Latest Updates
-
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ
ಮಕ್ಕಳಿಗೆ ಕಾಡುವ ಶೀತ-ಕೆಮ್ಮಿನ ನಿವಾರಣೆಗೆ ಸಿಂಪಲ್ ಮನೆಮದ್ದು
ಜ್ವರ, ಶೀತ, ಕೆಮ್ಮು ಮಕ್ಕಳನ್ನು ಕಾಡುವಂತಹ ಸಮಸ್ಯೆಗಳು. ಇಂತಹ ಸಮಸ್ಯೆಗಳನ್ನು ದೂರ ಮಾಡಲು ವೈದ್ಯರಲ್ಲಿಗೆ ಓಡಿ ಹೋಗುವುದು ಸಾಮಾನ್ಯ. ವೈದ್ಯರನ್ನು ಭೇಟಿಗೆ ಮೊದಲು ಮನೆಯಲ್ಲಿಯೇ ಕೆಲವೊಂದು ಚಿಕಿತ್ಸೆ ನೀಡಿದರೆ ಅದರಿಂದ ಪರಿಹಾರ ಕಾಣಬಹುದು....
ಹವಾಮಾನ ಬದಲಾಗುತ್ತಿರುವಂತೆ ಆರೋಗ್ಯದಲ್ಲಿ ಏರುಪೇರಾಗುವುದು ಸಾಮಾನ್ಯ. ದೇಹದಲ್ಲಿ ಒಳ್ಳೆಯ ಪ್ರತಿರೋಧಕ ಶಕ್ತಿಯನ್ನು ಹೊಂದಿರುವವರು ಸಾಮಾನ್ಯವಾಗಿ ಬರುವ ಜ್ವರ, ಶೀತ ಹಾಗೂ ಕೆಮ್ಮಿನಿಂದ ಪಾರಾಗುತ್ತಾರೆ. ಆದರೆ ಹವಾಮಾನ ಬದಲಾವಣೆ ವೇಳೆ ಹೆಚ್ಚಾಗಿ ಸಂಕಷ್ಟಕ್ಕೆ ಸಿಲುಕುವುದು ಮಕ್ಕಳು.
ಜ್ವರ, ಶೀತ, ಕೆಮ್ಮು ಮಕ್ಕಳನ್ನು ಕಾಡುವಂತಹ ಸಮಸ್ಯೆಗಳು. ಇಂತಹ ಸಮಸ್ಯೆಗಳನ್ನು ದೂರ ಮಾಡಲು ವೈದ್ಯರಲ್ಲಿಗೆ ಓಡಿ ಹೋಗುವುದು ಸಾಮಾನ್ಯ. ವೈದ್ಯರನ್ನು ಭೇಟಿಗೆ ಮೊದಲು ಮನೆಯಲ್ಲಿಯೇ ಮಕ್ಕಳಿಗೆ ಕೆಲವೊಂದು ಚಿಕಿತ್ಸೆ ನೀಡಿದರೆ ಅದರಿಂದ ಪರಿಹಾರ ಕಾಣಬಹುದು. ಆದರೆ ಸಮಸ್ಯೆ ಹಾಗೆ ಉಳಿದುಕೊಂಡಿದ್ದರೆ ವೈದ್ಯರನ್ನು ಭೇಟಿಯಾಗುವುದು ಅಗತ್ಯ. ಮಕ್ಕಳಿಗೆ ಮನೆಯಲ್ಲಿ ಮಾಡಬಹುದಾದ ಕೆಲವೊಂದು ಚಿಕಿತ್ಸೆಗಳ ಬಗ್ಗೆ ನಾವು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ.

ಆವಿ
ಸಣ್ಣ ಮಕ್ಕಳಿಗೆ ಶೀತವಾಗಿ ಉಸಿರಾಟಕ್ಕೆ ಕಷ್ಟವಾಗುತ್ತಿದ್ದರೆ ಆಗ ಮಕ್ಕಳಿಗೆ ಆವಿಯ ಚಿಕಿತ್ಸೆ ನೀಡಿ. ಸ್ನಾನ ಕೊಠಡಿಗೆ ಕರೆದುಕೊಂಡು ಹೋಗಿ ಬಿಸಿನೀರನ್ನು ಆನ್ ಮಾಡಿದರೆ ಅದರಿಂದ ಬರುವ ಆವಿಗೆ ಮಗು ಮುಖವೊಡ್ಡಬೇಕು. ಇಲ್ಲವೆಂದಾದರೆ ನೀರನ್ನು ಬಿಸಿ ಮಾಡಿ ಒಂದು ಪಾತ್ರೆಗೆ ಹಾಕಿ. ಅದರಿಂದ ಬರುವ ಆವಿಯನ್ನು ಮಗು ಒಳಕ್ಕೆ ತೆಗೆದುಕೊಂಡರೆ ಒಳ್ಳೆಯದು. ನೀಲಗಿರಿ ಎಣ್ಣೆಯ ಕೆಲವು ಹನಿಗಳನ್ನು ನೀರಿಗೆ ಹಾಕಿದರೆ ಮತ್ತಷ್ಟು ಒಳ್ಳೆಯದು.
ಜೇನು
ಜೇನುತುಪ್ಪದಲ್ಲಿ ಶಮನಕಾರಿ ಗುಣಗಳು ಇದೆ ಎಂದು ಎಲ್ಲರಿಗೂ ತಿಳಿದಿದೆ. ಜೇನಿನಲ್ಲಿ ಮಗುವಿನ ಬೆರಳನ್ನು ಮುಳುಗಿಸಿ ಮತ್ತು ಅದನ್ನು ಚೀಪುವಂತೆ ಹೇಳಿ. ದಿನದಲ್ಲಿ ಎರಡು ಮೂರು ಸಲ ಹೀಗೆ ಮಾಡಿ. ಐದು ವರ್ಷಕ್ಕಿಂತ ದೊಡ್ಡ ಮಗುವಾದರೆ ಜೇನಿಗೆ ಸ್ವಲ್ಪ ದಾಲ್ಚಿನಿ ಹುಡಿಯನ್ನು ಹಾಕಿ ಸವಿಯಲು ಹೇಳಿ. ಶೀತ ಶಮನಕ್ಕೆ, ಒಂದು ಚಮಚದಷ್ಟು ಜೇನು ಸಾಕು
ಅಜ್ಮೈನ್
ಕುದಿಯುವ ನೀರಿಗೆ ಅಜ್ಮೈನ್ ನ ಕೆಲವು ಬೀಜ ಮತ್ತು ತುಳಸಿಯ ಎಲೆಗಳನ್ನು ಹಾಕಿಕೊಂಡು ಕುಡಿದರೆ ಕೆಮ್ಮಿನಿಂದ ಪರಿಹಾರ ಪಡೆಯಬಹುದು. ಎದೆಕಟ್ಟಿರುವುದನ್ನು ಇದು ನಿವಾರಣೆ ಮಾಡುತ್ತದೆ.
ಅರಿಶಿನ ಹಾಲು
ನಂಜುನಿರೋಧಕ ಗುಣವನ್ನು ಹೊಂದಿರುವಂತಹ ಅರಿಶಿನ ಕೆಮ್ಮು ಹಾಗೂ ಶೀತದಂತಹ ವೈರಲ್ ಸೋಂಕನ್ನು ನಿವಾರಣೆ ಮಾಡುವುದು. ಒಂದು ಲೋಟ ಹಾಳಿಗೆ ಅರಶಿನ ಹಾಕಿ ಮಗುವಿಗೆ ಪ್ರತೀ ರಾತ್ರಿ ನೀಡಿದರೆ ಕೆಮ್ಮು ನಿವಾರಣೆಯಾಗುತ್ತದೆ. ಇದು ಕಿರಿಕಿರಿಯಾಗುವ ಗಂಟಲು ಹಾಗೂ ಕಟ್ಟಿರುವ ಮೂಗಿಗೆ ಶಮನ ನೀಡುವುದು. ಹಾಲಿನಲ್ಲಿ ಕ್ಯಾಲ್ಸಿಯಂ ಇರುವ ಕಾರಣದಿಂದ ಇದು ಮಗುವಿಗೆ ಶಕ್ತಿಯನ್ನು ನೀಡುವುದು. ಮಕ್ಕಳ ಶೀತ ಶಮನಕ್ಕೆ-ಬಿಸಿ ಬಿಸಿ ಅರಿಶಿನ ಬೆರೆಸಿದ ಹಾಲು
ಮಸಾಜ್
ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಮಸಾಜ್ ಒಳ್ಳೆಯ ಪರಿಹಾರ. ಸಾಸಿವೆ ಎಣ್ಣೆಗೆ ಬೆಳ್ಳುಳ್ಳಿಯನ್ನು ಹಾಕಿಕೊಂಡು ಮಗುವಿನ ಎದೆ, ಬೆನ್ನು ಹಾಗೂ ಕುತ್ತಿಗೆ ಭಾಗಕ್ಕೆ ಮಸಾಜ್ ಮಾಡಿ. ಮಗುವಿನ ಪಾದ ಹಾಗೂ ಕಾಲಿನ ಭಾಗಕ್ಕೂ ಮಸಾಜ್ ಮಾಡಿಕೊಳ್ಳಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


