Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಕಡ್ಲೆಬೇಳೆ ಸಬ್ಬಸಿಗೆ ಸೊಪ್ಪಿನ ಆಂಬೋಡೆ

ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೋಗುವಾಗ ಜನಶತಾಬ್ದಿ ಎಕ್ಸ್ ಪ್ರೆಸ್ ರೈಲಲ್ಲಿ ಚಹಾದ ಜೊತೆ ಈ ಕಡ್ಲೆಬೇಳೆ ಆಂಬೋಡೆಯನ್ನು ತಿಂದಿರಬಹುದು. ಮುಂಗಾರು ಮಳೆಗಾಲದಲ್ಲಿ ಹೊರಗಡೆ ಮಳೆ ಜಿಟಿಜಿಟಿ ಸುರಿಯುತ್ತಿದ್ದರೆ ಚಹಾ ಅಥವಾ ಕಾಫಿಯ ಜೋಡಿ ತಿನ್ನಲು ಬಲು ಪಸಂದಾಗಿರುತ್ತದೆ. ಮನೆಯ ಎಣ್ಣೆಯಲ್ಲಿ ಕರಿಯುವುದರಿಂದ ಗಂಟಲು ಕಟ್ಟಿಕೊಳ್ಳುವ ಅಪಾಯವೂ ಇರುವುದಿಲ್ಲ.
ಬೇಕಾಗುವ ಸಾಮಗ್ರಿಗಳು:
ಕಡ್ಲೆಬೇಳೆ - ಒಂದು ಬಟ್ಟಲು
ಹಸಿಮೆಣಸಿನಕಾಯಿ
ಒಂದು ಚೆಕ್ಕೆ, ಲವಂಗ
ಶುಂಠಿ - ಒಂದು ಇಂಚು
ಕೊತ್ತಂಬರಿ ಸೊಪ್ಪು
ಸಣ್ಣಗೆ ಹೆಚ್ಚಿದ ಈರುಳ್ಳಿ
ಹೆಚ್ಚಿದ ಸಬ್ಬಸ್ಸಿಗೆ ಸೊಪ್ಪು
ಉಪ್ಪು ರುಚಿಗೆ
ತಯಾರಿಸುವ ವಿಧಾನ:
ಮೊದಲಿಗೆ ಕಡ್ಲೆಬೇಳೆಯನ್ನು ಮೂರು ಗಂಟೆ ನೆನೆಸಿ. ನೆನೆದ ಕಡ್ಲೆಬೇಳೆಯಿಂದ ನೀರು ಸೋಸಿಕೊಂಡು ಅದನ್ನು ಹಸಿಮೆಣಸಿನಕಾಯಿ, ಚೆಕ್ಕೆ, ಲವಂಗ, ಶುಂಠಿ, ಉಪ್ಪು ಮತ್ತು ಕೊತ್ತಂಬರಿಸೊಪ್ಪು ಹಾಕಿ ಗಟ್ಟಿಯಾಗಿ ಮತ್ತು ತರಿತರಿಯಾಗಿ ರುಬ್ಬಿಕೊಳ್ಳಿ.
ಈ ರುಬ್ಬಿದ ಮಿಶ್ರಣಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಹೆಚ್ಚಿದ ಸಬ್ಬಸ್ಸಿಗೆ ಸೊಪ್ಪನ್ನು ಹಾಕಿ ಚೆನ್ನಾಗಿ ಬೆರೆಸಿ. ಕಲೆಸುವಾಗ ನೀರು ಹಾಕಬೇಡಿ. ಈರುಳ್ಳಿಯನ್ನು ಮತ್ತು ಸೊಪ್ಪಿನಲ್ಲಿ ನೀರಿನ ಅಂಶ ಇರುವುದರಿಂದ ಅದೇ ಸಾಕಾಗುತ್ತದೆ. ಎಲ್ಲವನ್ನೂ ಚೆನ್ನಾಗಿ ಹೊಂದಿಕೊಳ್ಳುವಂತೆ ಕಲೆಸಿ.
ಸಣ್ಣ ಸಣ್ಣ ಉಂಡೆ ಮಾಡಿಕೊಂಡು, ಅದನ್ನು ಅಂಗೈನಲ್ಲಿ ಸ್ವಲ್ಪ ದಪ್ಪವಾಗಿ ತಟ್ಟಿಕೊಂಡು ಕಾದಿರುವ ಎಣ್ಣೆಯಲ್ಲಿ ಒಂದೊಂದಾಗಿ ಹಾಕಿ ಕರಿಯಿರಿ. ಎಣ್ಣೆಗೆ ಹಾಕಿದ ತಕ್ಷಣ ಜಾಲರಿ ಹಾಕಿ ಅಲ್ಲಾಡಿಸಬೇಡಿ. ವಡೆಯ ಬಣ್ಣ ಸ್ವಲ್ಪ ಬದಲಾದ ನಂತರ ತಿರುವಿ ಹಾಕಿ, ಎರಡು ಬದಿ ಹೊಂಬಣ್ಣ ಬರುವವರೆಗೂ ಬೇಯಿಸಿ. ಎಣ್ಣೆಯಿಂದ ತೆಗೆದು ಪೇಪರ್ ಮೇಲೆ ಹಾಕಿ, ಎಣ್ಣೆ ಚೆನ್ನಾಗಿ ಹೀರಿಕೊಳ್ಳಲಿ.
ಇದೇ ರೀತಿ ಮಿಕ್ಕ ಎಲ್ಲಾ ವಡೆಗಳನ್ನು ತಯಾರಿಸಿ. ರುಚಿಯಾದ ಸಬ್ಬಸ್ಸಿಗೆ ಕಡ್ಲೆಬೇಳೆ ಆಂಬೋಡೆ ತಿನ್ನಲು ಸಿದ್ಧವಾಗುತ್ತದೆ. ಇದನ್ನು ಬಿಸಿಬಿಸಿಯಾಗಿದ್ದಾಗಲೇ ತಿಂದರೆ ಚೆನ್ನ. ಅದರ ಜೊತೆ ಚಟ್ನಿ/ಸಾಸ್/ಕೆಚಪ್ ಕೂಡ ಸರ್ವ್ ಮಾಡಬಹುದು. ಜೊತೆಗೆ ಏನು ಇಲ್ಲದಿದ್ದರೂ ಚೆನ್ನಾಗಿರುತ್ತೆ. ಮಳೆಗಾಲದಲ್ಲಿ ಜಬರ್ದಸ್ತ್ ತಿನಿಸು. [ಕೃಪೆ : ಅಡಿಗೆ ಸವಿರುಚಿ]



Click it and Unblock the Notifications
