Just In
- 7 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 8 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 9 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 9 hrs ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
Don't Miss
- Technology Earbuds: 2000 ರೂ. ಒಳಗೆ ಲಭ್ಯ ಇರುವ ಅತ್ಯುತ್ತಮ ಇಯರ್ಬಡ್ಸ್! ಸಖತ್ ಫೀಚರ್ಸ್...
- Finance mukesh ambaniಗೆ 67 ವರ್ಷ, ಅವರು ಹೊಂದಿರುವ ದುಬಾರಿ ವಸ್ತುಗಳು ಏನೇನು ಗೊತ್ತಾ?
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಟ್ಟೆಚ್ಚರ: ಸ್ವಲ್ಪ ಎಚ್ಚರ ತಪ್ಪಿದರೂ ವಿಷ ಹೊಟ್ಟೆ ಸೇರಲಿದೆ!
ನಾವಿಂದು ಕ್ಷೇಮವಾಗಿ ಸೇವಿಸುತ್ತಿರುವ ಹಣ್ಣು, ಧಾನ್ಯಗಳೆಲ್ಲವೂ ಒಂದು ಕಾಲದಲ್ಲಿ ಕಾಡಿನಲ್ಲಿದ್ದವೇ. ನಮ್ಮ ಹಿರಿಯರು ಇವುಗಳಲ್ಲಿ ತಿನ್ನಬಹುದಾದುದನ್ನು ತಮ್ಮ ಅನುಭವದಿಂದ ಆಯ್ದು ಈ ಬೆಳೆಗಳ ತೋಟ ಗದ್ದೆಗಳನ್ನು ಮಾಡಿ ಬೆಳೆದು ಬಂದ ಕಾರಣ ನಮಗಿಂದು ಉತ್ತಮ ಆಹಾರ ದೊರಕುತ್ತಿದೆ.
ಆದರೆ ನಮಗೆ ಅರಿವಿಲ್ಲದ ಎಷ್ಟೋ ಆಹಾರಗಳು ಅಥವಾ ಹಣ್ಣು ಹಂಪಲುಗಳು ವಿಷಕಾರಿಯಾಗಿರಬಹುದು. ಇದರ ಬಗ್ಗೆ ಅರಿವೇ ಇಲ್ಲದೇ ನಾವು ಸೇವಿಸುತ್ತಿದ್ದೇವೆ. ಉದಾಹರಣೆಗೆ ಆಲೂಗಡ್ಡೆ. ಸಾಮಾನ್ಯವಾಗಿ ಹೆಚ್ಚು ಕಾಲ ಕೆಡದೇ ಉಳಿಸಬಹುದಾದ ತರಕಾರಿಯಾಗಿರುವ ಈರುಳ್ಳಿ ಮತ್ತು ಆಲೂಗಡ್ಡೆಗಳನ್ನು ನಾವು ಫ್ರಿಜ್ಜಿನಲ್ಲಿಡದೇ ಹೊರಗೇ ಇಡುತ್ತೇವೆ. ಆದರೆ ಕೆಲವು ದಿನಗಳ ಬಳಿಕ ಆಲೂಗಡ್ಡೆಯ ಕಣ್ಣುಗಳಲ್ಲೆಲ್ಲಾ ಚಿಕ್ಕ ಚಿಕ್ಕ ಮೊಳಕೆಗಳು ಮೂಡುತ್ತವೆ. ಆಮೇಲೆ? ಅಚ್ಚರಿ, ಆದರೂ ಸತ್ಯ-ಈ ಆಹಾರಗಳು ವಿಷದಷ್ಟೇ ಅಪಾಯಕಾರಿ!
ಆಮೇಲೇನು, ಈ ಮೊಳಕೆಗಳನ್ನು ನಿವಾರಿಸಿ ಆಲುಗಡ್ಡೆಯನ್ನು ಪಲ್ಯ ಮಾಡಿ ಚಪ್ಪರಿಸುತ್ತೇವೆ. ಇದೇ ನಾವೆಲ್ಲರೂ ಮಾಡುತ್ತಿರುವ ತಪ್ಪು. ಆಲೂಗಡ್ಡೆ ಮೊಳಕೆ ಮೂಡುವ ಮೊದಲು ತಿಂದರೆ ಮಾತ್ರ ಕ್ಷೇಮ. ಮೊಳಕೆ ಬರಲು ತೊಡಗಿದ ಕೂಡಲೇ ಒಳಗಡೆ ಕೆಲವು ರಾಸಾಯನಿಕಗಳು ಉತ್ಪತ್ತಿಯಾಗುತ್ತವೆ, ಇವು ವಿಷಕಾರಿಯಾಗಿವೆ.
ಹೌದೇ? ಈ ಬಗ್ಗೆ ಗೊತ್ತೇ ಇರಲಿಲ್ಲ ಎಂದು ಉದ್ಗಾರ ತೆಗೆದಿರಾ? ತಾಳಿ, ಇಲ್ಲಿ ಕೆಲವೊಂದು ತರಕಾರಿಗಳ ಬಗ್ಗೆ ಮಾಹಿತಿ ನೀಡಿದ್ದೇವೆ ಮುಂದೆ ಓದಿ...
ಆಲೂಗಡ್ಡೆ
ಮೊಳಕೆ ಬಂದ ಬಳಿಕ ಇದರೊಳಗೆ ಉತ್ಪತ್ತಿಯಾಗುವ ರಾಸಾಯನಿಕಗಳು ವಾಂತಿ ಮತ್ತು ಬೇಧಿಯನ್ನು ಉಂಟುಮಾಡುತ್ತವೆ. ಕೆಲವೊಮ್ಮೆ ಆಲುಗಡ್ಡೆಯ ಬಣ್ಣ ಹಸಿರು ಬಣ್ಣಕ್ಕೆ ತಿರುಗುತ್ತದೆ. ವಾಸ್ತವವಾಗಿ ಇದು ಆಲೂಗಡ್ಡೆಗೆ ನಿಸರ್ಗ ನೀಡಿರುವ ರಕ್ಷಣಾ ವ್ಯವಸ್ಥೆಯಾಗಿದೆ.
ಆಲೂಗಡ್ಡೆ
ತನ್ನನ್ನು ತಾನು ರಕ್ಷಿಸಿಕೊಳ್ಳಲು ಆಲುಗಡ್ಡೆಯ ಒಳಗೆ glycoalkaloid ಎಂಬ ವಿಷಕಾರಿ ರಾಸಾಯನಿಕ ಉತ್ಪತ್ತಿಯಾಗುತ್ತವೆ. ಇದನ್ನು ತಿಂದ ಪ್ರಾಣಿಗೆ ಇದು ಕಹಿಯಾಗಿರುತ್ತದೆ ಅಥವಾ ಕೀಟಗಳು ಹೀರದಿರಲು ನೆರವಾಗುತ್ತದೆ. ಆದರೆ ಈ ಆಲೂಗಡ್ಡೆಯನ್ನು ತಿಂದರೆ ನಮಗೂ ಹೊಟ್ಟೆ ಕೆಡುವುದು ಖಚಿತ. ಊಹೆಗೂ ನಿಲುಕದ ಆಲೂಗಡ್ಡೆಯ ಕಾರುಬಾರು....
ಬಾದಾಮಿ
ಎಲ್ಲಿಯವರೆಗೆ ಬಾದಾಮಿಯ ರುಚಿ ಕಹಿಯಾಗುವುದಿಲ್ಲವೋ ಅಲ್ಲಿಯವರೆಗೆ ಇದು ಸುರಕ್ಷಿತ. ಒಂದು ವೇಳೆ ಇದರ ರುಚಿ ಕೊಂಚವಾದರೂ ಕಹಿ ಅನ್ನಿಸಿದರೆ ಇದನ್ನು ತಕ್ಷಣ ಎಸೆದು ಬಿಡಬೇಕು.
ಬಾದಾಮಿ
ಏಕೆಂದರೆ ಇದರಲ್ಲಿ ಉತ್ಪತ್ತಿಯಾಗುವ ರಾಸಾಯನಿಕದಲ್ಲಿ ಅಲ್ಪ ಪ್ರಮಾಣದಲ್ಲಿಯಾದರೂ ಸಯನೈಡ್ ವಿಷ ಇರುತ್ತದೆ. ಒಂದು ವೇಳೆ ಕಹಿ ಬಂದಿರುವ ಬಾದಾಮಿಯನ್ನು ಕೊಂಚ ಹೆಚ್ಚಿನ ಸಂಖ್ಯೆಯಲ್ಲಿ ತಿಂದರೆ ಸಾವಿಗೂ ಕಾರಣವಾಗಬಹುದು.
ಟೊಮೇಟೊ
ಕೆಲವೊಮ್ಮೆ ಟೊಮೇಟೊ ತಾಜಾ ಇರಬೇಕೆಂದು ತೊಟ್ಟಿನ ಸಹಿತ ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟಿರುತ್ತಾರೆ. ಆದರೆ ತಿನ್ನುವ ಮೊದಲು ಈ ತೊಟ್ಟು ಮತ್ತು ಎಲೆಗಳನ್ನು ನಿವಾರಿಸಿಯೇ ತಿನ್ನಬೇಕು. ಏಕೆಂದರೆ ತೊಟ್ಟು ಮತ್ತು ಎಲೆಗಳಲ್ಲಿ glycoalkaloid ರಾಸಾಯನಿಕವಿದ್ದು ಇದೊಂದು ವಿಷಕಾರಿ ವಸ್ತುವಾಗಿದೆ. ಬರೀ 15 ನಿಮಿಷದಲ್ಲಿ ಟೊಮೇಟೊ ಚಟ್ನಿ ರೆಡಿ!
ಮರಗೆಣಸು
ಮರಗೆಣಸಿನಲ್ಲಿಯೂ ಅಲ್ಪ ಪ್ರಮಾಣದ ಸಯನೈಡ್ ವಿಷವಿದೆ. ವಿಶೇಷವಾಗಿ ಇದರ ಎರಡನೆಯ ಸಿಪ್ಪೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ. ಆದ್ದರಿಂದ ಇದನ್ನು ತಿನ್ನುವ ಮೊದಲು ಹೊರಗಿನ ದಪ್ಪ ಸಿಪ್ಪೆಯನ್ನು ನಿವಾರಿಸಿ ಚೆನ್ನಾಗಿ ತೊಳೆದು ಕೊಂಚ ಕಾಲ ನೀರಿನಲ್ಲಿಟ್ಟು, ಬಳಿಕ ಬೇಯಿಸಿ ಅಥವಾ ಒಣಗಿಸಿ ಸೇವಿಸಿದರೆ ಮಾತ್ರ ಇದು ಸುರಕ್ಷಿತ. ಇಲ್ಲದಿದ್ದರೆ ಇದು ವಿಷವಾಗಿ ಪರಿಣಮಿಸಬಹುದು.
ಅಣಬೆ
ಮಳೆ ಬಂತೆಂದರೆ ಹಲವಾರು ವಿಧದ ಅಣಬೆಗಳು ಅಲ್ಲಲ್ಲಿ ಹುಟ್ಟುತ್ತವೆ. ಒಂದಕ್ಕಿಂತ ಒಂದು ನೋಡಲು ಸುಂದರವಾಗಿದ್ದರೂ ಇವುಗಳಲ್ಲಿ ಬಹುತೇಕ ತಿನ್ನಲು ಯೋಗ್ಯವಲ್ಲ.
ಅಣಬೆ
ಪರಿಣಿತರು ಬೆಳೆಸಿ ಸೇವಿಸಲು ಸುರಕ್ಷಿತ ಎಂದು ಖಚಿತಪಡಿಸಿದ ಅಣಬೆಯ ಹೊರತಾಗಿ ಬೇರಾವ ಅಣಬೆಗಳನ್ನು ಸೇವಿಸಬಾರದು. ಅದರಲ್ಲೂ ಬಿಳಿಚುಕ್ಕೆಯ ಕೆಂಪು ಬಣ್ಣದ ಅತಿ ಸುಂದರ ಅಣಬೆಯಂತೂ ಅತ್ಯಂತ ವಿಷಕಾರಿಯಾಗಿದ್ದು ಇದರ ಒಂದೇ ತುತ್ತು ಸ್ವಾಸ್ಥ್ಯ ಕೆಡಿಸಬಲ್ಲುದು.