Latest Updates
-
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು!
ನಿಂಬೆ ಹಣ್ಣಿನ ಚಿತ್ರಾನ್ನದ ಗೊಜ್ಜು

ಬೇಕಾದ ಸಾಮಗ್ರಿಗಳು :
ಹಸಿರು ಮೆಣಸಿನಕಾಯಿ : 10-15
ಸಾಸಿವೆ, ಕಡಲೆ ಬೇಳೆ, ಉದ್ದಿನ ಬೇಳೆ, ಹಸಿ ಕರಿ ಬೇವು, ಕೊತ್ತಂಬರಿ ಸೊಪ್ಪು : ಒಗ್ಗರಣೆಗೆ ಬೇಕಾಗುವಷ್ಟು
ಪುಡಿ ಮಾಡಿದ ಹಿಂಗು : 4-5 ಚಿಟಿಕೆ
ಅರಿಷಿಣ : 4-5 ಚಿಟಿಕೆ
ಕಡಲೆ ಬೀಜ : ಎರಡು ಹಿಡಿ
ಗೋಡಂಬಿ : ಒಂದು ಹಿಡಿ
ಪುದೀನಾ ಸೊಪ್ಪು : ಒಂದು ಕಟ್ಟು
ಸಣ್ಣಗೆ ಹೆಚ್ಚಿದ ಹುರುಳಿ ಕಾಯಿ, ಕ್ಯಾರೆಟ್, ದೊಣ್ಣೆ ಮೆಣಸಿನ ಕಾಯಿ : ಎರಡು ಕಪ್
ಹಸಿ ಬಟಾಣಿ : ಒಂದು ಕಪ್
ಪುಡಿ ಉಪ್ಪು : ರುಚಿಗೆ ತಕ್ಕಷ್ಟು
ತೆಂಗಿನ ತುರಿ : ಅರ್ಧ ಹೋಳಿನದು
ಕಡಲೆ ಕಾಯಿ ಎಣ್ಣೆ : ಎರಡು ಕಪ್
ನಿಂಬೆ ಹಣ್ಣಿನ ರಸ : 4-5 ನಿಂಬೆ ಹಣ್ಣಿನದು
ಮಾಡುವ ವಿಧಾನ :
ಬಾಣಲಿಯಲ್ಲಿ ಅರ್ಧ ಕಪ್ ಎಣ್ಣೆ ಕಾಯಿಸಿ ಕಡಲೆ ಬೀಜ ಮತ್ತು ಗೋಡಂಬಿಯನ್ನು ಕರಿದುಕೊಂಡು ಪಕ್ಕಕ್ಕೆ ತೆಗೆದಿಡಿ. ಉಳಿದ ಎಣ್ಣೆಯನ್ನು ಬಾಣಲೆಗೆ ಹಾಕಿ ಕಾದ ಮೇಲೆ ಸಾಸಿವೆ ಹಾಕಬೇಕು. ಸಾಸಿವೆ ಸಿಡಿದ ಮೇಲೆ ಕರಿಬೇವು, ಉದ್ದಿನ ಬೇಳೆ, ಕಡಲೆ ಬೇಳೆ ಹಾಕಿ (ಉದ್ದಿನ ಬೇಳೆ) ಕೆಂಬಣ್ಣ ಬರುವವರೆಗೆ ಕರಿಯಬೇಕು.
ನಂತರ ಅರಿಷಿಣ, ಹಿಂಗು, ಹೆಚ್ಚಿಟ್ಟುಕೊಂಡ ತರಕಾರಿ, ಬಟಾಣಿ ಹಾಕಿ ತಿರುವಿ 4-5 ನಿಮಿಷ ತಟ್ಟೆ ಮುಚ್ಚಿ, ಮಂದ ಉರಿಯಲ್ಲಿ ಬೇಯಲು ಬಿಡಬೇಕು. 5 ನಿಮಿಷದ ನಂತರ ತರಕಾರಿ ಬೆಂದಿರುತ್ತದೆ. ಇದಕ್ಕೆ ಪುದೀನಾ ಸೊಪ್ಪು, ಉಪ್ಪು ಹಾಕಿ ಒಂದೆರಡು ನಿಮಿಷ ಬೇಯಿಸಿ, ತೆಂಗಿನ ತುರಿ, ಕೊತ್ತಂಬರಿ ಸೊಪ್ಪು ಬೆರೆಸಿ, ಒಲೆಯಿಂದ ಬಾಣಲೆಯನ್ನು ಇಳಿಸಿ, ತಟ್ಟೆ ಮುಚ್ಚಿ ಇಡಬೇಕು.
ತೆಂಗಿನ ತುರಿ ಹಾಕಿದ ನಂತರ ಮಿಶ್ರಣವನ್ನು ಬೇಯಿಸಬಾರದು. ಮಿಶ್ರಣ ಸ್ವಲ್ಪ ಆರಿದ ನಂತರ ನಿಂಬೆ ರಸ ಬೆರೆಸಬೇಕು. ಚಿತ್ರಾನ್ನದ ಗೊಜ್ಜು ಈಗ ತಯಾರು. ಚಿತ್ರಾನ್ನಕ್ಕಾಗಿ ಅನ್ನ ಮಾಡುವಾಗ ಸ್ವಲ್ಪ ಉಪ್ಪು ಹಾಕಿ, ಉದುರು ಉದುರಾಗಿ ಮಾಡಬೇಕು. ಅನ್ನಕ್ಕೆ ಗೊಜ್ಜನ್ನು ಬೆರೆಸಿ, ಕರಿದ ಕಡಲೆ ಬೀಜ, ಗೋಡಂಬಿಯನ್ನು ಸೇರಿಸಿ, ಒಂದು ಕಪ್ ಗಟ್ಟಿ ಮೊಸರಿನೊಡನೆ ತಿಂದರೆ ರುಚಿಯೋ ರುಚಿ.
(ಕಡಲೆ ಬೀಜ, ಗೋಡಂಬಿಯನ್ನು ಗೊಜ್ಜಿಗೇ ಸೇರಿಸಬಹುದು ಆದರೆ ಅವು ಮೆತ್ತಗಾಗುತ್ತವೆ).



Click it and Unblock the Notifications