Latest Updates
-
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ
ಈರಲಗೆರೆ ಬದನೆಕಾಯಿ ಗೊಜ್ಜು

ತಾವು ಮಾಡಿದ ಜೀರಿಗೆ ಸಾರಿಗೆ ಬಳಸಿದ ಪದಾರ್ಥಗಳ ಜತೆಗೆ ಇನ್ನು ಕೆಲವನ್ನು ಸೇರಿಸಿ ಮಾಡಬಹುದಾದ ಅಡುಗೆಗೆ ನಾವು ರಸವಾಂಗಿ ಎಂದು ಕರೆಯುತ್ತೇವೆ. ನೀವು ಇದನ್ನು ಪ್ರಯತ್ನಿಸಿ.
ಬೇಕಾದ ಸಾಮಗ್ರಿಗಳಲ್ಲಿ ತಾವು ತಿಳಿಸಿದ ಹಾಗೆ, ಅರ್ಧ ಚಮಚ ಉದ್ದಿನಬೇಳೆ | ಅರ್ಧ ಚಮಚ ಕೊತ್ತಂಬರಿ ಬೀಜ | ಒಂದು ಚಮಚ ಜೀರಿಗೆ | ಐದಾರು ಒಣಮೆಣಸಿನಕಾಯಿ | ಒಂದು ಚಮಚ ಸನ್ ಗೋಲ್ಡ್ ಅಡುಗೆ ಎಣ್ಣೆ | ಇವಿಷ್ಟಲ್ಲದೆ ಒಂದು ಚೂರು ಚಕ್ಕೆ ಇರಲಿ.
ಇವಿಷ್ಟನ್ನೂ ತವದಲ್ಲಿ ಘಂ ಎಂದು ಪರಿಮಳ ಬರುವವರೆಗೆ ಹುರಿದುಕೊಂಡು ಸ್ವಲ್ಪ ಹಸಿ ತೆಂಗಿನತುರಿ ಸ್ವಲ್ಪ ಒಣ ಕೊಬ್ಬರಿ ತುರಿ ಬೆರೆಸಿ ಮಿಕ್ಸಿಗೆ ಹಾಕಿ, ಚೂರು ನೀರು ಬೆರೆಸಿ ನುಣ್ಣಗೆ ರುಬ್ಬಿಟ್ಟುಕೊಳ್ಳಿರಿ.
ನಮ್ಮ ಕಡೆ ಸಿಗುವ ಈರಲಗೆರೆ ಬದನೆಕಾಯಿ (ಮೈಸೂರು ಬದನೆಕಾಯಿ) ಮತ್ತು ಚವಳಿಕಾಯಿ(ಗೋರಿ ಕಾಯಿ) ಯನ್ನು ಸಣ್ಣಗೆ ಹೆಚ್ಚಿ ಚೂರು ಒಗ್ಗರಣೆಯಲ್ಲಿ ಹೆಚ್ಚು ಹೊತ್ತು ಬೇಯಿಸಬೇಕು. ನೀರು ಬೆರೆಸದೆ ಎಣ್ಣೆ ಒಗ್ಗರಣೆಯಲ್ಲಿ ಮಾತ್ರ ಬೇಯುವಂತೆ ಮಾಡಿರಿ. ಚೆನ್ನಾಗಿ ಬೆಂದ ನಂತ ರುಬ್ಬಿಕೊಂಡ ಪದಾರ್ಥವನ್ನು ಹಾಕಿ ಚೆನ್ನಾಗಿ ಬೇಯಿಸಿರಿ. ಇದಕ್ಕೆ ಉಪ್ಪು, ಹುಣಿಸೆಹಣ್ಣು ಅಥವಾ ಟೊಮೆಟೋ ಮತ್ತು ಸಕ್ಕರೆ ಅಥವಾ ಬೆಲ್ಲ ಹಾಕಿ.
ಇದನ್ನು ಚಪಾತಿ ಜತೆಗೆ ತಿನ್ನುವುದಕ್ಕೆ ಅಥವಾ ಅನ್ನಕ್ಕೆ ಕಲಸುವುದಕ್ಕೆ ಬಳಸಬಹುದು. ನಾನು ಹೇಳಿದ ಎರಡು ತರಕಾರಿ ಗಳು ಬಿಟ್ಟು ಬೇರೇ ಯಾವ ತರಕಾರಿಗಳೂ ರಸವಾಂಗಿಗೆ ಸೂಟ್ ಆಗುವುದಿಲ್ಲ. ಹ್ಯಾಪಿ ಕುಕ್ಕಿಂಗ್ ಅಂಡ್ ಪ್ಯಾಪಿ ಡೈನಿಂಗ್!



Click it and Unblock the Notifications











