Latest Updates
-
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು!
ಗುಟ್ಟೊಂದು ಹೇಳುವೆ.. ಕಿವಿಕೊಟ್ಟು ಆಲಿಸಿ..
ಈ ಬಾರಿ ನೀವು ಪಲಾವ್ ಮಾಡಬೇಕಾದರೆ ಹೀಗೆ ಮಾಡಿ. ಪಲಾವ್ಗೆ ಉಪಯೋಗಿಸುವ ಎಣ್ಣೆಯನ್ನು ಹಾಗೇ ಬಳಸದೆ ಅದನ್ನು ಸ್ವಲ್ಪ ಬಿಸಿ ಮಾಡಿ ಅದಕ್ಕೆ ಒಂದು ಚಮಚ ಸಕ್ಕರೆಯನ್ನು ಬೆರೆಸಿ. ಹೀಗೆ ಮಾಡುವುದರಿಂದ, ಪಲಾವ್ಗೆ ಒಳ್ಳೆಯ ಬಣ್ಣ ಹಾಗೂ ರುಚಿ ದಕ್ಕುತ್ತದೆ.
****
ಉಣ್ಣೆ ವಸ್ತ್ರಗಳ ಮೇಲೆ ಎಣ್ಣೆ ಕಲೆಯಾಗಿದ್ದರೆ ಸ್ವಲ್ಪ ಮೊಸರನ್ನು ಆ ಜಾಗಕ್ಕೆ ಹಾಕಿ, ಒಂದು ಕಾಲು ಗಂಟೆ ಬಿಟ್ಟು ಒಗೆದರೆ ಕಲೆಗಳು ಮಾಯವಾಗುತ್ತವೆ.
****
ಜೇನು ತುಪ್ಪವನ್ನು ಖರೀದಿಸುವಾಗ ಅದರ ಪರಿಶುದ್ಧತೆಯನ್ನು ಹೀಗೆ ಪರೀಕ್ಷಿಸಿ :
ಒಂದು ಗ್ಲಾಸಿನಲ್ಲಿ ನೀರು ತೆಗೆದುಕೊಂಡು ಅದರಲಿ ಎರಡು ಹನಿ ಜೇನನ್ನು ಹಾಕಿ. ಆ ತಕ್ಷಣ ನೀರಿನಲ್ಲಿ ಬೆರೆತು ಅದರ ಬಣ್ಣ ಬದಲಾದರೆ ಅದು ಪರಿಶುದ್ಧವಾದ ಜೇನುತುಪ್ಪವಲ್ಲ ಎಂದರ್ಥ. ಆ ಹನಿ ಗ್ಲಾಸಿನ ತಳಭಾಗಕ್ಕೆ ಹೋಗಿ ಕುಳಿತರೆ ಅದು ಶುದ್ಧವಾದ ಜೇನು ತುಪ್ಪವೆಂದು ತಿಳಿಯಬೇಕು.
****
ಕನ್ನಡಿ ಮೇಲಿನ ಪೈಂಟ್ ಕಲೆಗಳು ಹೋಗಬೇಕೆಂದರೆ ಬಿಸಿ ಮಾಡಿದ ವಿನೆಗರ್ನಲ್ಲಿ ಅದ್ದಿದ ಹತ್ತಿಯಲ್ಲಿ ಕನ್ನಡಿಯನ್ನು ಒರೆಸಿ. ಕನ್ನಡಿ ಫಳಫಳಾಂತ ಹೊಳೆಯುತ್ತದೆ.
*****
ಫ್ರಿಜ್ನಿಂದ ಆಹಾರ ಪದಾರ್ಥಗಳ ವಾಸನೆ ಬರುತ್ತಿದೆಯೇ? ಹೀಗೆ ಮಾಡಿ ನೋಡಿ! ಒಂದು ಸಣ್ಣ ಬಟ್ಟಲಿನಲ್ಲಿ ಒಂದು ಚಮಚ ಅಡುಗೆ ಸೋಡಾ ಹಾಕಿ ಫ್ರಿಜ್ನಲ್ಲಿಟ್ಟು ನೋಡಿ.
(ದಟ್ಸ್ಕನ್ನಡ ಪಾಕಶಾಲೆ)
(ಇಂಥ ಉಪಯುಕ್ತ ಸಲಹೆಗಳನ್ನು ದಟ್ಸ್ ಕನ್ನಡ ಸ್ವಾಗತಿಸುತ್ತದೆ. ಕಳುಹಿಸಬೇಕಾದ ವಿಳಾಸ : [email protected] )



Click it and Unblock the Notifications