Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಸೊಳ್ಳೆ ಕಡಿತದ ಉರಿ ಶಮನಕ್ಕೆ ಒಂದು ಬಾಳೆಹಣ್ಣು ಸಾಕು!
ಕೆಲವರ ರಕ್ತ ಹೆಚ್ಚು ರುಚಿ ಎಂದೋ ಏನೋ, ಅವರನ್ನೇ ಹುಡುಕಿ ಸೊಳ್ಳೆಗಳು ಕಚ್ಚುತ್ತವೆ. ಇದರರ್ಥ ಇತರರನ್ನು ಕಚ್ಚುವುದಿಲ್ಲ ಎಂದಲ್ಲ, ಆದರೆ ಕೆಲವು ರಕ್ತದ ಗುಂಪಿನವರನ್ನು ಹೆಚ್ಚು ಕಚ್ಚುತ್ತವೆ. ಕಚ್ಚಿದ ಬಳಿಕ ಚರ್ಮದಲ್ಲಿ ಏಳುವ ದದ್ದು, ಇಲ್ಲಿ ಉಂಟಾಗುವ ಅಸಾಧ್ಯ ಉರಿ ಈ ಸೊಳ್ಳೆಗಳನ್ನೇ ನಿರ್ನಾಮ ಮಾಡುವ ಕುರಿತು ಮನದಲ್ಲಿ ಛಲ ಹುಟ್ಟಿಸುತ್ತವೆ. ಸೊಳ್ಳೆ ಕಡಿತದಿಂದ ಪಾರಾಗಬೇಕೆ?

ಆದರೆ ಹೆಚ್ಚಿನವರು ಈ ಆರಂಭಶೂರತ್ವವನ್ನು ಮೆರೆದು ಕೊಂಚ ಸಮಯದಲ್ಲಿಯೇ ಮರೆತು ಬಿಡುತ್ತಾರೆ. ಆದರೆ ಸೊಳ್ಳೆಗಳು ಮಕ್ಕಳಿಗೆ ಕಚ್ಚಿದರೆ ಉರಿ ತಾಳಲಾರದೇ ಅಳುವ ಮಕ್ಕಳನ್ನು ನೋಡಿದಾಗ ಮಾತ್ರ ಕರುಳು ಚುರ್ರೆನ್ನದಿರುವುದಿಲ್ಲ. ಸೊಳ್ಳೆಗಳನ್ನು ಓಡಿಸಲೆಂದು ಹಿಂದೆ ಮಾಸ್ಕ್ವಿಟೋ ಕಾಯಿಲ್ ಎಂಬ ಹೊಗೆಬತ್ತಿಗಳು ಬಹಳವಾಗಿ ಪ್ರಚಲಿತವಿದ್ದವು. ಸೊಳ್ಳೆ ಕಡಿತಗಳಿಂದ ಪಾರಾಗಲು ಕೆಲ ಸಲಹೆಗಳು
ಕ್ರಮೇಣ ಇವುಗಳ ಸ್ಥಾನವನ್ನು ಮೆಷೀನುಗಳೂ, ದ್ರವಗಳನ್ನು ಆವಿಯಾಗಿಸುವ ಉಪಕರಣಗಳೂ ಆಕ್ರಮಿಸಿವೆ. ಸೊಳ್ಳೆಗಳನ್ನು ನಿಗ್ರಹಿಸುವುದು ಅಷ್ಟು ಸುಲಭವಲ್ಲ. ಇದಕ್ಕೆ ಊರಿಗೇ ಊರೇ ಜೊತೆಯಾಗಬೇಕಾಗುತ್ತದೆ. ಸದ್ಯಕ್ಕೆ ಅಂತಹ ಯಾವುದೇ ಪ್ರಯತ್ನ ಇಲ್ಲದಿದ್ದರೆ ನಿಮ್ಮ ಮನೆಗೆ ಸೊಳ್ಳೆಗಳು ಪ್ರವೇಶಿಸದಂತೆ ಎಚ್ಚರಿಕೆ ವಹಿಸುವುದೇ ಅನಿವಾರ್ಯ ಮಾರ್ಗ.
ಆದರೂ ಒಂದು ವೇಳೆ ಸೊಳ್ಳೆ ಕಚ್ಚಿಯೇ ಬಿಟ್ಟಿದ್ದರೆ ಇದರ ಉರಿ ಮತ್ತು ದದ್ದುಗಳನ್ನು ಶಮನಗೊಳಿಸಲು ಕೆಲವಾರು ವಿಧಾನಗಳಿವೆ. ಈ ಅಸಾಧ್ಯ ಉರಿಯನ್ನು ತಕ್ಷಣವೇ ಕಡಿಮೆಗೊಳಿಸಲು ಏನೂ ಸಿಗದಿದ್ದರೆ ಬಾಳೆಹಣ್ಣೇ ಸಾಕು. ಬಾಳೆಹಣ್ಣಿನ ತಿರುಳು ಮಾತ್ರವಲ್ಲ, ಸಿಪ್ಪೆಯ ಒಳಭಾಗವೂ ಈ ಉರಿಯನ್ನು ಶಮನಗೊಳಿಸಲು ಸಶಕ್ತವಾಗಿವೆ. ಸಿಪ್ಪೆಯ ಮೇಲೆ ಚುಕ್ಕೆ ಬಿದ್ದ ಬಾಳೆಹಣ್ಣಿನ ಅದ್ಭುತ ಪವರ್....
ಸೊಳ್ಳೆ ಕಚ್ಚಿದ ಕಡೆ ಚೆನ್ನಾಗಿ ಹಣ್ಣಾದ ಬಾಳೆಹಣ್ಣಿನ ತಿರುಳನ್ನು ಕೊಂಚವಾಗಿ ಸಂಗ್ರಹಿಸಿ ತೆಳುವಾಗಿ ಹಚ್ಚಿ ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಇದರಿಂದ ತಕ್ಷಣವೇ ಉರಿ ಕಡಿಮೆಯಾಗಿ ದದ್ದುಗಳು ನಿಧಾನವಾಗಿ ಇಳಿಯುತ್ತವೆ.
ಇನ್ನೊಂದು ವಿಧಾನವೆಂದರೆ ಸೊಳ್ಳೆ ಕಚ್ಚಿದ ಜಾಗವನ್ನು ಮೊದಲು ಸ್ವಚ್ಛಗೊಳಿಸಿ ಬಳಿಕ ಬಾಳೆಸಿಪ್ಪೆಯ ಒಳಭಾಗ ಆವರಿಸುವಂತೆ ಈ ಭಾಗದ ಮೇಲಿರಿಸಿ ಸುಮಾರು ಐದರಿಂದ ಹತ್ತು ನಿಮಿಷದ ಬಳಿಕ ತೆಗೆಯಿರಿ. ಬಾಳೆ ಹಣ್ಣಿನ ಸಿಪ್ಪೆಯ 10 ಅದ್ಭುತ ಪ್ರಯೋಜನಗಳು
ಈ ನಡುವೆ ಬಾಳೆಸಿಪ್ಪೆಯನ್ನು ಕೊಂಚ ನಯವಾಗಿ ಸ್ವಲ್ಪ ಒತ್ತಡದೊಂದಿಗೆ ಉಜ್ಜುತ್ತಾ ಇರಬೇಕು. ಈ ವಿಧಾನದಿಂದ ಎಷ್ಟೇ ದೊಡ್ಡ ಕಡಿತವಾಗಿದ್ದರೂ ಶೀಘ್ರವೇ ಉರಿ ಕಡಿಮೆಯಾಗಿ ದದ್ದು ಇಳಿಯುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications



