Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ತರಕಾರಿ ಬಳಸುವ ತರಹೇವಾರಿ ಉಪಾಯಗಳು

* ಸೀಮೆ ಬದನೆಕಾಯಿಯನ್ನು ಎರಡು ಭಾಗವಾಗಿ ಹೆಚ್ಚಿ, ಒಂದಕ್ಕೊಂದು ಉಜ್ಜಿ, ನೀರಿಗೆ ಹಾಕಿ ತೆಗೆದು ಉಪಯೋಗಿಸಿ. ಇದರಿಂದ ನಿಮ್ಮ ಕೈ ಅಂಟಾಗುವುದನ್ನು ತಡೆಯಬಹುದು.
* ಬೆಣ್ಣೆ ಕಾಯಿಸಿ ಇಳಿಸುವ ಮುನ್ನ ತೊಟ್ಟು ತೆಗೆದ ಒಂದೆರಡು ವೀಳ್ಯದೆಲೆಯನ್ನು ಅದರಲ್ಲಿ ಹಾಕಿ ತೆಗೆದರೆ ತುಪ್ಪ ಸುವಾಸನೆಯುಕ್ತವಾಗುವುದು.
* ದೊಣ್ಣೆ ಮೆಣಸಿನಕಾಯಿಯನ್ನು ಮಧ್ಯದಲ್ಲಿ ಕತ್ತರಿಸಿ, ಒಳಭಾಗವನ್ನು ಚಾಕುವಿನಿಂದ ಹೆರೆದು ಕೊಡವಿದರೆ ಬೀಜಗಳೆಲ್ಲ ಉದುರುತ್ತವೆ. ತಿನ್ನುವಾಗ ಹಲ್ಲಿನ ಮಧ್ಯೆ ಬೀಜ ಸಿಕ್ಕಿಕೊಂಡು ತೊಂದರೆಯಾಗದು.
* ಬದನೆಕಾಯಿ ಹೆಚ್ಚಿ ಕೂಡಲೇ ಉಪ್ಪು ನೀರಿಗೆ ಹಾಕಿದರೆ ಹೋಳುಗಳು ಕಪ್ಪಾಗುವುದಿಲ್ಲ.
* ಈರುಳ್ಳಿ ತುದಿಗಳನ್ನು ಕತ್ತರಿಸಿ, ಎರಡು ಭಾಗ ಮಾಡಿ ಒಂದು ಗಂಟೆ ನೀರಿನಲ್ಲಿ ಹಾಕಿಟ್ಟರೆ ಸಿಪ್ಪೆ ಸುಲಿಯುವುದು ಸುಲಭ. ಕಣ್ಣೂ ಉರಿಯುವುದಿಲ್ಲ.
* ಅನ್ನ ಮಾಡುವಾಗ ಅದಕ್ಕೆ ಒಂದು ಚಮಚ ಎಣ್ಣೆ ಅಥವಾ ಸ್ವಲ್ಪ ನಿಂಬೆರಸ ಹಾಕಿದರೆ, ಅನ್ನ ಉದುರುದುರಾಗುತ್ತದೆ.
* ಒಗ್ಗರಣೆ ಹಾಕುವ ಮೊದಲು ಕಡಲೆಕಾಯಿ ಬೀಜವನ್ನು ಮೊದಲು ಹುರಿದು ತೆಗೆದಿಡಿ. ನಂತರ ಸಾಸಿವೆ, ಕರಿಬೇವು ಇತ್ಯಾದಿಗಳನ್ನು ಹುರಿದು ಕಡಲೆಕಾಯಿ ಬೀಜ ಸೇರಿಸಿದರೆ ಹಸಿ ವಾಸನೆ ಇಲ್ಲದೆ ರುಚಿಯಾಗಿರುವುದು.
* ಹಾಗಲಕಾಯಿಯನ್ನು ಚಿಕ್ಕದಾಗಿ ಹೆಚ್ಚಿ ಅರಿಷಿಣ, ಉಪ್ಪು ಬೆರೆಸಿದ ನೀರಿನಲ್ಲಿ ಹಾಕಿ. ಸ್ವಲ್ಪ ಹೊತ್ತಿನ ನಂತರ ನೀರನ್ನು ಹಿಂಡಿ ತೆಗೆದರೆ ಕಹಿ ಅಂಶ ಇರುವುದಿಲ್ಲ.
* ಚಟ್ನಿ, ಗೊಜ್ಜಿಗೆ ಬಳಸುವ ಹುಣಸೆ ಹಣ್ಣನ್ನು ಮೊದಲು ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಸಿಡಿ. ರುಬ್ಬಲು ಸುಲಭವಾಗುವುದು.
* ಕರಿಬೇವನ್ನು ಬೇಳೆಯ ಜತೆಯಲ್ಲೇ ಬೇಯಲು ಇಟ್ಟರೆ ಅದರ ಸಾರವೆಲ್ಲ ಸಾರಿಗೆ ಸೇರಿಕೊಳ್ಳುವುದಲ್ಲದೆ ಸುವಾಸನೆಯೂ ಹೆಚ್ಚುವುದು.



Click it and Unblock the Notifications
