Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಮೆಂತ್ಯ ಇಡ್ಲಿ ಜೊತೆ ಹುರಿದ ಬೇಳೆ ಸಾಂಬಾರ್

ಮೆಂತ್ಯ ಇಡ್ಲಿ
ಹೊಂದಿಸಿಕೊಳ್ಳಬೇಕಾದ ಸಾಮಗ್ರಿಗಳು
ಕುಸುಬುಲ ಅಕ್ಕಿ - 4 ಲೋಟ
ಮೆಂತ್ಯದ ಕಾಳು - 3 1/2 ಚಮಚ
ಕಲ್ಲುಪ್ಪು - 4 ಚಮಚ
ತಯಾರಿಸುವ ವಿಧಾನ
1. ಮೆಂತ್ಯದ ಕಾಳುಗಳನ್ನು ಒಟ್ಟಿಗೆ 3 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿರಿ.
2. ಅಕ್ಕಿಯನ್ನು ಪ್ರತ್ಯೇಕವಾಗಿ ಎರಡರಿಂದ ಮೂರು ಗಂಟೆಗಳ ಕಾಲ ನೆನೆಸಿರಿ.
3. 1/2 ಗಂಟೆಗಳ ಕಾಲ ಮೆಂತ್ಯವನ್ನು ನುಣ್ಣಗೆ, ನೊರೆ ನೊರೆಯಾಗುವಂತೆ ರುಬ್ಬಿಕೊಳ್ಳಿ.
4. ಅಕ್ಕಿಯನ್ನು ಸಣ್ಣ ರವೆಯಷ್ಟಾಗುವವರೆಗೆ ಹದವಾಗಿ ರುಬ್ಬಿರಿ. ರುಬ್ಬಿದ ಮೆಂತ್ಯ ಮತ್ತು ಅಕ್ಕಿಯನ್ನು ಒಟ್ಟಿಗೆ ಉಪ್ಪಿನೊಂದಿಗೆ ಬೆರೆಸಿರಿ.
5. ಚಿಟಿಕೆಯಷ್ಟು ತಿನ್ನುವ ಸೋಡಾ ಬೆರೆಸಿ 10 ಗಂಟೆಗಳ ಕಾಲ ಅದನ್ನು ಮುಚ್ಚಿಟ್ಟುಬಿಡಿ.
6. ಸಾಧಾರಣವಾದ ರೀತಿಯಲ್ಲಿ ಇಡ್ಲಿಯನ್ನು ಹಬೆಯಲ್ಲಿ ಬೇಯಿಸಿರಿ.
ಸೂಚನೆ : ಯಾವಾಗಲೂ ಉಪ್ಪನ್ನು ಕೊನೆಯಲ್ಲಿ ಸೇರಿಸಬೇಕು ರುಬ್ಬುವ ಮೊದಲು ಉಪ್ಪನ್ನು ಬೆರೆಸಿದರೆ ಇಡ್ಲಿಗಳು ಗಟ್ಟಿಯಾಗುತ್ತದೆ.
ಹುರಿದ ಬೇಳೆ ಸಾಂಬಾರ್
ಹೊಂದಿಸಿಕೊಳ್ಳಬೇಕಾದ ಸಾಮಗ್ರಿಗಳು
ಈರುಳ್ಳಿ - 2
ಟೊಮೇಟೊ - 3
ಆರಿಷಿಣ ಪುಡಿ - 1/2 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಬೇಕಾದರೆ ಸಕ್ಕರೆ ಅಥವಾ ಬೆಲ್ಲ
ದನಿಯಾ - 1 ಚಮಚ
ಕೆಂಪು ಮೆಣಸಿನಕಾಯಿ - 8
ಹುರಿದ ಕಡಲೆ ಬೇಳೆ - 1 1/2 ಚಮಚ
ತಯಾರಿಸುವ ವಿಧಾನ
ಮೊದಲು ಈರುಳ್ಳಿ ಮತ್ತು ಟೊಮೇಟೊ ಕತ್ತರಿಸಿಕೊಳ್ಳಿ. ಎಣ್ಣೆ ಬಿಸಿ ಮಾಡಿ, ಸಾಸಿವೆ ಹಾಕಿ ಒಗ್ಗರಣೆ ಮಾಡಿರಿ. ಇದಕ್ಕೆ ಈರುಳ್ಳಿ, ಟೊಮೇಟೊ, ಕರಿಬೇವು, ಅರಿಷಿಣ ಸೇರಿಸಿ ಚೆನ್ನಾಗಿ ತಾಳಿಸಿರಿ. ಅದಕ್ಕೆ ನೀರನ್ನು ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಉದುರಿಸಿ.
ನಂತರ ದನಿಯಾ, ಕೆಂಪು ಮೆಣಸಿನಕಾಯಿ ಮಿಶ್ರಣ ಮತ್ತು ಕಡಲೆಬೇಳೆಯನ್ನು ಪ್ರತ್ಯೇಕವಾಗಿ ಹುರಿದು ಪುಡಿಮಾಡಿಟ್ಟುಕೊಳ್ಳಿ. ಪುಡಿ ಮಾಡಿದ ದನಿಯಾ ಮತ್ತು ಕೆಂಪು ಮೆಣಸಿನಕಾಯಿಯನ್ನು ಕುದಿಬಂದ ನೀರಿಗೆ ಸೇರಿಸಿರಿ. ಕೆಲ ನಿಮಿಷಗಳ ಕಾಲ ಕುದಿಸಿ ಒಲೆಯಿಂದ ಪಾತ್ರೆಯನ್ನು ಕೆಳಗಿಳಿಸುವ ಮುನ್ನ ಪುಡಿ ಮಾಡಿದ ಬೇಳೆಯನ್ನು ನೀರಿನಲ್ಲಿ ಕಲಸಿ, ಇದಕ್ಕೆ ಸೇರಿಸಿರಿ. ಇದಕ್ಕೆ ಖಮ್ಮಗೆ ವಾಸನೆ ಬರಲು ಕೊತ್ತಂಬರಿ ಕತ್ತರಿಸಿ ಹಾಕಿರಿ.



Click it and Unblock the Notifications
