Just In
- 8 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 9 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 10 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 10 hrs ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
Don't Miss
- News Smartphone: ಮಾರುಕಟ್ಟೆಯಲ್ಲಿ ಸದ್ದು ಮಾಡಲು ಬರುತ್ತಿದೆ ಸ್ಯಾಮ್ಸಂಗ್ M35 5G
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Movies Neha Murder Case: ನೇಹಾ ಹತ್ಯೆ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡಬೇಕು ಎಂದು ಸಿನಿಮಾ ತಾರೆಯರ ಆಗ್ರಹ
- Technology Earbuds: 2000 ರೂ. ಒಳಗೆ ಲಭ್ಯ ಇರುವ ಅತ್ಯುತ್ತಮ ಇಯರ್ಬಡ್ಸ್! ಸಖತ್ ಫೀಚರ್ಸ್...
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹನುಮಾನ್ ಜಯಂತಿ 2020: ಹಬ್ಬದ ಮಹತ್ವ ಹಾಗೂ ದಂತಕಥೆಗಳು
ಹನುಮಂತನು ತನ್ನ ಶಕ್ತಿಯಿಂದ ದುಷ್ಟರನ್ನು ಸದೆಬಡಿಯುತ್ತಾ ಇದ್ದ ಎಂದು ಪುರಾಣಗಳಲ್ಲಿ ಇದೆ. ಹನುಮಾನ್ ಜಯಂತಿಯಂದು ಹನುಮಂತನ ಪೂಜೆ ಮಾಡಿದರೆ ಎಲ್ಲಾ ರೀತಿಯ ನಕಾರಾತ್ಮಕ ಶಕ್ತಿಗಳು ದೂರವಾಗಿ ಧನಾತ್ಮಕತೆ ಬರುವುದು.
ರಾಮಾಯಣದಲ್ಲಿ ರಾವಣನ ವಧೆ ಮಾಡಲು ರಾಮನಿಗೆ ಪ್ರತಿಯೊಂದು ಹಂತದಲ್ಲಿಯೂ ನೆರವಾಗಿ ರಾಮಭಕ್ತನೆನಿಸಿಕೊಂಡಿರುವ ಹನುಮಂತನ ಜಯಂತಿಯು ಚೈತ್ರ ಮಾಸದ 15ನೇ ದಿನದಂದು ಆಚರಿಸಲಾಗುತ್ತದೆ. ಹನುಮಂತನ ಹುಟ್ಟುಹಬ್ಬವನ್ನು ಹನುಮಾನ್ ಜಯಂತಿ ಎಂದು ಆಚರಿಸಲಾಗುತ್ತದೆ. ಕೆಲವೇ ದಿನಗಳ ಮೊದಲು ನಾವು ರಾಮನವಮಿಯನ್ನು ಆಚರಿಸಿದ್ದೇವೆ. ಈ ವರ್ಷ ಏಪ್ರಿಲ್ 8ಕ್ಕೆ ಹನುಮಾನ್ ಜಯಂತಿಯನ್ನು ಆಚರಿಸುತ್ತಿದ್ದೇವೆ
ಈಗ ರಾಮನ ಭಕ್ತ ಹನುಮಂತನ ಜಯಂತಿ. ರಾಮನನ್ನು ಪೂಜಿಸುವ ಪ್ರತಿಯೊಬ್ಬರಿಗೂ ಹನುಮಂತನ ದಯೆ ಇರುತ್ತದೆ ಎಂದು ನಂಬಲಾಗಿದೆ. ರಾಮನಿರುವ ಪ್ರತಿಯೊಂದು ಮಂದಿರದಲ್ಲಿ ಹನುಮನಿರಲೇಬೇಕು. ಹನುಮಂತನ ಸ್ವಾಮಿನಿಷ್ಠೆ ಮತ್ತು ಆತನ ಶಕ್ತಿಯು ಅಗಾಧವಾಗಿರುವಂತದ್ದಾಗಿದೆ. ಶಕ್ತಿ ದೇವತೆ ಹನುಮಂತನನ್ನು ಪೂಜಿಸುವ ವಿಧಿ-ವಿಧಾನ
ಹನುಮಂತನು ತನ್ನ ಶಕ್ತಿಯಿಂದ ದುಷ್ಟರನ್ನು ಸದೆಬಡಿಯುತ್ತಾ ಇದ್ದ ಎಂದು ಪುರಾಣಗಳಲ್ಲಿ ಇದೆ. ಹನುಮಾನ್ ಜಯಂತಿಯಂದು ಹನುಮಂತನ ಪೂಜೆ ಮಾಡಿದರೆ ಎಲ್ಲಾ ರೀತಿಯ ನಕಾರಾತ್ಮಕ ಶಕ್ತಿಗಳು ದೂರವಾಗಿ ಧನಾತ್ಮಕತೆ ಬರುವುದು. ಈ ಲೇಖನದಲ್ಲಿ ಹನುಮಾನ್ ಜಯಂತಿಯ ಮಹತ್ವವನ್ನು ತಿಳಿದುಕೊಂಡು ಹನುಮಂತನನ್ನು ಪೂಜಿಸಿ.....
ಹನುಮಾನ್ ಜಯಂತಿ ಬಗ್ಗೆ ಇರುವ ದಂತಕಥೆಗಳು
ಒಂದು ದಿನ ಸೀತಾಮಾತೆಯು ಹಣೆಗೆ ಕುಂಕುಮವನ್ನಿಡುವುದನ್ನು ಹನುಮಂತ ನೋಡುತ್ತಾನೆ. ಇದನ್ನು ನೋಡಿ ಆತನಿಗೆ ತುಂಬಾ ಅಚ್ಚರಿಯಾಗುತ್ತದೆ ಮತ್ತು ಹಣಿಗೆ ಯಾಕೆ ಕುಂಕುಮವನ್ನಿಡುತ್ತಾ ಇದ್ದೀರಿ ಎಂದು ಸೀತೆಯಲ್ಲಿ ಕೇಳುತ್ತಾನೆ.
ಹನುಮಾನ್ ಜಯಂತಿ ಬಗ್ಗೆ ಇರುವ ದಂತಕಥೆಗಳು
ಕುಂಕುಮವನ್ನು ಇಟ್ಟರೆ ಪತಿ ರಾಮನ ಆಯಸ್ಸು ಹೆಚ್ಚಾಗುತ್ತದೆ ಎಂದು ಸೀತೆಯು ವಿವರಿಸುತ್ತಾಳೆ. ಇದನ್ನು ಕೇಳಿದ ಹನುಮಂತ ತನ್ನ ದೇಹವನ್ನು ಕುಂಕುಮದಿಂದ ಮೆತ್ತಿಸಿಕೊಂಡು ರಾಮನ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿದನಂತೆ!
ಲಡ್ಡು ಅಂದರೆ ಹನುಮಾನ್ಗೆ ಪಂಚಪ್ರಾಣ...
ಹನುಮಾನ್ ಜಯಂತಿಯ ದಿನ ಜನರು ಹನುಮಂತನ ಮೂರ್ತಿಗೆ ಮಜ್ಜನಗೈದು ಬಳಿಕ ಸಿಂಧೂರವನ್ನು ಇಡುತ್ತಾರೆ. ಹನುಮಂತನಿಗೆ ಲಡ್ಡು ತುಂಬಾ ಇಷ್ಟವಾಗಿರುವ ಕಾರಣದಿಂದ ಪ್ರಸಾದವಾಗಿ ಲಡ್ಡುವನ್ನು ಇಡುತ್ತಾರೆ. ಈ ವೇಳೆ ಭಕ್ತರು ಹನುಮಾನ್ ಚಾಲೀಸವನ್ನು ಪಠಿಸುತ್ತಾರೆ. ಹನುಮಾನ್ ಚಾಲೀಸವನ್ನು ಪಠಿಸುವುದರಿಂದ ಭಯದಿಂದ ಮುಕ್ತಿ ಸಿಗುತ್ತದೆ ಎನ್ನುವ ನಂಬಿಕೆಯಿದೆ.
ಹನುಮಂತ ಸ್ವಾಮಿನಿಷ್ಠೆ ಮತ್ತು ಭಕ್ತಿಯ ಪ್ರತೀಕ
ಹನುಮಂತನನ್ನು ಶಿವನ ಅವತಾರವೆಂದು ನಂಬಲಾಗಿದೆ. ಹನುಮಂತ ಸ್ವಾಮಿನಿಷ್ಠೆ ಮತ್ತು ಭಕ್ತಿಯ ಪ್ರತೀಕ. ಹನುಮಂತನ ಶಕ್ತಿಗೆ ಯಾರೂ ಎದುರಿಲ್ಲ ಮತ್ತು ಆತನೊಬ್ಬ ಜ್ಞಾನಿಯೆಂದು ಪರಿಗಣಿಸಲಾಗಿದೆ. ಹನುಮಾನ್ ಜಯಂತಿಯಂದು ಜನರು ಉಪವಾಸ ಮಾಡಿ ಹನುಮಂತನ ಆಶೀರ್ವಾದ ಬಯಸುತ್ತಾರೆ.
ಹನುಮಾಣ್ ಚಾಲೀಸ
ಸುತ್ತಲು ಇರುವಂತಹ ದುಷ್ಟಶಕ್ತಿಗಳ ನಿವಾರಣೆ ಮಾಡಲು ಭಕ್ತರು ದಿನವಿಡಿ ಹನುಮಾಣ್ ಚಾಲೀಸವನ್ನು ಪಠಿಸುತ್ತಾರೆ. ಹನುಮಾನ್ ಮಂದಿರ ಹಾಗೂ ರಾಮಮಂದಿರಗಳಲ್ಲಿ ವಿಶೇಷ ಪೂಜೆಗಳನ್ನು ನೆರವೇರಿಸಿ ಪ್ರಸಾದ ವಿತರಿಸಲಾಗುತ್ತದೆ. ಹನುಮಾನ್ ಜಯಂತಿಯಂದು ಹನುಮಂತನನ್ನು ಪೂಜಿಸುವ ಭಕ್ತರು ಶಕ್ತಿ ಹಾಗೂ ಜೀವನದ ಸಂಕಷ್ಟಗಳಿಂದ ಹೊರಬರುತ್ತಾರೆ.ಮಲಗುವ ಮುನ್ನ 'ಹನುಮಾನ್ ಚಾಲೀಸಾ' ಪಠಿಸಲು ಮರೆಯದಿರಿ