Just In
- 3 hrs ago ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
- 11 hrs ago ಮೀನ ರಾಶಿಯಲ್ಲಿ ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ: 12 ರಾಶಿಗಳ ಮೇಲಿರಲಿದೆ ಈ ನಕರಾತ್ಮಕ ಪರಿಣಾ
- 12 hrs ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- 12 hrs ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
Don't Miss
- News ಮೋದಿ ಯಾರ ಪರ; ಪ್ರಧಾನಿಯಾಗಿ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದು ಯಾರದ್ದು? ಸಿದ್ದರಾಮಯ್ಯ
- Finance ಬೆಂಗಳೂರಿನಲ್ಲಿ ಈ ಮೂರು ದಿನಗಳ ಕಾಲ ಮದ್ಯ ಮಾರಾಟ ನಿಷೇಧ, ದಿನಾಂಕ, ಸಮಯ ತಿಳಿಯಿರಿ
- Technology ಡೇಟಾ ಬಳಕೆಯಲ್ಲಿ ಚೀನಾ ಮೊಬೈಲ್ ಹಿಂದಿಕ್ಕಿದ ಜಿಯೋ, ಈಗ ವಿಶ್ವದಲ್ಲೇ ದೊಡ್ಡಣ್ಣ!
- Automobiles ಕ್ರ್ಯಾಶ್ಟೆಸ್ಟ್ನಲ್ಲಿ ಈ ಹೋಂಡಾ ಕಾರಿಗೆ ಕೇವಲ 2 ಸ್ಟಾರ್: ಆದರೂ ಭಾರತೀಯರಿಗೆ ಈ ಕಾರು ಅಚ್ಚುಮೆಚ್ಚು!
- Sports ಟಿ20 ವಿಶ್ವಕಪ್ಗಾಗಿ ಭಾರತದ ಟಾಪ್ 3 ಆಯ್ಕೆ ಮಾಡಿದ ಇರ್ಫಾನ್ ಪಠಾಣ್; ವಿರಾಟ್ ಕೊಹ್ಲಿ ಸ್ಥಾನವೇನು?
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೆಳಗ್ಗಿನ ಉಪಹಾರ ತ್ಯಜಿಸಿದರೆ-ಅಪಾಯ ಕಟ್ಟಿಟ್ಟ ಬುತ್ತಿ!
ಸಮಯದ ಅಭಾವದಿಂದಾಗಿ ನಾವು ಹೆಚ್ಚಿನ ಸಮಯಗಳಲ್ಲಿ ಉಪಹಾರವನ್ನು ಸೇವಿಸುವುದೇ ಇಲ್ಲ. ನಮ್ಮ ದೇಹಕ್ಕೆ ಈ ಆಹಾರದ ಶಕ್ತಿ ಅಗತ್ಯವಿದ್ದರೂ ನಾವು ಆ ಸಮಯದಲ್ಲಿ ಪೂರೈಸುವುದಿಲ್ಲ. ಇದರಿಂದ ಉಂಟಾಗುವ ಅಪಾಯಗಳನ್ನು ನಿಮಗೆ ಊಹಿಸಲೂ ಸಾಧ್ಯವಿಲ್ಲ....
ನಮ್ಮ ದಿನದ ಆಹಾರಗಳಲ್ಲಿ ಬೆಳಗಿನ ಉಪಾಹಾರವೇ ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ ರಾತ್ರಿಯ ನಿದ್ದೆಯ ಅವಧಿಯಲ್ಲಿ ಶರೀರ ವಿಶ್ರಾಂತ ಸ್ಥಿತಿಯಲ್ಲಿದ್ದಾಗ ಹಲವು ಕಾರ್ಯಗಳು ನಡೆದು ದೇಹದ ಶಕ್ತಿ ಕಳೆದುಕೊಂಡಿರುತ್ತದೆ. ಒಂದು ರೀತಿಯಲ್ಲಿ ಅಷ್ಟು ಹೊತ್ತಿಗಾಗಿ ಉಪವಾಸವಿದ್ದಂತೆ. ಆದ್ದರಿಂದಲೇ ಈ ಉಪವಾಸದ ಅವಧಿಯ ಬಳಿಕ ಸೇವಿಸುವ ಆಹಾರಕ್ಕೆ break-fast, ಅಂದರೆ ಉಪವಾಸವನ್ನು ಮುರಿಯುವುದು ಎಂಬ ಅನ್ವರ್ಥನಾಮವಿದೆ. ಈ ಉಪಾಹಾರ ಉತ್ತಮ ಪೌಷ್ಟಿಕ, ಪ್ರೋಟೀನುಯುಕ್ತವಾಗಿರುವುದು ಅಗತ್ಯ. ಬೆಳಗಿನ ಬ್ರೇಕ್ಫಾಸ್ಟ್ ಅಪ್ಪಿತಪ್ಪಿಯೂ ಬ್ರೇಕ್ ಮಾಡಬೇಡಿ
ಇಂದಿನ ಧಾವಂತದ ದಿನಗಳಲ್ಲಿ ಬೆಳಿಗೆ ಬೇಗನೇ ಆಫೀಸ್ ಸೇರುವ ಅವಸರ ಎಲ್ಲರಿಗೂ ಇದೆ. ಆದರೆ ಸಮಯವಾಕಾಶ ಕಡಿಮೆ ಇರುವಾಗ ಅಲಂಕಾರ ಅಥವಾ ಸೌಂದರ್ಯ ಪ್ರಸಾಧನ ಹಚ್ಚುವುದು ಅಥವಾ ಉಪಾಹಾರ ಇವೆರಡರಲ್ಲಿ ಯಾವುದಾದರೊಂದನ್ನು ಬಿಡಲೇಬೇಕೆಂದಾಗ ಹೆಚ್ಚಿನವರು ಉಪಾಹಾರವನ್ನೇ ಬಿಡುವುದನ್ನು ಗಮನಿಸಬಹುದು. ಬೆಳಿಗ್ಗೆದ್ದ ಬಳಿಕ ನಿಮ್ಮ ದಿನನಿತ್ಯದ ದಿನಚರಿ ಹೀಗಿರಲಿ.....
ಇವರು ದಾರಿಯಲ್ಲಿ ಎಲ್ಲಿ, ಏನು ಸಿಕ್ಕಿತೋ ಅದನ್ನು ಗಡಿಬಿಡಿಯಲ್ಲಿ ತಿನ್ನುತ್ತಾ, ಅರ್ಧಂಬರ್ಧ ಬಿಡುತ್ತಾ, ತಂಪುಪಾನೀಯವನ್ನೋ, ದುಬಾರಿ ಬೆಲೆಯ ಕಾಫಿ ಅಥವಾ ಇನ್ನಾವುದೋ ಪೇಯವನ್ನು ಗುಟುಕರಿಸುತ್ತಾ ಸಾರ್ಥಕತೆಯನ್ನು ಅನುಭವಿಸುವುದನ್ನು ನೋಡಬಹುದು. ಆದರೆ ಇವೆಲ್ಲಾ ಆರೋಗ್ಯಕ್ಕೆ ಅಪಾಯಕಾರಿಯಾಗಿವೆ.
ಥಟ್ಟನೇ ಅಲ್ಲದಿದ್ದರೂ ನಿಧಾನವಾಗಿ ಇದರ ಪ್ರಕೋಪ ದೇಹದ ಮೇಲೆ ಆಗಿರುವುದನ್ನು ಕಾಣಬಹುದು. ಕೆಳನೀಡಿರುವ ಮಾಹಿತಿಯ ಮೂಲಕ ಇದರ ಪರಿಣಾಮಗಳನ್ನು ನೋಡಿ, ಇನ್ನಾದರೂ ಬೆಳಗ್ಗಿನ ಉಪಾಹಾರವನ್ನು ಕ್ಲುಪ್ತಕಾಲದಲ್ಲಿ ಮತ್ತು ಸಾಕಷ್ಟು ಪ್ರಮಾಣದಲ್ಲಿ ಸೇವಿಸಲು ಪಣತೊಡಿ..
ಮಧುಮೇಹ
ಉಪಾಹಾರವನ್ನು ತ್ಯಜಿಸುವ ಮಹಿಳೆಯರಲ್ಲಿ ಮಧುಮೇಹ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಶನ್ ಈ ತಿಂಗಳು ಪ್ರಕಟಿಸಿರುವ ನಿಯತಕಾಲಿಕೆಯಲ್ಲಿ ಮಹಿಳೆಯರು ಯಾರು ಉಪಾಹಾರವನ್ನು ತ್ಯಜಿಸುತ್ತಾರೋ, ಅವರಿಗೆ ಸಾಮಾನ್ಯವಾಗಿ ಉಪಾಹಾರವನ್ನು ಸೇವಿಸುವ ಮಹಿಳೆಯರಿಗೆ ಬರುವುದಕ್ಕಿಂತ ಹೆಚ್ಚಾಗಿ ಮಧುಮೇಹ ಬರುವ ಸಾಧ್ಯತೆ ಆರು ಪಟ್ಟು ಹೆಚ್ಚಂತೆ. ಅದರಲ್ಲಿಯೂ ಇವರಿಗೆ ಟೈಪ್ 2 ಮಧುಮೇಹ ಬರುವ ಸಾಧ್ಯತೆ ಹೆಚ್ಚಂತೆ.
ಮೆದುಳಿನ ಕ್ರಿಯೆಗಳಲ್ಲಿ ವ್ಯತ್ಯಾಸ...
ಉಪಹಾರವನ್ನು ನೀವು ತ್ಯಜಿಸಿದಾಗ, ಮೆದುಳು ಕಡಿಮೆ ಪ್ರಮಾಣದಲ್ಲಿ ರಕ್ತ ಮತ್ತು ಆಮ್ಲಜನಕವನ್ನು ಪಡೆದುಕೊಳ್ಳುತ್ತದೆ ಇದು ಅನೇಕ ಅರಿವಿನ ಕಾರ್ಯಗಳ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ.
ನೆನಪಿನ ಶಕ್ತಿ
2005 ಜರ್ನಲ್ ಆಫ್ ದಿ ಅಮೆರಿಕನ್ ಡೈಯೆಟಿಕ್ ಅಸೋಸಿಯೇಶನ್ರವರು ಉಪಾಹಾರಕ್ಕೆ ಸಂಬಂಧಿಸಿದಂತೆ 47 ಅಧ್ಯಯನಗಳನ್ನು ಮಾಡಿದ್ದಾರೆ. ಅದರ ಪ್ರಕಾರ ಯಾರು ಉಪಾಹಾರವನ್ನು ಸೇವಿಸುತ್ತಾರೋ, ಅವರಲ್ಲಿ ಸ್ಮರಣೆ ಶಕ್ತಿಗೆ ಸಂಬಂಧಿಸಿದ ಮನೋಜನ್ಯ ಅಂಶಗಳು ಸರಿಯಾಗಿ ಕೆಲಸ ಮಾಡುತ್ತವೆ ಎಂದು ತಿಳಿದುಬಂದಿದೆ. ಸರಳವಾಗಿ ಹೇಳಬೇಕೆಂದರೆ ಉಪಾಹಾರ ಸೇವಿಸುವವರಲ್ಲಿ ಮೆದುಳಿನ ಕಾರ್ಯಕ್ಷಮತೆ ಹೆಚ್ಚಾಗಿರುತ್ತದೆ!
ಗ್ಯಾಸ್ಟ್ರಿಕ್ ಮತ್ತು ಆಸಿಡಿಟಿ ಸಮಸ್ಯೆ
ಹೆಚ್ಚು ಸಮಯಗಳಿಂದ ಖಾಲಿ ಹೊಟ್ಟೆಯಲ್ಲಿ ಇರುವುದು ಆಮ್ಲತೆಯನ್ನು ಉಂಟುಮಾಡುವ ಸಾಧ್ಯತೆ ಇದೆ. ಇದರಿಂದ ಗ್ಯಾಸ್ಟ್ರಿಕ್ ಮತ್ತು ಆಸಿಡಿಟಿ ಉಂಟಾಗುತ್ತದೆ.
ಹೃದಯ ಸಮಸ್ಯೆ
ಬೆಳಗ್ಗಿನ ಸಮಯದಲ್ಲಿ ಉಪಹಾರವನ್ನು ತ್ಯಜಿಸುವವರು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಾರೆ ಎಂಬುದು ಕೆಲವು ಅಧ್ಯಯನಗಳಿಂದ ತಿಳಿದು ಬಂದಿದೆ. ದೇಹದಲ್ಲಿ ಚಯಾಪಚಯ ವ್ಯವಸ್ಥೆಯಲ್ಲಿ ಬದಲಾವಣೆಯುಂಟಾಗುವುದೇ ಹೃದಯಕ್ಕೆ ಅಪಾಯವನ್ನು ತಂದೊಡ್ಡುತ್ತದೆ.