Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
ಈರಲಗೆರೆ ಬದನೆಕಾಯಿ ಗೊಜ್ಜು

ತಾವು ಮಾಡಿದ ಜೀರಿಗೆ ಸಾರಿಗೆ ಬಳಸಿದ ಪದಾರ್ಥಗಳ ಜತೆಗೆ ಇನ್ನು ಕೆಲವನ್ನು ಸೇರಿಸಿ ಮಾಡಬಹುದಾದ ಅಡುಗೆಗೆ ನಾವು ರಸವಾಂಗಿ ಎಂದು ಕರೆಯುತ್ತೇವೆ. ನೀವು ಇದನ್ನು ಪ್ರಯತ್ನಿಸಿ.
ಬೇಕಾದ ಸಾಮಗ್ರಿಗಳಲ್ಲಿ ತಾವು ತಿಳಿಸಿದ ಹಾಗೆ, ಅರ್ಧ ಚಮಚ ಉದ್ದಿನಬೇಳೆ | ಅರ್ಧ ಚಮಚ ಕೊತ್ತಂಬರಿ ಬೀಜ | ಒಂದು ಚಮಚ ಜೀರಿಗೆ | ಐದಾರು ಒಣಮೆಣಸಿನಕಾಯಿ | ಒಂದು ಚಮಚ ಸನ್ ಗೋಲ್ಡ್ ಅಡುಗೆ ಎಣ್ಣೆ | ಇವಿಷ್ಟಲ್ಲದೆ ಒಂದು ಚೂರು ಚಕ್ಕೆ ಇರಲಿ.
ಇವಿಷ್ಟನ್ನೂ ತವದಲ್ಲಿ ಘಂ ಎಂದು ಪರಿಮಳ ಬರುವವರೆಗೆ ಹುರಿದುಕೊಂಡು ಸ್ವಲ್ಪ ಹಸಿ ತೆಂಗಿನತುರಿ ಸ್ವಲ್ಪ ಒಣ ಕೊಬ್ಬರಿ ತುರಿ ಬೆರೆಸಿ ಮಿಕ್ಸಿಗೆ ಹಾಕಿ, ಚೂರು ನೀರು ಬೆರೆಸಿ ನುಣ್ಣಗೆ ರುಬ್ಬಿಟ್ಟುಕೊಳ್ಳಿರಿ.
ನಮ್ಮ ಕಡೆ ಸಿಗುವ ಈರಲಗೆರೆ ಬದನೆಕಾಯಿ (ಮೈಸೂರು ಬದನೆಕಾಯಿ) ಮತ್ತು ಚವಳಿಕಾಯಿ(ಗೋರಿ ಕಾಯಿ) ಯನ್ನು ಸಣ್ಣಗೆ ಹೆಚ್ಚಿ ಚೂರು ಒಗ್ಗರಣೆಯಲ್ಲಿ ಹೆಚ್ಚು ಹೊತ್ತು ಬೇಯಿಸಬೇಕು. ನೀರು ಬೆರೆಸದೆ ಎಣ್ಣೆ ಒಗ್ಗರಣೆಯಲ್ಲಿ ಮಾತ್ರ ಬೇಯುವಂತೆ ಮಾಡಿರಿ. ಚೆನ್ನಾಗಿ ಬೆಂದ ನಂತ ರುಬ್ಬಿಕೊಂಡ ಪದಾರ್ಥವನ್ನು ಹಾಕಿ ಚೆನ್ನಾಗಿ ಬೇಯಿಸಿರಿ. ಇದಕ್ಕೆ ಉಪ್ಪು, ಹುಣಿಸೆಹಣ್ಣು ಅಥವಾ ಟೊಮೆಟೋ ಮತ್ತು ಸಕ್ಕರೆ ಅಥವಾ ಬೆಲ್ಲ ಹಾಕಿ.
ಇದನ್ನು ಚಪಾತಿ ಜತೆಗೆ ತಿನ್ನುವುದಕ್ಕೆ ಅಥವಾ ಅನ್ನಕ್ಕೆ ಕಲಸುವುದಕ್ಕೆ ಬಳಸಬಹುದು. ನಾನು ಹೇಳಿದ ಎರಡು ತರಕಾರಿ ಗಳು ಬಿಟ್ಟು ಬೇರೇ ಯಾವ ತರಕಾರಿಗಳೂ ರಸವಾಂಗಿಗೆ ಸೂಟ್ ಆಗುವುದಿಲ್ಲ. ಹ್ಯಾಪಿ ಕುಕ್ಕಿಂಗ್ ಅಂಡ್ ಪ್ಯಾಪಿ ಡೈನಿಂಗ್!



Click it and Unblock the Notifications