Latest Updates
-
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ!
ನಿಂಬೆ ಹಣ್ಣಿನ ಚಿತ್ರಾನ್ನದ ಗೊಜ್ಜು

ಬೇಕಾದ ಸಾಮಗ್ರಿಗಳು :
ಹಸಿರು ಮೆಣಸಿನಕಾಯಿ : 10-15
ಸಾಸಿವೆ, ಕಡಲೆ ಬೇಳೆ, ಉದ್ದಿನ ಬೇಳೆ, ಹಸಿ ಕರಿ ಬೇವು, ಕೊತ್ತಂಬರಿ ಸೊಪ್ಪು : ಒಗ್ಗರಣೆಗೆ ಬೇಕಾಗುವಷ್ಟು
ಪುಡಿ ಮಾಡಿದ ಹಿಂಗು : 4-5 ಚಿಟಿಕೆ
ಅರಿಷಿಣ : 4-5 ಚಿಟಿಕೆ
ಕಡಲೆ ಬೀಜ : ಎರಡು ಹಿಡಿ
ಗೋಡಂಬಿ : ಒಂದು ಹಿಡಿ
ಪುದೀನಾ ಸೊಪ್ಪು : ಒಂದು ಕಟ್ಟು
ಸಣ್ಣಗೆ ಹೆಚ್ಚಿದ ಹುರುಳಿ ಕಾಯಿ, ಕ್ಯಾರೆಟ್, ದೊಣ್ಣೆ ಮೆಣಸಿನ ಕಾಯಿ : ಎರಡು ಕಪ್
ಹಸಿ ಬಟಾಣಿ : ಒಂದು ಕಪ್
ಪುಡಿ ಉಪ್ಪು : ರುಚಿಗೆ ತಕ್ಕಷ್ಟು
ತೆಂಗಿನ ತುರಿ : ಅರ್ಧ ಹೋಳಿನದು
ಕಡಲೆ ಕಾಯಿ ಎಣ್ಣೆ : ಎರಡು ಕಪ್
ನಿಂಬೆ ಹಣ್ಣಿನ ರಸ : 4-5 ನಿಂಬೆ ಹಣ್ಣಿನದು
ಮಾಡುವ ವಿಧಾನ :
ಬಾಣಲಿಯಲ್ಲಿ ಅರ್ಧ ಕಪ್ ಎಣ್ಣೆ ಕಾಯಿಸಿ ಕಡಲೆ ಬೀಜ ಮತ್ತು ಗೋಡಂಬಿಯನ್ನು ಕರಿದುಕೊಂಡು ಪಕ್ಕಕ್ಕೆ ತೆಗೆದಿಡಿ. ಉಳಿದ ಎಣ್ಣೆಯನ್ನು ಬಾಣಲೆಗೆ ಹಾಕಿ ಕಾದ ಮೇಲೆ ಸಾಸಿವೆ ಹಾಕಬೇಕು. ಸಾಸಿವೆ ಸಿಡಿದ ಮೇಲೆ ಕರಿಬೇವು, ಉದ್ದಿನ ಬೇಳೆ, ಕಡಲೆ ಬೇಳೆ ಹಾಕಿ (ಉದ್ದಿನ ಬೇಳೆ) ಕೆಂಬಣ್ಣ ಬರುವವರೆಗೆ ಕರಿಯಬೇಕು.
ನಂತರ ಅರಿಷಿಣ, ಹಿಂಗು, ಹೆಚ್ಚಿಟ್ಟುಕೊಂಡ ತರಕಾರಿ, ಬಟಾಣಿ ಹಾಕಿ ತಿರುವಿ 4-5 ನಿಮಿಷ ತಟ್ಟೆ ಮುಚ್ಚಿ, ಮಂದ ಉರಿಯಲ್ಲಿ ಬೇಯಲು ಬಿಡಬೇಕು. 5 ನಿಮಿಷದ ನಂತರ ತರಕಾರಿ ಬೆಂದಿರುತ್ತದೆ. ಇದಕ್ಕೆ ಪುದೀನಾ ಸೊಪ್ಪು, ಉಪ್ಪು ಹಾಕಿ ಒಂದೆರಡು ನಿಮಿಷ ಬೇಯಿಸಿ, ತೆಂಗಿನ ತುರಿ, ಕೊತ್ತಂಬರಿ ಸೊಪ್ಪು ಬೆರೆಸಿ, ಒಲೆಯಿಂದ ಬಾಣಲೆಯನ್ನು ಇಳಿಸಿ, ತಟ್ಟೆ ಮುಚ್ಚಿ ಇಡಬೇಕು.
ತೆಂಗಿನ ತುರಿ ಹಾಕಿದ ನಂತರ ಮಿಶ್ರಣವನ್ನು ಬೇಯಿಸಬಾರದು. ಮಿಶ್ರಣ ಸ್ವಲ್ಪ ಆರಿದ ನಂತರ ನಿಂಬೆ ರಸ ಬೆರೆಸಬೇಕು. ಚಿತ್ರಾನ್ನದ ಗೊಜ್ಜು ಈಗ ತಯಾರು. ಚಿತ್ರಾನ್ನಕ್ಕಾಗಿ ಅನ್ನ ಮಾಡುವಾಗ ಸ್ವಲ್ಪ ಉಪ್ಪು ಹಾಕಿ, ಉದುರು ಉದುರಾಗಿ ಮಾಡಬೇಕು. ಅನ್ನಕ್ಕೆ ಗೊಜ್ಜನ್ನು ಬೆರೆಸಿ, ಕರಿದ ಕಡಲೆ ಬೀಜ, ಗೋಡಂಬಿಯನ್ನು ಸೇರಿಸಿ, ಒಂದು ಕಪ್ ಗಟ್ಟಿ ಮೊಸರಿನೊಡನೆ ತಿಂದರೆ ರುಚಿಯೋ ರುಚಿ.
(ಕಡಲೆ ಬೀಜ, ಗೋಡಂಬಿಯನ್ನು ಗೊಜ್ಜಿಗೇ ಸೇರಿಸಬಹುದು ಆದರೆ ಅವು ಮೆತ್ತಗಾಗುತ್ತವೆ).



Click it and Unblock the Notifications