Just In
Don't Miss
- News Toilet Photo Viral: ಕಡಿಮೆ ಖರ್ಚಿನಲ್ಲಿ 'ಲೀಕೆಜ್ ಟ್ಯಾಂಕರ್'ನಿಂದ ಟಾಯ್ಲೆಟ್ ನಿರ್ಮಾಣ: ನೀವೂ ಟ್ರೈ ಮಾಡಿ
- Sports IPL 2024: ಹೈದರಾಬಾದ್-ಡೆಲ್ಲಿ ನಡುವೆ ಮೆಗಾ ಫೈಟ್; ಟಾಸ್, ಆಡುವ 11ರ ಬಳಗದ ವರದಿ
- Movies ರಾಜಕೀಯ ಆಯಾಮ ಬೇಡ, ಜನಸಾಮಾನ್ಯರ ಕೈಗೆ ಒಪ್ಪಿಸಿ ಎಂದ ರಚಿತಾ ರಾಮ್ ; #JusticeForNeha ಎಂದ ರಿಷಬ್ ಶೆಟ್ಟಿ..!
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮನೆ ಔಷಧ: ಒಂದೇ ಗಂಟೆಯಲ್ಲಿ ಮುಟ್ಟಿನ ನೋವು ನಿಯಂತ್ರಣಕ್ಕೆ
ಪ್ರತೀ ತಿಂಗಳು ಉಂಟಾಗುವ ಮುಟ್ಟಿನ ವೇಳೆಯ ನೋವನ್ನು ನಿವಾರಿಸಲು ಬೋಲ್ಡ್ ಸ್ಕೈ ನಿಮಗೆ ಸರಳವಾದ ಮನೆಮದ್ದನ್ನು ಸೂಚಿಸಿದೆ, ಒಮ್ಮೆ ಪ್ರಯತ್ನಿಸಿ ನೋಡಿ...
ತಿಂಗಳ ಮುಟ್ಟಿನ ನೋವು, ಕಿರಿಕಿರಿ, ಯಾತನೆ, ಖಿನ್ನತೆ ಪ್ರತಿಯೊಬ್ಬ ಮಹಿಳೆಗೂ ತಿಳಿದಿರುತ್ತದೆ. ಪ್ರತೀ ತಿಂಗಳು ಇದನ್ನು ಅನುಭವಿಸಲೇ ಬೇಕು. ಇದನ್ನು ತಡೆಯುವಂತಿಲ್ಲ. ಹೊಟ್ಟೆಯ ಕೆಳಭಾಗದಲ್ಲಿ ಉಂಟಾಗುವಂತಹ ಈ ಕ್ರಿಯೆಯ ವೇಳೆ ಸ್ನಾಯು ಸೆಳೆತವೂ ಉಂಟಾಗುತ್ತದೆ. ಇದರಿಂದಾಗಿ ದೈನಂದಿನ ಕೆಲವೊಂದು ಚಟುವಟಿಕೆ ಮಾಡಲು ಕಷ್ಟವಾಗುತ್ತದೆ. ಆ ದಿನಗಳಲ್ಲಿ ಕಾಡುವ ನೋವಿಗೆ ಫಲಪ್ರದ ಮನೆಮದ್ದು
ಮಹಿಳೆಯರ ಜನನಾಂಗದ ಸಮೀಪದ ರಕ್ತನಾಳಗಳಿಗೆ ಆಮ್ಲಜನಕವು ಸರಿಯಾಗಿ ಪೂರೈಕೆಯಾಗದಿರುವ ಕಾರಣದಿಂದಾಗಿ ನೋವು ಉಂಟಾಗುವುದು. ಆದರೆ ನೋವನ್ನು ನಿವಾರಿಸಲು ಮಾತ್ರೆಗಳನ್ನು ತೆಗೆದುಕೊಳ್ಳುವ ಬದಲು ಮನೆಮದ್ದನ್ನು ಬಳಸಿದರೆ ತುಂಬಾ ಒಳ್ಳೆಯದು. ಮಾಸಿಕ ದಿನಗಳಲ್ಲಿ ವಿಪರೀತ ಹೊಟ್ಟೆ ನೋವಿದ್ದರೆ, ಕ್ಯಾರೆಟ್ ಸೇವಿಸಿ...
ಪ್ರತೀ ತಿಂಗಳು ಉಂಟಾಗುವ ಮುಟ್ಟಿನ ವೇಳೆಯ ನೋವನ್ನು ನಿವಾರಿಸಲು ಬೋಲ್ಡ್ ಸ್ಕೈ ನಿಮಗೆ ಮನೆಮದ್ದನ್ನು ಹೇಳಿಕೊಡಲಿದೆ, ಇದನ್ನು ಓದಿಕೊಂಡು ಬಳಸಿ...
ಮನೆಮದ್ದು ತಯಾರಿಸಲು ಬೇಕಾಗುವ ಸಾಮಗ್ರಿಗಳು
ಕುಂಬಳಕಾಯಿ ಬೀಜ 1 ಚಮಚ
ಬಾಳೆಹಣ್ಣು ½ ಹೃದಯಕ್ಕೆ ನವಚೈತನ್ಯ ತುಂಬುವ ಕುಂಬಳಕಾಯಿ ಬೀಜ
ಆದಷ್ಟು ಇಂತಹ ಸಮಯದಲ್ಲಿ ಖಾರಪದಾರ್ಥ ತ್ಯಜಿಸಿ....
ಇದನ್ನು ಸರಿಯಾದ ಪ್ರಮಾಣದಲ್ಲಿ ಬಳಸಿಕೊಂಡಾಗ ಇದು ಮುಟ್ಟಿನ ನೋವನ್ನು ತುಂಬಾ
ಪರಿಣಾಮಕಾರಿಯಾಗಿ ನಿವಾರಿಸುವುದು. ಈ ಮನೆಮದ್ದಿನೊಂದಿಗೆ ಖಾರದ ಪದಾರ್ಥ ತ್ಯಜಿಸಿ, ಹಗುರವಾದ ವ್ಯಾಯಾಮ ಮಾಡಿದರೆ ಮುಟ್ಟಿನ ನೋವು ಕಡಿಮೆಯಾಗುವುದು.
ಆದಷ್ಟು ಇಂತಹ ಸಮಯದಲ್ಲಿ ಖಾರಪದಾರ್ಥ ತ್ಯಜಿಸಿ....
ಕುಂಬಳಕಾಯಿಯ ಬೀಜದಲ್ಲಿ ಪ್ರೋಸ್ಪರಸ್ ಮತ್ತು ಸತುವಿದೆ. ಇದು ಜನನಾಂಗದ ಗೋಡೆಗಳ ಉರಿಯೂತವನ್ನು ಕಡಿಮೆ ಮಾಡಿ ಸ್ನಾಯು ಸೆಳೆತವನ್ನುಕಡಿಮೆ ಮಾಡುವುದು. ಬಾಳೆಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ಪೊಟಾಶಿಯಂ ಇರುವ ಕಾರಣದಿಂದ ಇದು ಸ್ನಾಯು ಸೆಳೆತವನ್ನು ಕಡಿಮೆ ಮಾಡುವುದು.
ತಯಾರಿಸುವ ವಿಧಾನ
*ಸ್ವಲ್ಪ ಹಾಲಿನೊಂದಿಗೆ ಹೇಳಿದಷ್ಟು ಪ್ರಮಾಣದ ಸಾಮಗ್ರಿಗಳನ್ನು ಮಿಕ್ಸಿಗೆ ಹಾಕಿಕೊಳ್ಳಿ.
*ಇದನ್ನು ಸರಿಯಾಗಿ ರುಬ್ಬಿಕೊಳ್ಳಿ.
*ಇದನ್ನು ಒಂದು ಕಪ್ ಹಾಕಿಕೊಳ್ಳಿ. ಇದನ್ನು ಈಗ ಸೇವನೆ ಮಾಡಬಹುದಾಗಿದೆ.
*ಪ್ರತೀ ತಿಂಗಳು ಮುಟ್ಟಿನ ವೇಳೆ ಉಪಹಾರದ ಬಳಿಕ ಇದನ್ನು ಸೇವಿಸಿ.