Latest Updates
-
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು!
ಹುಳಿ ಹುಳಿ ಹುಣಸೆಹಣ್ಣಿನ ಭಾತ್

ಬೇಕಾಗುವ ಪದಾರ್ಥಗಳು
ಬಾಸುಮತಿ ಅಕ್ಕಿ 2 ಕಪ್
ಹುಣಸೆಹಣ್ಣು 200 ಗ್ರಾಂ
ಅಚ್ಚ ಖಾರದಪುಡಿ 4 ಚಮಚ
ಒಣ ಮೆಣಸಿನಕಾಯಿ 6
ಬೆಲ್ಲ ನಿಂಬೆಹಣ್ಣು ಗಾತ್ರದಷ್ಟು
ಕಡಲೆಬೀಜ 3 ಚಮಚ
ಕರಿಬೇವು, ಸಾಸಿವೆ, ಉಪ್ಪು, ಎಣ್ಣೆ
ತಯಾರಿಸುವ ವಿಧಾನ
ಇದನ್ನು ತಯಾರಿಸುವಾಗ ಪೂರ್ತಿ ಬಾಸುಮತಿ ಅಕ್ಕಿ ಬೇಕಿಲ್ಲದಿದ್ದರೆ, ದಿನಬಳಸುವ ಸೋನಾ ಮಸೂರಿ ಅಕ್ಕಿ ತೆಗೆದುಕೊಂಡು ಸಣ್ಣ ಹಿಡಿಯಷ್ಟು ಬಾಸುಮತಿ ಅಕ್ಕಿಯನ್ನು ಅದಕ್ಕೆ ಬೆರೆಸಬಹುದು.
ಮೊದಲಿಗೆ ಅಕ್ಕಿಯನ್ನು ಸುಮಾರು ಅರ್ಧಗಂಟೆ ಕಾಲ ನೀರಿನಲ್ಲಿ ನೆನೆಯಿಡಿ. ಹುಣಸೆಹಣ್ಣಿನಲ್ಲಿನ ಕಸಕಡ್ಡಿಗಳನ್ನು ತೆಗೆದು ಸ್ವಚ್ಛ ಮಾಡಿ ಅದನ್ನೂ ನೀರಿನಲ್ಲಿ ನೆನೆಯಿಡಿ.
ಒಂದು ಬಾಣಲೆಗೆ ನಾಲ್ಕು ಚಮಚ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಚಟಪಟ ಅನ್ನಿಸಿ, ಅದಕ್ಕೆ ಒಣಮೆಣಸಿನಕಾಯಿ ಮತ್ತು ಕಡಲೆ ಬೀಜ ಹಾಕಿ ಚೆನ್ನಾಗಿ ತಾಳಿಸಿರಿ. ಒಗ್ಗರಣೆ ಹಾಕುವ ಕಾರ್ಯಕ್ಕೆ ಅಕ್ಕಿ ನೆನೆಸಿಟ್ಟು ಅರ್ಧ ಗಂಟೆ ನಂತರವೇ ಕೈಹಾಕಿದರೆ ಒಳಿತು. ಅಷ್ಟೊತ್ತಿಗೆ ಅಕ್ಕಿಯೂ ನೆಂದಿರುತ್ತದೆ ಮತ್ತು ಹುಣಸೆಹಣ್ಣಿನ ರಸವನ್ನೂ ತೆಗೆದಿಟ್ಟುಕೊಂಡಿರಬಹುದು.
ಒಗ್ಗರಣೆಗೆ ತುಂಡು ಬೆಲ್ಲ, ಅಚ್ಚ ಖಾರದಪುಡಿ, ಹುಣಸೆರಸ ಎಲ್ಲ ಹಾಕಿ ಕಾಲು ಲೋಟ ನೀರು ಹಾಕಿ ಕುದಿಸಿರಿ. ಕುದಿಬಂದ ನಂತರ ಅದಕ್ಕೆ ನೆನೆಯಿಟ್ಟ ಅಕ್ಕಿಯನ್ನು ಹಾಕಿ ಬೇಯಿಸಿ. ಇವೆಲ್ಲವನ್ನು ಕುಕ್ಕಿರಿಗೆ ಸುರಿದುಕೊಂಡು ನಾಲ್ಕೈದು ವಿಷಲ್ ಹೊಡೆಸಿದ ನಂತರ ಇಳಿಸಿದರೆ ಉತ್ತಮ. ಬೇಕಿದ್ದರೆ ಅಕ್ಕಿಯನ್ನು ಬೇಯಿಸುವಾಗಲೇ ಉಪ್ಪು ಹಾಕಬಹುದು, ಇಲ್ಲದಿದ್ದರೆ ನಂತರವೂ ಬೇಕಷ್ಟು ಉಪ್ಪು ಹಚ್ಚಿಕೊಂಡು ತಿನ್ನಬಹುದು.



Click it and Unblock the Notifications