Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಗೋವಿನಜೋಳ ಮತ್ತು ತರಕಾರಿ ರಾಯತ

ಬೆಂದ ಗೋವಿನಜೋಳವನ್ನು ತಿನ್ನಲು ಇಷ್ಟಪಡುವ ಮಕ್ಕಳಿಗಂತೂ ಈ ರಾಯತ ಇಷ್ಟವಾಗದಿರಲು ಸಾಧ್ಯವೇ ಇಲ್ಲ. ವಿಭಿನ್ನ ಬಗೆಯ ಅಡುಗೆಗಳನ್ನು ತಿನ್ನಲು ಆಸೆಪಡುವವರು ಇದನ್ನು ಆಗಾಗ ಮಾಡಿ ತಿನ್ನಲು ಅಡ್ಡಿಯಿಲ್ಲ. ಅಡುಗೆಯಲ್ಲಿ ವೆರೈಟಿ ಇದ್ದಹಾಗೂ ಆಯಿತು, ಆರೋಗ್ಯಕ್ಕೂ ಹಿತಕರ.
ಬೇಕಾಗುವ ಪದಾರ್ಥಗಳು
ಹೂಕೋಸು ಸಣ್ಣ ಗಾತ್ರದ್ದು
ಹಸಿ ಬಟಾಣಿ ಅರ್ಧ ಬಟ್ಟಲು
ಆಲೂಗಡ್ಡೆ ಎರಡು
ಈರುಳ್ಳಿ ಎರಡು (ಬೇಕಿದ್ದರೆ)
ಗೋವಿನಜೋಳ ಮೂರು
ಕ್ಯಾರಟ್ (ಗಜ್ಜರಿ) ಎರಡು
ಫ್ರೆಂಚ್ ಬೀನ್ಸ್ ಅರ್ದ ಬಟ್ಟಲು
ಮೊಸರು ಎರಡು ಬಟ್ಟಲು
ಸಕ್ಕರೆ ಮತ್ತು ಉಪ್ಪು ರುಚಿಗೆ ತಕ್ಕಷ್ಟು
ಹಸಿ ಮೆಣಸಿನಕಾಯಿ ನಾಲ್ಕು
ಸಾಸಿವೆ, ಕರಿಬೇವು, ಕೊತ್ತಂಬರಿ ಸೊಪ್ಪು
ಅಡುಗೆ ಎಣ್ಣೆ
ತಯಾರಿಸುವ ವಿಧಾನ
1) ಮೊದಲಿಗೆ ಎಲ್ಲಾ ತರಕಾರಿಗಳನ್ನು ಸಣ್ಣಗೆ ಹೆಚ್ಚಿಕೊಂಡು, ಬಟಾಣಿ, ಬಿಡಿಸಿದ ಗೋವಿನಜೋಳದ ಕಾಳುಗಳ ಸಮೇತ ಕುಕ್ಕರಿನಲ್ಲಿ ಬೇಯಿಸಿಕೊಳ್ಳಿ. ಕುಕ್ಕರು ನಾಲ್ಕು ವಿಷಲ್ ಹಾಕಿದರೂ ಸಾಕು. ನಂತರ ನೀರನ್ನು ಬಸಿದು ಒಂದು ಪಾತ್ರೆಯಲ್ಲಿ ತೆಗೆದಿಟ್ಟುಕೊಳ್ಳಿ.
2) ಒಂದು ಅಗಲ ತಳದ ಪಾತ್ರೆಯಲ್ಲಿ ನಾಲ್ಕಾರು ಚಮಚದಷ್ಟು ಎಣ್ಣೆ ಹಾಕಿ, ಸ್ಟೌ ಉರಿಯನ್ನು ಸಿಮ್ ನಲ್ಲಿಡಿ. ಬಿಸಿಯಾದ ನಂತರ ಸಾಸಿವೆ, ಕರಿಬೇವು, ಹಸಿ ಮೆಣಸಿನಕಾಯಿ ಹಾಕಿ ತಾಳಿಸಿ.
3) ಒಗ್ಗರಣೆ ಪಾತ್ರೆಗೆ ಮೊಸರನ್ನು ಕಡಗೋಲಿನಿಂದ ಕಡಿದು ಹಾಕಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸ್ವಲ್ಪೇ ಸ್ವಲ್ಪ ಸಕ್ಕರೆ ಹಾಕಿರಿ ಕೈಯಾಡಿಸಿ.
4) ಇಷ್ಟಾದ ಮೇಲೆ ಬೇಯಿಸಿಟ್ಟುಕೊಂಡ ತರಕಾರಿಗಳನ್ನು ಪಾತ್ರೆಗೆ ಸುರಿದು ಐದರಿಂದ ಆರು ನಿಮಿಷ ಬೇಯಲು ಬಿಡಿ. ಅದಕ್ಕೆ ಕೊತ್ತಂಬರಿ ಸೊಪ್ಪನ್ನು ನೀರಿನಲ್ಲಿ ತೊಳೆದು ಸಣ್ಣಗೆ ಕತ್ತರಿಸಿ ಹಾಕಿ ಕೈಯಾಡಿಸಿ.
ಈ ಗೋವಿನಜೋಳ ಮತ್ತು ತರಕಾರಿ ಮಿಶ್ರಣದ ರಾಯತವನ್ನು ಬಿಸಿಯಾದ ಅನ್ನ ಅಥವಾ ಚಪಾತಿ ಅಥವಾ ರೊಟ್ಟಿಯೊಡನೆ ತಿನ್ನಬಹುದು. ಕಡಿಮೆ ಕ್ಯಾಲೋರಿ ಇರುವ ಈ ರೆಸಿಪಿ ದಪ್ಪಗಾಗಬಾರದೆಂದು ನಿರ್ಧಾರಕ್ಕೆ ಬಂದವರಿಗೆ ಹೇಳಿ ಮಾಡಿಸಿದ್ದು.



Click it and Unblock the Notifications