Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಕ್ಯಾನ್ಸರ್-ಸಂಧಿವಾತ ನಿಯಂತ್ರಿಸುವ 'ಶುಂಠಿ ಬಿಯರ್'!
ಶುಂಠಿ ಬಿಯರ್ ಕೊಂಚ ಕಾರ, ಕೊಂಚ ಸಿಹಿಮಿಶ್ರಿತವಾಗಿದ್ದು ಇದನ್ನು ಸವಿಯಲು ಇದು ಸಕಾಲವಾಗಿದೆ. ಅಲ್ಲದೇ ಇದರ ಸೇವನೆಯಿಂದ ಹಲವಾರು ವಿಧದ ಆರೋಗ್ಯಕರ ಪ್ರಯೋಜನಗಳಿವೆ.
ನೀವು ಬಿಯರ್ ಪ್ರಿಯರೇ? ಹಾಗಾದರೆ ನೀವು ಶುಂಠಿ ಬೆರೆಸಿದ ಬಿಯರ್ ಅನ್ನು ಖಂಡಿತಾ ಪ್ರಯತ್ನಿಸಲೇಬೇಕು. ಏಕೆಂದರೆ ಇದು ಮಾದಕ ಪೇಯಕ್ಕಿಂತಲೂ ಹೆಚ್ಚಾಗಿ ಅರೋಗ್ಯವೃದ್ಧಿ ಪೇಯವಾಗಿ ಕೆಲಸ ಮಾಡುತ್ತದೆ. ಅಷ್ಟೇ ಅಲ್ಲ, ಇದರ ರುಚಿ ನಿಮಗೆ ಹೊಸದಾಗಿದ್ದು ಇದುವರೆಗೆ ಏಕೆ ಪ್ರಯತ್ನಿಸಿಲ್ಲವೆಂಬ ಭಾವನೆಯನ್ನು ಮೂಡಿಸುತ್ತದೆ. ತೂಕ ಇಳಿಸಿಕೊಳ್ಳಬೇಕೇ?, ಹಸಿಶುಂಠಿಯ ನೆರವು ಪಡೆದುಕೊಳ್ಳಿ!
ಆದರೆ ಇದು ಮಾರುಕಟ್ಟೆಯಲ್ಲಿ ಲಭ್ಯವಿಲ್ಲದಿರುವುದರಿಂದ ಮನೆಯಲ್ಲಿ ನೀವೇ ತಯಾರಿಸಿಕೊಳ್ಳಬೇಕು. ಆದರೆ ಇದು ಹೆಚ್ಚು ಕಷ್ಟದ್ದೇನೂ ಅಲ್ಲ, ಬದಲಿಗೆ ಇದರ ನಿಯಮಿತ ಸೇವನೆಯಿಂದ ಕೆಲವಾರು ವಿಧದ ಕ್ಯಾನ್ಸರ್, ಸಂಧಿವಾತ ಹಾಗೂ ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳಿಗೂ ಔಷಧಿಯಂತೆ ಕೆಲಸ ಮಾಡುತ್ತದೆ. ಅಷ್ಟೇ ಅಲ್ಲ, ಇದು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಹಾಗೂ ಅಧಿಕ ರಕ್ತದೊತ್ತಡ ಕಡಿಮೆಗೊಳಿಸಲೂ ನೆರವಾಗುತ್ತದೆ....

ಕೊಂಚ ಸಕ್ಕರೆ ಮತ್ತು ಲಿಂಬೆರಸ...
ಶುಂಠಿ ಬಿಯರ್ ತಯಾರಿಸಲು ಕೊಂಚ ಸಕ್ಕರೆ ಮತ್ತು ಲಿಂಬೆರಸದ ಅಗತ್ಯವೂ ಇದ್ದು ನಿಮ್ಮ ಬಿಡುವಿನ ವೇಳೆಯಲ್ಲಿ ಸುಲಭವಾಗಿ ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು. ಅಲ್ಲದೇ ಇದರಲ್ಲಿ ಜೀರ್ಣಶಕ್ತಿಯನ್ನು ಹೆಚ್ಚಿಸುವ ಸ್ನೇಹಿ ಬ್ಯಾಕ್ಟೀರಿಯಾಗಳು ಹಾಗೂ ಹಲವು ವಿಟಮಿನ್ನುಗಳು ಇರುವುದರಿಂದ ಅನಾರೋಗ್ಯಕರ ಬುರುಗುಬರಿಸುವ ಸಿದ್ಧ ಪಾನೀಯಗಳ ಬದಲಿಗೆ ಸೇವಿಸಿ ಆರೋಗ್ಯ ವೃದ್ಧಿಸಿಕೊಳ್ಳಬಹುದು.

ಕೊಂಚ ಖಾರ, ಕೊಂಚ ಸಿಹಿಮಿಶ್ರಿತ
ಈ ಬಿಯರ್ ಕೊಂಚ ಖಾರ, ಕೊಂಚ ಸಿಹಿಮಿಶ್ರಿತವಾಗಿದ್ದು ಇದನ್ನು ಸವಿಯಲು ಇದು ಸಕಾಲವಾಗಿದೆ. ಅಲ್ಲದೇ ಇದರ ಸೇವನೆಯಿಂದ ಹಲವಾರು ವಿಧದ ಆರೋಗ್ಯಕರ ಪ್ರಯೋಜನಗಳಿವೆ. ಸಂಧಿವಾತಕ್ಕೆ ಇದು ಹೇಳಿ ಮಾಡಿಸಿದ ಪೇಯವಾಗಿದೆ. ಬನ್ನಿ, ಈ ಪ್ರಯೋಜನಗಳನ್ನು ಪಡೆದುಕೊಳ್ಳಲು ಇಂದೇ, ಮನೆಯಲ್ಲಿಯೇ ತಯಾರಿಸುವ ವಿಧಾನವನ್ನು ನೋಡೋಣ...

ಅಗತ್ಯವಿರುವ ಸಾಮಾಗ್ರಿಗಳು
*200 ಗ್ರಾಂ ಸಿಪ್ಪೆ ಸುಲಿದು ಚಿಕ್ಕದಾಗಿ ತುಂಡರಿಸಿದ ಶುಂಠಿ
*450 ಮಿ.ಲೀ. ನೀರು
*20 ಗ್ರಾಂ ಉಪ್ಪು
*120 ಮಿಲಿ ಮಿನೆರಲ್ ವಾಟರ್
*ಒಂದು ಚಿಕ್ಕ ಬೋಗುಣಿಯಷ್ಟು ಲಿಂಬೆರಸ
*1 ಲಿಂಬೆಯ ಬಿಲ್ಲೆ
*ಕೊಂಚ ಜೇನು (ಕಾಡಿನ ಜೇನೇ ಅತ್ಯುತ್ತಮ)

ವಿಧಾನ:
*ಒಂದು ಪಾತ್ರೆಯಲ್ಲಿ 450 ಮಿ.ಲೀ. ನೀರನ್ನು ಹಾಕಿ ಕುದಿಸಿ. ಇದು ಕುದಿಯಲು ಪ್ರಾರಂಭವಾದ ತಕ್ಷಣ ಶುಂಠಿಯನ್ನು ಸೇರಿಸಿ. ಈಗ ಉರಿಯನ್ನು ತೀರಾ ಚಿಕ್ಕದಾಗಿಸಿ ಸುಮಾರು ಐದು ನಿಮಿಷಗಳವರೆಗೆ ಕುದಿಸಿ.

ವಿಧಾನ:
ಬಳಿಕ ಉರಿ ಆರಿಸಿ ಇಪ್ಪತ್ತು ನಿಮಿಷ ಹಾಗೇ ತಣಿಯಲು ಬಿಡಿ. ನಂತರ ಈ ನೀರನ್ನು ಸೋಸಿ ಇನ್ನೊಂದು ಪಾತ್ರೆಯಲ್ಲಿ ಸಂಗ್ರಹಿಸಿ. ಇನ್ನೊಂದು ಪಾತ್ರೆಯಲ್ಲಿ 120 ಮಿಲಿ ಮಿನೆರಲ್ ನೀರು ಹಾಕಿ ಇದಕ್ಕೆ ಅರ್ಧ ಕಪ್ ನಷ್ಟು ಶುಂಠಿ ಕುದಿಸಿ ಸೋಸಿದ್ದ ನೀರು, ಉಪ್ಪು, ಜೇನು ಮತ್ತು ಅರ್ಧ ಕಪ್ ನೀರು ಸೇರಿಸಿ ಮಿಶ್ರಣ ಮಾಡಿ.

ವಿಧಾನ:
ಈ ನೀರನ್ನು ಖಾಲಿ ಪ್ಲಾಸ್ಟಿಕ್ ಬಾಟಲಿಯಲ್ಲಿ ಹಾಕಿ ಹಾಕಿ ಶೇಖರಿಸಿ. ನಿಮ್ಮ ಅಗತ್ಯಕ್ಕೆ ತಕ್ಕಂತೆ ಕೆಲವು ದಿನಗಳ ಬಳಿಕ ಸೇವಿಸಿ. ಈ ಪೇಯ ಒಂದು ಅತ್ಯುತ್ತಮ ಆರೋಗ್ಯಕರ ಪೇಯವಾಗಿದ್ದು ಕ್ಯಾನ್ಸರ್ ಮತ್ತು ಸಂಧಿವಾತವನ್ನು ಕಡಿಮೆಗೊಳಿಸುತ್ತದೆ.

ಶುಂಠಿ ಬಿಯರ್ನ ಇತರ ಪ್ರಯೋಜನಗಳು
ಈ ಪೇಯವನ್ನು ಸೇವಿಸುವ ಮೂಲಕ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ ಹಾಗೂ ಹೊಟ್ಟೆಗೆ ಸಂಬಂಧಿಸಿದ ಕೆಲವಾರು ತೊಂದರೆಗಳಿಂದ ಮುಕ್ತಿ ದೊರಕುತ್ತದೆ. ಅಲ್ಲದೇ ಕೆಟ್ಟ ಕೊಲೆಸ್ಟ್ರಾಲ್ ಹಾಗೂ ರಕ್ತದಲ್ಲಿ ಅಧಿಕ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ. ಅಲ್ಲದೇ ಶೀತ ಮತ್ತು ಫ್ಲೂ ಜ್ವರ ಬರುವುದರಿಂದಲೂ ತಡೆಯುತ್ತದೆ ಹಾಗೂ ರಕ್ತಪರಿಚಲನೆಯನ್ನು ಉತ್ತಮಗೊಳಿಸುತ್ತದೆ.

ನೋವು ಮತ್ತು ಉರಿಯೂತಗಳಿಗಾಗಿ
ಶುಂಠಿಯ ಸೇವನೆಯಿಂದ ಬೆನ್ನು ನೋವು ಮತ್ತು ಸೊಂಟನೋವನ್ನು ಕಡಿಮೆಗೊಳಿಸಬಹುದು. ಹಾಗೂ ಉರಿಯೂತದ ಪರಿಣಾಮಗಳಾದ ಸಂಧಿವಾತ, ಕ್ಷೀಣಗೊಳ್ಳುವ ಮೂಳೆಗಳು ಮೊದಲಾದ ತೊಂದರೆಗಳಿಂದ ಬಳಲುವ ರೋಗಿಗಳಿಗೆ ಉತ್ತಮ ಪರಿಹಾರ ಒದಗಿಸುತ್ತದೆ.

ಮುಖ್ಯವಾದ ಸೂಚನೆ
ಈ ಪೇಯವನ್ನು ಶೇಖರಿಸಿಡಲು ಗಾಜಿನ ಬಾಟಲಿಗಳನ್ನು ಬಳಸಬೇಡಿ. ಏಕೆಂದರೆ ಒಂದೆರಡು ದಿನಗಳಲ್ಲಿಯೇ ಹುದುಗು ಬರುವ ಸಮದಯದಲ್ಲಿ ಇದರೊಳಗಿನ ರಾಸಾಯನಿಕ ಕ್ರಿಯೆಯಿಂದ ಒತ್ತಡ ಹೆಚ್ಚಾಗುವ ಕಾರಣ ಇದು ಗಾಜನ್ನು ಒಳಗಿನಿಂದ ಸ್ಫೋಟಿಸಬಹುದು...



Click it and Unblock the Notifications