Latest Updates
-
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ!
"ಸುನಂದಿನಿ"- ಸ್ಪೆಷಲ್ ಎಳನೀರಿನ ಶರಬತ್ತು
"ಸುನಂದಿನಿ" ಶರಬತ್ತು ಟೇಸ್ಟ್ ಮಾಡಿದ್ದೀರಾ? ತಾಜಾ ಎಳನೀರಿಗೆ ಕೆಲವೊಂದು ಕೆಲವೊಂದು ಹರ್ಬ್ಸ್ ಹಾಕಿ ತಯಾರಿಸುವ ಈ ಪಾನೀಯವನ್ನು ಬಾಯಾರಿಕೆಯಾದಾಗಕುಡಿದರೆ ಅಮೃತದ ರುಚಿ ನಮಗೆ ಗೊತ್ತಿಲ್ಲದಿದ್ದರೂ, ಅಮೃತ ಅಂದರೆ ಬಹುಶಃ ಇಷ್ಟು ರುಚಿಯಾಗಿರಬಹುದು ಅನ್ನುವಷ್ಟು ರುಚಿಕರವಾಗಿದೆ.
ಯಾವ ತಂಪು ಪಾನೀಯಗಳೂ ಈ ಪಾನೀಯದ ರುಚಿಗೆ ಸರಿಸಾಟಿಯಲ್ಲ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಾಗ್ರಿಗಳು
ಎಳನೀರು 2
ಕೊತ್ತಂಬರಿ ಸೊಪ್ಪು 1 ಚಮಚ
ಪುದೀನಾ ಎಲೆ 2 ಚಮಚ
ನಿಂಬೆ ಗಿಡದ ಎಲೆ 1-2(ಕತ್ತರಿಸಿದ್ದು)
ಹಸಿ ಮೆಣಸಿನಕಾಯಿ 2
ನಿಂಬೆರಸ 2 ಚಮಚ
ಜೀರಿಗೆ 1 ಚಮಚ
ಕೊತ್ತಂಬರಿ ಬೀಜ ಅರ್ಧ ಚಮಚ
ಕರಿ ಮೆಣಸು1/4 ಚಮಚ
ಚಿಟಿಕೆಯಷ್ಟು ಇಂಗು
ಬೆಲ್ಲದ ತುರಿ(ರುಚಿಗೆ ತಕ್ಕ)
ಕಲ್ಲುಪ್ಪು(ರುಚಿಗೆ ತಕ್ಕ)
ತಯಾರಿಸುವ ವಿಧಾನ:
* ಕರಿ ಮೆಣಸು , ಕೊತ್ತಂಬರಿ ಬೀಜ, ಇಂಗು ಇವುಗಳನ್ನು ಹಾಕಿ ರೋಸ್ಟ್ ಮಾಡಿ, ಪುಡಿ ಮಾಡಿ.
* ನಂತರ ಎಳನೀರು ಮತ್ತು ನಿಂಬೆ ರಸ ಬಿಟ್ಟು ಉಳಿದ ಸಾಮಾಗ್ರಿಗಳನ್ನು ಹಾಕಿ ಪೇಸ್ಟ್ ಮಾಡಿ.
* ಈಗ ಎಳನೀರನ್ನು ಪಾತ್ರೆಗೆ ಹಾಕಿ, ಅದಕ್ಕೆ ಮಸಾಲೆ ಪುಡಿ ಮತ್ತು ರುಬ್ಬಿದ ಪೇಸ್ಟ್ ಹಾಕಿ ನಿಂಬೆ ಹಣ್ಣಿನ ರಸ ಹಿಂಡಿ ಮಿಕ್ಸ್ ಮಾಡಿ, ಮಣ್ಣಿನ ಪಾತ್ರೆಯಲ್ಲಿ 2-3 ಗಂಟೆಗಳ ಕಾಲ ಇಟ್ಟರೆ ಕುಡಿಯಲು ಆಹ್ಲಾದಕರ "ಸುನಂದಿನಿ" ರೆಡಿ.



Click it and Unblock the Notifications