Just In
- 1 hr ago ವಿಕಲಚೇತನರಿಗೆ ಸ್ಕೂಟಿ ಗಿಫ್ಟ್..! ಮನೆ ಕಟ್ಟಿಕೊಡುವ ಭರವಸೆ ನೀಡಿದ ನಟ ಲಾರೆನ್ಸ್..!
- 2 hrs ago ಗರಿ ಗರಿಯಾದ ಕೋಡುಬಳೆ ಮನೆಯಲ್ಲೇ ಮಾಡಿ.! 4 ವಸ್ತು ಇದ್ದರೆ ಸಾಕು
- 5 hrs ago Zero Shadow Day: ಬೆಂಗಳೂರಲ್ಲಿ ಇಂದು ಶೂನ್ಯ ನೆರಳು ದಿನ.! ಯಾವ ಸಮಯದಲ್ಲಿ ಗೊತ್ತಾ?
- 7 hrs ago ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
Don't Miss
- News ‘ಕಾಂಗ್ರೆಸ್ ಡೇಂಜರ್’ ಪೋಸ್ಟರ್ ಬಿಡುಗಡೆ ಮಾಡಿದ ಬಿಜೆಪಿ
- Sports T20 World Cup 2024: ವೀರೇಂದ್ರ ಸೆಹ್ವಾಗ್ ಆಯ್ಕೆಯ ಭಾರತ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನವಿಲ್ಲ!
- Technology Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- Automobiles ಮೇಡ್ ಇನ್ ಇಂಡಿಯಾ ಈ ಕಾರಿಗೆ ಜಪಾನ್ನಲ್ಲಿ ಭಾರೀ ಬೇಡಿಕೆ: ವಿಶ್ವಗುರು ಭಾರತಕ್ಕೆ ಎಲ್ಲವೂ ಸಾಧ್ಯ!
- Movies "ಸದಾ ನನ್ನ ಹಿಂಭಾಗವನ್ನೇ ಜೂಮ್ ಮಾಡ್ತಾರೆ"; ನೋರಾ ಫತೇಹಿ ಆಕ್ರೋಶ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೆಳಿಗ್ಗೆದ್ದ ಬಳಿಕ ನಿಮ್ಮ ದಿನನಿತ್ಯದ ದಿನಚರಿ ಹೀಗಿರಲಿ.....
ಹಿಂದಿನ ದಿನ ತಡರಾತ್ರಿ ಮನೆಸೇರಿ ತಡವಾಗಿ ಮಲಗುವುದು, ಮರುದಿನ ಅನಿವಾರ್ಯವಾಗಿ ಬಲುಬೇಗನೇ ಏಳುವುದು, ಇಡಿಯ ದಿನ ಮಾನಸಿಕವಾಗಿ ವ್ಯಸ್ತರಾಗಿರುವ ಕಾರಣ ಸ್ವಾಭಾವಿಕವಾಗಿಯೇ ಬೆಳಗ್ಗಿನ ಹೊತ್ತಿನಲ್ಲಿ ತಾಜಾತನವಿರುವುದಿಲ್ಲ.
ನಮ್ಮ ದಿನದ ಅತ್ಯಂತ ಸುಖಕರ ಕ್ಷಣಗಳೆಂದರೆ ಮುಂಜಾನೆಯ ಸವಿನಿದ್ದೆಯ ಕ್ಷಣಗಳು. ಬೆಳಿಗ್ಗೆದ್ದ ಬಳಿಕ ನಿತ್ಯದ ಕೆಲಸಗಳನ್ನು ಪ್ರಾರಂಭಿಸಿ ಇಡಿಯ ದಿನ ಚಟುವಟಿಕೆಯಿಂದಿರಲು ಒಂದು ಕಪ್ ಕಾಫಿ ಒದಗಿಸುವ ತಾಜಾತನಕ್ಕೆ ಸಾಟಿಯೇ ಇಲ್ಲ. ಅದರಲ್ಲೂ ದಿನದ ಪ್ರಾರಂಭವನ್ನು ದುಗುಡ ಮತ್ತು ಒತ್ತಡದಿಂದ ಸಮಯದ ಮಿತಿಯಲ್ಲಿ ನಿರ್ವಹಿಸಬೇಕಾದ ಗೃಣಿಯರು ಮತ್ತು ಉದ್ಯೋಗಸ್ಥರಿಗಂತೂ ಕಾಫಿ ಇಲ್ಲದೇ ಇದನ್ನು ಸಾಧಿಸಲು ಸಾಧ್ಯವೇ ಇಲ್ಲ. ಬೆಳಗಿನ ಸಮಯದಲ್ಲಿ ಅಪ್ಪಿತಪ್ಪಿಯೂ ಇಂತಹ ಕೆಲಸ ಮಾಡಬೇಡಿ!
ಆದರೆ ಕಾಫಿ ಕುಡಿಯದೇ ಈ ತಾಜಾತನವಿರಿಸಲು ಸಾಧ್ಯ. ಅಚ್ಚರಿಗೊಂಡಿರಾ! ಕಾಫಿ ಬದಲಿಗೆ ಟೀ ಕುಡಿದು ಸಹಾ ಅಲ್ಲ. ಇಂದಿನ ದಿನಗಳಲ್ಲಿ ದೈಹಿಕ ಶ್ರಮಕ್ಕಿಂತಲೂ ಮಾನಸಿಕವಾಗಿಯೇ ನಾವೆಲ್ಲರೂ ಹೆಚ್ಚು ಬಳಲುತ್ತೇವೆ. ಹಿಂದಿನ ದಿನ ತಡರಾತ್ರಿ ಮನೆಸೇರಿ ತಡವಾಗಿ ಮಲಗುವುದು, ಮರುದಿನ ಅನಿವಾರ್ಯವಾಗಿ ಬಲುಬೇಗನೇ ಏಳುವುದು, ಇಡಿಯ ದಿನ ಮಾನಸಿಕವಾಗಿ ವ್ಯಸ್ತರಾಗಿರುವ ಕಾರಣ ಸ್ವಾಭಾವಿಕವಾಗಿಯೇ ಬೆಳಗ್ಗಿನ ಹೊತ್ತಿನಲ್ಲಿ ತಾಜಾತನವಿರುವುದಿಲ್ಲ. ಬೆಳಗಿನ ಬ್ರೇಕ್ಫಾಸ್ಟ್ ಅಪ್ಪಿತಪ್ಪಿಯೂ ಬ್ರೇಕ್ ಮಾಡಬೇಡಿ
ಇದರ ಕೊರತೆಯಿಂದ ದಿನದಲ್ಲಿ ಏಕಾಗ್ರತೆಯ ಕೊರತೆಯುಂಟಾಗುತ್ತದೆ. ಪರಿಣಾಮವಾಗಿ ಓದು, ಕೆಲಸಗಳೆಲ್ಲವೂ ಕಷ್ಟಕರವಾಗಿ ಪರಿಣಮಿಸುತ್ತವೆ. ಇದೇ ಕಾರಣಕ್ಕೆ ಬೆಳಗ್ಗಿನ ಒಂದು ಕಪ್ ಕಾಫಿ ಅಪ್ಯಾಯಮಾನವೆನಿಸುತ್ತದೆ. ಇದರಲ್ಲಿರುವ ಕೆಫೀನ್ ರಕ್ತಕ್ಕೆ ಸೇರಿದ ಬಳಿಕ ರಕ್ತಪರಿಚಲನೆಯನ್ನು ಚುರುಕುಗೊಳಿಸುವುದು ಇದಕ್ಕೆ ಕಾರಣ. ಆದರೆ ಕೆಫೀನ್ ನ ಸತತ ಸೇವನೆ ಆರೋಗ್ಯಕ್ಕೆ ಅಷ್ಟೊಂದು ಒಳ್ಳೆಯದಲ್ಲ.
ಆದರೆ ಕಾಫಿಯ ಬದಲಿಗೆ ಇತರ ಪೇಯಗಳನ್ನು ಕುಡಿಯುವ ಅಥವಾ ಇತರ ವಿಧಾನಗಳನ್ನು ಅನುಸರಿಸುವ ಮೂಲಕ ಕಾಫಿಗೆ ಗುಲಾಮರಾಗದೇ ತಾಜಾತನವನ್ನೂ ಉಳಿಸಿಕೊಳ್ಳಬಹುದು. ಬನ್ನಿ, ಈ ಪರ್ಯಾಯ ವಿಧಾನಗಳು ಯಾವುವು ಎಂಬುದನ್ನು ಮುಂದೆ ಓದಿ...
ತಣ್ಣನೆಯ ನೀರು
'ತಣ್ಣೀರಿನ ಸ್ನಾನ' ನಿಜಕ್ಕೂ ಇದು ಆರೋಗ್ಯಕ್ಕೆ ಸೋಪಾನ....
ಸೆಳೆತದ ವ್ಯಾಯಮಗಳು
ಬೆಳಿಗ್ಗೆದ್ದು ತಣ್ಣೀರು ಕುಡಿದ ನಂತರ ಪ್ರಾತಃವಿಧಿಗಳನ್ನು ಮುಗಿಸಿ ಕೊಂಚ ಹೊತ್ತಿನವರೆಗೆ ಸುಲಭ ಸೆಳೆತದ ವ್ಯಾಯಾಮಗಳನ್ನು ಮಾಡುವ ಮೂಲಕ ರಕ್ತಪರಿಚಲನೆ ಚುರುಕುಗೊಳ್ಳುತ್ತದೆ. ವಿಶೇಷವಾಗಿ ಬಗ್ಗುವ ಮತ್ತು ಪಕ್ಕಕ್ಕೆ ವಾಲುವ ವ್ಯಾಯಾಮಗಳಿಂದ ಮೆದುಳಿಗೆ ಹೆಚ್ಚಿನ ರಕ್ತಪರಿಚಲನೆ ದೊರಕುತ್ತದೆ. ಇದು ಇಡಿಯ ದಿನ ತಾಜಾತನ ಉಳಿಸಿಕೊಳ್ಳಲು ನೆರವಾಗುತ್ತದೆ. ಮುಂಜಾನೆ ವ್ಯಾಯಾಮದ ಪ್ರಯೋಜನಗಳು
ಪ್ರೋಟೀನ್ ಯುಕ್ತ ಆಹಾರ ಸೇವಿಸಿ
ನಿಮ್ಮ ದಿನದ ಪ್ರಥಮ ಆಹಾರದಲ್ಲಿ ಪ್ರೋಟೀನ್ ಯುಕ್ತ ಆಹಾರಗಳಿರಲಿ. ಆದರೆ ಹೆಚ್ಚಿನ ಪ್ರಮಾಣದಲ್ಲಲ್ಲ, ಸೂಕ್ತ ಪ್ರಮಾಣದಲ್ಲಿ ಮಾತ್ರ. ಮೊಟ್ಟೆ, ಹಾಲು, ಜೇನು, ನೆನೆಸಿಟ್ಟ ಕಾಳುಗಳು ಮೊದಲಾದವುಗಳನ್ನು ಉಪಾಹಾರದ ರೂಪದಲ್ಲಿ ಸೇವಿಸಿ ದಿನವನ್ನು ಪ್ರಾರಂಭಿಸಿ. ಇದರಿಂದ ಬೆಳಗ್ಗಿನ ಸುಸ್ತು ಇಲ್ಲವಾಗುತ್ತದೆ. ಲವಲವಿಕೆಯ ಜೀವನ ಶೈಲಿಗೆ ಪ್ರೋಟೀನ್ಯುಕ್ತ ಆಹಾರಗಳು...
ಕಾರ್ಬೋಹೈಡ್ರೇಟುಗಳೂ ಇರಲಿ
ನಿಮ್ಮ ಬೆಳಗ್ಗಿನ ಉಪಾಹಾರದಲ್ಲಿ ಸಾಕಷ್ಟು ಕಾರ್ಬೋಹೈಡ್ರೇಟುಗಳೂ ಇರುವುದು ಅವಶ್ಯಕ. ಇದರೊಂದಿಗೆ ನಾರು ಸಹಾ ಇರಲಿ. ಇದರಿಂದ ಇಡಿನ ದಿನ ಈ ಅಹಾರ ನಿಧಾನವಾಗಿ ಜೀರ್ಣಗೊಳ್ಳುತ್ತಾ ಹೆಚ್ಚಿನ ಹೊತ್ತಿನವರೆಗೆ ದೇಹದಲ್ಲಿ ಶಕ್ತಿಯನ್ನು ಪೂರೈಸಲು ನೆರವಾಗುತ್ತದೆ.
ಬೆಳಗ್ಗಿನ ವ್ಯಾಯಾಮ
ದಿನದ ಬೆಳಗ್ಗಿನ ಹೊತ್ತಿನಲ್ಲಿ ಕೊಂಚ ಹೊತ್ತಾದರೂ ನಿಯಮಿತವಾಗಿ ಕೆಲವು ವ್ಯಾಯಾಮಗಳನ್ನು ಮಾಡಬೇಕು. ಕೆಲವರು ವ್ಯಾಯಾಮವನ್ನು ಸಂಜೆ ಅಥವಾ ರಾತ್ರಿಯ ಹೊತ್ತು ನಿರ್ವಹಿಸುತ್ತಾರೆ. ಇದನ್ನು ಬದಲಿಸಿ ಬೆಳಗ್ಗಿನ ಹೊತ್ತಿಗೆ ಬದಲಿಸಲು ಮಾನಸಿಕರಾಗಿ ಸಿದ್ಧರಾಗಿ. ಅಂದರೆ ಪ್ರತಿದಿನ ರಾತ್ರಿ ಸಾಧ್ಯವಾದಷ್ಟು ಬೇಗನೇ ಮಲಗಿ ಮರುದಿನ ಬೆಳಿಗ್ಗೆ ನಿಮ್ಮ ನಿತ್ಯದ ವ್ಯಾಯಾಮಗಳನ್ನು ನಡೆಸಿ. ಇದರಿಂದ ದಿನವಿಡೀ ತಾಜಾತನ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.
ತಣ್ಣೀರಿನ ಸ್ನಾನ
ಬೆಳಿಗ್ಗೆ ತಣ್ಣೀರಿನಿಂದ ಸ್ನಾನ ಮಾಡುವುದು ಎಂದರೆ ಹೆಚ್ಚಿನವರಿಗೆ ಇಷ್ಟವಾಗದ ಮಾತು. ಆದರೆ ಬೆಳಗ್ಗಿನ ಉಪಾಹಾರಕ್ಕೂ ಮುನ್ನ ತಣ್ಣೀರಿನ ಸ್ನಾನ ಮಾಡುವ ಮೂಲಕ ಮನಸ್ಸು ಪ್ರಫುಲ್ಲವಾಗುತ್ತದೆ ಹಾಗೂ ಇಡಿಯ ದಿನ ತಾಜಾತನ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ತಣ್ಣೀರಿನ ಸ್ನಾನದಲ್ಲಿಯೂ ಒಂದು ವಿಧಾನವಿದೆ. ಎಂದಿಗೂ ತಣ್ಣೀರನ್ನು ಮೊದಲಿಗೆ ತಲೆಗೆ ಹಾಕಬಾರದು. ಇದರಿಂದ ತಲೆ ಮೊದಲು ತಣ್ಣಗಾಗಿ ವಿಪರೀತ ರಕ್ತ ತಲೆಗೆ ನುಗ್ಗುತ್ತದೆ. ಇದರಿಂದ ಶೀತ ನೆಗಡಿ ತಲೆನೋವು ಮೊದಲಾದವು ಎದುರಾಗುತ್ತವೆ. ಆದ್ದರಿಂದ ಮೊದಲು ಭುಜಗಳಿಗೆ, ಬಳಿಕ ನಿಧಾನವಾಗಿ ದೇಹದ ಇತರ ಭಾಗಗಳನ್ನು ತಣ್ಣೀರಿನಿಂದ ತೋಯಿಸಿ ಚಳಿ ದೂರಾದ ಬಳಿಕವೇ ತಲೆಗೆ ತಣ್ಣೀರು ಹಾಕಬೇಕು.
ಹಸಿರು ಟೀ
ಕಡೆಯದಾಗಿ ಇವೆಲ್ಲಕ್ಕೂ ಸಮಯ ಆಥವಾ ವ್ಯವಧಾನವಿಲ್ಲವೆಂದಾದರೆ ಕಾಫಿಯ ಬದಲು ಹಸಿರು ಟೀ ಕುಡಿಯಿರಿ. ಇದರಿಂದಲೂ ಕಾಫಿಯಷ್ಟೇ ತಾಜಾತನ ಸಿಗುತ್ತದೆ ಹಾಗೂ ಹಸಿರು ಟೀ ಸೇವನೆಯ ಇತರ ಪ್ರಯೋಜನಗಳೂ ದೊರಕುತ್ತವೆ.