Latest Updates
-
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ!
ಮೆಂತ್ಯ ಇಡ್ಲಿ ಜೊತೆ ಹುರಿದ ಬೇಳೆ ಸಾಂಬಾರ್

ಮೆಂತ್ಯ ಇಡ್ಲಿ
ಹೊಂದಿಸಿಕೊಳ್ಳಬೇಕಾದ ಸಾಮಗ್ರಿಗಳು
ಕುಸುಬುಲ ಅಕ್ಕಿ - 4 ಲೋಟ
ಮೆಂತ್ಯದ ಕಾಳು - 3 1/2 ಚಮಚ
ಕಲ್ಲುಪ್ಪು - 4 ಚಮಚ
ತಯಾರಿಸುವ ವಿಧಾನ
1. ಮೆಂತ್ಯದ ಕಾಳುಗಳನ್ನು ಒಟ್ಟಿಗೆ 3 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿರಿ.
2. ಅಕ್ಕಿಯನ್ನು ಪ್ರತ್ಯೇಕವಾಗಿ ಎರಡರಿಂದ ಮೂರು ಗಂಟೆಗಳ ಕಾಲ ನೆನೆಸಿರಿ.
3. 1/2 ಗಂಟೆಗಳ ಕಾಲ ಮೆಂತ್ಯವನ್ನು ನುಣ್ಣಗೆ, ನೊರೆ ನೊರೆಯಾಗುವಂತೆ ರುಬ್ಬಿಕೊಳ್ಳಿ.
4. ಅಕ್ಕಿಯನ್ನು ಸಣ್ಣ ರವೆಯಷ್ಟಾಗುವವರೆಗೆ ಹದವಾಗಿ ರುಬ್ಬಿರಿ. ರುಬ್ಬಿದ ಮೆಂತ್ಯ ಮತ್ತು ಅಕ್ಕಿಯನ್ನು ಒಟ್ಟಿಗೆ ಉಪ್ಪಿನೊಂದಿಗೆ ಬೆರೆಸಿರಿ.
5. ಚಿಟಿಕೆಯಷ್ಟು ತಿನ್ನುವ ಸೋಡಾ ಬೆರೆಸಿ 10 ಗಂಟೆಗಳ ಕಾಲ ಅದನ್ನು ಮುಚ್ಚಿಟ್ಟುಬಿಡಿ.
6. ಸಾಧಾರಣವಾದ ರೀತಿಯಲ್ಲಿ ಇಡ್ಲಿಯನ್ನು ಹಬೆಯಲ್ಲಿ ಬೇಯಿಸಿರಿ.
ಸೂಚನೆ : ಯಾವಾಗಲೂ ಉಪ್ಪನ್ನು ಕೊನೆಯಲ್ಲಿ ಸೇರಿಸಬೇಕು ರುಬ್ಬುವ ಮೊದಲು ಉಪ್ಪನ್ನು ಬೆರೆಸಿದರೆ ಇಡ್ಲಿಗಳು ಗಟ್ಟಿಯಾಗುತ್ತದೆ.
ಹುರಿದ ಬೇಳೆ ಸಾಂಬಾರ್
ಹೊಂದಿಸಿಕೊಳ್ಳಬೇಕಾದ ಸಾಮಗ್ರಿಗಳು
ಈರುಳ್ಳಿ - 2
ಟೊಮೇಟೊ - 3
ಆರಿಷಿಣ ಪುಡಿ - 1/2 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಬೇಕಾದರೆ ಸಕ್ಕರೆ ಅಥವಾ ಬೆಲ್ಲ
ದನಿಯಾ - 1 ಚಮಚ
ಕೆಂಪು ಮೆಣಸಿನಕಾಯಿ - 8
ಹುರಿದ ಕಡಲೆ ಬೇಳೆ - 1 1/2 ಚಮಚ
ತಯಾರಿಸುವ ವಿಧಾನ
ಮೊದಲು ಈರುಳ್ಳಿ ಮತ್ತು ಟೊಮೇಟೊ ಕತ್ತರಿಸಿಕೊಳ್ಳಿ. ಎಣ್ಣೆ ಬಿಸಿ ಮಾಡಿ, ಸಾಸಿವೆ ಹಾಕಿ ಒಗ್ಗರಣೆ ಮಾಡಿರಿ. ಇದಕ್ಕೆ ಈರುಳ್ಳಿ, ಟೊಮೇಟೊ, ಕರಿಬೇವು, ಅರಿಷಿಣ ಸೇರಿಸಿ ಚೆನ್ನಾಗಿ ತಾಳಿಸಿರಿ. ಅದಕ್ಕೆ ನೀರನ್ನು ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಉದುರಿಸಿ.
ನಂತರ ದನಿಯಾ, ಕೆಂಪು ಮೆಣಸಿನಕಾಯಿ ಮಿಶ್ರಣ ಮತ್ತು ಕಡಲೆಬೇಳೆಯನ್ನು ಪ್ರತ್ಯೇಕವಾಗಿ ಹುರಿದು ಪುಡಿಮಾಡಿಟ್ಟುಕೊಳ್ಳಿ. ಪುಡಿ ಮಾಡಿದ ದನಿಯಾ ಮತ್ತು ಕೆಂಪು ಮೆಣಸಿನಕಾಯಿಯನ್ನು ಕುದಿಬಂದ ನೀರಿಗೆ ಸೇರಿಸಿರಿ. ಕೆಲ ನಿಮಿಷಗಳ ಕಾಲ ಕುದಿಸಿ ಒಲೆಯಿಂದ ಪಾತ್ರೆಯನ್ನು ಕೆಳಗಿಳಿಸುವ ಮುನ್ನ ಪುಡಿ ಮಾಡಿದ ಬೇಳೆಯನ್ನು ನೀರಿನಲ್ಲಿ ಕಲಸಿ, ಇದಕ್ಕೆ ಸೇರಿಸಿರಿ. ಇದಕ್ಕೆ ಖಮ್ಮಗೆ ವಾಸನೆ ಬರಲು ಕೊತ್ತಂಬರಿ ಕತ್ತರಿಸಿ ಹಾಕಿರಿ.



Click it and Unblock the Notifications