Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಬಾಯಲ್ಲಿ ನೀರೂರಿಸುತ್ತೆ ಮಾವಿನ ಕಾಯಿ ಅನ್ನ

ಬೇಕಾಗುವ ಸಾಮಾಗ್ರಿಗಳು:
1.ಸ್ವಲ್ಪ ಗೋಡಂಬಿ
2. 1/2 ಕೆಜಿ ಬಾಸುಮತಿ ಅಕ್ಕಿ
ಮಸಾಲೆ ಸಾಮಾಗ್ರಿಗಳು:
* 1/4 ಚಮಚ ಅರಿಶಿಣ ಪುಡಿ
* ಸ್ವಲ್ಪ ಸಾಸಿವೆ
* ಕೆಂಪು ಮೆಣಸಿನ ಕಾಯಿ (ಖಾರಕ್ಕೆ ತಕ್ಕಷ್ಟು)
* 1 ಕಪ್ ಮಾವಿನ ಕಾಯಿ ತುರಿ (ಕಮ್ಮಿ ಹುಳಿಯಿರುವ ಮಾವಿನಕಾಯಿಯಾದರೆ ಒಂದೂವರೆ ಕಪ್)
* ತುರಿದ ತೆಂಗಿನ ಕಾಯಿ 1 ಕಪ್
* ಸ್ವಲ್ಪ ಇಂಗು
ಒಗ್ಗರಣೆಗೆ:
* 1 ಚಮಚ ಬೇಳೆ
* 1 ಕೆಂಪು ಮೆನಸಿನ ಕಾಯಿ
* ಸಾಸಿವೆ
* ಕರಿಬೇವಿನ ಎಲೆ
* ಎಣ್ಣೆ
ತಯಾರಿಸುವ ವಿಧಾನ:
1. ಬೆಂದ ಅನ್ನವನ್ನು ಬಿಸಿ ಆರಲು ಇಡಬೇಕು.
2. ಈಗ ಮಸಾಲೆಗೆ ತೆಂಗಿನ ಕಾಯಿ ತುರಿ, ಇಂಗು, ಕೆಂಪು ಮೆಣಸಿನ ಕಾಯಿ, ಅರಿಶಿಣ ಪುಡಿ, ಸಾಸಿವೆ ಹಾಕಿ ಮಿಕ್ಸಿಯಲ್ಲಿ ಅರೆಯಬೇಕು. ಈಗ ತುರಿದ ಮಾವಿನ ಕಾಯಿ ಹಾಕಿ ಪೇಸ್ಟ್ ರೀತಿ ಮಾಡಬೇಕು.
3. ಈಗ ಸ್ವಲ್ಪ ದೊಡ್ಡ ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ, ಬೇಳೆ ಹಾಕಬೇಕು. ಸಾಸಿವೆ ಚಟಾಪಟಾ ಶಬ್ದ ಬರುವಾಗ ಗೋಡಂಬಿ ಮತ್ತು ಕರಿಬೇವಿನ ಎಲೆ ಹಾಕಬೇಕು. ಬೇಳೆ ಸ್ವಲ್ಪ ಕಂದು ಬಣ್ಣಕ್ಕೆ ಬರುವಾಗ ಸ್ವಲ್ಪ ತುರಿದ ಮಾವಿನ ಕಾಯಿ ಹಾಕಿ ಸೌಟ್ನಿಂದ ಆಡಿಸುತ್ತಾ 3-4 ನಿಮಿಷ ಬೇಯಿಸಬೇಕು.
4. ಈಗ ಅರೆದ ಮಾವಿನಕಾಯಿ ಮಿಶ್ರಣವನ್ನು ಹಾಕಿ ಬೇಯಿಸಬೇಕು. ಮಾವಿನ ಕಾಯಿಯ ಹಸಿ ವಾಸನೆ ಹೋಗುವವರೆಗೆ ಬೇಯಿಸಬೇಕು.
5. ಈಗ ತಣ್ಣಗಾದ ಅನ್ನಕ್ಕೆ ರುಚಿಗೆ ತಕ್ಕ ಉಪ್ಪು ಹಾಕಿ ಮಿಶ್ರ ಮಾಡಿ ಅದನ್ನು ಮಸಾಲೆಗೆ ಹಾಕಿ ಮಿಶ್ರ ಮಾಡಿದರೆ ಮಾವಿನಕಾಯಿ ಅನ್ನ ರೆಡಿ.
ಇದನ್ನು ಬೆಳಗಿನ ತಿಂಡಿಗೆ ಮಾಡಿ ತಿನ್ನಬಹುದಾಗಿದೆ.



Click it and Unblock the Notifications
