Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ತೂಕ ನಿಯಂತ್ರಿಸಿ, ಖಂಡಿತ ಮಧುಮೇಹವನ್ನೂ ನಿಯಂತ್ರಿಸಬಹುದು...
ಮಧುಮೇಹ ನೇರವಾಗಿ ಅಪಾಯಕಾರಿಯಲ್ಲದಿದ್ದರೂ ಇದರ ಪರೋಕ್ಷ ಪರಿಣಾಮಗಳಿಂದ ದೇಹದ ಇತರ ಅಂಗಗಳು ವಿಫಲಗೊಂಡು ಸಾವಿನತ್ತ ದೂಡುವ ಕಾರಣ ಮಧುಮೇಹವನ್ನು ನಿಯಂತ್ರಿಸುವುದು ಅತಿ ಅಗತ್ಯ.
ಹಿಂದೊಮ್ಮೆ ಬ್ರಿಟಿಷರಿಗೇ ಹೆಚ್ಚಾಗಿ ಬರುತ್ತಿದ್ದ ಸಕ್ಕರೆ ಕಾಯಿಲೆ ಇದೇ ಕಾರಣಕ್ಕೆ 'ಪರಂಗಿಯವರ ಕಾಯಿಲೆ' ಎಂದೇ ಕನ್ನಡನಾಡಿನಲ್ಲಿ ಜನಜನಿತವಾಗಿತ್ತು. ಇಂದು ಈ ವ್ಯಾಧಿ ಕನ್ನಡನಾಡಿನ ಜೊತೆಗೇ ಇಡಿಯ ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಿಸಿದೆ. ಅಂದು ಇರದಿದ್ದ ಕಾಯಿಲೆ ಇಂದು ಇಷ್ಟೊಂದು ಸಂಖ್ಯೆಯಲ್ಲಿ ಏರಲು ಬದಲಾದ ಜೀವನಕ್ರಮ ಎಂದು ಸ್ಪಷ್ಟವಾಗಿಯೇ ಹೇಳಬಹುದು. ಮಧುಮೇಹ ರೋಗದ ಹೆಡೆಮುರಿ ಕಟ್ಟಿಹಾಕುವ ಫಲಪ್ರದ ಮನೆಮದ್ದು

ಮಧುಮೇಹ ನೇರವಾಗಿ ಅಪಾಯಕಾರಿಯಲ್ಲದಿದ್ದರೂ ಇದರ ಪರೋಕ್ಷ ಪರಿಣಾಮಗಳಿಂದ ದೇಹದ ಇತರ ಅಂಗಗಳು ವಿಫಲಗೊಂಡು ಸಾವಿನತ್ತ ದೂಡುವ ಕಾರಣ ಮಧುಮೇಹವನ್ನು ನಿಯಂತ್ರಿಸುವುದು ಅತಿ ಅಗತ್ಯ. ಮಧುಮೇಹ ದೇಹದ ತೂಕಕ್ಕೆ ನೇರವಾಗಿ ಸಂಬಂಧಿಸಿರುವ ಕಾರಣ ಮಧುಮೇಹವನ್ನು ನಿಯಂತ್ರಣದಲ್ಲಿರಿಸಬೇಕೇಂದರೆ ತೂಕವನ್ನು ಆರೋಗ್ಯಕರ ಮಿತಿಗಳ ಒಳಗೇ ಇರಿಸಬೇಕಾದುದು ಅನಿವಾರ್ಯ. ಮಧುಮೇಹಿಗಳಿಗೆ 'ಆಹಾರ ಪಥ್ಯ', ತಪ್ಪದೇ ಅನುಸರಿಸಿ...
ಇಂದಿನ ದಿನಗಳಲ್ಲಿ ಮಧುಮೇಹಿಗಳ ಸಂಖ್ಯೆ ದಿನೇ ದಿನೇ ಏರುತ್ತಿದೆ. ಭಾರತದಂತಹ ಅಭಿವೃದ್ದಿಶೀಲ ರಾಷ್ಟ್ರಗಳ ಜೊತೆಗೇ ಶ್ರೀಮಂತ ರಾಷ್ಟ್ರಗಳಲ್ಲಿಯೂ ಬಹುವಾಗಿಯೇ ವ್ಯಾಪಿಸಿದೆ. ಒಟ್ಟಾರೆ 7.9ಕೋಟಿ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ ಎಂದು ಒಂದು ಸಮೀಕ್ಷೆ ತಿಳಿಸುತ್ತದೆ.
ಇವರಲ್ಲಿ ಟೈಪ್ 2 ಅಥವಾ ದೇಹದಲ್ಲಿ ಉತ್ಪತ್ತಿಯಾದ ಇನ್ಸುಲಿನ್ ಬಳಕೆಯಾಗದ ಮಧುಮೇಹ ಇರುವವರ ಸಂಖ್ಯೆ ಬಹಳ ಹೆಚ್ಚು. ಇವರಲ್ಲಿ ಪ್ರತಿ ಮೂವರಲ್ಲಿ ಇಬ್ಬರು ಹೃದಯಾಘಾತ ಅಥವಾ ಹೃದಯ ಸಂಬಂಧಿ ಇತರ ತೊಂದರೆಗಳಿಂದ ಸಾವನ್ನಪ್ಪುವ ಸಂಭವ ಹೆಚ್ಚು. ನೆನಪಿರಲಿ ಮಧುಮೇಹ ಕಣ್ಣನ್ನೂ ಬಾಧಿಸುತ್ತದೆ!
ಮಧುಮೇಹ ವಿಪರೀತಕ್ಕೆ ಹೋಗುತ್ತಿದ್ದಂತೆಯೇ ಕಣ್ಣಿನ ದೃಷ್ಟಿ ಕುಂದುವುದು, ಮೂತ್ರಪಿಂಡಗಳು ವಿಫಲಗೊಳ್ಳುವುದು ಇತ್ಯಾದಿಗಳು ನಿಧಾನವಾಗಿ ಆವರಿಸಿಕೊಳ್ಳುತ್ತಾ ಹೋಗುತ್ತದೆ. ಗಾಯಗಳು ಒಣಗದೇ ಗ್ಯಾಂಗ್ರೀನ್ ಸ್ಥಿತಿಗೆ ಒಳಗಾಗಬೇಕಾಗುತ್ತದೆ. ಗ್ಯಾಂಗ್ರೀನ್ ಆವರಿಸಿದ ಭಾಗವನ್ನು ಕತ್ತರಿಸದೇ ಅನ್ಯಮಾರ್ಗವಿಲ್ಲ. ಆದ್ದರಿಂದ ಮಧುಮೇಹಿಗಳು ತಮ್ಮ ತೂಕವನ್ನು ಹದ್ದುಬಸ್ತಿನಲ್ಲಿಡುವುದು ಅತ್ಯಂತ ಅಗತ್ಯ ಮತ್ತು ಅನಿವಾರ್ಯ.
ಇದಕ್ಕೆ ಬೇಕಾಗಿರುವುದು ದೃಢ ಮನಸ್ಸು ಮಾತ್ರ. ದೃಢಮನಸ್ಸಿನಿಂದ ವೈದ್ಯರು ಹೇಳಿದ ಮಾತುಗಳನ್ನು ಪಾಲಿಸಿಕೊಂಡು ಬಂದರೆ ತೂಕವನ್ನೂ ಹದ್ದುಬಸ್ತಿನಲ್ಲಿಡಬಹುದು, ತನ್ಮೂಲಕ ಮಧುಮೇಹವನ್ನೂ ಹದ್ದುಬಸ್ತಿನಲ್ಲಿಡಬಹುದು. ವೈದ್ಯರು ಹೇಳುವ ಸಲಹೆಯ ಸಂಕ್ಷಿಪ್ತ ರೂಪವೆಂದರೆ ಊಟವನ್ನು ಬಿಡಬೇಡಿ, ಬದಲಿಗೆ ಪ್ರತಿ ಊಟದ ಪ್ರಮಾಣವನ್ನು ಕಡಿಮೆ ಮಾಡಿ.
ಇಂದಿನ ಈ ಸ್ಥಿತಿಗೆ 1980-90ರ ಅವಧಿಯಲ್ಲಿ 'ಏನು ಬೇಕಾದರೂ, ಎಷ್ಟು ಬೇಕಾದರೂ ತಿನ್ನಿ' ಎಂದು ಆಹಾರಮಳಿಗೆಗಳು ಭರ್ಜರಿ ಪ್ರಚಾರ ನಡಿಸಿದ್ದೂ ಒಂದು ಕಾರಣವಿರಬಹುದು. ಆಗ ಕೊಟ್ಟ ಹಣಕ್ಕೆ ಮೋಸವಾಗಬಾರದು ಎಂದು ಭಾರೀ ಪ್ರಮಾಣದಲ್ಲಿ ತಿಂದು ಕೊಬ್ಬು ಹೆಚ್ಚಿಸಿಕೊಂಡ ಪರಿಣಾಮವಾಗಿ ಇಂದು ಮಧುಮೇಹ ಹೆಚ್ಚು ಜನರಿಗೆ ಆವರಿಸಿದೆ ಎಂದು ಇನ್ನೊಂದು ಸಮೀಕ್ಷೆ ತಿಳಿಸುತ್ತದೆ.
ಆದ್ದರಿಂದ ತೂಕ ಕಡಿಮೆಯಾಗಬೇಕಾದರೆ ಆಹಾರಗಳ ಜಾಹೀರಾತುಗಳನ್ನು ನೋಡುವುದನ್ನೇ ಬಿಟ್ಟುಬಿಟ್ಟು ನಿಮಗೆ ಸೂಕ್ತ ಆಹಾರವನ್ನು ಕಡಿಮೆ ಪ್ರಮಾಣದಲ್ಲಿ, ಕಾಲಕಾಲಕ್ಕೆ ಸೇವಿಸುವುದೇ ಸೂಕ್ತ ವಿಧಾನ. ಸಾಮಾನ್ಯವಾಗಿ ನಾವು ಊಟ ಕಡಿಮೆ ಮಾಡಿದರೆ ನಮ್ಮ ದೇಹ ಹಸಿವು ಪೂರ್ಣವಾಗಿ ಹೋಗಿಲ್ಲ ಎಂದು ಸೂಚನೆ ನೀಡುತ್ತದೆ.
ಹೆಚ್ಚಿನ ಸಂದರ್ಭಗಳಲ್ಲಿ ಇದು ಹುಸಿ ಸೂಚನೆಯಾಗಿರುತ್ತದೆ. ಕಡಿಮೆ ಊಟ ಮಾಡಿದ ಬಳಿಕ ಹೆಚ್ಚು ನೀರು ಕುಡಿದು ಈ ಹೊತ್ತಿಗೆ ನಿನಗೆ ಇಷ್ಟೇ, ಮುಂದಿನ ಹೊತ್ತಿಗೆ ಬೇಕಾದರೆ ನೋಡುವಾ ಎಂದು ಮನಸ್ಸನ್ನು ಗದರಿಸಿದರೆ ಸಾಕು, ಆಹಾರದ ನಿಯಂತ್ರಣ ತನ್ನಿಂತಾನೇ ಆಗುತ್ತದೆ. ಈ ಅಭ್ಯಾಸವನ್ನು ಮುಂದುವರೆಸಿಕೊಂಡು ಹೋದರೆ ತೂಕವನ್ನು ನಿಯಂತ್ರಣದಲ್ಲಿರಿಸಲು ಸಾಧ್ಯವಾಗುತ್ತದೆ.
ಒಂದು ವೇಳೆ ಈ ಸೂಚನೆಗೆ ತಲೆದೂಗಿ ತಟ್ಟೆಗೆ ಇನ್ನಷ್ಟು ಸುರುವಿಕೊಂಡಿರೋ, ಆಗ ಮನಸ್ಸೆಂಬ ರಾಕ್ಷಸನಿಗೆ ಜೀವನ ಪೂರ್ತಿ ಗುಲಾಮನಾಗಬೇಕಾಗಿ ಬರುತ್ತದೆ. ಇದರಿಂದ ಅನಗತ್ಯವಾದ ಮತ್ತು ಹೆಚ್ಚುವರಿ ಆಹಾರವನ್ನು ತಿಂದು ತೂಕ ಇನ್ನಷ್ಟು ಹೆಚ್ಚಲು ಕಾರಣವಾಗುತ್ತದೆ.
ತೂಕವನ್ನು ನಿಯಂತ್ರಣದಲ್ಲಿರಿಸಲು ಇನ್ನೊಂದು ಸೂಕ್ತ ವಿಧಾನವೆಂದರೆ ದಿನವಿಡೀ ನೀರು ಕುಡಿಯುತ್ತಿರುವುದು. ಅದರಲ್ಲೂ ಊಟಕ್ಕೂ ಅರ್ಧ ಗಂಟೆ ಮುನ್ನ ಸಾಧ್ಯವಾದಷ್ಟು ಹೆಚ್ಚು ನೀರು ಕುಡಿಯುವುದು. ಇದರಿಂದ ದೇಹ ನಿರ್ಜಲೀಕರಣಕ್ಕೆ ಒಳಗಾಗುವುದರಿಂದ ತಪ್ಪಿಸಿಕೊಳ್ಳಬಹುದು ಜೊತೆಗೇ ಹೊಟ್ಟೆ ಅರ್ಧಕ್ಕಿಂತ ಹೆಚ್ಚು ತುಂಬಿರುವ ಕಾರಣ ಹೆಚ್ಚು ಆಹಾರ ಸೇವಿಸಲು ಸ್ಥಳಾವಕಾಶವಿಲ್ಲದೇ ಹೆಚ್ಚಿನ ಆಹಾರ ತಿನ್ನುವುದರಿಂದ ತಪ್ಪಿಸಲು ಸಾಧ್ಯವಾಗುತ್ತದೆ.
ಮಧುಮೇಹಿಗಳಲ್ಲಿ ಕೆಲವೊಮ್ಮೆ ಬಾಯಾರಿಕೆ ಮತ್ತು ಹಸಿವು ಎರಡಕ್ಕೂ ಮೆದುಳು ಏಕಸಮಾನವಾದ ಸೂಚನೆಯನ್ನು ಕಳುಹಿಸುತ್ತದೆ. ಅಂದರೆ ಬಾಯಾರಿಕೆಯಾಗಿದ್ದಾಗಲೂ ಘನ ಆಹಾರವನ್ನೇ ತಿನ್ನುವ ಬಯಕೆಯಾಗುತ್ತದೆ. ಆದ್ದರಿಂದ ಹಸಿವಾದಾಗಲೆಲ್ಲಾ ನೀರು ಕುಡಿದೇ ತಣಿಸುವುದು ಜಾಣತನದ ಲಕ್ಷಣ.
ತೂಕದ ನಿಯಂತ್ರಣಕ್ಕೆ ಇನ್ನೊಂದು ವಿಧಾನವೆಂದರೆ ನಿಮ್ಮ ಇಷ್ಟದ ತಿಂಡಿಗಳನ್ನು ಆಪ್ತರೊಂದಿಗೆ ಹಂಚಿಕೊಂಡು ತಿನ್ನುವುದು. ನಿಮ್ಮ ಪಾಲಿಗೆ ಬಂದ ಆಹಾರದಲ್ಲಿ ಕೊಂಚವೇ ಇರಿಸಿಕೊಂಡು ಉಳಿದ ಭಾಗವನ್ನು ಆಪ್ತರ ತಟ್ಟೆಗೆ ಸುರಿದು ಪಾಲಿಗೆ ಬಂದದ್ದು ಪಂಚಾಮೃತ ಎಂಬಂತೆ ಸೇವಿಸುವುದರಿಂದ ಈ ಆಹಾರ ನಿಜವಾಗಿಯೂ ಪಂಚಾಮೃತವೇ ಆಗುತ್ತದೆ. ಟೈಪ್-2 ಮಧುಮೇಹಕ್ಕೆ, ಇಲ್ಲಿದೆ ನೋಡಿ ಆಯುರ್ವೇದ ಚಿಕಿತ್ಸೆ
ಮಧುಮೇಹಿಗಳಿಗೆ ಸಕ್ಕರೆ ಸಂಪೂರ್ಣವಾಗಿ ವರ್ಜ್ಯವಲ್ಲ, ಅವರಿಗೂ ಕೊಂಚ ಪ್ರಮಾಣದಲ್ಲಿ ಬೇಕಾಗಿರುತ್ತದೆ. ಆ ಅಗತ್ಯತೆಯನ್ನು ಈ ಚಿಕ್ಕ ಪ್ರಮಾಣದ ಮೂಲಕ ಪಡೆದುಕೊಳ್ಳಬಹುದು ಹಾಗೂ ಮನಸ್ಸಿಗೂ ಸಮಾಧಾನ ಸಿಗುತ್ತದೆ. ಎಲ್ಲರೂ ಪುಕ್ಕಟೆಯಾಗಿ ನೀಡುವ ಸಲಹೆ ಇನ್ನೊಂದು ಎಂದರೆ ವ್ಯಾಯಾಮ ಮಾಡಿ ಎನ್ನುವುದು.
ಮಧುಮೇಹಿಗಳಿಗೆ ಹಿಂದಿನ ದಿನಗಳ ಕಸುವು ಇಲ್ಲದಿರುವ ಕಾರಣ ಭಾರೀ ವ್ಯಾಯಾಮ ಇವರಿಗೆ ಮಾರಕ. ಆದ್ದರಿಂದ ನಿಮ್ಮ ದೇಹಕ್ಕೆ ಸೂಕ್ತವಾದ ಸರಳ ವ್ಯಾಯಾಮವನ್ನು ಮಾಡಿ. ಮಧುಮೇಹಿಗಳಿಗೆ ಹೇಳಿ ಮಾಡಿಸಿದ ವ್ಯಾಯಾಮವೆಂದರೆ ನಡಿಗೆ. ದಿನದ ಮೂರೂ ಹೊತ್ತು ಎಷ್ಟು ಸಾಧ್ಯವೋ ಅಷ್ಟು ಅಡ್ಡಾಡಿ. ನಿಮ್ಮ ನಿತ್ಯದ ಕೆಲಸದ ನಡುವೆ ಸಾಧ್ಯವಿದ್ದಷ್ಟು ನಡೆದೇ ಕೆಲಸಗಳನ್ನು ಪೂರ್ಣಗೊಳಿಸಿ. ಒಟ್ಟಾರೆ ನಿಮಗೆ ಸಮಾಧಾನವಾಗುವಷ್ಟು ವ್ಯಾಯಾಮವನ್ನು ತಪ್ಪದೇ, ನಿತ್ಯವೂ ಅನುಸರಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
















