಂಚೆ ಒಳ್ಳೆಯ ಪುಸ್ತಕ ಓದಿ ಅಥವಾ ಮ್ಯೂಸಿಕ್ ಕೇಳಿ ಈ ಅಭ್ಯಾಸದಿಂದ ನೆನಪಿನ ಶಕ್ತಿ ಹೆಚ್ಚುವುದು, ಕಣ್ಣಿಗೆ ಚೆನ್ನಾಗಿ ನಿದ್ದೆ ಬರುವುದು.
2. ಬೆಳಗ್ಗೆ ಎದ್ದ ತಕ್ಷಣ ಫೋನ್ ನೋಡಬೇಡಿ
ಕೆಲವರಿಗೆ ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ನೋಡುವ ಅಭ್ಯಾಸವಿರುತ್ತದೆ. ಈ ಅಭ್ಯಾಸವನ್ನು ಇಂದೇ ನಿಲ್ಲಿಸಿ, ಬೆಳಗ್ಗೆ ಎದ್ದು ವಾಕಿಂಗ್ ಅಥವಾ ಧ್ಯಾನದ ಕಡೆ ಗಮನ ನೀಡಿ. ನಂತರವಷ್ಟೇ ಮೊಬೈಲ್ ನೋಡಿ.
ಫೋನ್ ಡಿಟಾಕ್ಸ್ ಮಾಡಿ:ಅಂದರೆ ಬೆಳಗ್ಗೆ ಎದ್ದ ತಕ್ಷಣ ಫೋನ್ ಮಾಡುವುದು, ರಾತ್ರಿ ಮಲಗುವಾಗ ಫೋನ್ ನೋಡುವುದು ಮಾಡಬೇಡಿ, ಹೀಗೆ ಮಾಡಿ ನೋಡಿ ಅದರ ಬದಲಾವಣೆ ನಿಮ್ಮ ಅನುಭವಕ್ಕೆ ಬರುತ್ತದೆ.
3. 15 ನಿಮಿಷ ಧ್ಯಾನ ಮಾಡಿ
ಬೆಳಗ್ಗೆ ಎದ್ದ ಮೇಲೆ 15 ನಿಮಿಷ ಪ್ರಾಣಯಾಮ ಹಾಗೂ ಧ್ಯಾನ ಮಾಡಿ, ಇವು ಮಾನಸಿಕ ಒತ್ತಡ ಹೊರಹಾಕುವುದರ ಜೊತೆಗೆ ಆರೋಗ್ಯ ವೃದ್ಧಿಸುವುದು.
ದಿನಾ ನೀವು 15 ನಿಮಿಷ ಧ್ಯಾನಕ್ಕೆ ಮೀಸಲಿಡಿ, ಇದರಿಂದ ನೀವು ತುಂಬಾನೇ ಪ್ರಯೋಜನ ಪಡೆಯುವಿರಿ. ಮನಸ್ಸು ತುಂಬಾ ಶಾಂತವಾಗಿರುತ್ತದೆ, ಕೋಪವನ್ನು ನಿಯಂತ್ರಿಸಬಹುದು, ಯಾವುದೇ ವಿಷಯದಲ್ಲಿ ಗೊಂದಲವಿಲ್ಲದೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದು.
4. ವ್ಯಾಯಾಮ
ದಿನದಲ್ಲಿ ಅರ್ಧ ಗಂಟೆ ವ್ಯಾಯಾಮ ಮಾಡಿ. ನಿಮಗಿಷ್ವವಾದ ವ್ಯಾಯಾಮ ಮಾಡಿ. ಇದರಿಂದ ದೇಹಕ್ಕೆ, ಮನಸ್ಸಿಗೆ ಒಳ್ಳೆಯದು.
ನಾವು ದೈಹಿಕ ಕೆಲಸ ಮಾಡುವವರಾದರೆ ವ್ಯಾಯಾಮ ಮಾಡದಿದ್ದರೂ ದೇಹಕ್ಕೆ ವ್ಯಾಯಾಮ ಸಿಗುತ್ತದೆ, ಆದರೆ ದೈಹಿಕ ವ್ಯಾಯಾಮ ಕಡಿಮೆ ಇರುವ ಕೆಲಸ ಮಾಡುವವರಾದರೆ ವ್ಯಾಯಾಮದ ಬಗ್ಗೆ ಗಮನ ನೀಡಲೇಬೇಕು. ವ್ಯಾಯಾಮ ಮಾಡುವುದರಿಂದ ಕೊಲೆಸ್ಟ್ರಾಲ್, ಹೃದಯಾಘಾತ, ಮಧುಮೇಹದಂಥ ಸಮಸ್ಯೆ ತಡೆಗಟ್ಟಬಹುದು.
5. ಆರೋಗ್ಯಕರ ಆಹಾರದತ್ತ ಗಮನ ನೀಡಿ
ಹೊಟ್ಟೆ ತುಂಬಿಸಲು ಆಹಾರ ತಿನ್ನುವ ಬದಲಿಗೆ ಪೋಷಕಾಂಶಗಳಿರುವ ಆಹಾರ ನಿಮ್ಮ ಹೊಟ್ಟೆ ತುಂಬಲಿ. ಆದಷ್ಟು ಜಂಕ್ ಫುಡ್ಸ್ ಹಾಗೂ ಸಂಸ್ಕರಿಸಿದ ಆಹಾರಗಳಿಂದ ದೂರವಿರಿ.
ನೀವು ತಿನ್ನುವ ಆಹಾರಶೈಲಿಯಂತೆ ಇರುತ್ತದೆ ನಿಮ್ಮ ಆರೋಗ್ಯ. ನೀವು ಪೋಷಕಾಂಶಗಳಿರುವ ಆಹಾರ ಅಧಿಕ ತಿಂದಷ್ಟೂ ಆರೋಗ್ಯ ಚೆನ್ನಾಗಿರುತ್ತದೆ. ನಿಮ್ಮ ಆಹಾರದಲ್ಲಿ ಒಳ್ಳೆಯ ಕೊಬ್ಬಿನಂಶ, ಕಾರ್ಬ್ಸ್, ನಾರಿನಂಶ ಅಧಿಕವಿರಲಿ. ನೀವು ದಿನಾ 2-3 ಬಗೆಯ ಹಣ್ಣುಗಳನ್ನು ತಿನ್ನಿ, ಅದರಲ್ಲೂ ಸೀಸನಲ್ ಹಣ್ಣುಗಳನ್ನು ಸೇವಿಸಿ. ಸೀಸನಲ್ ತರಕಾರಿ, ನಟ್ಸ್ ನಿಮ್ಮ ಆಹಾರಕ್ರಮದಲ್ಲಿರಲಿ.
6. ಸಾಕಷ್ಟು ನೀರು ಕುಡಿಯಿರಿ
ದಿನದಲ್ಲಿ 8 ಲೋಟ ನೀರು ಕುಡಿಯಿರಿ. ನೀರಿಗೆ ಅಶ್ವಗಂಧ ಅಥವಾ ಅರಿಶಿಣ ಸೇರಿಸಿ ಕುಡಿಯಬಹುದು. ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿಗೆ ನಿಂಬೆರಸ ಹಾಕಿ ಕುಡಿದರೆ ಒಳ್ಳೆಯದು.
ನಿಮಗೆ ಬರೀ ನೀರು ಕುಡಿಯಲು ಬೋರ್ ಅನಿಸಿದರೆ ಹಣ್ಣಿನ ಜ್ಯೂಸ್ ಮಾಡಿ ಕುಡಿಯಿರಿ. ಆದರೆ ಹಣ್ಣಿನ ಜ್ಯೂಸ್ ಅನ್ನು ಸಕ್ಕರೆ ಹಾಕದೆ ಕುಡಿದರೆ ಆರೋಗ್ಯಕರ.
ಹೀಗೆ ಹೊಸ ವರ್ಷದಲ್ಲಿ ಈ ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಿದರೆ ಸಾಕು, ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆ ಕಂಡು ಬರುವುದು ನೋಡಿ.