Latest Updates
-
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ!
ಮಾರ್ಚ್ 1ರಂದು ಶುಕ್ರನಿಂದ ತ್ರಿಕೋನ ರಾಜಯೋಗ: ಮೂರು ರಾಶಿಯವರ ಸಂಪತ್ತು ದ್ವಿಗುಣ
ವೈದಿಕ ಜ್ಯೋತಿಷ್ಯದ ಪ್ರಕಾರ ಶುಕ್ರನನ್ನು ರಾಕ್ಷಸರ ಗುರು ಮತ್ತು ಭೌತಿಕ ಸುಖ, ಸೌಕರ್ಯಗಳು, ಪ್ರೀತಿ, ಸೌಂದರ್ಯ, ಕಲೆ, ಸಂಪತ್ತು, ಮದುವೆ ಮತ್ತು ಐಷಾರಾಮಿಗಳ ಅಂಶವೆಂದು ಪರಿಗಣಿಸಲಾಗುತ್ತದೆ. ಶುಕ್ರನ ಸ್ಥಾನದಲ್ಲಿನ ಬದಲಾವಣೆಯು 12 ರಾಶಿ ಜನರ ಮೇಲೆ ಒಂದಲ್ಲಾ ಒಂದು ರೀತಿಯಲ್ಲಿ ಪರಿಣಾಮ ಬೀರುವುದು ನೋಡಬಹುದು. ಮಾರ್ಚ್ 1ರಂದು ಶುಕ್ರನು ತನ್ನ ರಾಶಿಯನ್ನು ಬದಲಾಯಿಸುತ್ತಾನೆ.
ಮಾರ್ಚ್ 1ರಂದು ಶುಕ್ರನು ತನ್ನ ಉತ್ತುಂಗದ ರಾಶಿಯಾಗಿರುವ ಮೀನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಮಾರ್ಚ್ 1ರಂದು ಮಧ್ಯಾಹ್ನ 12:56ಕ್ಕೆ ಮೀನ ರಾಶಿ ಪ್ರವೇಶಿಸುತ್ತಾನೆ. ಆದ್ರೆ ಮೀನ ರಾಶಿಯಲ್ಲಿ ಶನಿಯೊಂದಿಗೆ ಶುಕ್ರನು ಸಂಯೋಗವಾಗುವುದು ಹಲವು ರೀತಿಯಲ್ಲಿ ಅಪರೂಪದ ಘಟನೆಗಳಿಗೆ ಕಾರಣವಾಗುತ್ತದೆ. ಎರಡು ಗ್ರಹಗಳ ಸಂಯೋಗವು ಈ ಹೋಳಿ ಹುಣ್ಣಿಮೆಯ ಸಮಯದಲ್ಲಿ ಧನಾತ್ಮಕ ಬದಲಾವಣೆಗಳ ತರಲಿದೆ.

ಮೇಷ ರಾಶಿ
ಮೇಷ ರಾಶಿಯ ಜನರಿಗೆ ಈ ತ್ರಿಕೋನ ರಾಜಯೋಗವು ಗಮನಾರ್ಹ ಪ್ರಯೋಜನಗಳ ತರಲಿದೆ. ಸಂಪತ್ತಿನ ಅಧಿಪತಿಯು ಖರ್ಚಿನ ಮನೆಯಲ್ಲಿ ಉನ್ನತಿ ಹೊಂದುತ್ತಾನೆ ಮತ್ತು ಕೆಲಸಗಳು ಲಾಭದ ಅಧಿಪತಿಯು 12ನೇ ಮನೆಯಲ್ಲಿ ಸಾಗುತ್ತಾನೆ. ಈ ರಾಶಿ ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸಬಹುದು. ಸಂತೋಷವು ಅವರ ಜೀವನದ ಬಾಗಿಲು ತಟ್ಟಬಹುದು. ಅವರು ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಬಹುದು. ಅವಿವಾಹಿತರು ಉತ್ತಮ ವಿವಾಹ ಪ್ರಸ್ತಾಪವನ್ನು ಪಡೆಯಬಹುದು. ಜೀವನದ ದೀರ್ಘಕಾಲದ ಸಮಸ್ಯೆಗಳು ಕೊನೆಗೊಳ್ಳಬಹುದು. ಆರ್ಥಿಕ ಲಾಭದ ಹೆಚ್ಚಿನ ಸಾಧ್ಯತೆಗಳಿವೆ. ನಿಮ್ಮ ವ್ಯಾಪಾರ ಸಂಬಂಧಿತ ವಿಚಾರವಾಗಿ ಇದ್ದಂತಹ ಸಮಸ್ಯೆಗಳನು ಬಗೆಹರಿಯಲಿದೆ.
ವೃಷಭ ರಾಶಿ
ವೃಷಭ ರಾಶಿ ಜನರಿಗೆ ಕೇಂದ್ರ ತ್ರಿಕೋನ ಯೋಗವು ಬಹಳ ಪ್ರಯೋಜನಕಾರಿಯಾಗಬಹುದು. ಈ ರಾಶಿ ಅಧಿಪತಿ ಶುಕ್ರನು ಉತ್ತುಂಗದಲ್ಲಿದ್ದು, ಲಾಭದ ಮನೆಯಲ್ಲಿ ಚಲಿಸುತ್ತಾನೆ. ಶನಿಯೊಂದಿಗೆ ಕೇಂದ್ರ ತ್ರಿಕೋನ ರಾಜಯೋಗವನ್ನು ರೂಪಿಸುತ್ತಾನೆ. ನಿಮ್ಮ ದೀರ್ಘಕಾಲದ ಅನಾರೋಗ್ಯ ಸಮಸ್ಯೆಗಳು ಹಾಗೆ ಆರ್ಥಿಕ ಸಮಸ್ಯೆಗಳಿಗೆ ಕಡಿವಾಣ ಬೀಳಲಿದೆ. ಖರೀದಿ ಮಾರಾಟದಂತಹ ವಿಚಾರದಲ್ಲಿ ತೊಡಗಿರುವ ಮಂದಿಗೆ ಲಾಭದಾಯಕ ಸಮಯವಿದು. ವ್ಯವಹಾರ ಸಂಬಂಧವಾಗಿ ನಿಮ್ಮ ದೊಡ್ಡ ಒಪ್ಪಂದಗಳು ಸಕಾರಾತ್ಮಕವಾಗಿ ಬಗೆಹರಿಯಲಿದೆ. ಉದ್ಯೋಗದಲ್ಲಿರುವವರಿಗೆ ಸಹ ಉತ್ತಮವಾಗಿರುತ್ತದೆ. ಬಡ್ತಿಯ ಜೊತೆಗೆ ಉತ್ತಮ ಹೆಚ್ಚಳವೂ ಇರಬಹುದು.
ಧನು ರಾಶಿ
ಧನು ರಾಶಿಯ ಜನರಿಗೆ ಈ ಕೇಂದ್ರ ತ್ರಿಕೋನ ರಾಜಯೋಗವು ಅನೇಕ ಕ್ಷೇತ್ರಗಳಲ್ಲಿ ಪ್ರಯೋಜನಗಳ ಸಾಮರ್ಥ್ಯವನ್ನು ಸೃಷ್ಟಿಸುತ್ತಿದೆ. ಬಹುಕಾಲದ ಆಸೆಗಳು ಈಡೇರಬಹುದು. ಭೌತಿಕ ಸೌಕರ್ಯಗಳು ಸಹ ಹೆಚ್ಚಾಗುವ ಸಂಭವವಿದೆ. ಸಾಮಾಜಿಕ ಪ್ರತಿಷ್ಠೆ ವೇಗವಾಗಿ ಹೆಚ್ಚಾಗಬಹುದು. ಚಿನ್ನ ಬೆಳ್ಳಿ ಖರೀದಿಯಂತಹ ವಿಚಾರದಲ್ಲಿ ನಿಮಗೆ ಲಾಭವಾಗಲಿದೆ. ವಾಹನ, ಆಸ್ತಿ ಸಂಬಂಧಿತ ವಿಚಾರಗಳಲ್ಲಿ ನೀವು ಬಯಸಿದ ಫಲಿತಾಂಶ ಪಡೆಯಬಹುದು. ಸ್ನೇಹಿತರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಬಹುದು. ಕುಟುಂಬ ಜೀವನವು ಉತ್ತಮವಾಗಿರುತ್ತದೆ. ದಾಂಪತ್ಯದಲ್ಲಿ ಸಂತಸಕ್ಕೆ ಕಾರಣವಾಗುವ ವಿಚಾರಗಳು ನಡೆಯಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ವಿಶ್ವಾಸಾರ್ಹವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications