Just In
- 5 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
- 5 hrs ago ವೃಷಭ ರಾಶಿಗೆ ದೇವಗುರುವಿನ ಸಂಚಾರ: ಮೇಷ ರಾಶಿಗಳಿಗೆ ಇದರ ಪ್ರಭಾವ ಹೇಗಿರಲಿದೆ?
- 6 hrs ago ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- 7 hrs ago ದಿನ ಭವಿಷ್ಯ ಏಪ್ರಿಲ್ 19: ಶುಕ್ರವಾರದ ಈ ಶುಭ ದಿನ ನಿಮ್ಮ ರಾಶಿಗೆ ಹೇಗಿರಲಿದೆ?
Don't Miss
- Movies 'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪಾಕಿಸ್ತಾನದಲ್ಲಿದೆ 1,500 ವರ್ಷಗಳ ಇತಿಹಾಸ ಮೆರೆದ ಹನುಮಂತನ ದೇಗುಲ!
ಸದಾ ಧರ್ಮದ ವಿಚಾರಕ್ಕಾಗಿಯೇ ಜಗಳವಾಡುವ ದೇಶ ಪಾಕಿಸ್ತಾನ. ಆ ನೆಲದಲ್ಲಿ ಮುಸ್ಲಿಂ ಧರ್ಮವೇ ಶ್ರೇಷ್ಠವಾದದ್ದು. ಹೀಗಿದ್ದರೂ ಅಲ್ಲೊಂದು ಹಿಂದೂ ದೇವಾಲಯವಿದೆ ಎಂದು ಹೇಳಿದರೆ ಎಷ್ಟು ಆಶ್ಚರ್ಯವಾಗುತ್ತದೆ ಅಲ್ಲವಾ? ಅದೂ ನಿನ್ನೆ ಮೊನ್ನೆಯಷ್ಟೇ ನಿರ್ಮಾಣವಾದದ್ದಲ್ಲ. ಸಾವಿರಾರು ವರ್ಷಗಳಷ್ಟು ಪುರಾತನ ಕಾಲದ್ದು. ಅಂದಿನಿಂದ ಇಂದಿನ ವರೆಗೂ ದೇವಾಲಯದಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತಲೇ ಇವೆ.
ಹೌದು, ಅದು ಹನುಮಂತನ ದೇಗುಲ, ಸರಿ ಸುಮಾರು 1,500 ವರ್ಷಗಳಷ್ಟು ಪುರಾತನ ಇತಿಹಾಸ ಹೊಂದಿರುವ ದೇವಸ್ಥಾನ. ಇದರಲ್ಲಿ ಸ್ಥಾಪಿತವಾದ ಹನುಮಂತನ ಮೂರ್ತಿ ಮಾನವ ನಿರ್ಮಿತವಲ್ಲ. ಸ್ವಾಭಾವಿಕವಾಗಿ ಕಾಣಿಸಿಕೊಂಡ ಪಂಚಮುಖಿ ದೇಗುಲ. ಶತಮಾನಗಳಿಂದಲೂ ಭಕ್ತರು ಪೂಜಿಸುತ್ತಾರೆ. ಈ ದೇವಾಲಯವು ಹನುಮಂತನ ಎಲ್ಲಾ ಐದು ಅಂಶಗಳನ್ನು ಹೊಂದಿದೆ. ಈ ಮೂರ್ತಿಯಲ್ಲಿ ನರಸಿಂಹ, ಆದಿವರಾಹ, ಹಯಗ್ರೀವಾ, ಹನುಮಂತ ಹಾಗೂ ಗರುಡನ ಮುಖ ಇರುವುದನ್ನು ಕಾಣಬಹುದು....
11ರ ಸಂಖ್ಯೆಯ ನಂಟು
ಶತಮಾನಗಳ ಹಿಂದೆ ನೀಲಿ ಮತ್ತು ಬಿಳಿ ಬಣ್ಣದ 8 ಅಡಿ ಎತ್ತರದ ಹನುಮಂತನ ಮೂರ್ತಿ ಇಲ್ಲಿ ಗೋಚರವಾಯಿತು. ನಂತರ ಮೂರ್ತಿಯ ವಿಗ್ರಹದ ಮೇಲೆ ಇರುವ 11 ಮುಷ್ಟಿ ಮಣ್ಣನ್ನು ತೆಗೆದು ಸ್ವಚ್ಛಮಾಡಲಾಯಿತು. ಹಾಗಾಗಿಯೇ ಇಲ್ಲಿ ಭಕ್ತರು ವಿಗ್ರಹದ ಸುತ್ತ 11 ಸುತ್ತು ಸುತ್ತುತ್ತಾರೆ. ಹೀಗೆ ಮಾಡುವುದು ಶ್ರೇಷ್ಠ ಮತ್ತು ಪುಣ್ಯ ಎನ್ನುವ ನಂಬಿಕೆ ಇದೆ.
ದೇಗುಲದ ನವೀಕರಣ
ಈ ದೇವಾಲಯವನ್ನು 2012ರಲ್ಲಿ ನವೀಕರಣ ಮಾಡಲಾಯಿತು. ಮೊದಲು ಹಳದಿ ಬಣ್ಣವಿದ್ದ ದೇಗುಲವನ್ನು ಈಗ ಪುನರ್ ನವೀಕರಣ ಮಾಡಲಾಗಿದೆ. ಅಲ್ಲದೆ ವಾಸ್ತುಶಿಲ್ಪಗಳ ಸಂರಕ್ಷಣೆ ಮಾಡಲಾಗಿದೆ ಎನ್ನಲಾಗುತ್ತದೆ.
ಒತ್ತುವರಿ ಜಾಗ
ದೇಗುಲದ ಆಸ್ತಿ ಎಂದು ಒತ್ತುವರಿ ಮಾಡಿಕೊಂಡ ಪ್ರದೇಶಗಳನ್ನು ಜಿಲ್ಲಾಡಳಿತವು ತೆರವುಗೊಳಿಸಿದೆ. ಹಾಗಾಗಿ ದೇಗುಲವು ಸಾಧಾರಣ ವಿಸ್ತೀರ್ಣದಲ್ಲಿದೆ ಎನ್ನಬಹುದು.
ಕಾಳಿ ದೇವಿ
ಹನುಮಾನ್ ಮಂದಿರದಿಂದ ಸ್ವಲ್ಪ ದೂರದಲ್ಲಿ ಕಾಳಿ ದೇವಿಗೆ ಮೀಸಲಿರುವ ಇನ್ನೊಂದು ಹಿಂದೂ ದೇಗುಲವಿದೆ. ಇದೂ ಸಹ ಹಲವಾರು ಶತಮಾನಗಳ ಹಿನ್ನೆಲೆಯನ್ನು ಹೊಂದಿದೆ. ಇಲ್ಲಿ ಪುರಾತನಕಾಲದ ಹಲವಾರು ಪುರಾವೆಗಳಿವೆ.
ನಾರಾಯಣ ದೇವಸ್ಥಾನ
ಸ್ವಾಮಿ ನಾರಾಯಣ ದೇವಸ್ಥಾನ ಎಂದು ಕರೆಯುವ ಇನ್ನೊಂದು ದೇವಾಲಯವೂ ಹನುಮಂತ ದೇವಸ್ಥಾನಕ್ಕೆ ಹತ್ತಿರವಿದೆ (ಕರಾಚಿ). ಇಲ್ಲಿ ವಿಷ್ಣು ಮತ್ತು ಲಕ್ಷ್ಮಿ ದೇವಿಯನ್ನು ಆರಾಧಿಸುತ್ತಾರೆ. ಈ ದೇವಾಲಯಕ್ಕೂ ಭಕ್ತರ ಹರಿವು ಜೋರಾಗಿಯೇ ಇದೆ ಎನ್ನಲಾಗುತ್ತದೆ.
ವರ್ಷಗಳ ಇತಿಹಾಸ
ಭಕ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವ ನಾರಾಯಣ ದೇವಸ್ಥಾನ ಸುಮಾರು 160 ವರ್ಷಗಳಷ್ಟು ಪುರಾತನದ್ದು.