Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೆಂತ್ಯ ಇಡ್ಲಿ ಜೊತೆ ಹುರಿದ ಬೇಳೆ ಸಾಂಬಾರ್

ಮೆಂತ್ಯ ಇಡ್ಲಿ
ಹೊಂದಿಸಿಕೊಳ್ಳಬೇಕಾದ ಸಾಮಗ್ರಿಗಳು
ಕುಸುಬುಲ ಅಕ್ಕಿ - 4 ಲೋಟ
ಮೆಂತ್ಯದ ಕಾಳು - 3 1/2 ಚಮಚ
ಕಲ್ಲುಪ್ಪು - 4 ಚಮಚ
ತಯಾರಿಸುವ ವಿಧಾನ
1. ಮೆಂತ್ಯದ ಕಾಳುಗಳನ್ನು ಒಟ್ಟಿಗೆ 3 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿರಿ.
2. ಅಕ್ಕಿಯನ್ನು ಪ್ರತ್ಯೇಕವಾಗಿ ಎರಡರಿಂದ ಮೂರು ಗಂಟೆಗಳ ಕಾಲ ನೆನೆಸಿರಿ.
3. 1/2 ಗಂಟೆಗಳ ಕಾಲ ಮೆಂತ್ಯವನ್ನು ನುಣ್ಣಗೆ, ನೊರೆ ನೊರೆಯಾಗುವಂತೆ ರುಬ್ಬಿಕೊಳ್ಳಿ.
4. ಅಕ್ಕಿಯನ್ನು ಸಣ್ಣ ರವೆಯಷ್ಟಾಗುವವರೆಗೆ ಹದವಾಗಿ ರುಬ್ಬಿರಿ. ರುಬ್ಬಿದ ಮೆಂತ್ಯ ಮತ್ತು ಅಕ್ಕಿಯನ್ನು ಒಟ್ಟಿಗೆ ಉಪ್ಪಿನೊಂದಿಗೆ ಬೆರೆಸಿರಿ.
5. ಚಿಟಿಕೆಯಷ್ಟು ತಿನ್ನುವ ಸೋಡಾ ಬೆರೆಸಿ 10 ಗಂಟೆಗಳ ಕಾಲ ಅದನ್ನು ಮುಚ್ಚಿಟ್ಟುಬಿಡಿ.
6. ಸಾಧಾರಣವಾದ ರೀತಿಯಲ್ಲಿ ಇಡ್ಲಿಯನ್ನು ಹಬೆಯಲ್ಲಿ ಬೇಯಿಸಿರಿ.
ಸೂಚನೆ : ಯಾವಾಗಲೂ ಉಪ್ಪನ್ನು ಕೊನೆಯಲ್ಲಿ ಸೇರಿಸಬೇಕು ರುಬ್ಬುವ ಮೊದಲು ಉಪ್ಪನ್ನು ಬೆರೆಸಿದರೆ ಇಡ್ಲಿಗಳು ಗಟ್ಟಿಯಾಗುತ್ತದೆ.
ಹುರಿದ ಬೇಳೆ ಸಾಂಬಾರ್
ಹೊಂದಿಸಿಕೊಳ್ಳಬೇಕಾದ ಸಾಮಗ್ರಿಗಳು
ಈರುಳ್ಳಿ - 2
ಟೊಮೇಟೊ - 3
ಆರಿಷಿಣ ಪುಡಿ - 1/2 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಬೇಕಾದರೆ ಸಕ್ಕರೆ ಅಥವಾ ಬೆಲ್ಲ
ದನಿಯಾ - 1 ಚಮಚ
ಕೆಂಪು ಮೆಣಸಿನಕಾಯಿ - 8
ಹುರಿದ ಕಡಲೆ ಬೇಳೆ - 1 1/2 ಚಮಚ
ತಯಾರಿಸುವ ವಿಧಾನ
ಮೊದಲು ಈರುಳ್ಳಿ ಮತ್ತು ಟೊಮೇಟೊ ಕತ್ತರಿಸಿಕೊಳ್ಳಿ. ಎಣ್ಣೆ ಬಿಸಿ ಮಾಡಿ, ಸಾಸಿವೆ ಹಾಕಿ ಒಗ್ಗರಣೆ ಮಾಡಿರಿ. ಇದಕ್ಕೆ ಈರುಳ್ಳಿ, ಟೊಮೇಟೊ, ಕರಿಬೇವು, ಅರಿಷಿಣ ಸೇರಿಸಿ ಚೆನ್ನಾಗಿ ತಾಳಿಸಿರಿ. ಅದಕ್ಕೆ ನೀರನ್ನು ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಉದುರಿಸಿ.
ನಂತರ ದನಿಯಾ, ಕೆಂಪು ಮೆಣಸಿನಕಾಯಿ ಮಿಶ್ರಣ ಮತ್ತು ಕಡಲೆಬೇಳೆಯನ್ನು ಪ್ರತ್ಯೇಕವಾಗಿ ಹುರಿದು ಪುಡಿಮಾಡಿಟ್ಟುಕೊಳ್ಳಿ. ಪುಡಿ ಮಾಡಿದ ದನಿಯಾ ಮತ್ತು ಕೆಂಪು ಮೆಣಸಿನಕಾಯಿಯನ್ನು ಕುದಿಬಂದ ನೀರಿಗೆ ಸೇರಿಸಿರಿ. ಕೆಲ ನಿಮಿಷಗಳ ಕಾಲ ಕುದಿಸಿ ಒಲೆಯಿಂದ ಪಾತ್ರೆಯನ್ನು ಕೆಳಗಿಳಿಸುವ ಮುನ್ನ ಪುಡಿ ಮಾಡಿದ ಬೇಳೆಯನ್ನು ನೀರಿನಲ್ಲಿ ಕಲಸಿ, ಇದಕ್ಕೆ ಸೇರಿಸಿರಿ. ಇದಕ್ಕೆ ಖಮ್ಮಗೆ ವಾಸನೆ ಬರಲು ಕೊತ್ತಂಬರಿ ಕತ್ತರಿಸಿ ಹಾಕಿರಿ.



Click it and Unblock the Notifications