Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಗಂಜಿ ಸಾಕು.. ಈ ಹಳೆಯ ಮನೆಮದ್ದು ಟ್ರೈ ಮಾಡಿ ನೋಡಿ. ಹೌದು, ಬೇಸಿಗೆ (Summer) ಬಂದ ಕೂಡಲೇ ನಾವು ಬಿಸಿಲಿನಿಂದ ದೇಹವನ್ನು ತಂಪಾಗಿಸಲು ಐಸ್ಕ್ರೀಮ್, ರಾಸಾಯನಿಕಯುಕ್ತ ತಂಪು ಪಾನೀಯಗಳ ಮೊರೆ ಹೋಗುತ್ತೇವೆ. ಇವು ತಾತ್ಕಾಲಿಕ ಪರಿಹಾರ ನೀಡಿದರೂ ಆರೋಗ್ಯಕ್ಕೆ ಹಾನಿಕಾರಕ.
ಆದರೆ, ನಮ್ಮ ಹಿಂದಿನ ಹಿರಿಯರು ಪ್ರಕೃತಿದತ್ತವಾದ, ಅಡುಗೆಮನೆಯಲ್ಲೇ ಸಿಗುವ ಅನೇಕ ಅದ್ಭುತ ಪಾನೀಯಗಳಿಂದ ಬೇಸಿಗೆಯನ್ನು ಎದುರಿಸುತ್ತಿದ್ದರು. ಅಂತಹ ಪಾನೀಯಗಳಲ್ಲಿ 'ತರವಾಣಿ ಚಾರು' (Taravani Charu) ಅತ್ಯಂತ ಪ್ರಮುಖವಾದುದು. ಆಂಧ್ರಪ್ರದೇಶ ಮತ್ತು ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ 'ಗಂಜಿ ರಸ' ಅಥವಾ 'ಪುಳಿ ಗಂಜಿ' ಎಂದೂ ಜನಪ್ರಿಯವಾಗಿರುವ ಈ ಪಾನೀಯ ಕೇವಲ ಒಂದು ಅಡುಗೆಯಲ್ಲ. ಬೇಸಿಗೆಯ ಸುಡುವ ಬಿಸಿಲಿಗೆ ಹಿರಿಯರು ಕಂಡುಕೊಂಡ 'ಅಮೃತ'ವಿದು.
ಇದರ ಮಹತ್ವ, ಅದ್ಭುತ ಆರೋಗ್ಯ ಪ್ರಯೋಜನಗಳು, ತರವಾಣಿ ಚಾರು ತಯಾರಿಸಲು ಬೇಕಾಗುವ ಸಾಮಗ್ರಿಗಳು ಹಾಗೂ ತಯಾರಿಸುವ ವಿಧಾನದ (Taravani Charu Recipe for Summer) ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ತರವಾಣಿ ಚಾರು ಎಂದರೇನು?
ಸಾಮಾನ್ಯವಾಗಿ ಅನ್ನ ಬಸಿದ ನಂತರ ಗಂಜಿಯನ್ನು ಚೆಲ್ಲುತ್ತೇವೆ. ಆದರೆ ತರವಾಣಿ ಚಾರು ತಯಾರಿಸಲು ಇದೇ ಗಂಜಿ ಮುಖ್ಯ. ಅಂದಿನ ಗಂಜಿಯಿಂದಲ್ಲ, ಬದಲಿಗೆ ಅನ್ನ ಬಸಿದ ಗಂಜಿಯನ್ನು ಒಂದು ಅಥವಾ ಎರಡು ದಿನ ಸಂಗ್ರಹಿಸಿ, ಹುದುಗುವಿಕೆಗೆ ಒಳಪಡಿಸಿದ ನಂತರ ಈ ಚಾರನ್ನು ತಯಾರಿಸಲಾಗುತ್ತದೆ. ಗಂಜಿ ಹುಳಿಯಾದಾಗ ಮಾತ್ರ ಇದರ ನೈಜ ರುಚಿ ಹಾಗೂ ಆರೋಗ್ಯಕರ ಗುಣಗಳು ಹೆಚ್ಚುತ್ತವೆ.
ಹಳೆಯ ಕಾಲದಲ್ಲಿ ಅನ್ನ ಬಸಿದ ಗಂಜಿಯನ್ನು ಮಣ್ಣಿನ ಮಡಕೆಗಳಲ್ಲಿ ಹಾಕಿ ಮುಚ್ಚಿಡುತ್ತಿದ್ದರು. ಗಾಳಿಯಲ್ಲಿರುವ ನೈಸರ್ಗಿಕ ಬ್ಯಾಕ್ಟೀರಿಯಾಗಳು ಗಂಜಿಯನ್ನು ಹುದುಗುವಂತೆ ಮಾಡುತ್ತವೆ. ಈ ಫರ್ಮೆಂಟೇಶನ್ ಪ್ರಕ್ರಿಯೆಯಿಂದ ಗಂಜಿಗೆ ಹಿತವಾದ ಹುಳಿ ರುಚಿ ಬರುತ್ತದೆ. ಇದೇ ರುಚಿ ಮತ್ತು ನೈಸರ್ಗಿಕ ಹುದುಗುವಿಕೆಯು ತರವಾಣಿ ಚಾರಿನ ಅಸಲಿ ಶಕ್ತಿ ಮತ್ತು ವಿಶಿಷ್ಟ ಗುಣವಾಗಿದೆ.
ಆರೋಗ್ಯದ ಪ್ರಯೋಜನಗಳು
ಇಂದಿನ ವೈದ್ಯಕೀಯ ಲೋಕವು 'ಕರಳಿನ ಆರೋಗ್ಯ' ಅಥವಾ 'ಗಟ್ ಹೆಲ್ತ್' ಬಗ್ಗೆ ಹೆಚ್ಚು ಒತ್ತು ನೀಡುತ್ತದೆ. ಹುದುಗಿಸಿದ ಈ ಪುಳಿ ಗಂಜಿ ಒಂದು ಅತ್ಯುತ್ತಮ ನೈಸರ್ಗಿಕ ಪ್ರೋಬಯೋಟಿಕ್ ಆಗಿದ್ದು, ಕರುಳಿನ ಆರೋಗ್ಯವನ್ನು ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ಬೇಸಿಗೆಯಲ್ಲಿ ಕಾಡುವ ಮೈ ಕೈ ಉರಿ, ದೇಹದ ಉಷ್ಣತೆ, ಮತ್ತು ಆಯಾಸವನ್ನು ಇದು ತಕ್ಷಣವೇ ಕಡಿಮೆ ಮಾಡುತ್ತದೆ. ಜೀರ್ಣಕ್ರಿಯೆಗೆ ಸಹಕಾರಿಯಾಗಿದ್ದು, ಅಜೀರ್ಣ, ಹೊಟ್ಟೆ ಉಬ್ಬರ ಅಥವಾ ಮಲಬದ್ಧತೆಯಿಂದ ಬಳಲುವವರಿಗೆ ಇದು ರಾಮಬಾಣ. ಇದರಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳು ಜೀರ್ಣಾಂಗವ್ಯೂಹವನ್ನು ಸ್ವಚ್ಛಗೊಳಿಸಿ ಸುಧಾರಿತ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತವೆ.
ಬಿಸಿಲಿನಿಂದ ದೇಹದ ಲವಣಾಂಶ ಕಡಿಮೆಯಾದಾಗ, ಈ ಚಾರು ಸೇವಿಸಿದರೆ ತಕ್ಷಣದ ಶಕ್ತಿ ಹಾಗೂ ಚೈತನ್ಯ ಸಿಗುತ್ತದೆ. ಇದು ದೇಹದ ಎಲೆಕ್ಟ್ರೋಲೈಟ್ ಸಮತೋಲನವನ್ನು ನೈಸರ್ಗಿಕವಾಗಿ ಕಾಪಾಡುತ್ತದೆ, ನಿರ್ಜಲೀಕರಣ ತಡೆದು ದೇಹವನ್ನು ಉಲ್ಲಾಸದಿಂದಿಡುತ್ತದೆ.
ತರವಾಣಿ ಚಾರು ಮಾಡಲು ಬೇಕಾಗುವ ಸಾಮಗ್ರಿಗಳು
• ಹುಳಿ ಗಂಜಿ (ಒಂದು ಅಥವಾ ಎರಡು ದಿನ ಸಂಗ್ರಹಿಸಿದ್ದು)
• ಈರುಳ್ಳಿ
• ಹಸಿ ಮೆಣಸಿನಕಾಯಿ
• ಬೆಳ್ಳುಳ್ಳಿ ಎಸಳು
• ಟೊಮ್ಯಾಟೊ
• ಸಾಸಿವೆ
• ಜೀರಿಗೆ
• ಕರಿಬೇವು
• ರುಚಿಗೆ ತಕ್ಕಷ್ಟು ಉಪ್ಪು
• ಕಾಳುಮೆಣಸಿನ ಪುಡಿ
• ಕೊತ್ತಂಬರಿ ಸೊಪ್ಪು
• ಎಣ್ಣೆ
ತರವಾಣಿ ಚಾರು ತಯಾರಿಸುವ ವಿಧಾನ
- ಮೊದಲು ಸಂಗ್ರಹಿಸಿದ ಹುಳಿ ಗಂಜಿಯನ್ನು ಪಾತ್ರೆಯಲ್ಲಿ ಹದ ಮಾಡಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಜೀರಿಗೆ, ಜಜ್ಜಿದ ಬೆಳ್ಳುಳ್ಳಿ ಮತ್ತು ಕರಿಬೇವು ಹಾಕಿ ಒಗ್ಗರಣೆ ತಯಾರಿಸಿ.
- ನಂತರ ಹಸಿಮೆಣಸಿನಕಾಯಿ ಮತ್ತು ಈರುಳ್ಳಿ ಸೇರಿಸಿ ಕೆಂಪಾಗುವವರೆಗೆ ಹುರಿಯಿರಿ. ಟೊಮ್ಯಾಟೊ ಬಳಸುವವರು ಈಗ ಸೇರಿಸಬಹುದು.
- ಒಗ್ಗರಣೆ ಸಿದ್ಧವಾದ ಮೇಲೆ ಹುಳಿ ಗಂಜಿಗೆ ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸ್ವಲ್ಪ ಕಾಳುಮೆಣಸಿನ ಪುಡಿ (ಅಥವಾ ಖಾರದ ಪುಡಿ) ಸೇರಿಸಿ. ಸಣ್ಣ ಉರಿಯಲ್ಲಿ ಐದು ನಿಮಿಷ ಕುದಿಸಿ.
- ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ ಘಮಘಮಿಸುವ ತರವಾಣಿ ಚಾರು ಸಿದ್ಧ.
ಸೇವಿಸುವುದು ಹೇಗೆ?
ಇದನ್ನು ಬಿಸಿ ಅನ್ನದ ಜೊತೆಗೆ ಮಜ್ಜಿಗೆ ಬೆರೆಸಿ ಊಟವಾಗಿ ಅಥವಾ ಪಾನೀಯದಂತೆ ಗ್ಲಾಸ್ನಲ್ಲಿ ಕುಡಿಯಬಹುದು. ಬೆಳ್ಳುಳ್ಳಿ ಹೆಚ್ಚಾಗಿ ಹಾಕಿದರೆ ಇದರ ಘಾಟು ಮತ್ತು ರುಚಿ ಅದ್ಭುತವಾಗಿರುತ್ತದೆ. ಗಂಜಿ ಅತಿಯಾಗಿ ಹಳೆಯದಾಗಿ ಕೆಟ್ಟ ವಾಸನೆ ಬರುತ್ತಿದ್ದರೆ ಬಳಸಬೇಡಿ. ಬೇಸಿಗೆಯಲ್ಲಿ ಒಂದು ದಿನ ಹೊರಗಿಟ್ಟು ನಂತರ ಫ್ರಿಡ್ಜ್ನಲ್ಲಿ ಸಂಗ್ರಹಿಸುವುದು ಉತ್ತಮ.



Click it and Unblock the Notifications
