Latest Updates
-
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ಬಾಯಲ್ಲಿ ನೀರೂರಿಸುತ್ತೆ ಮಾವಿನ ಕಾಯಿ ಅನ್ನ

ಬೇಕಾಗುವ ಸಾಮಾಗ್ರಿಗಳು:
1.ಸ್ವಲ್ಪ ಗೋಡಂಬಿ
2. 1/2 ಕೆಜಿ ಬಾಸುಮತಿ ಅಕ್ಕಿ
ಮಸಾಲೆ ಸಾಮಾಗ್ರಿಗಳು:
* 1/4 ಚಮಚ ಅರಿಶಿಣ ಪುಡಿ
* ಸ್ವಲ್ಪ ಸಾಸಿವೆ
* ಕೆಂಪು ಮೆಣಸಿನ ಕಾಯಿ (ಖಾರಕ್ಕೆ ತಕ್ಕಷ್ಟು)
* 1 ಕಪ್ ಮಾವಿನ ಕಾಯಿ ತುರಿ (ಕಮ್ಮಿ ಹುಳಿಯಿರುವ ಮಾವಿನಕಾಯಿಯಾದರೆ ಒಂದೂವರೆ ಕಪ್)
* ತುರಿದ ತೆಂಗಿನ ಕಾಯಿ 1 ಕಪ್
* ಸ್ವಲ್ಪ ಇಂಗು
ಒಗ್ಗರಣೆಗೆ:
* 1 ಚಮಚ ಬೇಳೆ
* 1 ಕೆಂಪು ಮೆನಸಿನ ಕಾಯಿ
* ಸಾಸಿವೆ
* ಕರಿಬೇವಿನ ಎಲೆ
* ಎಣ್ಣೆ
ತಯಾರಿಸುವ ವಿಧಾನ:
1. ಬೆಂದ ಅನ್ನವನ್ನು ಬಿಸಿ ಆರಲು ಇಡಬೇಕು.
2. ಈಗ ಮಸಾಲೆಗೆ ತೆಂಗಿನ ಕಾಯಿ ತುರಿ, ಇಂಗು, ಕೆಂಪು ಮೆಣಸಿನ ಕಾಯಿ, ಅರಿಶಿಣ ಪುಡಿ, ಸಾಸಿವೆ ಹಾಕಿ ಮಿಕ್ಸಿಯಲ್ಲಿ ಅರೆಯಬೇಕು. ಈಗ ತುರಿದ ಮಾವಿನ ಕಾಯಿ ಹಾಕಿ ಪೇಸ್ಟ್ ರೀತಿ ಮಾಡಬೇಕು.
3. ಈಗ ಸ್ವಲ್ಪ ದೊಡ್ಡ ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ, ಬೇಳೆ ಹಾಕಬೇಕು. ಸಾಸಿವೆ ಚಟಾಪಟಾ ಶಬ್ದ ಬರುವಾಗ ಗೋಡಂಬಿ ಮತ್ತು ಕರಿಬೇವಿನ ಎಲೆ ಹಾಕಬೇಕು. ಬೇಳೆ ಸ್ವಲ್ಪ ಕಂದು ಬಣ್ಣಕ್ಕೆ ಬರುವಾಗ ಸ್ವಲ್ಪ ತುರಿದ ಮಾವಿನ ಕಾಯಿ ಹಾಕಿ ಸೌಟ್ನಿಂದ ಆಡಿಸುತ್ತಾ 3-4 ನಿಮಿಷ ಬೇಯಿಸಬೇಕು.
4. ಈಗ ಅರೆದ ಮಾವಿನಕಾಯಿ ಮಿಶ್ರಣವನ್ನು ಹಾಕಿ ಬೇಯಿಸಬೇಕು. ಮಾವಿನ ಕಾಯಿಯ ಹಸಿ ವಾಸನೆ ಹೋಗುವವರೆಗೆ ಬೇಯಿಸಬೇಕು.
5. ಈಗ ತಣ್ಣಗಾದ ಅನ್ನಕ್ಕೆ ರುಚಿಗೆ ತಕ್ಕ ಉಪ್ಪು ಹಾಕಿ ಮಿಶ್ರ ಮಾಡಿ ಅದನ್ನು ಮಸಾಲೆಗೆ ಹಾಕಿ ಮಿಶ್ರ ಮಾಡಿದರೆ ಮಾವಿನಕಾಯಿ ಅನ್ನ ರೆಡಿ.
ಇದನ್ನು ಬೆಳಗಿನ ತಿಂಡಿಗೆ ಮಾಡಿ ತಿನ್ನಬಹುದಾಗಿದೆ.



Click it and Unblock the Notifications