Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಮಕ್ಕಳಿಗೆ ಸೊಳ್ಳೆ ಕಚ್ಚಿದರೆ ಈ ಔಷಧಗಳನ್ನು ಹಚ್ಚಿರಿ
ರಾಮೇಶ್ವರಕ್ಕೆ ಹೋದರು ಶನೇಶ್ಚರನ ಕಾಟ ತಪ್ಪೋದಿಲ್ಲ" ಎಂಬ ಗಾದೆಯಿದೆ. ಈ ಗಾದೆ ಮಾತು ನಮ್ಮ ಸೊಳ್ಳೆಗಳನ್ನು ನೋಡಿಯೇ ರಚಿಸಿರಬೇಕು. ಒಂದು ವೇಳೆ ನೀವು ಸೊಳ್ಳೆ ಕಡಿತಗಳಿಂದ ನಿರಂತರವಾಗಿ ನೊಂದಿದ್ದರೆ, ಇಲ್ಲಿದೆ ನೋಡಿ ಮನೆಮದ್ದು
ನೋಡಲು ಜೀರಿಗೆ ಗಾತ್ರ, ಕಚ್ಚಿದರೆ ಗಂಟೆಗಳ ಕಾಲ ಕೆರೆತವನ್ನು ಉಂಟುಮಾಡುವ ಕೀಟ ಸೊಳ್ಳೆ. ದೇವರಂತೆ ಸರ್ವವ್ಯಾಪಿಯಾಗಿ ಹಾರಾಡುವ ಇದರ ಪರಿಚಯ ಎಲ್ಲರಿಗೂ ಇದ್ದೇ ಇರುತ್ತದೆ. ತಮ್ಮ ಆಹಾರಕ್ಕಾಗಿ ಪ್ರಾಣಿ ಹಾಗೂ ಮನುಷ್ಯರ ರಕ್ತವನ್ನು ಹೀರುತ್ತವೆ. ಇದರ ಕಡಿತದಿಂದ ಅನೇಕ ಬಗೆಯ ಕಾಯಿಲೆಗಳು ನಮ್ಮನ್ನು ಆವರಿಸುವ ಸಾಧ್ಯತೆಗಳಿರುತ್ತವೆ. ಕೊಳಚೆ ಮತ್ತು ಹುಲ್ಲುಗಳ ಮಧ್ಯೆ ಹುಟ್ಟಿಕೊಳ್ಳುವ ಈ ಕೀಟದ ಮಗ್ಗೆ ಅಸಡ್ಡೆ ತೋರುವಂತಿಲ್ಲ.
ಸೊಳ್ಳೆಗಳು ಕಚ್ಚಿದ ಜಾಗವು ಕೆಂಪು ಬೊಬ್ಬೆಯಂತಾಗಿ ತುರಿಕೆ ಕಾಣಿಸಿಕೊಳ್ಳುವುದು. ಅದರಲ್ಲೂ ಶಿಶು ಮತ್ತು ಚಿಕ್ಕ ಮಕ್ಕಳಿಗೆ ಇದರ ಕಡಿತ ನಂಜಿನಂತಾಗಿ ಪರಿವರ್ತನೆಗೊಳ್ಳುವುದು. ಈ ಬಗೆಯ ತೊಂದರೆಗೆ ಪರಿಹಾರವಾಗಿ ಇಂಗ್ಲಿಷ್ ಔಷಧಗಳಿಲ್ಲ.
ಇದನ್ನೂ ಓದಿ - ಸೊಳ್ಳೆ ಕಡಿತದ ಉರಿ ಶಮನಕ್ಕೆ ಒಂದು ಬಾಳೆಹಣ್ಣು ಸಾಕು!
ಬದಲಾಗಿ ಮನೆಯಲ್ಲಿ ಇರುವ ಕೆಲವು ಪ್ರಮುಖ ಉತ್ಪನ್ನಗಳ ಸಹಾಯದಿಂದ ಗುಣಪಡಿಸಬಹುದು. ಅಡುಗೆ ಮನೆಯಲ್ಲಿಯೇ ಇರುವ ಈ ಉತ್ಪನ್ನಗಳು ಶಿಶುಗಳಿಗೂ ಯಾವುದೇ ಅಡ್ಡ ಪರಿಣಾಮ ಬೀರದು. ಹಾಗಾದರೆ ಈ ಉತ್ಪನ್ನಗಳು ಯಾವುದೆಂಬುದರ ಬಗ್ಗೆ ಅರಿಯೋಣ...

ಅಲೋವೆರಾ
ಅಲೋವೆರದ ಒಳಗಿನ ಜೆಲ್ಅನ್ನು ಸೊಳ್ಳೆ ಕಡಿದ ಜಾಗಕ್ಕೆ ಹಚ್ಚಬೇಕು. ಹೀಗೆ ಮಾಡುವುದರಿಂದ ಉರಿಯೂತ ಮತ್ತು ತುರಿಕೆಯು ಕಡಿಮೆಯಾಗುವುದು.

ಈರುಳ್ಳಿ
ಸೊಳ್ಳೆ ಕಡಿದ ಜಾಗದಲ್ಲಿ ಈರುಳ್ಳಿ ಚೂರಿನಿಂದ ಸ್ವಲ್ಪ ಮಸಾಜ್ ಮಾಡಬೇಕು. ಬಹಳ ಬೇಗ ತುರಿಕೆಯ ಸಂವೇದನೆಯು ನಿಯಂತ್ರಣಕ್ಕೆ ಬರುತ್ತದೆ.
ಇದನ್ನೂ ಓದಿ- ಬೇವು ಹತ್ತಿರವಿದ್ದರೆ, ಸೊಳ್ಳೆಗಳು ದೂರ

ಜೇನು ತುಪ್ಪ
ಜೇನು ತುಪ್ಪದಲ್ಲಿ ಆಂಟಿಮೈಕ್ರೊಬಿಯಲ್ ಅಂಶವು ಸಮೃದ್ಧವಾಗಿದೆ. ಇದನ್ನು ಸೊಳ್ಳೆ ಕಡಿದ ಜಾಗದಲ್ಲಿ ಅನ್ವಯಿಸಿದರೆ ಬಹು ಬೇಗ ಗಾಯ ಗುಣಮುಖವಾಗುವುದು.

ನಿಂಬೆ ಹಣ್ಣು
ಇದರಲ್ಲಿ ಆಮ್ಲೀಯ ಗುಣ ಅಧಿಕವಾಗಿದೆ. ಸೊಳ್ಳೆಯ ಕಡಿತದ ಜಾಗದಲ್ಲಿ ನಿಂಬೆ ರಸವನ್ನು ಹಚ್ಚುವುದರಿಂದ ಸೋಂಕಿನ ಸಂಭವನೀಯ ಏರಿಕೆಯ ಪ್ರಮಾಣ ಕಡಿಮೆಯಾಗುತ್ತದೆ.

ಟೂತ್ ಪೇಸ್ಟ್
ಸೊಳ್ಳೆ ಕಡಿದ ಜಾಗದಲ್ಲಿ ದಿನಕ್ಕೆರಡು ಬಾರಿ ಟೂತ್ಪೇಸ್ಟ್ ಹಚ್ಚಬೇಕು. ಆಗ ಉರಿಯೂತ ಹಾಗೂ ತುರಿಕೆಯನ್ನು ನಿಯಂತ್ರಿಸಬಹುದು.

ಸಾಬೂನು
ಸೊಳ್ಳೆ ಕಚ್ಚಿರುವಲ್ಲಿ ಸಾಬೂನಿನಿಂದ ತೊಳೆದರೆ ಸೋಂಕುಗಳಿಂದ ಮುಕ್ತಿಪಡೆಯಬಹುದು.

ಬೆಳ್ಳುಳ್ಳಿ
ಸೊಳ್ಳೆ ಕಡಿದ ಜಾಗದಲ್ಲಿ ಬೆಳ್ಳುಳ್ಳಿಯ ರಸ/ ಪೇಸ್ಟ್ ಹಚ್ಚುವುದರಿಂದ ಸ್ವಲ್ಪ ನೋವಿನ ಅನುಭವ ಆಗುವುದು. ಆದರೆ ಬಹಳ ಬೇಗ ಉರಿಯೂತ ಮತ್ತು ತುರಿಕೆ ಗುಣವಾಗುವುದು.

ಉಪ್ಪು
ಉತ್ತಮ ಆಂಟಿಸೆಫ್ಟಿಕ್ ಗುಣಲಕ್ಷಣ ಹೊಂದಿರುವ ಮೂಲ ವಸ್ತು ಉಪ್ಪು. ಇದನ್ನು ಸೊಳ್ಳೆಕಡಿದ ಜಾಗದ ಮೇಲೆ ಅನ್ವಯಿಸಿದರೆ ಒಮ್ಮೆಲೇ ಉರಿ ಆಗುವುದು. ಆದರೆ ಗಾಯವನ್ನು ಬಹಳಬೇಗ ನಿವಾರಿಸುತ್ತದೆ.

ತುಳಸಿ
ಉತ್ತಮ ರೋಗ ನಿರೋಧಕ ಅಂಶವನ್ನು ಒಳಗೊಂಡಿರುವ ಸಸ್ಯ ತುಳಸಿ. ಸೊಳ್ಳೆ ಕಚ್ಚಿದ ಜಾಗದಲ್ಲಿ ಇದರ ರಸವನ್ನು ಹಚ್ಚುವುದರಿಂದ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತದೆ.

ಬಿಳಿ ವಿನೆಗರ್
ಸೊಳ್ಳೆ ಕಡಿದರೆ, ಒಂದು ಬಕೇಟ್ ನೀರಿಗೆ 3 ಕಪ್ ವಿನೆಗರ್ ಸೇರಿಸಿ ಸ್ನಾನ ಮಾಡಬೇಕು. ಹೀಗೆ ಮಾಡುವುದರಿಂದ ಉರಿಯೂತ ಮತ್ತು ತುರಿಕೆ ಶಮನವಾಗುವುದು.



Click it and Unblock the Notifications
