Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಮಕ್ಕಳ ಶೀತ ಶಮನಕ್ಕೆ-ಬಿಸಿ ಬಿಸಿ ಅರಿಶಿನ ಬೆರೆಸಿದ ಹಾಲು
ಮಳೆಗಾಲದ ಆಗಮನವಾಗುತ್ತಿದ್ದಂತೆಯೇ ಆವರಿಸುವ ತೇವ ತನ್ನೊಂದಿಗೆ ಶೀತ ನೆಗಡಿ ಕೆಮ್ಮುಗಳನ್ನೂ ತರುತ್ತದೆ. ಅದರಲ್ಲೂ ಮಕ್ಕಳಿಗೆ ಶೀತ ಅತಿ ಬೇಗನೇ ಆವರಿಸುತ್ತದೆ. ಏಕೆಂದರೆ ಪ್ರತಿಬಾರಿಯೂ ತೇವಾಂಶದಲ್ಲಿ ಬೇರೆ ಬೇರೆ ವೈರಸ್ಸುಗಳು ತೇಲುತ್ತಾ ಬರುತ್ತವೆ.
ಹಿರಿಯರ ದೇಹದಲ್ಲಿ ಈ ವೈರಸ್ಸುಗಳಿಗೆ ರೋಗ ನಿರೋಧಕ ಶಕ್ತಿ ಈಗಾಗಲೇ ಪಡೆದುಬಿಟ್ಟಿರುವ ಕಾರಣ ಹೆಚ್ಚು ಬಾಧಿಸದಿದ್ದರೂ ಮಕ್ಕಳಿಗೆ ಇದು ಅವರಿಗೆ ಪ್ರಥಮವಾಗಿರುವ ಕಾರಣ ಈ ವೈರಸ್ಸುಗಳಿಗೆ ರೋಗ ನಿರೋಧಕ ಶಕ್ತಿ ಮೂಡಿರುವುದಿಲ್ಲ. ಇದು ಮೂಡಲು ಒಂದು ವಾರ ಬೇಕು. ಹಾಲು-ಅರಿಶಿನದ ಜೋಡಿ ಮಾಡಲಿದೆ ಕಮಾಲಿನ ಮೋಡಿ!

ಅದಕ್ಕೇ ವೈದ್ಯರೇ 'ಶೀತಕ್ಕೆ ಔಷಧಿ ತೆಗೆದುಕೊಂಡರೆ ಒಂದೇ ವಾರದಲ್ಲಿ ಗುಣವಾಗುತ್ತದೆ, ಇಲ್ಲದಿದ್ದರೆ ಏಳು ದಿನ ಬೇಕು ನೋಡಿ' ಎಂದೇ ನಗೆಚಟಾಕಿ ಹಾರಿಸುತ್ತಾರೆ. ಒಮ್ಮೆ ಮಕ್ಕಳಿಗೆ ಶೀತ ಆವರಿಸಿದರೆ ಹಿರಿಯರಿಗಿಂತಲೂ ಹೆಚ್ಚು ಬಳಲುತ್ತಾರೆ ಹಾಗೂ ನಿಃಶಕ್ತರಾಗುತ್ತಾರೆ. ಶೀತವನ್ನು ಬಲವಂತವಾಗಿ ಕಡಿಮೆ ಮಾಡುವ ಪ್ರಬಲ ಗುಳಿಗೆಗಳಿಗಿಂತ ದೇಹದ ರೋಗ ನಿರೋಧಕ ಶಕ್ತಿಯನ್ನು ಆದಷ್ಟು ಬೇಗನೇ ಸಶಕ್ತಗೊಳಿಸುವುದೇ ಜಾಣತನದ ಕ್ರಮವಾಗಿದೆ. ಸರ್ವಗುಣ ಸಂಪನ್ನ ಅರಿಶಿನ ಎಂಬ ಸಂಜೀವಿನಿ
ಈ ಕ್ರಮವನ್ನು ಕೈಗೊಳ್ಳಲು ಹೆಚ್ಚೇನೂ ಕಷ್ಟಪಡಬೇಕಾಗಿಲ್ಲ. ಆಯುರ್ವೇದ ಸೂಚಿಸಿರುವ ಈ ಸರಳ ಕ್ರಮ ಅನುಸರಿಸಿದರೆ ಸಾಕು. ಆಯುರ್ವೇದ ತಜ್ಞರ ಪ್ರಕಾರ ಅರಿಶಿನ ಶೀತವನ್ನು ಎದುರಿಸಲು ಒಂದು ಪ್ರಬಲ ಮೂಲಿಕೆಯಾಗಿದ್ದು ಹಿರಿಯರಿಗೂ ಮಕ್ಕಳಿಗೂ ಸುರಕ್ಷಿತವಾಗಿ ಮತ್ತು ನಿಯಮಿತವಾಗಿ ಸೇವಿಸಬಹುದಾದ ಮತ್ತು ಯಾವುದೇ ಅಡ್ಡಪರಿಣಾಮವಿಲ್ಲದ ಔಷಧಿಯಾಗಿದೆ.
ಅರಿಶಿನದಲ್ಲಿ ಶೀತ ಎದುರಿಸಲು ಅಂತಹದ್ದೇನಿದೆ ಎಂದು ಕೇಳಿದರೆ ಇಂದಿನ ವೈಜ್ಞಾನಿಕ ವಿಶ್ಲೇಷಣೆ ಇದಕ್ಕೆ ಕುರ್ಕುಮಿನ್ (curcumin) ಎಂಬ ಪೋಷಕಾಂಶದತ್ತ ಬೊಟ್ಟು ಮಾಡುತ್ತದೆ. ಇದೊಂದು ಉರಿಯೂತ ನಿವಾರಕ, ಬ್ಯಾಕ್ಟೀರಿಯಾ ನಿವಾರಕ ಮತ್ತು ಮುಖ್ಯವಾಗಿ ವೈರಸ್ ನಿವಾರಕ ಗುಣ ಹೊಂದಿದ್ದು ಸಾಮಾನ್ಯ ಶೀತಕ್ಕೆ ಕಾರಣವಾಗುವ ಬಹುತೇಕ ಎಲ್ಲಾ ವೈರಸ್ಸುಗಳನ್ನು ಸದೆಬಡಿಯುವ ಶಕ್ತಿ ಹೊಂದಿದೆ. ಹಾಲಿಗೆ ಅರಿಶಿನ ಹಾಕಿ ಕುಡಿದರೆ ಹತ್ತಾರು ಲಾಭ
ಅಲ್ಲದೇ ಶೀತದ ಅಡ್ಡಪರಿಣಾಮಗಳಾದ ಕಟ್ಟಿಕೊಂಡ ಎದೆ, ಗಂಟಲ ಕೆರೆತ, ಸೋರುವ ಮೂಗು ಮೊದಲಾದವುಗಳನ್ನೆಲ್ಲಾ ಇದರ ಉರಿಯೂತ ನಿವಾರಕ ಗುಣ ಕಡಿಮೆಗೊಳಿಸುತ್ತದೆ. ಅಷ್ಟೇ ಅಲ್ಲದೆ ದೇಹ ಮತ್ತೊಮ್ಮೆ ಈ ವೈರಸ್ಸಿಗೆ ಬಗ್ಗದಂತೆ ರೋಗ ನಿರೋಧಕ ಶಕ್ತಿಯನ್ನು ಪಡೆಯಲು ನೆರವಾಗುತ್ತದೆ. ಜೀವಮಾನವಿಡೀ ಈ ವೈರಸ್ಸು ಮಗುವನ್ನು ಮತ್ತೆ ಬಾಧಿಸಲಾರದು. ಮುಂದಿನ ಬಾರಿ ಶೀತವಾದರೆ ಅದಕ್ಕೆ ಹಿಂದೆಂದೂ ಬಾಧಿಸಿರದ ಹೊಸ ವೈರಸ್ಸೇ ಆಗಿರುತ್ತದೆ.
ಆದರೆ ಅರಿಶಿನವನ್ನು ಹಾಗೇ ಸೇವಿಸುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ಇವನ್ನು ಹೊತ್ತುಕೊಂಡು ಹೋಗಲು ಹಾಲಿನ ಕೊಬ್ಬು ಅತ್ಯಂತ ಸೂಕ್ತವಾಗಿದ್ದು ಹಾಲಿನೊಂದಿಗೆ ಕೊಂಚ ಅರಿಶಿನ ಪುಡಿಯನ್ನು ಬೆರೆಸಿ ಕುಡಿಯುವುದರಿಂದ ಇದರ ಗರಿಷ್ಠ ಪ್ರಯೋಜನವನ್ನು ಪಡೆಯಬಹುದು. ಚಿನ್ನದ ದೇವತೆ ಅರಿಶಿನದ ಚಿನ್ನದಂತಹ ಗುಣಗಳು
ಮುಂದಿನ ಬಾರಿ ನಿಮ್ಮ ಮಗುವಿಗೆ ಶೀತವಾಗುತ್ತಿದೆ ಎಂಬ ಯಾವುದೇ ಚಿಕ್ಕ ಸೂಚನೆ ಸಿಕ್ಕರೂ ತಕ್ಷಣ ದಿನಕ್ಕೆ ಎರಡು ಬಾರಿ ಒಂದು ಲೋಟ ಬಿಸಿಬಿಸಿ ಹಾಲಿನಲ್ಲಿ ಒಂದು ಚಿಕ್ಕ ಚಮಚ ಅರಿಶಿನ ಪುಡಿ ಬೆರೆಸಿ ನೀಡಿದರೆ ಸಾಕು. ಕೆಲವೊಮ್ಮೆ ಅಂಗಡಿಗಳಲ್ಲಿ ಸಿಗುವ ಪುಡಿ ಅಷ್ಟೊಂದು ಉತ್ತಮವಾಗಿರುವುದಿಲ್ಲ. ಹಾಗಾಗಿ ಔಷಧಿಗಾಗಿ ಉತ್ತಮ ಗುಣಮಟ್ಟದ ಅರಿಶಿನ ಕೊಂಬನ್ನು ಹಾಲಿನಲ್ಲಿ ತೇದಿ ಬಿಸಿಹಾಲಿನಲ್ಲಿ ಬೆರೆಸಿ ನೀಡುವುದು ಹೆಚ್ಚು ಪ್ರಯೋಜನಕಾರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications












