Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ಮಕ್ಕಳಿಗೆ ಸೊಳ್ಳೆ ಕಚ್ಚಿದರೆ ಈ ಔಷಧಗಳನ್ನು ಹಚ್ಚಿರಿ
ರಾಮೇಶ್ವರಕ್ಕೆ ಹೋದರು ಶನೇಶ್ಚರನ ಕಾಟ ತಪ್ಪೋದಿಲ್ಲ" ಎಂಬ ಗಾದೆಯಿದೆ. ಈ ಗಾದೆ ಮಾತು ನಮ್ಮ ಸೊಳ್ಳೆಗಳನ್ನು ನೋಡಿಯೇ ರಚಿಸಿರಬೇಕು. ಒಂದು ವೇಳೆ ನೀವು ಸೊಳ್ಳೆ ಕಡಿತಗಳಿಂದ ನಿರಂತರವಾಗಿ ನೊಂದಿದ್ದರೆ, ಇಲ್ಲಿದೆ ನೋಡಿ ಮನೆಮದ್ದು
ನೋಡಲು ಜೀರಿಗೆ ಗಾತ್ರ, ಕಚ್ಚಿದರೆ ಗಂಟೆಗಳ ಕಾಲ ಕೆರೆತವನ್ನು ಉಂಟುಮಾಡುವ ಕೀಟ ಸೊಳ್ಳೆ. ದೇವರಂತೆ ಸರ್ವವ್ಯಾಪಿಯಾಗಿ ಹಾರಾಡುವ ಇದರ ಪರಿಚಯ ಎಲ್ಲರಿಗೂ ಇದ್ದೇ ಇರುತ್ತದೆ. ತಮ್ಮ ಆಹಾರಕ್ಕಾಗಿ ಪ್ರಾಣಿ ಹಾಗೂ ಮನುಷ್ಯರ ರಕ್ತವನ್ನು ಹೀರುತ್ತವೆ. ಇದರ ಕಡಿತದಿಂದ ಅನೇಕ ಬಗೆಯ ಕಾಯಿಲೆಗಳು ನಮ್ಮನ್ನು ಆವರಿಸುವ ಸಾಧ್ಯತೆಗಳಿರುತ್ತವೆ. ಕೊಳಚೆ ಮತ್ತು ಹುಲ್ಲುಗಳ ಮಧ್ಯೆ ಹುಟ್ಟಿಕೊಳ್ಳುವ ಈ ಕೀಟದ ಮಗ್ಗೆ ಅಸಡ್ಡೆ ತೋರುವಂತಿಲ್ಲ.
ಸೊಳ್ಳೆಗಳು ಕಚ್ಚಿದ ಜಾಗವು ಕೆಂಪು ಬೊಬ್ಬೆಯಂತಾಗಿ ತುರಿಕೆ ಕಾಣಿಸಿಕೊಳ್ಳುವುದು. ಅದರಲ್ಲೂ ಶಿಶು ಮತ್ತು ಚಿಕ್ಕ ಮಕ್ಕಳಿಗೆ ಇದರ ಕಡಿತ ನಂಜಿನಂತಾಗಿ ಪರಿವರ್ತನೆಗೊಳ್ಳುವುದು. ಈ ಬಗೆಯ ತೊಂದರೆಗೆ ಪರಿಹಾರವಾಗಿ ಇಂಗ್ಲಿಷ್ ಔಷಧಗಳಿಲ್ಲ.
ಇದನ್ನೂ ಓದಿ - ಸೊಳ್ಳೆ ಕಡಿತದ ಉರಿ ಶಮನಕ್ಕೆ ಒಂದು ಬಾಳೆಹಣ್ಣು ಸಾಕು!
ಬದಲಾಗಿ ಮನೆಯಲ್ಲಿ ಇರುವ ಕೆಲವು ಪ್ರಮುಖ ಉತ್ಪನ್ನಗಳ ಸಹಾಯದಿಂದ ಗುಣಪಡಿಸಬಹುದು. ಅಡುಗೆ ಮನೆಯಲ್ಲಿಯೇ ಇರುವ ಈ ಉತ್ಪನ್ನಗಳು ಶಿಶುಗಳಿಗೂ ಯಾವುದೇ ಅಡ್ಡ ಪರಿಣಾಮ ಬೀರದು. ಹಾಗಾದರೆ ಈ ಉತ್ಪನ್ನಗಳು ಯಾವುದೆಂಬುದರ ಬಗ್ಗೆ ಅರಿಯೋಣ...

ಅಲೋವೆರಾ
ಅಲೋವೆರದ ಒಳಗಿನ ಜೆಲ್ಅನ್ನು ಸೊಳ್ಳೆ ಕಡಿದ ಜಾಗಕ್ಕೆ ಹಚ್ಚಬೇಕು. ಹೀಗೆ ಮಾಡುವುದರಿಂದ ಉರಿಯೂತ ಮತ್ತು ತುರಿಕೆಯು ಕಡಿಮೆಯಾಗುವುದು.

ಈರುಳ್ಳಿ
ಸೊಳ್ಳೆ ಕಡಿದ ಜಾಗದಲ್ಲಿ ಈರುಳ್ಳಿ ಚೂರಿನಿಂದ ಸ್ವಲ್ಪ ಮಸಾಜ್ ಮಾಡಬೇಕು. ಬಹಳ ಬೇಗ ತುರಿಕೆಯ ಸಂವೇದನೆಯು ನಿಯಂತ್ರಣಕ್ಕೆ ಬರುತ್ತದೆ.
ಇದನ್ನೂ ಓದಿ- ಬೇವು ಹತ್ತಿರವಿದ್ದರೆ, ಸೊಳ್ಳೆಗಳು ದೂರ

ಜೇನು ತುಪ್ಪ
ಜೇನು ತುಪ್ಪದಲ್ಲಿ ಆಂಟಿಮೈಕ್ರೊಬಿಯಲ್ ಅಂಶವು ಸಮೃದ್ಧವಾಗಿದೆ. ಇದನ್ನು ಸೊಳ್ಳೆ ಕಡಿದ ಜಾಗದಲ್ಲಿ ಅನ್ವಯಿಸಿದರೆ ಬಹು ಬೇಗ ಗಾಯ ಗುಣಮುಖವಾಗುವುದು.

ನಿಂಬೆ ಹಣ್ಣು
ಇದರಲ್ಲಿ ಆಮ್ಲೀಯ ಗುಣ ಅಧಿಕವಾಗಿದೆ. ಸೊಳ್ಳೆಯ ಕಡಿತದ ಜಾಗದಲ್ಲಿ ನಿಂಬೆ ರಸವನ್ನು ಹಚ್ಚುವುದರಿಂದ ಸೋಂಕಿನ ಸಂಭವನೀಯ ಏರಿಕೆಯ ಪ್ರಮಾಣ ಕಡಿಮೆಯಾಗುತ್ತದೆ.

ಟೂತ್ ಪೇಸ್ಟ್
ಸೊಳ್ಳೆ ಕಡಿದ ಜಾಗದಲ್ಲಿ ದಿನಕ್ಕೆರಡು ಬಾರಿ ಟೂತ್ಪೇಸ್ಟ್ ಹಚ್ಚಬೇಕು. ಆಗ ಉರಿಯೂತ ಹಾಗೂ ತುರಿಕೆಯನ್ನು ನಿಯಂತ್ರಿಸಬಹುದು.

ಸಾಬೂನು
ಸೊಳ್ಳೆ ಕಚ್ಚಿರುವಲ್ಲಿ ಸಾಬೂನಿನಿಂದ ತೊಳೆದರೆ ಸೋಂಕುಗಳಿಂದ ಮುಕ್ತಿಪಡೆಯಬಹುದು.

ಬೆಳ್ಳುಳ್ಳಿ
ಸೊಳ್ಳೆ ಕಡಿದ ಜಾಗದಲ್ಲಿ ಬೆಳ್ಳುಳ್ಳಿಯ ರಸ/ ಪೇಸ್ಟ್ ಹಚ್ಚುವುದರಿಂದ ಸ್ವಲ್ಪ ನೋವಿನ ಅನುಭವ ಆಗುವುದು. ಆದರೆ ಬಹಳ ಬೇಗ ಉರಿಯೂತ ಮತ್ತು ತುರಿಕೆ ಗುಣವಾಗುವುದು.

ಉಪ್ಪು
ಉತ್ತಮ ಆಂಟಿಸೆಫ್ಟಿಕ್ ಗುಣಲಕ್ಷಣ ಹೊಂದಿರುವ ಮೂಲ ವಸ್ತು ಉಪ್ಪು. ಇದನ್ನು ಸೊಳ್ಳೆಕಡಿದ ಜಾಗದ ಮೇಲೆ ಅನ್ವಯಿಸಿದರೆ ಒಮ್ಮೆಲೇ ಉರಿ ಆಗುವುದು. ಆದರೆ ಗಾಯವನ್ನು ಬಹಳಬೇಗ ನಿವಾರಿಸುತ್ತದೆ.

ತುಳಸಿ
ಉತ್ತಮ ರೋಗ ನಿರೋಧಕ ಅಂಶವನ್ನು ಒಳಗೊಂಡಿರುವ ಸಸ್ಯ ತುಳಸಿ. ಸೊಳ್ಳೆ ಕಚ್ಚಿದ ಜಾಗದಲ್ಲಿ ಇದರ ರಸವನ್ನು ಹಚ್ಚುವುದರಿಂದ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತದೆ.

ಬಿಳಿ ವಿನೆಗರ್
ಸೊಳ್ಳೆ ಕಡಿದರೆ, ಒಂದು ಬಕೇಟ್ ನೀರಿಗೆ 3 ಕಪ್ ವಿನೆಗರ್ ಸೇರಿಸಿ ಸ್ನಾನ ಮಾಡಬೇಕು. ಹೀಗೆ ಮಾಡುವುದರಿಂದ ಉರಿಯೂತ ಮತ್ತು ತುರಿಕೆ ಶಮನವಾಗುವುದು.



Click it and Unblock the Notifications











