Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಿಸಿಬಿಸಿ ಘಮ ಘಮ ಶುಂಠಿ-ಬೆಳ್ಳುಳ್ಳಿ ಬಾತ್

* ತೇಜಸ್ವಿನಿ ಹೆಗಡೆ, ಬೆಂಗಳೂರು.
ಶುಂಠಿ ಬಾತ್ ಒಂದು ದಿಢೀರನೆ ತಯಾರಿಸಬಹುದಾದ ರುಚಿಕರ ತಿನಿಸು. ತಯಾರಿಸಲು ಹೆಚ್ಚು ಸಮಯ ಹಾಗೂ ಸಾಮಗ್ರಿಗಳು ಎರಡೂ ಬೇಕಾಗಿಲ್ಲ. ಅನ್ನ ಉಳಿದಿದ್ದರೆ ಅಥವಾ ಅನ್ನ ಹೆಚ್ಚಾಗಿದ್ದರೆ ಇದನ್ನು ಮಾಡಿ ತಿನ್ನಬಹುದು. ಹೊಸ ರುಚಿಯ ಜೊತೆ ದೇಹಕ್ಕೂ ಹಿತವಾಗಿರುತ್ತದೆ. ಇದರ ತಯಾರಿಕೆಯಲ್ಲಿ ಬಳಸುವ ಬೆಳ್ಳುಳ್ಳಿ ವಾಯು ಪೀಡಿತರಿಗೆ ಉತ್ತಮ ಔಷಧಿಯಾಗಿದ್ದರೆ, ಶುಂಠಿ ಪಚನ ಕ್ರಿಯೆಯನ್ನು ಸುಲಲಿತಗೊಳಿಸಿ ಜೀರ್ಣಿಸಿಕೊಳ್ಳಲು ಸಹಕಾರಿಯಾಗಿದೆ.
ಬೆಳಗ್ಗಿನ ತಿಂಡಿಗೆ ಮಾತ್ರವಲ್ಲದೇ ಮಧ್ಯಾಹ್ನ ಹಾಗೂ ಸಂಜೆಯ ಊಟವಾಗಿಯೂ ಕುಡಾ ಈ ಶುಂಠಿ ಬಾತ್ ಸೇವಿಸಬಹುದಾಗಿದೆ. ಒಂದೊಮ್ಮೆ ಶುಂಠಿಯ ಬದಲು ಬೆಳ್ಳುಳ್ಳಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಹಾಕಿ ತಯಾರಿಸಿದ್ದರೆ ಅದನ್ನು ಬೆಳ್ಳುಳ್ಳಿ ಬಾತ್(Garlic Rice) ಎಂದೂ ಕರೆಯುತ್ತೇವೆ. ಮಸಾಲೆ ಜಾಸ್ತಿ ಬೇಕಾದವರು ಅನ್ನವನ್ನು ಕಡಿಮೆ ಪ್ರಮಾಣದಲ್ಲೂ, ಮಸಾಲೆ ಜಾಸ್ತಿ ಇಷ್ಟಪಡದವರು ಅನ್ನವನ್ನು ಹೆಚ್ಚಿನ ಪ್ರಮಾಣದಲ್ಲೂ ಹಾಕಬಹುದಾಗಿದೆ.
ಒಂದು ಲೋಟ ಅಕ್ಕಿಯ ಅನ್ನದ ಪ್ರಮಾಣದಲ್ಲಿ ತಯಾರಿಸುವಾಗ ಬೇಕಾಗುವ ಸಾಮಗ್ರಿಗಳು :
* ಅಕ್ಕಿ - 1 ಲೋಟ
* ಹಸಿ ಶುಂಠಿ - ಒಂದರಿಂದ ಒಂದೂವರೆ ಇಂಚು
* ಬೆಳ್ಳುಳ್ಳಿ - 10-12 ಎಸಳುಗಳು (ದೊಡ್ಡ ಗಾತ್ರದ್ದ ಎಸಳುಗಳಾಗಿದ್ದರೆ ಕಡಿಮೆಯೂ ಹಾಕಬಹುದು)
* ಲವಂಗ - 6-8
* ದಾಲ್ಚೀನಿ - 2 ಇಂಚು
* ಕಾಳು ಮೆಣಸು - 10-12 ಕಾಳುಗಳು
* ಕಾಯಿ ತುರಿ - 2 ಚಮಚ
* ತುಪ್ಪ - 4-5 ಚಮಚ (ತುಸು ಕಡಿಮೆಯೂ ಹಾಕಬಹುದು)
* ಜೀರಿಗೆ - ಒಂದರಿಂದ ಒಂದೂವರೆ ಚಮಚ
* ಉಪ್ಪು - ರುಚಿಗೆ ತಕ್ಕಷ್ಟು
ಮಾಡುವ ವಿಧಾನ :
* ಮೊದಲಿಗೆ ಅನ್ನವನ್ನು ಮಾಡಿಟ್ಟುಕೊಳ್ಳಬೇಕು. ಅನ್ನ ತುಂಬಾ ಮೆತ್ತಗಾಗಬಾರದು. ಉದುರುದುರಾಗಿದ್ದರೆ ಉತ್ತಮ.
* ಶುಂಠಿ, ಬೆಳ್ಳುಳ್ಳಿ, ಲವಂಗ, ದಾಲ್ಚೀನಿ, ಕಾಳು ಮೆಣಸು ಹಾಗೂ ಕಾಯಿತುರಿ ಎಲ್ಲವನ್ನೂ ಹಸಿಯಾಗಿ ನೀರನ್ನು ಸೇರಿಸದೇ ರುಬ್ಬಬೇಕು.
* ಬಾಣಲೆಗೆ ತುಪ್ಪವನ್ನು ಹಾಕಿ ಜೀರಿಗೆಯನ್ನು ಹಾಕಬೇಕು. ಅದು ಚಟಪಟವೆನ್ನಲು ರುಬ್ಬಿಟ್ಟ ಮಿಶ್ರಣವನ್ನು ಹಾಕಿ, ಸ್ವಲ್ಪ ಸಮಯ ಪರಿಮಳ ಬರುವವರೆಗೆ ಹುರಿಯಬೇಕು.
* ಹುರಿದ ಮಿಶ್ರಣಕ್ಕೆ ಅನ್ನವನ್ನು ಹಾಕಿ, ಉಪ್ಪನ್ನು ಸೇರಿಸಿ ಚೆನ್ನಾಗಿ ಕಲಸಬೇಕು.
ಈಗ ಬಾಯಲ್ಲಿ ನೀರೂರಿಸುವ ಘಮ್ಮೆನ್ನುವ ಶುಂಠಿ ಬಾತ್ ತಿನ್ನಲು ತಯಾರು.



Click it and Unblock the Notifications