Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಜೀವನದ ಚೈತನ್ಯ ನುಂಗುವ ಟ್ರಾಫಿಕ್

1. ಟ್ರಾಫಿಕ್: ಇಲ್ಲಿ ಇಷ್ಟವಾಗದ ಮುಖ್ಯವಾದ ವಿಷಯವೆಂದರೆ ಇಲ್ಲಿಯ ಟ್ರಾಫಿಕ್. ದಿನದ ಅರ್ಧ ಜೀವನವನ್ನು ಟ್ರಾಫಿಕ್ ನಲ್ಲಿ ಕಳೆದಿರುತ್ತೇವೆ. ಟ್ರಾಫಿಕ್ ನೆನೆಸಿಕೊಂಡರೆ ಎಲ್ಲೂ ಹೋಗುವುದು ಬೇಡ ಅನಿಸುತ್ತದೆ. ಕೆಲಸ ಮುಗಿಸಿ ಮನೆ ತಲುಪುವಷ್ಟರಲ್ಲಿ ಜೀವನದ ಚೈತನ್ಯವನ್ನು ಟ್ರಾಫಿಕ್ ನುಂಗಿ ಬಿಟ್ಟಿರುತ್ತದೆ.
2. ಒಂಟಿತನ: ಏನೇ ಇದ್ದರೂ ಇದು ಈ ಬೆಂಗಳೂರಿನಲ್ಲಿ ಯಾರೂ ನಮ್ಮವರು ಇಲ್ಲ ಅಂತ ಅನಿಸುತ್ತಾರೆ. ತುಂಬಾ ಒಂಟಿತನ ಕಾಡಿ ಬಿಡುತ್ತದೆ. ಪಿಜಿ, ರೂಮಿಲ್ಲಿದ್ದರೆ ರುಚಿಯಾದ ಮನೆ ಊಟಕ್ಕೆ ಆಸೆಯಾಗುತ್ತದೆ. ಸ್ನೇಹಿತರೆಲ್ಲರೂ ಜೊತೆಯಾಗಿ ತಂಗಿದ್ದರೂ ಎಲ್ಲರೂ ಫೋನಿನಲ್ಲಿ ಮುಳುಗಿರುವುದರಿಂದ ಒಂಟಿತನ ಕಾಡಲಾರಂಭಿಸುತ್ತದೆ.
ಆಗ ನಮ್ಮ ಭಾವನೆಯನ್ನು ಹೇಳಿಕೊಳ್ಳಲು ಯಾರಾದರೂ ಬೇಕೆನಿಸಲಾರಂಭಿಸುತ್ತದೆ. ಆದ್ದರಿಂದಲೆ ಬಾಯ್ ಫ್ರೆಂಡ್, ಗರ್ಲ್ ಫ್ರೆಂಡ್, ಫ್ಲರ್ಟ್ ಅನ್ನುವ ಟ್ರೆಂಡ್ ಇಲ್ಲಿ ಹೆಚ್ಚಾಗಿದೆ ಎಂದು ನನಗೆ ಅನಿಸುತ್ತಿರುತ್ತದೆ. ಅತಿರೇಕದ ಸ್ವಚ್ಛಂದತೆ ನೋಡುವಾಗ ಭಾರತೀಯ ಸಂಸ್ಕೃತಿ ಮರೆಯಾಗುತ್ತಿದೆಯೆ ಎಂದು ದಿಗಿಲು ಉಂಟಾಗುತ್ತದೆ.
3. ಅಪರಿಚಿತರು: ವರ್ಷಗಟ್ಟಲೆ ಅಕ್ಕ-ಪಕ್ಕದ ಮನೆಯಲ್ಲಿ ವಾಸವಿದ್ದರೂ ಪರಸ್ಪರ ಮಾತಿಲ್ಲ, ಅಪರಿಚಿತರು! ನಾನು ನನ್ನದು ಅನ್ನುವ ಪ್ರಪಂಚ. ದಾರಿಯಲ್ಲಿ ಒಬ್ಬ ವ್ಯಕ್ತಿ ಕುಸಿದು ಬಿದ್ದರೂ ಯಾರೂ ಕೇಳಲ್ಲ, ಅವರರವರ ಪಾಡಿಗೆ ಹೋಗುತ್ತಲೆ ಇರುತ್ತಾರೆ. ನಂಬಿಕೆ, ಸ್ನೇಹ ಕಡಿಮೆಯಾಗಿ ಯಾಂತ್ರಿಕ ಬದುಕು ಆಗಿ ಬಿಟ್ಟಿದೆ. ಐ ಹೇಟ್ ದಿಸ್ ಮೆಷಿನ್ ಲೈಫ್.
4. ಮಾಲಿನ್ಯ: ಊರಿನ ಕೆಮ್ಮಣ್ಣಿನ ದೂಳಿನಲ್ಲಿ ನಡೆಯಲು ಹಿತವಾದರೆ ಬೆಂಗಳೂರಿನ ದೂಳು ನಮ್ಮ ಆರೋಗ್ಯವನ್ನೆ ಹದಗೆಡಿಸುತ್ತದೆ. ಕಸದ ರಾಶಿಗಳು, ಶುದ್ಧ ಗಾಳಿಗಾಗಿ ಪಾರ್ಕಿಗೆ ಹೋಗ ಬೇಕಾದ ಪರಿಸ್ಥಿತಿ ಇವೆಲ್ಲಾ ಇಷ್ಟವಾಗುವುದಿಲ್ಲ.
5. ಭಯ: ಬೆಂಗಳೂರಿನಲ್ಲಿ ಕಳ್ಳತನ, ಕೊಲೆಗಳು ಹೆಚ್ಚಾಗಿ ಆಗುವುದರಿಂದ ಒಂಥರಾ ಭಯದ ಜೀವನ ನಡೆಸುತ್ತಾರೆ. ಅಪರಿಚಿತರು ಮಾತನಾಡಿಸಿದರೆ ಸಂಶಯದಿಂದಲೆ ನೋಡುತ್ತಾರೆ( ಇಲ್ಲಿಯ ಅನುಭವ ನಮ್ಮನ್ನು ಹಾಗೆ ಮಾಡಿಸುತ್ತದೆ). ಶಿಫ್ಟ್ ವರ್ಕ್ ನಲ್ಲಿ ಗಂಡ-ಹೆಂಡತಿ ಪ್ರೀತಿಯಿಂದ ಕುಳಿತು ಮಾತನಾಡಲು ಸಮಯವಿರುವುದಿಲ್ಲ. ರೆಸ್ಟೋರೆಂಟ್ ಗಳಲ್ಲಿ ವಾರಕ್ಕೊಮ್ಮೆ ಹೋಗಿ ಎಲ್ಲರೂ ಜೊತೆಯಾಗಿ ತಿನ್ನುವುದಕ್ಕಿಂತ ಕಾಫಿ ತೋಟದಲ್ಲಿ ದುಡಿದು ಬಂದ ಅಪ್ಪನಿಗೆ ಅಮ್ಮ ಕೈಯಾರೆ ಮಾಡಿದ ಅಡುಗೆ ಬಡಿಸಿ, ನಮಗೂ ಬಡಿಸಿ ತಿನ್ನುವುದೆ ಸ್ವರ್ಗ ಅನಿಸುತ್ತದೆ.
ಇಷ್ಟೆಲ್ಲಾ ಹೇಳುವಳು ಇಲ್ಲಿ ಏಕೆ ಇದ್ದೀಯಾ, ನಿನ್ನ ಊರಿಗೆ ಹೋಗು ಅಂದು ನೀವು ಬೈಯ್ದುಕೊಳ್ಳುತ್ತಿದ್ದರೆ ನನಗೆ ಹೇಳಲಿರುವುದಿಷ್ಟೆ ಓದಿದ ಮೇಲೆ ಏನಾದರೂ ಸಾಧಿಸಬೇಕೆಂಬ ಕನಸು, ಅದಕ್ಕೆ ಇದೇ ಸರಿಯಾದ ಜಾಗ!



Click it and Unblock the Notifications
