Just In
- 1 hr ago ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- 1 hr ago ಗಂಡು ಎಂದು ಸಾಕಿದ್ದ ನೀರು ಕುದುರೆ 7 ವರ್ಷದ ಬಳಿಕ ಹೆಣ್ಣಾಗಿತ್ತು..! ಝೂನಲ್ಲಿ ಅಚ್ಚರಿ..!
- 2 hrs ago ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- 6 hrs ago ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
Don't Miss
- Finance Bengaluru Suburban Rail Project: ದೊಡ್ಡಜಾಲದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ರೈಲು ಸಂಪರ್ಕ, ವಿವರ
- Automobiles Maruti: ಜಪಾನ್ನಲ್ಲಿ ಗರಿಷ್ಟ ಗುಣಮಟ್ಟದ ಸ್ವಿಫ್ಟ್ ಕಾರು! ಭಾರತಕ್ಕೆ ಮಾತ್ರ ಕಳಪೆ ಗುಣಮಟ್ಟ ಏಕೆ?
- News ನಂಬರ್ ಪ್ಲೇಟ್ ವಿಚಾರದಲ್ಲಿ ವಾಹನ ಮಾಲೀಕರೇ ಈ ತಪ್ಪು ಮಾಡಬೇಡಿ!
- Technology Jio: ಅಗ್ಗದ ಜಿಯೋ ಸಿನಿಮಾ ಪ್ರೀಮಿಯಂ ಚಂದಾದಾರಿಕೆ ಘೋಷಣೆ! 29 ರೂ.ಗಳಿಂದ ಪ್ರಾರಂಭ..
- Movies ತಮನ್ನಾ ಪಾಲಿಗೆ 'ದುಬಾರಿ' ಆಯಿತು 'ಪ್ರಚಾರ' ; ಮಿಲ್ಕಿ ಬ್ಯೂಟಿಯನ್ನ ವಿಚಾರಣೆಗೆ ಕರೆದ ಸೈಬರ್ ಇಲಾಖೆ..!
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ನಾಲ್ಕು ರಾಶಿಚಕ್ರದವರು ಶ್ರಮದಲ್ಲಿಯೇ ಸಂತೋಷ ಕಾಣುವ ವ್ಯಕ್ತಿಗಳು
ಸಾಮಾನ್ಯವಾಗಿ ಎಲ್ಲರಿಗೂ ಕೆಲಸದಲ್ಲಿ ಕೊಂಚ ವಿರಾಮ ಸಿಗಲಿ ಎಂದು ಯೋಚಿಸುತ್ತಿರುತ್ತಾರೆ. ಹಾಗೊಮ್ಮೆ ಅವರಿಗೆ ವಿಶ್ರಾಂತಿಗೆ ಸಮಯ ದೊರೆಯಿತು ಎಂದಾದರೆ ಅದನ್ನು ಎಂದಿಗೂ ತಪ್ಪಿಸಿಕೊಳ್ಳುವುದಿಲ್ಲ. ನಮ್ಮ ಅನುಕೂಲಕ್ಕೆ ತಕ್ಕಂತೆ ವಿಶ್ರಾಂತಿ ಅಥವಾ ಕಾಲಾಹರಣಕ್ಕೆ ಸಮಯ ಸಿಗಲಿಲ್ಲ ಎಂದಾದರೆ ಸಂಬಂಧಿಸಿದ ಮೇಲಾಧಿಕಾರಿಗಳಿಗೆ ಏನಾದರೂ ಸಬೂಬು ಕೊಡುವುದರ ಮೂಲಕ ವಿರಾಮವನ್ನು ಪಡೆದುಕೊಳ್ಳುವುದುಂಟು.
ಆದರೆ ಕೆಲವು ವ್ಯಕ್ತಿಗಳು ತಮ್ಮ ಜೀವನದಲ್ಲಿ ಸದಾ ಕೆಲಸದಲ್ಲಿಯೇ ತಲ್ಲೀನರಾಗಿರುವುದಕ್ಕೆ ಹೆಚ್ಚು ಸಂತೋಷ ಪಡುತ್ತಾರೆ. ಅವರಿಗೆ ವಿಶ್ರಾಂತಿಯಲ್ಲಿ ಸಿಗುವ ಸಂತೋಷ ಅಥವಾ ಆರಾಮದಾಯಕ ಅನುಭವವು ಅವರು ಮಾಡುವ ಕೆಲಸದಲ್ಲಿಯೇ ದೊರೆಯುತ್ತದೆ. ಅವರು ಬಯಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಲೇ ಇರಲು ಬಯಸುತ್ತಾರೆ ಎಂದು ಹೇಳಲಾಗುವುದು.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರದ ವ್ಯಕ್ತಿಗಳು ಹೊಸ ಹೊಸ ಅನುಭವಗಳನ್ನು ಹೊಂದುವುದು, ತಮ್ಮ ಕನಸುಗಳನ್ನು ಸಾಕಾರ ಗೊಳಿಸಲು ಶ್ರಮಿಸುವುದು, ತಾವು ಮಾಡುವ ಕೆಲಸದಲ್ಲಿ ಕ್ರಿಯಾಶೀಲತೆಯನ್ನು ಅನ್ವಯ ಮಾಡುವುದು ಎಂದರೆ ಬಹಳ ಇಷ್ಟಕರವಾದ ಸಂಗತಿಯಾಗಿರುತ್ತದೆ.
ಇಂತಹ ವ್ಯಕ್ತಿಗಳಿಗೆ ಬಿಡುವಿನ ಸಮಯದಲ್ಲಿ ವಿಶ್ರಾಂತಿ ಪಡೆಯುವುದರಿಂದ ಸಂತೋಷ ದೊರೆಯದು. ಬದಲಿಗೆ ಸಿಕ್ಕ ಸಮಯದಲ್ಲಿ ಇನ್ನಷ್ಟು ಶ್ರಮದಿಂದ ಕೆಲಸ ನಿರ್ವಹಿಸುವುದು ಬಹಳ ಸಂತೋಷವನ್ನು ತಂದುಕೊಡುತ್ತದೆ. ಹಾಗಾದರೆ ಆ ರಾಶಿಚಕ್ರಗಳು ಯಾವವು? ಅವರ ಕಾರ್ಯ ವೈಖರಿ ಹೇಗಿರುತ್ತದೆ? ಎನ್ನುವುದನ್ನು ತಿಳಿಯಲು ಈ ಮುಂದಿರುವ ವಿವರಣೆಯನ್ನು ಓದಿ...
1. ಸಿಂಹ
ಈ ರಾಶಿಯ ವ್ಯಕ್ತಿಗಳು ತಮ್ಮ ಜೀವನದಲ್ಲಿ ಸಣ್ಣ-ಪುಟ್ಟ ವಿಚಾರಗಳಿಗೂ ಹೆಚ್ಚಿನ ಸಂತೋಷವನ್ನು ವ್ಯಕ್ತಪಡಿಸುತ್ತಾರೆ. ಜೊತೆಗೆ ಜೀವನದಲ್ಲಿ ತಮ್ಮದೇ ಆದ ನಿರ್ದಿಷ್ಟ ಗುರಿಯನ್ನು ಹೊಂದಿರುತ್ತಾರೆ. ಅವರ ಕ್ರಿಯಾತ್ಮಕ ಕೆಲಸಗಳಿಂದಲೇ ಜೀವನ ಅದ್ಭುತ ಹಾಗೂ ಉತ್ಸಾಹದಿಂದ ತುಂಬಿರುತ್ತದೆ ಎಂದು ನಂಬುತ್ತಾರೆ. ಇವರು ಹೊಸ ಅನುಭವಗಳನ್ನು ಪಡೆಯುವುದು, ಹೊಸ ಜನರೊಂದಿಗೆ ಬೆರೆಯುವುದು ಹಾಗೂ ಹೊಸ ವಿಚಾರಗಳನ್ನು ತಿಳಿದುಕೊಳ್ಳುವುದರ ಮೂಲಕವೇ ತಮ್ಮ ಏಳಿಗೆಯನ್ನು ಕಾಣುತ್ತಾರೆ. ಇವರು ಇದ್ದ ಜಾಗದಲ್ಲಿಯೇ ಇದ್ದರೂ ಮನಸ್ಸಿನಲ್ಲಿ ಹೊಸ ಹೊಸ ವಿಷಯಗಳನ್ನು ಕಲೆಹಾಕುತ್ತಾ ಜೀವನವನ್ನು ಸುಧಾರಿಸುವ ಮಾರ್ಗಗಳ ಕುರಿತು ಯೋಚಿಸುತ್ತಾರೆ.
2. ಮಿಥುನ
ಇವರು ಅತ್ಯಂತ ಆಳವಾದ ಚಿಂತಕರು ಎಂದು ಹೇಳಲಾಗುವುದು. ಇವರು ತಮ್ಮ ಜೀವನದ ಬಗ್ಗೆ ಸಾಕಷ್ಟು ಚಿಂತನೆಯನ್ನು ನಡೆಸುತ್ತಾರೆ. ಇವರು ತಾವು ಕೆಲಸ ಮಾಡುವುದಕ್ಕಿಂತ ಇತರರು ಮಾಡಬೇಕೆಂದು ಬಯಸುತ್ತಾರೆ. ಇತರರ ಜೊತೆಗೆ ಕೈ ಜೋಡಿಸುವುದರ ಮೂಲಕ ಕ್ರಿಯಾತ್ಮಕ ಕೆಲಸಗಳನ್ನು ಪ್ರಾರಂಭಿಸುವರು. ಸೌಂದರ್ಯವನ್ನು ಇಷ್ಟಪಡುವ ಇವರು ಒಂದೇ ಜಾಗಕ್ಕೆ ಅಂಟಿಕೊಳ್ಳಲು ಬಯಸುವುದಿಲ್ಲ. ನಿರಂತರವಾಗಿ ಕಾರ್ಯನಿರತರಾಗಿದ್ದು, ಸಂಬಂಧಗಳೊಂದಿಗೆ ದೀರ್ಘ ಪಟ್ಟಿ ಹೊಂದಲು ಬಯಸುವರು.
3.ಧನು
ಈ ವ್ಯಕ್ತಿಗಳು ಸದಾ ಹೊಸತನ್ನು ಹುಡುಕುತ್ತಾರೆ. ಹೊಸ ಮುಖಗಳು, ಹೊಸ ಆಲೋಚನೆಗಳು ಮತ್ತು ಸರ್ವಕಾಲಿಕವಾಗಿ ಹೊಸ ಸಂಪ್ರದಾಯ ನೀತಿಗಳನ್ನು ನೋಡಲು ಬಯಸುವರು. ಇವರು ಎಂತಹ ಸಂದರ್ಭದಲ್ಲಿದ್ದರೂ ಅಥವಾ ಪ್ರಯಾಣದಲ್ಲಿದ್ದರೂ ಅವರಿಗೆ ಯಾವುದೇ ಚಿಂತನೆಗಳಿಗೆ ಒಳಗಾಗದೆ ಹೊಸದನ್ನು ಕಲಿಯಲು ಪ್ರಯತ್ನಿಸುತ್ತಿರುತ್ತಾರೆ. ಇವರು ಖುಷಿ ಅಥವಾ ನೆಮ್ಮದಿಯನ್ನು ಹೊಂದಬೇಕು ಎಂದರೆ ಇವರಿಗೆ ನಿಯಮಿತವಾಗಿ ಹೊಸ-ಹೊಸ ಸಂಗತಿಗಳು ದೊರೆಯುತ್ತಿರಬೇಕು.
4. ಮೇಷ
ಈ ರಾಶಿಯವರು ಎಲ್ಲಾ ಸಮಯದಲ್ಲೂ ಹೆಚ್ಚು ಉತ್ಸುಕರಾಗಿ ಹಾಗೂ ಸಾಹಸಿಗರಾಗಿ ಇರುತ್ತಾರೆ. ಇವರು ಹೊಸ ಅನುಭವಗಳನ್ನು ಮತ್ತು ಸವಾಲುಗಳನ್ನು ಸ್ವೀಕರಿಸಲು ಬಯಸುತ್ತಾರೆ. ಪ್ರತಿಯೊಂದು ವಿಚಾರದಲ್ಲೂ ಅಡಗಿರುವ ಸತ್ಯವೇನು ಎನ್ನುವುದನ್ನು ತಿಳಿದುಕೊಳ್ಳುತ್ತಾರೆ. ಎಲ್ಲಾ ವಿಚಾರದಲ್ಲೂ ಧನಾತ್ಮಕ ಬದಲಾವಣೆಯನ್ನು ಕಾಣಲು ಬಯಸುವರು. ಆದರೆ ಕೆಲವೊಮ್ಮೆ ಬಹುಬೇಗ ಬೇಸರಕ್ಕೆ ಒಳಗಾಗುತ್ತಾರೆ. ಅದಕ್ಕೆ ಕಾರಣ ಅವರ ತಪ್ಪು ಕಲ್ಪನೆಗಳು ಎಂದು ಹೇಳಲಾಗುವುದು.