Just In
- 21 min ago ದಿನ ಭವಿಷ್ಯ ಮಾರ್ಚ್ 30: ಮಂಗಳವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 24 min ago 10 ವರ್ಷದಿಂದ ನಿರಂತರ ರಕ್ತ ಕುಡಿಯುತ್ತಿರುವ ಯುವತಿ..! ರಕ್ತವೇ ಟೀ, ಅದರಲ್ಲೇ ಊಟ..!
- 2 hrs ago ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- 3 hrs ago ಕೇತು ಕನ್ಯಾ ರಾಶಿಯಲ್ಲಿರುವ ಇನ್ನು 285 ದಿನ 12 ರಾಶಿಗಳ ಮೇಲೆ ಅದರ ಪ್ರಭಾವ ಹೀಗಿರಲಿದೆ
Don't Miss
- Sports IPL 2024: ಚಿನ್ನಸ್ವಾಮಿ ಸಾಮ್ರಾಜ್ಯದಲ್ಲಿ ರಾಜ್ಯಭಾರ ಮಾಡಿದ ವಿರಾಟ್; KKRಗೆ ಸವಾಲಿನ ಗುರಿ ನೀಡಿದ RCB
- News Rain Alert: ಕೊಡಗಿನ ವಿವಿಧಡೆ ಮಳೆ ಅಬ್ಬರ: ಮೋಡ ಕವಿದ ವಾತಾವರಣ
- Automobiles Brezza: ಮಾರುತಿ ಸುಜುಕಿ ಬ್ರೆಝಾ ಖರೀದಿಸಬೇಕೇ.. ಆನ್ ರೋಡ್ ಬೆಲೆ ಎಷ್ಟು? EMI ಏನು?
- Movies "ನನ್ನೇನು ಅಭಿಮನ್ಯು ಅಂದುಕೊಂಡ್ಯ..; ಕೆಲವ್ರು ಕುಡಿದ ಮೇಲೆ ಗಂಡಸರಾಗ್ತಾರೆ.. 'ಯುವ' ಡೈಲಾಗ್ ಪಂಚ್
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದುರ್ಗಾ ಪೂಜೆಯ ಮಹತ್ವವನ್ನು ಸಾರುವ 9 ಆಚರಣೆಗಳು
ಬಹುತೇಕ ಜನರಿಗೆ ದುರ್ಗಾ ಪೂಜೆ ಎಂದರೆ ಏನು ಎಂದು ಗೊತ್ತು. ಆದರೆ ಅದಕ್ಕೆ ಸಂಬಂಧಿಸಿದ ಆಚರಣೆಗಳ ಬಗ್ಗೆ ಮಾತ್ರ ಗೊತ್ತಿರುವುದು ಅಪರೂಪ. ದುರ್ಗಾ ಪೂಜೆಯ ಜೊತೆಗೆ ಮಾಡುವ ಪ್ರತಿ ಆಚರಣೆಗೂ ಒಂದು ಅರ್ಥವಿದೆ ಮತ್ತು ಮಹತ್ವವಿದೆ. ನಿಮಗೆ ನಿಜವಾಗಿಯೂ ದುರ್ಗಾ ಪೂಜೆಯ ಜೊತೆಗೆ ಏಕೆ ಈ ಆಚರಣೆಗಳಲ್ಲ ಮಾಡುತ್ತಾರೆ ಎಂಬ ಕುರಿತು ಸಂಶಯವಿದ್ದಲ್ಲಿ, ನೀವು ಈ ಪೂಜೆಯ ಹಿಂದಿನ ಪುರಾಣವನ್ನು ತಿಳಿದುಕೊಳ್ಳಬೇಕಾಗುತ್ತದೆ.
ಪ್ರತಿ ವರ್ಷವು ದುರ್ಗಾ ದೇವಿಯು ಭಕ್ತರನ್ನು ನೋಡುವ ಸಲುವಾಗಿ ತನ್ನ ಆವಾಸ ಸ್ಥಾನವಾದ ಕೈಲಾಸದಿಂದ ಇಳಿದು ಭೂಮಿಗೆ ಬರುತ್ತಾಳಂತೆ. ಈ ದೇವಿಯು ತನ್ನ ಮಕ್ಕಳಾದ ಲಕ್ಷ್ಮೀ ದೇವಿ, ಸರಸ್ವತಿ ದೇವಿ, ಗಣಪತಿ ಮತ್ತು ಕಾರ್ತಿಕ ಸ್ವಾಮಿಯವರ ಜೊತೆಯಲ್ಲಿ ಬರುತ್ತಾಳಂತೆ. ಹುರ್ರೇ...ನಾಡಿಗೆ ಬಂತು ನವರಾತ್ರಿ ಹಬ್ಬ
ದುರ್ಗಾ ಪೂಜೆಯ ಆಚರಣೆಯು ಎಲ್ಲಾ ದೇವಾನು ದೇವತೆಗಳನ್ನು ಒಳಗೊಳ್ಳುತ್ತದೆ. ದೇವಿ ಪಕ್ಷ ಅಥವಾ ಪೂಜೆಯ ಆಚರಣೆಗಳು ಮಹಾಲಯ ಅಮಾವಾಸ್ಯೆ ಸಮಯದಲ್ಲಿ ಆರಂಭವಾಗಿ 10 ದಿನಗಳ ಕಾಲ ನಡೆಯುತ್ತದೆ. ಅದರಲ್ಲೂ ಪ್ರಮುಖವಾದ ಪೂಜೆಯು ಆರಂಭಗೊಳ್ಳುವುದು ಮಹಾ ಷಷ್ಠಿಯಂದು, ಅಂದರೆ ನವರಾತ್ರಿಯ ಆರನೇಯ ದಿನದಂದು. ಮಹಾ ಅಷ್ಟಮಿಯ ಸಂಜೆ ಒಂದು ಪೂಜೆಯನ್ನು ಮಾಡಲಾಗುತ್ತದೆ. ಈ ಪೂಜೆಯನ್ನು ಅಷ್ಟಮಿ ಮತ್ತು ನವಮಿ ಸಮಯದಲ್ಲಿ ಮಾಡಲಾಗುತ್ತದೆ.
ಇದರ ಜೊತೆಗೆ ಅತ್ಯಂತ ವಿನೋದಾತ್ಮಕವಾದ ಒಂದು ಆಚರಣೆಯು ದಸರೆಯ ಹತ್ತನೆ ದಿನ ಅಂದರೆ ವಿಜಯದಶಮಿಯಂದು ನಡೆಯುತ್ತದೆ. ಅಂದು ಮುತ್ತೈದೆಯರು ದೇವಿಗೆ ಕುಂಕುಮದ ಅಲಂಕಾರವನ್ನು ಮಾಡುತ್ತಾರೆ. ಜೊತೆಗೆ ಪರಸ್ಪರ ಹಚ್ಚಿಕೊಂಡು ಸಂತಸಪಡುತ್ತಾರೆ. ದುರ್ಗಾ ಪೂಜೆಗೆ ಸಂಬಂಧಿಸಿದ ಪ್ರಮುಖ ಆಚರಣೆಗಳ ವಿವರವನ್ನು ಈ ಕೆಳಗೆ ನೀಡಿದ್ದೇವೆ ಓದಿಕೊಳ್ಳಿ. ಆ ನಂತರ ಇದರ ಮಹತ್ವ ನಿಮಗೇ ಅರ್ಥವಾಗುತ್ತದೆ. ಜೈ ದುರ್ಗಾಮಾತೆಯ 10 ಕಲಾತ್ಮಕ ಚಿತ್ರ-ದರ್ಶನ
ತರ್ಪಣ: ಮಹಾಲಯ ಅಮಾವಾಸ್ಯೆ
ಮಹಾಲಯ ಅಮಾವಾಸ್ಯೆ ದಿನ ದೇವಿ ಪಕ್ಷವು ಆರಂಭಗೊಳ್ಳುತ್ತದೆ. ಈ ದಿನ ದುರ್ಗಾ ದೇವಿಯು ಕೈಲಾಸದಿಂದ ತನ್ನ ಪ್ರಯಾಣವನ್ನು ಆರಂಭಿಸುತ್ತಾಳೆ. ಈ ದಿನ ಜನರು ಗತಿಸಿದ ತಮ್ಮ ಹಿರಿಯರಿಗಾಗಿ ತರ್ಪಣವನ್ನು ಬಿಡುತ್ತಾರೆ. ಇದು ದುರ್ಗಾ ಪೂಜೆಗೆ ಸಂಬಂಧಿಸಿದ ಆಚರಣೆಗಳಿಗೆ ಶಾಸ್ತ್ರೋಕ್ತವಾಗಿ ಮುನ್ನುಡಿ ಹಾಡುತ್ತದೆ.
ಕಲಪರಂಭೊ: ಮಹಾ ಷಷ್ಠಿ
ಈ ದಿನ ದೇವಿ ದುರ್ಗೆಯು ಮರ್ತ್ಯಲೋಕವನ್ನು ತಲುಪುತ್ತಾಳೆ, ಈ ಆಚರಣೆಯು ಅದನ್ನು ಸಾರುತ್ತದೆ. ಆಕೆಯ ಮುಚ್ಚಿದ ಮುಖವನ್ನು ಇಂದು ತೆರೆಯಲಾಗುತ್ತದೆ. ಕಲಪರಂಭೊ ಪೂಜೆಯು ಈ ಪೂಜಾ ಆಚರಣೆಯ ಆರಂಭಿಕ ವಿಧಿಯಾಗಿ ಪರಿಗಣಿಸಲಾಗಿರುತ್ತದೆ.
ಕೊಲ ಬೌ ತರುವುದು
ಮಹಾ ಸಪ್ತಮಿ ಕೊಲ ಬೌ ಎಂಬುದು ಬಾಳೆ ಹಣ್ಣಿನ ಗಿಡ, ಇದನ್ನು ಗಣಪತಿಯ ವಧು ಎಂದು ಸಹ ಪರಿಗಣಿಸಲಾಗುತ್ತದೆ. ಮಹಾ ಸಪ್ತಮಿಯಂದು ಈಕೆಯನ್ನು ನದಿಯಲ್ಲಿ ಅಥವಾ ನೀರಿರುವ ಕಲ್ಯಾಣಿಯಲ್ಲಿ ಸ್ನಾನ ಮಾಡಿಸಿ ಸಂಜೆಗೆ ಮುನ್ನ ಗಣಪತಿಯ ಮುಂದೆ ತಂದು ಇಡುತ್ತಾರೆ.
ಒಂಭತ್ತು ಗಿಡಗಳ ಪೂಜೆ
ಮಹಾ ಸಪ್ತಮಿಯಂದು ಮತ್ತೊಂದು ಬಗೆಯ ಆಚರಣೆಯನ್ನು ಮಾಡುತ್ತಾರೆ. ಅಂದು ಒಂಭತ್ತು ಬಗೆಯ ಗಿಡಗಳನ್ನು ಪೂಜಿಸುತ್ತಾರೆ. ಈ ಗಿಡಗಳು ದೇವಿಯನ್ನು ಪ್ರತಿನಿಧಿಸುತ್ತವೆ ಎಂದು ಹೇಳಲಾಗುತ್ತದೆ.
ಕುಮಾರಿ ಪೂಜಾ: ಮಹಾ ಅಷ್ಟಮಿ
ಮಹಾ ಅಷ್ಟಮಿಯ ದಿನದಂದು, ಋತುಮತಿಯಾಗದ ಹೆಣ್ಣು ಮಕ್ಕಳನ್ನು ಮನೆಗೆ ಕರೆದು ಅಥವಾ ಮನೆಯಲ್ಲಿರುವ ಋತುಮತಿಯಾಗ ಹೆಣ್ಣು ಮಕ್ಕಳನ್ನು ದೇವಿಯ ಅವತಾರದ ಸ್ವರೂಪವೆಂದು ಭಾವಿಸಿ ಪೂಜಿಸಲಾಗುತ್ತದೆ.
ಸಂಧಿ ಪೂಜೆ: ಮಹಾನವಮಿ
ಮಹಾ ಅಷ್ಟಮಿ ಮತ್ತು ಮಹಾನವಮಿ ಸಂಧಿಸುವ ಸಮಯದಲ್ಲಿ ಈ ಸಂಧಿ ಪೂಜೆಯನ್ನು ಮಾಡಲಾಗುತ್ತದೆ. ಅಷ್ಟಮಿಯ ಕಡೆಯ 24 ನಿಮಿಷಗಳು ಮತ್ತು ನವಮಿಯ ಮೊದಲ 24 ನಿಮಿಷಗಳನ್ನು ಈ ಸಂಧಿಕಾಲವೆಂದು ಪರಿಗಣಿಸಲಾಗುತ್ತದೆ. ಈ ಸಂಧಿಕಾಲದಲ್ಲಿಯೇ ದುರ್ಗಾ ದೇವಿಯು ಭಯಾನಕ ರಾಕ್ಷಸರಾದ ಚಂಡ ಮತ್ತು ಮುಂಡರನ್ನು ಸಂಹರಿಸಿದಳು ಎಂದು ಹೇಳಲಾಗುತ್ತದೆ.
ಸಿಂಧೂರ್ ಖೇಲ: ಮಹಾ ದಶಮಿ
ಈ ಪೂಜೆಯ ಕಡೆಯ ದಿನದಂದು, ಭಕ್ತಾಧಿಗಳು ದೇವಿಯನ್ನು ಅತ್ಯಂತ ದುಃಖ ಭರಿತರಾಗಿ ಬೀಳ್ಕೊಡುತ್ತಾರೆ. ಭಕ್ತಾಧಿಗಳು ಆಕೆಯ ಕೂದಲಿಗೆ ಕುಂಕುಮವನ್ನು ಹಚ್ಚುತ್ತಾರೆ ಮತ್ತು ಆಕೆಗೆ ಸಿಹಿಯನ್ನು ಉಣಿಸುತ್ತಾರೆ. ಇದಕ್ಕೆ "ಠಾಕೂರು ಬೊರೊನ್" ಎಂದು ಕರೆಯುತ್ತಾರೆ. ಇದಾದ ನಂತರ ಹೆಂಗಳೆಯರು ತಮ್ಮ ತಮ್ಮಲ್ಲಿಯೇ ಪರಸ್ಪರ ಕುಂಕುಮದಲ್ಲಿ ಆಟವಾಡುತ್ತಾರೆ. ಇದಕ್ಕೆ " ಸಿಂಧೂರ್ ಖೇಲಾ" ಎಂದು ಕರೆಯುತ್ತಾರೆ.
ವಿಜಯದಶಮಿ: ಮಹಾದಶಮಿ
ದೇವಿ ಮತ್ತು ಆಕೆಯ ಕುಟುಂಬವನ್ನು ನೀರಿನಲ್ಲಿ ಮುಳುಗಿಸಿದ ನಂತರ, ಆಕೆಯು ಕೈಲಾಸಕ್ಕೆ ಮತ್ತೆ ಪ್ರಯಾಣ ಆರಂಭಿಸುತ್ತಾಳೆ ಎಂದು ಪ್ರತೀತಿ. ಆಗ ವಿಜಯ ದಶಮಿ ಆರಂಭವಾಗುತ್ತದೆ. ಆಗ ನೀವು ನಿಮ್ಮ ಸಮಾನರಿಗೆ ಶುಭಾಶಯ ಹೇಳಬೇಕು, ಮತ್ತು ಹಿರಿಯರಿಂದ ಆಶೀರ್ವಾದವನ್ನು ಪಡೆಯಬೇಕು.
ಶಾರದಾ ನವರಾತ್ರಿ
ಭಾರತದ ಪೂರ್ವದ ಕಡೆ ನವರಾತ್ರಿಯನ್ನು ಶಾರದಾ ನವರಾತ್ರಿಯೆಂದು ಆಚರಿಸುತ್ತಾರೆ. ಇನ್ನು ಕೆಲವು ಕಡೆ ಮಹಾನವರಾತ್ರಿ ಎಂದು ಕೂಡ ಕರೆಯುತ್ತಾರೆ. ರಾಮ ಸೀತೆಯನ್ನು ಬಿಡಿಸಿಕೊಂಡು ಬರಲು ಲಂಕೆಗೆ ಯುದ್ಧಕ್ಕೆ ಹೋಗುವ ಮುನ್ನ ಈ ಪೂಜೆ ಮಾಡಿದ್ದನು ಎಂದು ಹೇಳಲಾಗುತ್ತದೆ. ಈ ನವರಾತ್ರಿಯನ್ನು ಅಕ್ಟೋಬರ್ ತಿಂಗಳಿನಲ್ಲಿ ಆಚರಿಸಲಾಗುವುದು.