Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಹೊಸರುಚಿ : ಅವಲಕ್ಕಿ ಬಿಸಿಬೇಳೆ ಭಾತ್
ಬೇಕಾಗುವ ಸಾಮಾನುಗಳು :-
ಗಟ್ಟಿ ಅವಲಕ್ಕಿ -250 ಗ್ರಾಂ
ಹೆಸರುಬೇಳೆ -250 ಗ್ರಾಂ
ಚಿಕ್ಕ ನಿಂಬೆ ಗಾತ್ರದ ಹುಣಸೆಹಣ್ಣು
ರುಚಿಗೆ ತಕ್ಕ ಉಪ್ಪು
ತರಕಾರಿಗಳು
ಸ್ವಲ್ಪ ಬೀನ್ಸ್
ಕ್ಯಾರೆಟ್ -(3-4)
ಹಸಿ ಬಟಾಣಿ ಕಾಳು - 1- ಲೋಟ
ಆಲೂಗೆಡ್ಡೆ - 2
ಹೆಚ್ಚಿದ ಕ್ಯಾಬೇಜ್ - 1- ಲೋಟ
ದಪ್ಪ ವೆುಣಸಿನಕಾಯಿ - 2(ಕ್ಯಾಪ್ಸಿಕಾಂ)
ಕರಿಬೆವಿನ ಎಲೆ -(8-10)
ಮಸಾಲೆಗೆ ಬೇಕಾಗುವ ಸಾಮಾಗ್ರಿಗಳು:-
ಕಡ್ಲೆ ಬೇಳೆ - 1-ಚಮಚ
ಉದ್ದಿನ ಬೇಳೆ - 1/2 ಚಮಚ
ಧಾನ್ಯದ ಪುಡಿ -3 ಚಿಕ್ಕ ಚಮಚ
ಖಾರದ ಪುಡಿ - 2 ಚಿಕ್ಕ ಚಮಚ
ಜೀರಿಗೆ+ಮೆಂತೆ -1 ಚಿಕ್ಕ ಚಮಚ
ಸ್ವಲ್ಪ ಕೊಬ್ಬರಿ + ಇಂಗು -1ಚಮಚ
ಎಲ್ಲಾ ಮಸಾಲೆ ಸಾಮಾಗ್ರಿಗಳನ್ನು ಹುರಿದು ಪುಡಿ ಮಾಡಿ ಇಟ್ಟು ಕೊಳ್ಳಬೇಕು . ತರಕಾರಿಗಳನ್ನು ಹೆಚ್ಚಿ ಇಟ್ಟು ಕೊಳ್ಳ ಬೇಕು. ದಪ್ಪ ವೆುಣಸಿನಕಾಯಿ ಹೊರತು ಪಡಿಸಿ ಮಿಕ್ಕ ತರಕಾರಿಗಳನ್ನು ಬೇಯಿಸಿಟ್ಟು ಕೊಳ್ಳಬೇಕು.
ಮಾಡುವ ವಿಧಾನ :-
ಅವಲಕ್ಕಿಯನ್ನು ಹತ್ತು ನಿಮಿಷ ನೆನೆಸಿಡಿ.
ಬಳಿಕ ಕುಕ್ಕರ್ನಲ್ಲಿ (3-4) ಲೋಟ ನೀರು ಹಾಕಿ ಹೆಸರುಬೇಳೆಯನ್ನು 1-ವಿಷಿಲ್ನಷ್ಟು ಬೇಯಿಸಿ ಆಮೇಲೆ ಅದಕ್ಕೆ ನೆನೆದಿರುವ ಅವಲಕ್ಕಿ ಮತ್ತು ತರಕಾರಿಗಳನ್ನು ಹಾಕಿ 5- ನಿಮಿಷ ಸಿಮ್ನಲ್ಲಿ ಇಡಿ (ಸಣ್ಣ ಗೆ ಬೆಂಕಿಯಿರಲಿ)
ಎಲ್ಲ ಪದಾರ್ಥಗಳು ಚೆನ್ನಾಗಿ ಬೆಂದ ನಂತರ, ಮಸಾಲೆ ಪುಡಿ ಮತ್ತು ಹುಳಿ ಹಿಂಡಿ ಹಾಕಿ .ಆಮೇಲೆ ರುಚಿಗೆ ತಕ್ಕ ಉಪ್ಪು ಹಾಕಿ . ನೀರು ಸ್ವಲ್ಪ ಜಾಸ್ತಿ ಹಾಕಿ , ಬಿಸಿಬೇಳೆ ಬಾತು ಸ್ವಲ್ಪ ನೀರಾಗಿದ್ದರೆ ಒಳ್ಳೆಯದು(ತೆಳ್ಳಗಿದ್ದರೆ).
ಆರಿದ ನಂತರ ಗಟ್ಟಿಯಾಗುತ್ತದೆ. ಆಮೇಲೆ ಕೆಳಗಿಳಿಸಿಕೊಳ್ಳಿ.
ಬಾಣಲೆಯಲ್ಲಿ ಒಂದು ಸೌಟು ಕಡ್ಲೆ ಕಾಯಿ ಎಣ್ಣೆಗೆ ಸಾಸಿವೆ ಹಾಕಿ ಚಟಪಟ ಗುಟ್ಟಿದ ಮೇಲೆ ,ಹೆಚ್ಚಿದ ದಪ್ಪ ಮೆಣಸಿನಕಾಯಿ , ಕರಿ ಬೇವಿನಎಲೆಗಳನ್ನು ಹಾಕಿ 3-4 ನಿಮಿಷ ಹುರಿದು ಅದನ್ನು ಬಿಸಿ ಬೇಳೆ ಬಾತಿಗೆ ಹಾಕಿ.
ಬಿಸಿಬಿಸಿ ಇರುವಾಗಲೇ ತುಪ್ಪ ಹಾಕಿ ತಿಂದರೆ ರುಚಿಯಾಗಿರುತ್ತದೆ.ನೆಚ್ಚಿ ಕೊಳ್ಳಲು ಸೌತೆಕಾಯಿ ಪಚ್ಚೋಡಿ ಮಾಡಿಕೊಳ್ಳಿ. ಇದು ನಾಲ್ಕೈದು ಜನರಿಗೆ ಸಾಕಾಗುತ್ತದೆ. ಬೇಕಾದರೆ ಹಪ್ಪಳ ಕರಿದು ಜೊತೆಯಲ್ಲಿ ತಿನ್ನಬಹುದು. ವಾರದ ಕೊನೆಯಲ್ಲಿ ಮಾಡಿ ನೋಡಿ, ಆಹ್ಹಾಹ್ಹಾ ಎಷ್ಟೊಂದು ರುಚಿಕರ...



Click it and Unblock the Notifications