Just In
- 2 hrs ago ಈರುಳ್ಳಿ ಹಾಕದೆ 3 ಪದಾರ್ಥ ಹಾಕಿ 5 ನಿಮಿಷದಲ್ಲಿ ಚಟ್ನಿ ಮಾಡಬಹುದು.! ಇಲ್ಲಿದೆ ರೆಸಿಪಿ
- 2 hrs ago ತಿಂಡಿ ಮಾಡಲು ಬಳಸಿದ ಎಣ್ಣೆಯನ್ನು ಮರು ಬಳಕೆ ಮಾಡುತ್ತೀರಾ? ಆರೋಗ್ಯಕ್ಕಾಗಿ ಈ ಟಿಪ್ಸ್ ಅನುಸರಿಸಿ
- 3 hrs ago ಕೊನೆಗೂ ಬೆಂಗಳೂರಿಗೆ ಮಳೆ ಭಾಗ್ಯ..! ಹವಾಮಾನ ಇಲಾಖೆ ಸೂಚಿಸಿದ ದಿನಾಂಕವಿದು..!
- 4 hrs ago ಮೂರು ಮಕ್ಕಳು ನನ್ನದ್ದಲ್ಲ ಎಂದು ಆತನಿಗೆ ತಿಳಿದಾಗ.... ಹೆಂಡತಿಯ ಮಹಾಮೋಸ
Don't Miss
- News DV Sadananda Gowda: ಕಮಲ ಬಿಟ್ಟು ಕೈ ಹಿಡಿಯುತ್ತಾರಾ ಸದಾನಂದಗೌಡರು: ಡಿ ಕೆ ಶಿವಕುಮಾರ್ ಏನಂದ್ರು?
- Automobiles ಅದ್ಭುತ ಫೀಚರ್ಸ್ ಪಡೆದುಕೊಂಡ ಟಾಟಾ ಟಿಯಾಗೋ ಇವಿ: ಪ್ರತಿ ಕಿ.ಮೀ ಚಲಿಸಲು ಕೇವಲ 60 ಪೈಸೆ ವೆಚ್ಚ
- Sports IPL 2024: ಗಾಯದ ಕಾರಣದಿಂದ ಆಟಗಾರ ಲೀಗ್ನಿಂದ ಹೊರ ನಡೆದರೆ ಸಿಗುವ ಹಣವೆಷ್ಟು?
- Movies ಬಾಲಿವುಡ್ ಹಾಟ್ ಕಪಲ್ ರೊಮ್ಯಾನ್ಸ್ ನೋಡಿ ಪೂಜಾ ಹೆಗ್ಡೆಗೆ ಅಸೂಯೆ!; ವಿಡಿಯೋ ವೈರಲ್
- Technology Airtel & Noise: ಇನ್ಮುಂದೆ ಏರ್ಟೆಲ್ ಪೇಮೆಂಟ್ ಬ್ಯಾಂಕ್ ಸ್ಮಾರ್ಟ್ವಾಚ್ನದ್ದೇ ಹವಾ! ಟ್ಯಾಪ್-ಟು-ಪೇ ಫೀಚರ್ಸ್..
- Finance ಬಾಬಾ ರಾಮ್ದೇವ್ಗೆ ಖುದ್ದು ಹಾಜರಾಗುವಂತೆ ಖಡಕ್ ಸೂಚನೆ ನೀಡಿದ ಸುಪ್ರೀಂ ಕೋರ್ಟ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೂನ್ ತಿಂಗಳ ಅಮಾವಾಸ್ಯೆ, ಈ ನಾಲ್ಕು ರಾಶಿಯವರಿಗೆ ಒಳ್ಳೆಯದಾಗಲಿದೆ...
ಪ್ರತಿಯೊಂದು ಅಮವಾಸ್ಯೆಯ ಮುಕ್ತಾಯದ ಅವಧಿಯು ಹುಣ್ಣಿಮೆಯ ಆರಂಭವನ್ನು ಸೂಚಿಸುತ್ತದೆ. ಈ ಪರಿವರ್ತನಾ ಅವಧಿಯು ಸಕಾರಾತ್ಮಕ ಶಕ್ತಿ ಮತ್ತು ತರಂಗಗಳನ್ನು ಪ್ರಚೋದಿಸುತ್ತದೆ. ಜೊತೆಗೆ ಉತ್ತಮ ವಿಚಾರಗಳ ಕುರಿತು ಸಮಯವು ಪ್ರೇರಣೆ ನೀಡುವುದು. ಜೂನ್ ತಿಂಗಳಲ್ಲಿ ಉಂಟಾಗುವ ಅಮವಾಸ್ಯೆ ಪರಿಸರ ಹಾಗೂ ರಾಶಿಚಕ್ರಗಳ ಮೇಲೆ ತೀವ್ರವಾದ ಬದಲಾವಣೆಯನ್ನು ಪ್ರಚೋದಿಸುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಬಹಿರಂಗಪಡಿಸುತ್ತದೆ.
ಚಂದ್ರನು ಪ್ರತಿಯೊಂದು ರಾಶಿಚಕ್ರಗಳ ಮೇಲೂ ವಿಶೇಷವಾದ ಪ್ರಭಾವವನ್ನು ಬೀರುವುದು. ಅಮವಾಸ್ಯೆ ಎಂದರೆ ಒಂದು ಬಗೆಯ ಆತಂಕದ ವಿಚಾರಗಳು ಸಂಭವಿಸುತ್ತದೆ ಹಾಗೂ ಹುಣ್ಣಿಮೆಯಂದು ಒಂದು ಬಗೆಯ ಸಕಾರಾತ್ಮಕ ಶಕ್ತಿ ಗೋಚರವಾಗುವುದು ಎಂದು ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಮವಾಸ್ಯೆ ಅಥವಾ ಹುಣ್ಣಿಮೆ ಯಾವುದೇ ಆಗಿದ್ದರೂ ಅದು ಅವರ ರಾಶಿಚಕ್ರಗಳ ಆಧಾರದ ಮೇಲೆ ಪರಿಣಾಮ ಬೀರುವುದು ಎನ್ನಲಾಗುವುದು.
ಜೂನ್ ತಿಂಗಳಲ್ಲಿ ಬರುವ ಅಮವಾಸ್ಯೆಯು ಕೆಲವು ರಾಶಿಚಕ್ರಗಳ ಮೇಲೆ ವಿಶೇಷವಾದ ಪ್ರಭಾವವನ್ನು ಬೀರುವುದು. ಅವುಗಳ ಪರಿಣಾಮ ಹೇಗಿರುತ್ತದೆ? ಅವು ಯಾವ ರಾಶಿಚಕ್ರದವರ ಮೇಲೆ ಹೆಚ್ಚಿನ ಬದಲಾವಣೆ ಉಂಟಾಗುವುದು? ಎನ್ನುವದನ್ನು ತಿಳಿಯುವ ಕುತೂಹಲವಿದ್ದರೆ ಬೋಲ್ಡ್ ಸ್ಕೈ ಈ ಮುಂದೆ ವಿವರಿಸಿರುವ ವಿಶೇಷ ಮಾಹಿತಿಯನ್ನು ಪರಿಶೀಲಿಸಿ....
ಮಿಥುನ
ಜೂನ್ ತಿಂಗಳಲ್ಲಿ ಉಂಟಾಗುವ ಅಮವಾಸ್ಯೆಯು ಈ ವ್ಯಕ್ತಿಗಳ ಮೇಲೆ ಹೆಚ್ಚು ಪರಿಣಾಮ ಬೀರುವುದು ಎಂದು ಹೇಳಲಾಗುತ್ತದೆ. ಈ ವ್ಯಕ್ತಿಗಳು ತಮ್ಮ ಜೀವನದ ಒಳನೋಟ, ಸಂಬಂಧ, ಕೆಲಸ ಸೇರಿದಂತೆ ಇನ್ನಿತರ ವಿಷಯಗಳ ಕುರಿತಾಗಿ ಸಲಹೆ ಪಡೆಯಲು ಬಯಸುತ್ತಾರೆ. ಪರಿವರ್ತನೆಯ ವಿಚಾರದಲ್ಲಿ ಹೆಚ್ಚಿನ ಆಕಾಂಕ್ಷೆಗಳು ಇವರದ್ದಾಗಿರುವುದು. ಈಗಾಗಲೇ ಇವರು ಹೊಂದಿದ್ದ ಯೋಜನೆಯನ್ನು ಕಟ್ಟಲು ಮತ್ತು ಹೊಸದರ ಎಡೆಗೆ ಹೆಜ್ಜೆ ಹಾಕಲು ಇವರಿಗೆ ಉತ್ತಮ ಸಮಯ ಎಂದು ಹೇಳಲಾಗುವುದು. ಇದು ಇವರಿಗೆ ಉತ್ತಮ ಸಮಯವಾಗಿರುವುದರಿಂದ ತಮ್ಮ ಕೌಶಲ್ಯ ಮತ್ತು ಪ್ರತಿಭೆಗಳನ್ನು ಅತ್ಯುತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಲಾಗುವುದು.
ಕನ್ಯಾ
ಈ ಸಮಯದಲ್ಲಿ ಇವರು ತಮ್ಮ ವೃತ್ತಿ ಜೀವನಕ್ಕೆ ಸಂಬಂಧಿಸಿದ ಕೆಲವು ಸಕಾರಾತ್ಮಕ ಬದಲಾವಣೆಯನ್ನು ನಿರೀಕ್ಷಿಸಬಹುದು. ಈ ಅಮವಾಸ್ಯೆಯ ಸಮಯವು ಉತ್ತಮ ಚಿಂತನೆಗಳೆಡೆಗೆ ಸಾಗಲು ಸೂಕ್ತವಾಗಿದೆ. ಇವರು ತಮ್ಮ ವೃತ್ತಿಯನ್ನು ಬದಲಾಯಿಸುವ ಹವಣಿಕೆಯಲ್ಲಿದ್ದರೆ ಇದು ಅವರಿಗೆ ಉತ್ತಮ ಸಮಯ. ಈ ರಾಶಿಯವರು ಉದ್ಯಮಿಯಾಗಿದ್ದರೆ ಅನಿರೀಕ್ಷಿತವಾಗಿ ಶೀರ್ಘರದಲ್ಲಿಯೇ ಯಶಸ್ಸು ಹಾಗೂ ಖ್ಯಾತಿಯನ್ನು ಸಾಧಿಸುತ್ತಾರೆ. ಈ ಪರಿವರ್ತನೆಯ ಅವಧಿಯು ಇವರ ವೃತ್ತಿಜೀವನದ ಮೇಲೆ ಪ್ರಮುಖವಾಗಿ ಕೇಂದ್ರೀಕರಿಸುವುದು.
ಧನು
ಈ ಅಮವಾಸ್ಯೆಯು ಇವರಿಗೆ ವಿಶೇಷವಾದ ಬದಲಾವಣೆಯನ್ನು ತಂದುಕೊಡುವುದು. ಅದರಲ್ಲೂ ವಿಶೇಷವಾಗಿ ಸಂಬಂಧಗಳ ವಿಚಾರದಲ್ಲಿ ಎನ್ನಬಹುದು. ವಿವಾಹಿತರಾಗಿದ್ದರೆ ಅಥವಾ ಅವಿವಾಹಿತರೇ ಆಗಿದ್ದರೂ ತಮ್ಮ ಪ್ರೇಯಸಿ ಅಥವಾ ಸಂಗಾತಿಯ ಸಂಬಂಧಗಳಲ್ಲಿ ಬದಲಾವಣೆ ಕಾಣುವರು. ಸ್ನೇಹಿತರು ಹಾಗೂ ಸಹೋದ್ಯೋಗಿಗಳಿಂದ ಒಂದಿಷ್ಟು ಕೆಲಸ ಮಾಡಲು ಪ್ರೇರಣೆ ದೊರೆಯುವುದು. ಇದೇ ಜೂನ್ 13ರಂದು ಇವರ ಪ್ರಣಯ ಜೀವನವು ವಿಶೇಷವಾದ ಬೆಳಕಿನಿಂದ ಬೆಳಗುವುದು.
ಮೀನ
ಸೂರ್ಯನ ಚಿಹ್ನೆಯಡಿಯಲ್ಲಿ ಜನಿಸಿದ ವ್ಯಕ್ತಿಗಳಿಗೆ ಈ ಪರಿವರ್ತನೆಯ ಸಮಯವು ಅತ್ಯುತ್ತಮ ಫಲಿತಾಂಶವನ್ನು ಹಾಗೂ ಬದಲಾವಣೆಯನ್ನು ತಂದುಕೊಡುವುದು. ಪರಿವರ್ತನೆಯ ಅವಧಿಯು ಅವರಲ್ಲಿರುವ ಭಯವನ್ನು ಕಡಿಮೆಮಾಡುವುದು. ಈ ವ್ಯಕ್ತಿಗಳು ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವರು. ಈ ತಿಂಗಳ ಅಮವಾಸ್ಯೆಯ ದಿನ ಕುಟುಂಬ ಮತ್ತು ಮನೆ ಸಮಸ್ಯೆಗಳು ನಿವಾರಣೆಯಾಗುವುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುವುದು.