Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈರಲಗೆರೆ ಬದನೆಕಾಯಿ ಗೊಜ್ಜು

ತಾವು ಮಾಡಿದ ಜೀರಿಗೆ ಸಾರಿಗೆ ಬಳಸಿದ ಪದಾರ್ಥಗಳ ಜತೆಗೆ ಇನ್ನು ಕೆಲವನ್ನು ಸೇರಿಸಿ ಮಾಡಬಹುದಾದ ಅಡುಗೆಗೆ ನಾವು ರಸವಾಂಗಿ ಎಂದು ಕರೆಯುತ್ತೇವೆ. ನೀವು ಇದನ್ನು ಪ್ರಯತ್ನಿಸಿ.
ಬೇಕಾದ ಸಾಮಗ್ರಿಗಳಲ್ಲಿ ತಾವು ತಿಳಿಸಿದ ಹಾಗೆ, ಅರ್ಧ ಚಮಚ ಉದ್ದಿನಬೇಳೆ | ಅರ್ಧ ಚಮಚ ಕೊತ್ತಂಬರಿ ಬೀಜ | ಒಂದು ಚಮಚ ಜೀರಿಗೆ | ಐದಾರು ಒಣಮೆಣಸಿನಕಾಯಿ | ಒಂದು ಚಮಚ ಸನ್ ಗೋಲ್ಡ್ ಅಡುಗೆ ಎಣ್ಣೆ | ಇವಿಷ್ಟಲ್ಲದೆ ಒಂದು ಚೂರು ಚಕ್ಕೆ ಇರಲಿ.
ಇವಿಷ್ಟನ್ನೂ ತವದಲ್ಲಿ ಘಂ ಎಂದು ಪರಿಮಳ ಬರುವವರೆಗೆ ಹುರಿದುಕೊಂಡು ಸ್ವಲ್ಪ ಹಸಿ ತೆಂಗಿನತುರಿ ಸ್ವಲ್ಪ ಒಣ ಕೊಬ್ಬರಿ ತುರಿ ಬೆರೆಸಿ ಮಿಕ್ಸಿಗೆ ಹಾಕಿ, ಚೂರು ನೀರು ಬೆರೆಸಿ ನುಣ್ಣಗೆ ರುಬ್ಬಿಟ್ಟುಕೊಳ್ಳಿರಿ.
ನಮ್ಮ ಕಡೆ ಸಿಗುವ ಈರಲಗೆರೆ ಬದನೆಕಾಯಿ (ಮೈಸೂರು ಬದನೆಕಾಯಿ) ಮತ್ತು ಚವಳಿಕಾಯಿ(ಗೋರಿ ಕಾಯಿ) ಯನ್ನು ಸಣ್ಣಗೆ ಹೆಚ್ಚಿ ಚೂರು ಒಗ್ಗರಣೆಯಲ್ಲಿ ಹೆಚ್ಚು ಹೊತ್ತು ಬೇಯಿಸಬೇಕು. ನೀರು ಬೆರೆಸದೆ ಎಣ್ಣೆ ಒಗ್ಗರಣೆಯಲ್ಲಿ ಮಾತ್ರ ಬೇಯುವಂತೆ ಮಾಡಿರಿ. ಚೆನ್ನಾಗಿ ಬೆಂದ ನಂತ ರುಬ್ಬಿಕೊಂಡ ಪದಾರ್ಥವನ್ನು ಹಾಕಿ ಚೆನ್ನಾಗಿ ಬೇಯಿಸಿರಿ. ಇದಕ್ಕೆ ಉಪ್ಪು, ಹುಣಿಸೆಹಣ್ಣು ಅಥವಾ ಟೊಮೆಟೋ ಮತ್ತು ಸಕ್ಕರೆ ಅಥವಾ ಬೆಲ್ಲ ಹಾಕಿ.
ಇದನ್ನು ಚಪಾತಿ ಜತೆಗೆ ತಿನ್ನುವುದಕ್ಕೆ ಅಥವಾ ಅನ್ನಕ್ಕೆ ಕಲಸುವುದಕ್ಕೆ ಬಳಸಬಹುದು. ನಾನು ಹೇಳಿದ ಎರಡು ತರಕಾರಿ ಗಳು ಬಿಟ್ಟು ಬೇರೇ ಯಾವ ತರಕಾರಿಗಳೂ ರಸವಾಂಗಿಗೆ ಸೂಟ್ ಆಗುವುದಿಲ್ಲ. ಹ್ಯಾಪಿ ಕುಕ್ಕಿಂಗ್ ಅಂಡ್ ಪ್ಯಾಪಿ ಡೈನಿಂಗ್!



Click it and Unblock the Notifications