Just In
- 39 min ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 1 hr ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 1 hr ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- 1 hr ago ಹೋಳಿ ದಿನ ಸ್ಕೂಟಿಯಲ್ಲಿ ಟೈಟಾನಿಕ್ ಪೋಸ್ ನೀಡಿ ದೊಪ್ಪೆಂದು ಬಿದ್ದ ಹುಡುಗಿಗೆ ಬಿತ್ತು ದುಬಾರಿ ಫೈನ್
Don't Miss
- News Mukhtar Ansari: ಗ್ಯಾಂಗ್ಸ್ಟರ್-ರಾಜಕಾರಣಿ ಮುಖ್ತಾರ್ ಅನ್ಸಾರಿ ಸಾವು
- Movies Radha Bhagavathi ; ಮಲ್ಲಿ ಅಲಿಯಾಸ್ ರಾಧಾ ಭಗವತಿ ಹಿನ್ನೆಲೆ ಏನ್ಗೊತ್ತಾ..?
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
2019 ಹೊಸ ವರ್ಷದಲ್ಲಿ ನೀವು ತೆಗೆದುಕೊಳ್ಳಬೇಕಾದ ನಿರ್ಣಯಗಳು
ದಿನ, ತಿಂಗಳು, ವರ್ಷ ಉರುಳಿದ್ದೇ ಇಂದಿನ ವೇಗದ ಯುಗದಲ್ಲಿ ತಿಳಿಯುತ್ತಲೇ ಇಲ್ಲ. 2018ನೇ ವರ್ಷ ಕೊನೆಗೊಳ್ಳಲು ಇನ್ನು ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಉಳಿದಿದೆ. 2019ನೇ ವರ್ಷ ಆರಂಭವಾಗುವ ಮೊದಲು ನೀವು ಕೆಲವೊಂದು ನಿರ್ಣಯಗಳನ್ನು ಮಾಡಿಕೊಳ್ಳಬೇಕು. ಯಾಕೆಂದರೆ ಇದರಿಂದ ನಿಮ್ಮ ಮುಂದಿನ ಜೀವನವು ತುಂಬಾ ಸುಖಕರವಾಗಿರುವುದು. ಹೆಚ್ಚಿನವರು ಹೊಸ ವರ್ಷದಲ್ಲಿ ಪ್ರತೀ ಸಲ ನಿರ್ಣಯಗಳನ್ನು ತೆಗೆದುಕೊಳ್ಳುವರು. ಆದರೆ ಅದನ್ನು ಪಾಲಿಸಿಕೊಂಡು ಹೋಗುವುದು ಮಾತ್ರ ಕಡಿಮೆ. ಹೀಗೆ ಆಗಬಾರದು.
ನೀವು ತೆಗೆದುಕೊಳ್ಳುವಂತಹ ನಿರ್ಣಯವನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಹೋದರೆ ಮಾತ್ರ ಜೀವನವು ಸಮಸ್ಯೆಯಿಂದ ಮುಕ್ತವಾಗಿ, ಆರೋಗ್ಯಕರವಾಗಿರಲು ಸಾಧ್ಯ. ಹೊಸ ವರ್ಷ ಬಂತೆಂದರೆ ಅದು ಹಲವಾರು ಹೊಸ ಸವಾಲುಗಳನ್ನು ತಂದೇ ಬಿಡುತ್ತದೆ. ಇದನ್ನು ನಿಭಾಯಿಸಲು ಕೆಲವೊಂದು ನಿರ್ಣಯಗಳು ಅತೀ ಅಗತ್ಯವಾಗಿರುವುದು. ಜೀವನದ ಎಲ್ಲಾ ಗೊಂದಲವನ್ನು ಬದಿಗಿಟ್ಟು ಹೊಸ ವರ್ಷವನ್ನು ತುಂಬಾ ವಿಶೇಷವಾಗಿ ಆರಂಭಿಸಲಿದ್ದೀರಿ ಎಂದು ನೀವು ಭರವಸೆ ನೀಡಿ. ನೀವು ಹೊಸ ವರ್ಷದಲ್ಲಿ ಯಾವೆಲ್ಲಾ ಕೆಲಸಗಳನ್ನು ಮಾಡಬಹುದು ಎಂದು ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ತಿಳಿದುಕೊಂಡು ಪಾಲಿಸಿದರೆ ಜೀವನ ಸಂತೋಷವಾಗಿರುವುದು.
ಸಂಬಂಧ
ಜೀವನದಲ್ಲಿ ಯಾವಾಗಲೂ ಸಂಬಂಧವು ಅತೀ ಮುಖ್ಯವಾಗಿರುವುದು. ಅದೇ ರೀತಿಯಾಗಿ ಆರೋಗ್ಯಕಾರಿ ಸಂಬಂಧವು. ಸಂಬಂಧವು ಅನಾರೋಗ್ಯಕರವಾಗಿದ್ದರೆ ಆಗ ಅದು ಯಾವಾಗಲೂ ಸರಿಯಾಗಿರಲ್ಲ. ನೀವು ಎಲ್ಲಾ ರೀತಿಯ ಪ್ರಯತ್ನಪಟ್ಟರೂ ಸಂಬಂಧವು ಕೆಲಸ ಮಾಡುತ್ತಿಲ್ಲವೆಂದಾದರೆ ಆಗ ನೀವು ಒಂದು ದೃಢ ನಿರ್ಧಾರ ತೆಗೆದುಕೊಂಡು ಈ ಸಂಬಂಧದಿಂದ ಹೊರಬರಲು ಪ್ರಯತ್ನಿಸಬೇಕು. ಇದರಿಂದ ನೀವು ಜೀವನದಲ್ಲಿ ಒಳ್ಳೆಯದನ್ನು ಪಡೆಯುವಿರಿ.
ನಿಮ್ಮ ಅಗತ್ಯತೆಗಳಿಗೆ ಗಮನಹರಿಸುತ್ತೀರಾ?
ಜೀವನದಲ್ಲಿ ಹೆಚ್ಚಾಗಿ ಜನರು ತಮ್ಮ ಪ್ರೀತಿಪಾತ್ರರ ಬೇಡಿಕೆಗಳನ್ನು ಪೂರೈಸುವುದರಲ್ಲಿ ಜೀವನ ಕಳೆದುಕೊಂಡು ಬಿಡುವರು. ಈ ವೇಳೆ ನಾವು ಅತೀ ಮುಖ್ಯವಾಗಿರುವ ವ್ಯಕ್ತಿಯ ಕಡೆಗೆ ಗಮನ ನೀಡಲು ವಿಫಲವಾಗುತ್ತೇವೆ. ಆ ವ್ಯಕ್ತಿ ಯಾರು ಗೊತ್ತೇ? ಅದೇ ನಮ್ಮ ಬಗ್ಗೆ. ಹೌದು, ಜೀವನದಲ್ಲಿ ನಾವು ನಮ್ಮ ಬಗ್ಗೆ ಗಮನಹರಿಸುವುದು ತುಂಬಾ ಕಡಿಮೆ. ಬೇರೆಯವರೊಂದಿಗೆ ನಿಮ್ಮ ಭಾವನೆಗಳನ್ನು ಹೂಡಿಕೆ ಮಾಡುವ ಮೊದಲು ನಿಮ್ಮನ್ನು ನೀವು ಪ್ರೀತಿಸಿ. ಇದು ನಿಮ್ಮ ಸಂಗಾತಿಯೇ ಆಗಿರಬಹುದು. ಅದರ ಬಗ್ಗೆ ಚಿಂತೆ ಬೇಡ. ನೀವು ಯಾವಾಗಲೂ ಸಂತೋಷವಾಗಿದ್ದರೆ ಆಗ ಜಗತ್ತು ಕೂಡ ಸಂತೋಷವಾಗಿರುವುದು ಎಂದು ನೀವು ತಿಳಿದಿರಬೇಕು.
Most Read:ಮುಂಬರಲಿರುವ ಹೊಸ ವರ್ಷದಲ್ಲಿ ಈ 4 ರಾಶಿಯವರು ತುಂಬಾನೇ ಸಂತೋಷವಾಗಿರುತ್ತಾರಂತೆ!
ಸ್ವಮಿತಿ ಹೊಂದಿರುವ ಆಲೋಚನೆಗಳು
ಆತ ಅಥವಾ ಆಕೆಗಿಂತ ಉತ್ತಮವಾಗಿರುವವನ್ನು ನಾನು ಪಡೆಯಬಹುದೇ? ನಾನು ಈ ಪ್ರಾಜೆಕ್ಟ್ ನ್ನು ಮುನ್ನಡೆಸಲು ಸಮರ್ಥನಾಗಿದ್ದೇನೆಯಾ? ನಿಮ್ಮ ಆತ್ಮವಿಶ್ವಾಸವನ್ನು ಕುಂದಿಸುವ ಮತ್ತು ನಿಮ್ಮನ್ನು ಏನೂ ಮಾಡದಂತೆ ತಡೆಯುವಂತಹ ಆಲೋಚನೆಗಳನ್ನು ನೀವು ಬಿಟ್ಟುಬಿಡಬೇಕು. ನಿಮಗಾಗಿ ದೊಡ್ಡ ಗುಣಮಟ್ಟ ನಿರ್ಮಿಸಿ, ಕನಸುಗಳ ಬೆನ್ನತ್ತಿ ಮತ್ತು ನಿಮ್ಮದೇ ಆಗಿರುವಂತಹ ಜೀವನ ಸಾಗಿಸಿ.
ನೀವಾಗಿಯೇ ಇರದಿದ್ದರೆ
ನಾವು ಪ್ರೀತಿಸುತ್ತಿರುವ ವ್ಯಕ್ತಿಯ ಮುಂದೆ ಯಾವಾಗಲೂ ತುಂಬಾ ಒಳ್ಳೆಯ ಪರಿಣಾಮ ಬೀರಲು ಪ್ರಯತ್ನಿಸುತ್ತೇ. ಆದರೆ ಇದರರ್ಥ ನಾವು ನಮ್ಮತನವನ್ನು ಬಿಟ್ಟು ತುಂಬಾ ಬದಲಾಗಬೇಕೆಂದಲ್ಲ. ನೀವು ಎಲ್ಲವನ್ನು ಬದಲಾಯಿಸಿಕೊಳ್ಳಬೇಡಿ ಮತ್ತು ಬೇರೆಯವರನ್ನು ಸೆಳೆಯಲು ನಿಮ್ಮತನವನ್ನು ಮರೆತು ಬಿಡಬೇಡಿ. ನಿಮ್ಮನ್ನು ಬದಲಾವಣೆ ಮಾಡಿಕೊಳ್ಳುವಷ್ಟು ಮೌಲ್ಯಯುತ ಆಗಿರುವವರು ಯಾರೂ ಇಲ್ಲ.
ಸಂಗಾತಿಯನ್ನು ಅತಿಯಾಗಿ ಮೆಚ್ಚಿಸಲು ಹೋಗುವುದು
ಜೀವನದಲ್ಲಿ ಸಂಗಾತಿಯು ಕೂಡ ಅತೀ ಅಗತ್ಯವಾಗಿ ಬೇಕು. ಸಂಗಾತಿ ಜೀವನದಲ್ಲಿ ಸಂತೋಷ ಮತ್ತು ವಿಶೇಷವನ್ನು ಉಂಟು ಮಾಡುವರು. ಆದರೆ ಕೆಲವೊಂದು ಸಲ ನಾವು ಅತಿ ಎಂದು ಅನಿಸುವಷ್ಟು ಸಂಗಾತಿಯನ್ನು ಮೆಚ್ಚಿಸಲು ಹೋಗುವೆವು. ಅತಿಯಾಗಿ ಕಾಳಜಿ ಮಾಡುವುದು, ಚಿಂತೆ ಮಾಡುವುದು ಮತ್ತು ಪ್ರೀತಿಸುವುದು ಕೂಡ ಸಂಬಂಧದ ಮೇಲೆ ಕೆಟ್ಟ ಪರಿಣಾಮ ಬೀರುವುದು. ನೀವು ತುಂಬಾ ಕೆಟ್ಟ ನಿರೀಕ್ಷೆಯ ಮಟ್ಟವನ್ನು ಬಯಸುತ್ತಿದ್ದೀರಿ ಮತ್ತು ಸಂಗಾತಿಯು ಇದನ್ನು ಬೇರೆ ರೀತಿಯಿಂದ ಪರಿಗಣಿಸಬಹುದು. ಸಂಬಂಧವೆನ್ನುವುದು ಜೋಡೆತ್ತು ಇದ್ದಂತೆ ಮತ್ತು ನೀವು ನೀಡಿದಷ್ಟೇ ಪ್ರೀತಿ, ಕಾಳಜಿ, ಆರೈಕೆಯು ನಿಮಗೂ ಸಿಗಬೇಕು.
ಇತರ ವಿಚಾರಗಳು ಯಾವುದು?
ನಮ್ಮ ಸುತ್ತಲು ಇರುವಂತಹ ಲಿಂಗಭೇದವನ್ನು ನಾವು ತೆಗೆದುಹಾಕಬೇಕು ಮತ್ತು ಬೇರೆಯವರು ಇದರ ಬಗ್ಗೆ ಏನು ಹೇಳುತ್ತಾರೆಯಾ ಎಂದು ಚಿಂತಿಸುವುದನ್ನು ಬಿಟ್ಟು ಬಿಡಬೇಕು. ದೊಡ್ಡ ವಯಸ್ಸಿನ ಯುವಕ ಅಥವಾ ಮಹಿಳೆಯನ್ನು ಡೇಟಿಂಗ್ ಮಾಡುವುದು ಇಂದು ದೊಡ್ಡ ಸಮಸ್ಯೆಯಲ್ಲ. ನೀವು ಕಲಿತಿರುವುದಕ್ಕಿಂತಲೂ ತುಂಬಾ ಭಿನ್ನವಾಗಿರುವ ಉದ್ಯೋಗವನ್ನು ಮಾಡುವುದು ಯಾವುದೇ ರೀತಿಯಿಂದಲೂ ತಪ್ಪಲ್ಲ ಮತ್ತು 30ರ ಹರೆಯದಲ್ಲಿ ಮದುವೆಯಾಗುವುದು ಕೂಡ ದೊಡ್ಡ ಮಟ್ಟದ ಸಮಸ್ಯೆಯಲ್ಲ. ಕಿರಿಕಿರಿಯ ನೆರೆಮನೆಯವರು, ಅನಗತ್ಯ ಸಲಹೆ ಮಾಡುವ ಸಂಬಂಧಿಕರು ಏನು ಹೇಳುತ್ತಾರೆ ಎನ್ನುವುದು ಮುಖ್ಯವಲ್ಲ. ನಿಮ್ಮ ಜೀವನವು ಇಲ್ಲಿ ಎಲ್ಲಕ್ಕಿಂತಲೂ ಮುಖ್ಯವಾಗಿರುವುದು ಎಂದು ಮೊದಲು ದೃಢಪಡಿಸಿಕೊಳ್ಳಿ.
ದೇಹದ ಬಗ್ಗೆ ಜಾಗೃತವಾಗಿರುವುದು
ನಿಮ್ಮ ದೇಹದ ಬಣ್ಣ, ತೂಕ, ವಿನ್ಯಾಸವು ಏನೇ ಆಗಿದ್ದರೂ ಅದು ನಿಮ್ಮ ದೇಹವಾಗಿರುವುದು. ನೀವು ಯಾವುದೇ ರೀತಿಯ ಆಹಾರ ಪಥ್ಯ, ಆಹಾರ ಕ್ರಮ ಮತ್ತು ಕೆಲವೇ ದಿನಗಳಲ್ಲಿ ದೇಹದ ತೂಕ ಇಳಿಸಿಕೊಂಡು ನಿಮ್ಮನ್ನು ಸುಂದರವಾಗಿಸುತ್ತೇವೆ ಎಂದು ಹೇಳುವಂತಹ ಮಾತುಗಳನ್ನು ಖಂಡಿತವಾಗಿಯೂ ನಂಬಬೇಡಿ. ದೇಹದ ಬಗ್ಗೆ ಇರುವಂತಹ ಅತಿಯಾಗಿರುವ ಚಿಂತೆಯನ್ನು ನೀವು ಮರೆತುಬಿಡಿ. ನಿಮ್ಮ ದೇಹವು ಕೇವಲ ನಿಮ್ಮದು. ಅದರ ಬಗ್ಗೆ ಬೇರೆಯವರಿಗೆ ಟೀಕೆ ಮಾಡಲು ಅವಕಾಶ ನೀಡಬೇಡಿ.
ಅತಿಯಾಗಿ ಚಿಂತಿಸುವುದು
ಕೆಲವು ಜನರು ಯಾವುದೇ ವಿಚಾರವಾದರೂ ಅದರ ಬಗ್ಗೆ ಅತಿಯಾಗಿ ಚಿಂತೆ ಮಾಡುವರು ಮತ್ತು ಇದರಿಂದಾಗಿ ಅವರ ಮಾನಸಿಕ ನೆಮ್ಮದಿಯು ಕೆಡುವುದು. ಅತಿಯಾಗಿ ಆಲೋಚನೆ ಮಾಡುವುದು ಇಲ್ಲದೆ ಇರುವಂತಹ ಸಮಸ್ಯೆಗಳನ್ನು ಸೃಷ್ಟಿಸಿಕೊಂಡಂತೆ ಎಂದು ಜ್ಞಾನಿಯೊಬ್ಬರು ಹೇಳಿರುವರು. ಇದು ಖಂಡಿತವಾಗಿಯೂ ನಿಜ. ಭವಿಷ್ಯವು ನಮ್ಮ ಕೈಯಲ್ಲಿ ಇಲ್ಲದೆ ಇರುವಾಗ ನಾವು ವರ್ತಮಾನದಲ್ಲಿ ಅತಿಯಾಗಿ ಚಿಂತೆ ಮಾಡಿಕೊಂಡು ಸಂಭ್ರಮದ ಕ್ಷಣಗಳನ್ನು ಯಾಕೆ ಬಲಿಕೊಡಬೇಕು?
ಏನೋ ಕಳೆದುಕೊಳ್ಳುವ ಭೀತಿ
ಇಂದಿನ ದಿನಗಳಲ್ಲಿ ಹೆಚ್ಚಿನವರನ್ನು ಕಾಡುತ್ತಿರುವಂತಹ ಅಂಶವೆಂದರೆ ಏನೋ ಕಳೆದುಕೊಳ್ಳುವ ಭೀತಿ. ಯಾವುದೇ ಪಾರ್ಟಿ, ಭಾನುವಾರದ ರಜೆ ಅಥವಾ ಸ್ನೇಹಿತರೊಂದಿಗೆ ಶಾಪಿಂಗ್ ಗೆ ಹೋಗುವುದನ್ನು ತಪ್ಪಿಸಿಕೊಂಡರೆ ಅದರಿಂದ ಯಾವುದೇ ದೊಡ್ಡ ಹಾನಿ ಆಗದು ಎಂದು ಅರಿತುಕೊಳ್ಳಬೇಕು. ಇದರ ಬದಲಿಗೆ ಯಾವುದಾದರೂ ಒಳ್ಳೆಯ ಪುಸ್ತಕ ಅಥವಾ ಪ್ರೀತಿಪಾತ್ರರಿಂದ ಸಮಯ ಕಳೆದರೆ ಅದರಿಂದ ಖಂಡಿತವಾಗಿಯೂ ಹೆಚ್ಚಿನ ಖುಷಿ ಸಿಗುವುದು. ಇದರಿಂದ ಅಂತಹ ಚಿಂತೆ ಬಿಟ್ಟುಬಿಟ್ಟು ಜೀವನವನ್ನು ಆನಂದಿಸಲು ಪ್ರಯತ್ನಿಸಿ.
ಏನೋ ಕಳೆದುಕೊಳ್ಳುವ ಭೀತಿ
ಇಂದಿನ ದಿನಗಳಲ್ಲಿ ಹೆಚ್ಚಿನವರನ್ನು ಕಾಡುತ್ತಿರುವಂತಹ ಅಂಶವೆಂದರೆ ಏನೋ ಕಳೆದುಕೊಳ್ಳುವ ಭೀತಿ. ಯಾವುದೇ ಪಾರ್ಟಿ, ಭಾನುವಾರದ ರಜೆ ಅಥವಾ ಸ್ನೇಹಿತರೊಂದಿಗೆ ಶಾಪಿಂಗ್ ಗೆ ಹೋಗುವುದನ್ನು ತಪ್ಪಿಸಿಕೊಂಡರೆ ಅದರಿಂದ ಯಾವುದೇ ದೊಡ್ಡ ಹಾನಿ ಆಗದು ಎಂದು ಅರಿತುಕೊಳ್ಳಬೇಕು. ಇದರ ಬದಲಿಗೆ ಯಾವುದಾದರೂ ಒಳ್ಳೆಯ ಪುಸ್ತಕ ಅಥವಾ ಪ್ರೀತಿಪಾತ್ರರಿಂದ ಸಮಯ ಕಳೆದರೆ ಅದರಿಂದ ಖಂಡಿತವಾಗಿಯೂ ಹೆಚ್ಚಿನ ಖುಷಿ ಸಿಗುವುದು. ಇದರಿಂದ ಅಂತಹ ಚಿಂತೆ ಬಿಟ್ಟುಬಿಟ್ಟು ಜೀವನವನ್ನು ಆನಂದಿಸಲು ಪ್ರಯತ್ನಿಸಿ.