Latest Updates
-
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ!
ಈರಲಗೆರೆ ಬದನೆಕಾಯಿ ಗೊಜ್ಜು

ತಾವು ಮಾಡಿದ ಜೀರಿಗೆ ಸಾರಿಗೆ ಬಳಸಿದ ಪದಾರ್ಥಗಳ ಜತೆಗೆ ಇನ್ನು ಕೆಲವನ್ನು ಸೇರಿಸಿ ಮಾಡಬಹುದಾದ ಅಡುಗೆಗೆ ನಾವು ರಸವಾಂಗಿ ಎಂದು ಕರೆಯುತ್ತೇವೆ. ನೀವು ಇದನ್ನು ಪ್ರಯತ್ನಿಸಿ.
ಬೇಕಾದ ಸಾಮಗ್ರಿಗಳಲ್ಲಿ ತಾವು ತಿಳಿಸಿದ ಹಾಗೆ, ಅರ್ಧ ಚಮಚ ಉದ್ದಿನಬೇಳೆ | ಅರ್ಧ ಚಮಚ ಕೊತ್ತಂಬರಿ ಬೀಜ | ಒಂದು ಚಮಚ ಜೀರಿಗೆ | ಐದಾರು ಒಣಮೆಣಸಿನಕಾಯಿ | ಒಂದು ಚಮಚ ಸನ್ ಗೋಲ್ಡ್ ಅಡುಗೆ ಎಣ್ಣೆ | ಇವಿಷ್ಟಲ್ಲದೆ ಒಂದು ಚೂರು ಚಕ್ಕೆ ಇರಲಿ.
ಇವಿಷ್ಟನ್ನೂ ತವದಲ್ಲಿ ಘಂ ಎಂದು ಪರಿಮಳ ಬರುವವರೆಗೆ ಹುರಿದುಕೊಂಡು ಸ್ವಲ್ಪ ಹಸಿ ತೆಂಗಿನತುರಿ ಸ್ವಲ್ಪ ಒಣ ಕೊಬ್ಬರಿ ತುರಿ ಬೆರೆಸಿ ಮಿಕ್ಸಿಗೆ ಹಾಕಿ, ಚೂರು ನೀರು ಬೆರೆಸಿ ನುಣ್ಣಗೆ ರುಬ್ಬಿಟ್ಟುಕೊಳ್ಳಿರಿ.
ನಮ್ಮ ಕಡೆ ಸಿಗುವ ಈರಲಗೆರೆ ಬದನೆಕಾಯಿ (ಮೈಸೂರು ಬದನೆಕಾಯಿ) ಮತ್ತು ಚವಳಿಕಾಯಿ(ಗೋರಿ ಕಾಯಿ) ಯನ್ನು ಸಣ್ಣಗೆ ಹೆಚ್ಚಿ ಚೂರು ಒಗ್ಗರಣೆಯಲ್ಲಿ ಹೆಚ್ಚು ಹೊತ್ತು ಬೇಯಿಸಬೇಕು. ನೀರು ಬೆರೆಸದೆ ಎಣ್ಣೆ ಒಗ್ಗರಣೆಯಲ್ಲಿ ಮಾತ್ರ ಬೇಯುವಂತೆ ಮಾಡಿರಿ. ಚೆನ್ನಾಗಿ ಬೆಂದ ನಂತ ರುಬ್ಬಿಕೊಂಡ ಪದಾರ್ಥವನ್ನು ಹಾಕಿ ಚೆನ್ನಾಗಿ ಬೇಯಿಸಿರಿ. ಇದಕ್ಕೆ ಉಪ್ಪು, ಹುಣಿಸೆಹಣ್ಣು ಅಥವಾ ಟೊಮೆಟೋ ಮತ್ತು ಸಕ್ಕರೆ ಅಥವಾ ಬೆಲ್ಲ ಹಾಕಿ.
ಇದನ್ನು ಚಪಾತಿ ಜತೆಗೆ ತಿನ್ನುವುದಕ್ಕೆ ಅಥವಾ ಅನ್ನಕ್ಕೆ ಕಲಸುವುದಕ್ಕೆ ಬಳಸಬಹುದು. ನಾನು ಹೇಳಿದ ಎರಡು ತರಕಾರಿ ಗಳು ಬಿಟ್ಟು ಬೇರೇ ಯಾವ ತರಕಾರಿಗಳೂ ರಸವಾಂಗಿಗೆ ಸೂಟ್ ಆಗುವುದಿಲ್ಲ. ಹ್ಯಾಪಿ ಕುಕ್ಕಿಂಗ್ ಅಂಡ್ ಪ್ಯಾಪಿ ಡೈನಿಂಗ್!



Click it and Unblock the Notifications