Latest Updates
-
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ!
ಅಷ್ಟಕ್ಕೂ ದುರ್ಗಾ ಪೂಜೆ ಆರಂಭವಾಗಿದ್ದು ಯಾವಾಗ?
ಭಾರತದಲ್ಲಿ ಹಿಂದಿನಿಂದಲೂ ನವರಾತ್ರಿಯನ್ನು ತುಂಬಾ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ದುರ್ಗೆಯನ್ನು ಒಂಬತ್ತು ದಿನಗಳ ಕಾಲ ಪೂಜಿಸುವಂತಹ ನವರಾತ್ರಿ ಉತ್ಸವು ಅನಾದಿ ಕಾಲದಿಂದಲೂ ನಡೆಯುತ್ತಲೇ ಇದೆ.
ನಮ್ಮ ಪೂರ್ವಜರು ಕೂಡ ನವರಾತ್ರಿಯನ್ನು ಆಚರಿಸಿಕೊಂಡು ಬರುತ್ತಲೇ ಇದ್ದಾರೆ. ಆದರೆ ನವರಾತ್ರಿಯನ್ನು ಮೊದಲ ಸಲ ಆಚರಣೆಗೆ ತಂದವರು ಯಾರು ಎನ್ನುವ ಬಗ್ಗೆ ಪ್ರಶ್ನೆಗಳು ಬರುವುದು ಸಹಜ. ದುರ್ಗಾ ಪೂಜೆಯ ಇತಿಹಾಸ ಏನು ಎಂದು ತಿಳಿದುಕೊಳ್ಳಬೇಕಾಗುತ್ತದೆ. ದೇವಿಯನ್ನು ಒಲೈಸಿಕೊಳ್ಳುವ ಸಲುವಾಗಿ ರಾಮ ದೇವರು ಮೊದಲ ಸಲ ದುರ್ಗಾ ಪೂಜೆಯನ್ನು ಮಾಡಿದರಂತೆ. ದುರ್ಗಾ ಪೂಜೆಯ ಮಹತ್ವವನ್ನು ಸಾರುವ 9 ಆಚರಣೆಗಳು

ಅದರಲ್ಲೂ ನವರಾತ್ರಿಯನ್ನು ವರ್ಷದಲ್ಲಿ ಎರಡು ಸಲ ಆಚರಿಸಲಾಗುತ್ತದೆ. ಮಾರ್ಚ್-ಎಪ್ರಿಲ್ನಲ್ಲಿ ಬರುವ ನವರಾತ್ರಿಯು ಮುಖ್ಯ ಹಬ್ಬವಾಗಿರುತ್ತದೆ. ಸಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಬರುವಂತಹ ನವರಾತ್ರಿಯನ್ನು ನಾವು ಚೈತ್ರಾ ನವರಾತ್ರಿ ಎಂದು ಕರೆಯುತ್ತೇವೆ.
ರಾಮಾಯಣದಲ್ಲಿ ರಾಮನು ರಾವಣನೊಂದಿಗೆ ಯುದ್ಧಕ್ಕೆ ಹೊರಡುವ ಮೊದಲು ದೇವಿಯಿಂದ ವರನ್ನು ಪಡೆಯಲು ದುರ್ಗಾ ಪೂಜೆಯನ್ನು ಮಾಡಿದನೆಂದು ಪುರಾಣಗಳು ಹೇಳುತ್ತವೆ. ದುರ್ಗೆಯ ಆರಾಧನೆಯಲ್ಲಿ ಲಿಂಬೆಗೆ ಏಕೆ ಅಷ್ಟೊಂದು ಪ್ರಾಶಸ್ತ್ಯ?
ಲಂಕೆಯಲ್ಲಿ ಬಲಿಷ್ಠವಾಗಿದ್ದ ರಾವಣನನ್ನು ಸೋಲಿಸುವುದು ರಾಮ ದೇವರಿಗೆ ಕೂಡ ಅಷ್ಟು ಸುಲಭವಾಗಿರಲಿಲ್ಲ. ಇದಕ್ಕಾಗಿಯೇ ದೇವಿಯ ವರನ್ನು ಪಡೆಯಲು ದುರ್ಗಾ ಪೂಜೆಯನ್ನು ಮಾಡಿದರು. ಆದರೆ ರಾಮ ದೇವರಿಗೆ ಇನ್ನು ಆರು ತಿಂಗಳುಗಳ ಕಾಲ ಕಾಯಲು ಸಮಯವಿಲ್ಲದೆ ಇದ್ದ ಕಾರಣದಿಂದಾಗಿ ನವರಾತ್ರಿಯಲ್ಲದ ಸಮಯದಲ್ಲಿ ದುರ್ಗಾ ಪೂಜೆಯನ್ನು ಮಾಡಿದರು.
ಇದರಿಂದಾಗಿಯೇ ದುರ್ಗಾ ಪೂಜೆಯನ್ನು ಅಕಾಲ ಬೋಧನ' ಎನ್ನಲಾಗುತ್ತದೆ. ಬೇರೆ ಋತುವಿನಲ್ಲಿ ಪೂಜೆ ಮಾಡಿರುವುದು ಎಂದು ಇದರರ್ಥ. ದೇವಿಯ ಪೂಜೆಗಾಗಿ 108 ಕಮಲದ ಹೂ ಹಾಗೂ 108 ದೀಪಗಳನ್ನು ಹಚ್ಚಿ ಪೂಜಿಸಲಾಗುತ್ತಿದ್ದ ಸಮಯದಲ್ಲಿ ಒಂದು ಕಮಲವನ್ನು ರಾಕ್ಷಸರು ತಿಳಿಯದಂತೆ ಕದ್ದ ಕಾರಣದಿಂದಾಗಿ ಪೂಜೆಯು ಸಂಪೂರ್ಣವಾಗಲಿಲ್ಲ.
ಇದರಿಂದಾಗಿ ರಾಮನು ಕಮಲದ ಬದಲಿಗೆ ತನ್ನ ಕಣ್ಣುಗಳನ್ನು ದೇವಿಗೆ ಅರ್ಪಿಸಲು ನಿರ್ಧರಿಸಿದ. ಇದನ್ನು ಕಂಡು ದೇವಿಯು ರಾಮನ ಮುಂದೆ ಪ್ರತ್ಯಕ್ಷವಾಗಿ ವಿಜಯಿಯಾಗಲು ಹರಸಿದಳು. ನವರಾತ್ರಿಯ ಹತ್ತನೇ ದಿನದಂದು ರಾಮನು ರಾವಣನನ್ನು ಸಂಹರಿಸುತ್ತಾನೆ.
ಇದಕ್ಕಾಗಿಯೇ ದಸರಾದಂದು ರಾವಣನ ದೊಡ್ಡ ಪ್ರತಿಕೃತಿಯನ್ನು ದಹಿಸಿ ವಿಜಯೋತ್ಸವವನ್ನು ಆಚರಿಸುತ್ತೇವೆ. ಲಂಕೆಯ ಯುದ್ಧದಿಂದಾಗಿ ರಾಮನು ದುರ್ಗೆಯನ್ನು ಪೂಜಿಸಿದ. ಅದು ಈಗಲೂ ಮುಂದುವರಿದುಕೊಂಡು ಬಂದಿದೆ. ದುರ್ಗಾ ಮಾತೆಯ ಒಂಬತ್ತು ಅವತಾರದ ವೈಶಿಷ್ಟ್ಯ



Click it and Unblock the Notifications
