Latest Updates
-
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ಇಂದು ರಾತ್ರಿ ದೆಹಲಿ-ಎನ್ಸಿಆರ್ನಲ್ಲಿ ಭೀಕರ ಮಳೆ: ಹೊರಗೆ ಹೋಗುವ ಪ್ಲಾನ್ ಇದೆಯಾ? ಎಚ್ಚರ! -
ಮಳೆಗಾಲದಲ್ಲಿ ಮನೆ ಹಾಳಾಗದಂತೆ ತಡೆಯುವುದು ಹೇಗೆ? ತೇವಾಂಶ ಮತ್ತು ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
'ಹೆಲ್ದಿ' ಆಹಾರದ ಹೆಸರಿನಲ್ಲಿ ಮೋಸ ಹೋಗ್ತಿದ್ದೀರಾ? FSSAI ಹೊಸ ನಿಯಮದ ಅಸಲಿಯತ್ತು ಇಲ್ಲಿದೆ! -
UGC NET 2026 ಅಡ್ಮಿಟ್ ಕಾರ್ಡ್ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ! -
ಬೆಂಗಳೂರು, ಕರಾವಳಿಯಲ್ಲಿ ಭಾರಿ ಮಳೆ: ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ರಾಜ ಪರ್ಬ 2026: ಮಹಿಳೆಯರಿಗೆ ವಿಶ್ರಾಂತಿ ನೀಡುವ ಈ ಹಬ್ಬದ ಆಚರಣೆ ಮತ್ತು ವಿಶೇಷತೆಗಳೇನು? -
ದೆಹಲಿ ಮಾಲಿನ್ಯದ ಆತಂಕ: ನಿಮ್ಮ ಮನೆಯನ್ನು ವಿಷಕಾರಿ ಗಾಳಿಯಿಂದ ರಕ್ಷಿಸಲು ಈ ಸರಳ ಕ್ರಮಗಳನ್ನು ಪಾಲಿಸಿ -
ಖರ್ಜೂರದಲ್ಲಿ ಹುಳುಗಳ ಆತಂಕ: ಆನ್ಲೈನ್ನಲ್ಲಿ ಆರ್ಡರ್ ಮಾಡುವ ಮುನ್ನ ಈ ತಪ್ಪು ಮಾಡಬೇಡಿ!
ನಿಂಬೆ ಹಣ್ಣಿನ ಚಿತ್ರಾನ್ನದ ಗೊಜ್ಜು

ಬೇಕಾದ ಸಾಮಗ್ರಿಗಳು :
ಹಸಿರು ಮೆಣಸಿನಕಾಯಿ : 10-15
ಸಾಸಿವೆ, ಕಡಲೆ ಬೇಳೆ, ಉದ್ದಿನ ಬೇಳೆ, ಹಸಿ ಕರಿ ಬೇವು, ಕೊತ್ತಂಬರಿ ಸೊಪ್ಪು : ಒಗ್ಗರಣೆಗೆ ಬೇಕಾಗುವಷ್ಟು
ಪುಡಿ ಮಾಡಿದ ಹಿಂಗು : 4-5 ಚಿಟಿಕೆ
ಅರಿಷಿಣ : 4-5 ಚಿಟಿಕೆ
ಕಡಲೆ ಬೀಜ : ಎರಡು ಹಿಡಿ
ಗೋಡಂಬಿ : ಒಂದು ಹಿಡಿ
ಪುದೀನಾ ಸೊಪ್ಪು : ಒಂದು ಕಟ್ಟು
ಸಣ್ಣಗೆ ಹೆಚ್ಚಿದ ಹುರುಳಿ ಕಾಯಿ, ಕ್ಯಾರೆಟ್, ದೊಣ್ಣೆ ಮೆಣಸಿನ ಕಾಯಿ : ಎರಡು ಕಪ್
ಹಸಿ ಬಟಾಣಿ : ಒಂದು ಕಪ್
ಪುಡಿ ಉಪ್ಪು : ರುಚಿಗೆ ತಕ್ಕಷ್ಟು
ತೆಂಗಿನ ತುರಿ : ಅರ್ಧ ಹೋಳಿನದು
ಕಡಲೆ ಕಾಯಿ ಎಣ್ಣೆ : ಎರಡು ಕಪ್
ನಿಂಬೆ ಹಣ್ಣಿನ ರಸ : 4-5 ನಿಂಬೆ ಹಣ್ಣಿನದು
ಮಾಡುವ ವಿಧಾನ :
ಬಾಣಲಿಯಲ್ಲಿ ಅರ್ಧ ಕಪ್ ಎಣ್ಣೆ ಕಾಯಿಸಿ ಕಡಲೆ ಬೀಜ ಮತ್ತು ಗೋಡಂಬಿಯನ್ನು ಕರಿದುಕೊಂಡು ಪಕ್ಕಕ್ಕೆ ತೆಗೆದಿಡಿ. ಉಳಿದ ಎಣ್ಣೆಯನ್ನು ಬಾಣಲೆಗೆ ಹಾಕಿ ಕಾದ ಮೇಲೆ ಸಾಸಿವೆ ಹಾಕಬೇಕು. ಸಾಸಿವೆ ಸಿಡಿದ ಮೇಲೆ ಕರಿಬೇವು, ಉದ್ದಿನ ಬೇಳೆ, ಕಡಲೆ ಬೇಳೆ ಹಾಕಿ (ಉದ್ದಿನ ಬೇಳೆ) ಕೆಂಬಣ್ಣ ಬರುವವರೆಗೆ ಕರಿಯಬೇಕು.
ನಂತರ ಅರಿಷಿಣ, ಹಿಂಗು, ಹೆಚ್ಚಿಟ್ಟುಕೊಂಡ ತರಕಾರಿ, ಬಟಾಣಿ ಹಾಕಿ ತಿರುವಿ 4-5 ನಿಮಿಷ ತಟ್ಟೆ ಮುಚ್ಚಿ, ಮಂದ ಉರಿಯಲ್ಲಿ ಬೇಯಲು ಬಿಡಬೇಕು. 5 ನಿಮಿಷದ ನಂತರ ತರಕಾರಿ ಬೆಂದಿರುತ್ತದೆ. ಇದಕ್ಕೆ ಪುದೀನಾ ಸೊಪ್ಪು, ಉಪ್ಪು ಹಾಕಿ ಒಂದೆರಡು ನಿಮಿಷ ಬೇಯಿಸಿ, ತೆಂಗಿನ ತುರಿ, ಕೊತ್ತಂಬರಿ ಸೊಪ್ಪು ಬೆರೆಸಿ, ಒಲೆಯಿಂದ ಬಾಣಲೆಯನ್ನು ಇಳಿಸಿ, ತಟ್ಟೆ ಮುಚ್ಚಿ ಇಡಬೇಕು.
ತೆಂಗಿನ ತುರಿ ಹಾಕಿದ ನಂತರ ಮಿಶ್ರಣವನ್ನು ಬೇಯಿಸಬಾರದು. ಮಿಶ್ರಣ ಸ್ವಲ್ಪ ಆರಿದ ನಂತರ ನಿಂಬೆ ರಸ ಬೆರೆಸಬೇಕು. ಚಿತ್ರಾನ್ನದ ಗೊಜ್ಜು ಈಗ ತಯಾರು. ಚಿತ್ರಾನ್ನಕ್ಕಾಗಿ ಅನ್ನ ಮಾಡುವಾಗ ಸ್ವಲ್ಪ ಉಪ್ಪು ಹಾಕಿ, ಉದುರು ಉದುರಾಗಿ ಮಾಡಬೇಕು. ಅನ್ನಕ್ಕೆ ಗೊಜ್ಜನ್ನು ಬೆರೆಸಿ, ಕರಿದ ಕಡಲೆ ಬೀಜ, ಗೋಡಂಬಿಯನ್ನು ಸೇರಿಸಿ, ಒಂದು ಕಪ್ ಗಟ್ಟಿ ಮೊಸರಿನೊಡನೆ ತಿಂದರೆ ರುಚಿಯೋ ರುಚಿ.
(ಕಡಲೆ ಬೀಜ, ಗೋಡಂಬಿಯನ್ನು ಗೊಜ್ಜಿಗೇ ಸೇರಿಸಬಹುದು ಆದರೆ ಅವು ಮೆತ್ತಗಾಗುತ್ತವೆ).



Click it and Unblock the Notifications