Just In
- 54 min ago
ಆಫ್ರಿಕಾ ಸುಂದರಿ ಮುಡಿಗೇರಿದ 2019 ವಿಶ್ವ ಸುಂದರಿ ಪಟ್ಟ
- 1 hr ago
ಹೇರ್ ಡೈ ಬಳಸಿದರೆ ಬರುವ 6 ಅಪಾಯಕಾರಿ ಕಾಯಿಲೆಗಳು
- 3 hrs ago
ಪಾರ್ಟಿ ಲುಕ್ಗೆ ಶಿಮ್ಮರಿ ಐ ಮೇಕಪ್ ಹೀಗಿರಲಿ
- 9 hrs ago
ಸೋಮವಾರದ ದಿನ ಭವಿಷ್ಯ (9-12-2019)
Don't Miss
- News
ಚಿಕ್ಕಬಳ್ಳಾಪುರ; ಬಿಜೆಪಿಯ ಡಾ.ಕೆ.ಸುಧಾಕರ್ ಗೆಲುವಿನ ನಗೆ
- Education
ECIL Recruitment 2019: 64 ಗ್ರಾಜುಯೇಟ್ ಇಂಜಿನಿಯರ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ವಾಟ್ಸಪ್ ಚಾಟ್ ಅನ್ನು PDF ಫಾರ್ಮೇಟ್ಗೆ ಕನ್ವರ್ಟ್ ಮಾಡುವುದು ಹೇಗೆ ಗೊತ್ತಾ?
- Movies
28 ದಿನದ ಬಳಿಕ ಆಸ್ಪತ್ರೆಯಿಂದ ಮನೆಗೆ ಮರಳಿದ ಲತಾ ಮಂಗೇಶ್ಕರ್
- Automobiles
ವಿಶೇಷವಾಗಿ ಮಾಡಿಫೈಗೊಂಡ ರಾಯಲ್ ಎನ್ಫೀಲ್ಡ್ ಇಂಟರ್ಸೆಪ್ಟರ್
- Sports
ಹೀಗೆ ಫೀಲ್ಡಿಂಗ್ ಮಾಡಿದ್ರೆ ಯಾವ ಮೊತ್ತವೂ ಎದುರಾಳಿಗೆ ಸಾಕಾಗದು!; ಕೊಹ್ಲಿ
- Finance
ದೇಶದ ಆರ್ಥಿಕತೆ ಪ್ರಗತಿ ಹಿಂಜರಿತದಲ್ಲಿ ಸಿಲುಕಿಕೊಂಡಿದೆ: ರಘುರಾಂ ರಾಜನ್
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಚಳಿಗಾಲದಲ್ಲಿ ಇಂತಹ ಆಹಾರಗಳನ್ನು ಸೇವಿಸಿ, ಆರೋಗ್ಯವಾಗಿರಿ
ಪ್ರತಿಯೊಂದು ಹವಾಮಾನವನ್ನು ಸಹಿಸಿಕೊಳ್ಳುವಂತಹ ಶಕ್ತಿಯನ್ನು ದೇಹಕ್ಕೆ ದೇವರು ನೀಡಿದ್ದಾನೆ. ಇದರಿಂದಾಗಿ ಮಳೆಗಾಲ, ಚಳಿಗಾಲ ಮತ್ತು ಬೇಸಿಗೆಗೆ ದೇಹವು ಹೊಂದಿಕೊಳ್ಳುತ್ತದೆ. ಆದರೆ ನಮ್ಮ ದೇಹವನ್ನು ಆರೋಗ್ಯವಾಗಿಡುವುದು ತುಂಬಾ ಮುಖ್ಯ. ಚಳಿಗಾಲದಲ್ಲಿ ಉಷ್ಣತೆಯು ತುಂಬಾ ಕುಸಿಯುವ ಕಾರಣದಿಂದ ದೇಹವು ಅದಕ್ಕೆ ಹೊಂದಿಕೊಳ್ಳಬೇಕು. ಚಳಿಗಾಲದ ಆಹಾರ ಶೈಲಿ, ಸ್ವಲ್ಪ ವೆರೈಟಿಯಾಗಿರಲಿ
ಇದಕ್ಕಾಗಿ ನಾವು ತಿನ್ನುವ ಆಹಾರದಲ್ಲಿ ಕೂಡ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಚಳಿಗಾಲದಲ್ಲಿ ಹೆಚ್ಚಿನ ಶಕ್ತಿಯು ದೇಹಕ್ಕೆ ಬೇಕಾಗುತ್ತದೆ. ಇದರಿಂದಾಗಿ ಸರಿಯಾದ ಪೋಷಕಾಂಶಗಳು ದೇಹಕ್ಕೆ ಲಭ್ಯವಾಗುವುದು ಅತ್ಯಗತ್ಯ. ಈ ಲೇಖನದಲ್ಲಿ ಚಳಿಗಾಲದಲ್ಲಿ ದೇಹಕ್ಕೆ ಪೋಷಕಾಂಶಗಳನ್ನು ಒದಗಿಸುವಂತಹ ಆಹಾರಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಇದು ಸೋಂಕನ್ನು ನಿವಾರಣೆ ಮಾಡಿ ದೇಹಕ್ಕೆ ಪ್ರತಿರೋಧಕ ಶಕ್ತಿಯನ್ನು ಒದಗಿಸುವುದು....

ಕಿತ್ತಳೆ ಹಣ್ಣು
ವಿಟಮಿನ್ ಸಿ ಇರುವಂತಹ ಮತ್ತೊಂದು ಹಣ್ಣೆಂದರೆ ಅದು ಕಿತ್ತಳೆ. ಇದರಲ್ಲಿ ಇರುವಂತಹ ಕ್ಯಾಲ್ಸಿಯಂ, ಮೆಗ್ನಿಶಿಯಂ, ಫ್ರೋಸ್ಪರಸ್ ಮತ್ತು ಪೊಟಾಶಿಯಂ ಮೂಳೆಗಳನ್ನು ಬಲಿಷ್ಠಗೊಳಿಸುವುದು ಮಾತ್ರವಲ್ಲದೆ ಸ್ನಾಯುಗಳ ಕಾರ್ಯವನ್ನು ಸುಗಮವಾಗಿಸುವುದು. ಇದು ದೇಹದ ಪ್ರತಿರೋಧಕ ಶಕ್ತಿಯನ್ನು ಬಲಗೊಳಿಸುವುದು. ಚಳಿಗಾಲದ ಸಂಜೀವಿನಿ-ಹುಳಿ ಸಿಹಿ ರುಚಿಯ 'ಕಿತ್ತಳೆ ಹಣ್ಣು'

ಮೀನುಗಳು
ಸಾಲ್ಮನ್, ಮ್ಯಾಕೆರಲ್ ಮತ್ತು ಟ್ಯೂನಾ ಇತ್ಯಾದಿ ಮೀನುಗಳು ಒಮೆಗಾ-3 ಕೊಬ್ಬಿನಾಮ್ಲದಿಂದ ಸಮೃದ್ಧವಾಗಿದೆ. ಇದು ಖಿನ್ನತೆಯನ್ನು ನಿವಾರಿಸಲು ಪರಿಣಾಮಕಾರಿ ಎಂದು ಹಲವಾರು ಅಧ್ಯಯನಗಳು ಹೇಳಿವೆ. ಚಳಿಗಾಲದಲ್ಲಿ ಸೂರ್ಯನ ಬೆಳಕು ಕಡಿಮೆ ಇರುವ ಕಾರಣದಿಂದ ಕೆಲವರು ಖಿನ್ನತೆಗೆ ಒಳಗಾಗುತ್ತಾರೆ. ಇಂತವರು ಮೀನು ಸೇವಿಸಬೇಕು.

ಹಣ್ಣು ಮತ್ತು ತರಕಾರಿ ಜ್ಯೂಸ್
ಚಳಿಗಾಲದಲ್ಲಿ ನಮಗೆ ಬಾಯಾರಿಕೆಯಾಗುವುದು ಕಡಿಮೆ. ಇದರಿಂದಾಗಿ ನೀರು ಸೇವನೆ ಕಡಿಮೆಯಾಗಿರುತ್ತದೆ. ಇದರಿಂದ ನಿರ್ಜಲೀಕರಣ ಮತ್ತು ನಿಶ್ಯಕ್ತಿ ಉಂಟಾಗುತ್ತದೆ. ಚಳಿಗಾಲದಲ್ಲಿ ಸರಿಯಾಗಿ ನೀರು ಸೇವಿಸುವುದರಿಂದ ಹಣ್ಣು ಹಾಗೂ ತರಕಾರಿಗಳ ಜ್ಯೂಸ್ ಸೇವನೆ ಮಾಡಿ. ಸೋಡಾ ದೇಹವನ್ನು ನಿರ್ಜಲೀಕರಿಸುವುದರಿಂದ ಇದರಿಂದ ದೂರವಿರುವುದೇ ಉತ್ತಮ. ನೆನಪಿರಲಿ ತರಕಾರಿ-ಹಣ್ಣುಗಳನ್ನು ತೊಳೆಯುವುದಕ್ಕೂ ಟ್ರಿಕ್ಸ್ ಇದೆ!

ಹಸಿರು ಕಾಳು ಮತ್ತು ದಾಳಿಂಬೆ
ಆ್ಯಂಟಿ ಆಕ್ಸಿಡೆಂಟ್ ಮತ್ತು ಉರಿಯೂತ ಶಮನಕಾರಿ ಗುಣಗಳನ್ನು ಹೊಂದಿರುವಂತಹ ಹಸಿರು ಕಾಳು ಮತ್ತು ದಾಳಿಂಬೆ ಚಳಿಗಾಲದಲ್ಲಿ ಒಳ್ಳೆಯದು. ಇವು ಚಳಿಗಾಲದಲ್ಲಿ ಉಂಟಾಗುವ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ದೇಹಕ್ಕೆ ಶಮನವನ್ನು ಒದಗಿಸುತ್ತದೆ. ದಾಳಿಂಬೆ ಹಣ್ಣಿನಲ್ಲಿರುವ 10 ಅದ್ಭುತ ಪ್ರಯೋಜನಗಳು

ಇಡೀ ಧಾನ್ಯಗಳು
ಭಾರತೀಯರು ಹೆಚ್ಚಾಗಿ ಬಳಸುವಂತಹ ಅಕ್ಕಿ ಮತ್ತು ಗೋಧಿ ಚಳಿಗಾಲದಲ್ಲಿ ಒಳ್ಳೆಯದು. ಅನ್ನ ಮತ್ತು ಚಪಾತಿ ದೇಹಕ್ಕೆ ಉಷ್ಣತೆಯನ್ನು ಒದಗಿಸುವುದು. ಮನೆಯಲ್ಲೇ ಇದನ್ನು ತಯಾರಿಸಿಕೊಂಡು ಚಳಿಗಾಲದಲ್ಲಿ ದೇಹಕ್ಕೆ ಬೇಕಾಗುವ ಶಕ್ತಿಯನ್ನು ಪಡೆಯಿರಿ. ರಾಗಿ ಮತ್ತು ಜೋಳವನ್ನು ಕೂಡ ಬಳಸಬಹುದು.