Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ನಿಂಬೆ ಹಣ್ಣಿನ ಚಿತ್ರಾನ್ನದ ಗೊಜ್ಜು

ಬೇಕಾದ ಸಾಮಗ್ರಿಗಳು :
ಹಸಿರು ಮೆಣಸಿನಕಾಯಿ : 10-15
ಸಾಸಿವೆ, ಕಡಲೆ ಬೇಳೆ, ಉದ್ದಿನ ಬೇಳೆ, ಹಸಿ ಕರಿ ಬೇವು, ಕೊತ್ತಂಬರಿ ಸೊಪ್ಪು : ಒಗ್ಗರಣೆಗೆ ಬೇಕಾಗುವಷ್ಟು
ಪುಡಿ ಮಾಡಿದ ಹಿಂಗು : 4-5 ಚಿಟಿಕೆ
ಅರಿಷಿಣ : 4-5 ಚಿಟಿಕೆ
ಕಡಲೆ ಬೀಜ : ಎರಡು ಹಿಡಿ
ಗೋಡಂಬಿ : ಒಂದು ಹಿಡಿ
ಪುದೀನಾ ಸೊಪ್ಪು : ಒಂದು ಕಟ್ಟು
ಸಣ್ಣಗೆ ಹೆಚ್ಚಿದ ಹುರುಳಿ ಕಾಯಿ, ಕ್ಯಾರೆಟ್, ದೊಣ್ಣೆ ಮೆಣಸಿನ ಕಾಯಿ : ಎರಡು ಕಪ್
ಹಸಿ ಬಟಾಣಿ : ಒಂದು ಕಪ್
ಪುಡಿ ಉಪ್ಪು : ರುಚಿಗೆ ತಕ್ಕಷ್ಟು
ತೆಂಗಿನ ತುರಿ : ಅರ್ಧ ಹೋಳಿನದು
ಕಡಲೆ ಕಾಯಿ ಎಣ್ಣೆ : ಎರಡು ಕಪ್
ನಿಂಬೆ ಹಣ್ಣಿನ ರಸ : 4-5 ನಿಂಬೆ ಹಣ್ಣಿನದು
ಮಾಡುವ ವಿಧಾನ :
ಬಾಣಲಿಯಲ್ಲಿ ಅರ್ಧ ಕಪ್ ಎಣ್ಣೆ ಕಾಯಿಸಿ ಕಡಲೆ ಬೀಜ ಮತ್ತು ಗೋಡಂಬಿಯನ್ನು ಕರಿದುಕೊಂಡು ಪಕ್ಕಕ್ಕೆ ತೆಗೆದಿಡಿ. ಉಳಿದ ಎಣ್ಣೆಯನ್ನು ಬಾಣಲೆಗೆ ಹಾಕಿ ಕಾದ ಮೇಲೆ ಸಾಸಿವೆ ಹಾಕಬೇಕು. ಸಾಸಿವೆ ಸಿಡಿದ ಮೇಲೆ ಕರಿಬೇವು, ಉದ್ದಿನ ಬೇಳೆ, ಕಡಲೆ ಬೇಳೆ ಹಾಕಿ (ಉದ್ದಿನ ಬೇಳೆ) ಕೆಂಬಣ್ಣ ಬರುವವರೆಗೆ ಕರಿಯಬೇಕು.
ನಂತರ ಅರಿಷಿಣ, ಹಿಂಗು, ಹೆಚ್ಚಿಟ್ಟುಕೊಂಡ ತರಕಾರಿ, ಬಟಾಣಿ ಹಾಕಿ ತಿರುವಿ 4-5 ನಿಮಿಷ ತಟ್ಟೆ ಮುಚ್ಚಿ, ಮಂದ ಉರಿಯಲ್ಲಿ ಬೇಯಲು ಬಿಡಬೇಕು. 5 ನಿಮಿಷದ ನಂತರ ತರಕಾರಿ ಬೆಂದಿರುತ್ತದೆ. ಇದಕ್ಕೆ ಪುದೀನಾ ಸೊಪ್ಪು, ಉಪ್ಪು ಹಾಕಿ ಒಂದೆರಡು ನಿಮಿಷ ಬೇಯಿಸಿ, ತೆಂಗಿನ ತುರಿ, ಕೊತ್ತಂಬರಿ ಸೊಪ್ಪು ಬೆರೆಸಿ, ಒಲೆಯಿಂದ ಬಾಣಲೆಯನ್ನು ಇಳಿಸಿ, ತಟ್ಟೆ ಮುಚ್ಚಿ ಇಡಬೇಕು.
ತೆಂಗಿನ ತುರಿ ಹಾಕಿದ ನಂತರ ಮಿಶ್ರಣವನ್ನು ಬೇಯಿಸಬಾರದು. ಮಿಶ್ರಣ ಸ್ವಲ್ಪ ಆರಿದ ನಂತರ ನಿಂಬೆ ರಸ ಬೆರೆಸಬೇಕು. ಚಿತ್ರಾನ್ನದ ಗೊಜ್ಜು ಈಗ ತಯಾರು. ಚಿತ್ರಾನ್ನಕ್ಕಾಗಿ ಅನ್ನ ಮಾಡುವಾಗ ಸ್ವಲ್ಪ ಉಪ್ಪು ಹಾಕಿ, ಉದುರು ಉದುರಾಗಿ ಮಾಡಬೇಕು. ಅನ್ನಕ್ಕೆ ಗೊಜ್ಜನ್ನು ಬೆರೆಸಿ, ಕರಿದ ಕಡಲೆ ಬೀಜ, ಗೋಡಂಬಿಯನ್ನು ಸೇರಿಸಿ, ಒಂದು ಕಪ್ ಗಟ್ಟಿ ಮೊಸರಿನೊಡನೆ ತಿಂದರೆ ರುಚಿಯೋ ರುಚಿ.
(ಕಡಲೆ ಬೀಜ, ಗೋಡಂಬಿಯನ್ನು ಗೊಜ್ಜಿಗೇ ಸೇರಿಸಬಹುದು ಆದರೆ ಅವು ಮೆತ್ತಗಾಗುತ್ತವೆ).



Click it and Unblock the Notifications