Just In
- 46 min ago ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
- 2 hrs ago ಮದ್ಯದ ಅಮಲಲ್ಲಿ ತೇಲಾಡುತ್ತಿದ್ದ ಶಿಕ್ಷಕನಿಗೆ ಮಕ್ಕಳಿಂದಲೇ ಚಪ್ಪಲಿ ಏಟು..!
- 3 hrs ago ವಿಶ್ವದ ದುಬಾರಿ ಹಣ್ಣುಗಳಿವು..! ನೀವು ಊಹಿಸದ ಬೆಲೆ ಈ ಹಣ್ಣುಗಳಿಗಿದೆ..!
- 4 hrs ago ಶನಿಯ ನಕ್ಷತ್ರ ಬದಲಾವಣೆ: ಅಕ್ಟೋಬವರೆಗೆ ಈ 3 ರಾಶಿಯವರು ಇದರ ಉತ್ತಮ ಫಲ ಪಡೆಯುವಿರಿ
Don't Miss
- News ಮನೆ ಬಾಗಿಲಿಗೆ ಹೋದರೂ ಸಿಗಲಿಲ್ಲ ಬಿಜೆಪಿ ಶಾಸಕರು, ಸಂಸದರು: ಉ.ಕನ್ನಡ ಬಿಜೆಪಿ ಅಭ್ಯರ್ಥಿ ಕಾಗೇರಿಗಿಲ್ಲ ಅಸಮಾಧಾನಿತರ ಬೆಂಬಲ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Automobiles ಯುಎಸ್ಎ, ಕೆನಡಾಗೂ ಕಾಲಿಟ್ಟ ಭಾರತೀಯ ಬೈಕ್: ಮುಂದುವರೆದ ವಿಶ್ವಗುರು ಭಾರತದ ನಾಗಾಲೋಟ
- Movies ಗುರುಪ್ರಸಾದ್ಗೆ ತಿರುಗೇಟು ಕೊಟ್ಟ ಶ್ರುತಿ ಹರಿಹರನ್ ; ನನ್ನ ಮೀಟೂ ಕಥೆ ಇನ್ನೂ ಮುಗಿದಿಲ್ಲ ಎಂದ ನಟಿ..!
- Finance ನಿಮಗೆ ಗೊತ್ತಲ್ಲದೇ ನಿಮ್ಮ ಹೆಸರಲ್ಲಿ ಖಾತೆ ತೆರೆದಿರ್ತಾರೆ, ಪಿಂಚಣಿ ಯೋಜನೆ ಬಗ್ಗೆ ಹುಷಾರಾಗಿರಿ
- Sports IPL 2024: ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಜಯದೇವ್ ಉನಾದ್ಕಟ್; ಈ ಸಾಧನೆ ಮಾಡಿದ ಮೊದಲ ಭಾರತೀಯ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೈ ಕೈ ನೋವಿದ್ದರೆ, ಈ ಮನೆಮದ್ದು ಸೇವಿಸಿ, ಕೂಡಲೇ ಕಡಿಮೆಯಾಗುವುದು!
ಕೆಲವೊಮ್ಮೆ ಮೈ ಕೈ ನೋವು ಒಂದು ಕಿರಿಕಿರಿ ತರಿಸುವ ತೊಂದರೆಯಾಗಿದ್ದು ನಿತ್ಯದ ಇತರ ಚಟುವಟಿಕೆಗಳನ್ನೆಲ್ಲಾ ಕಷ್ಟಕರವಾಗಿಸುತ್ತದೆ. ಚಿಕ್ಕ ಪುಟ್ಟ ಕೆಲಸಗಳೂ ಭಾರೀ ತ್ರಾಸವಾದಂತೆ ಅನ್ನಿಸುತ್ತದೆ.
ಬೆಳಿಗ್ಗೆ ಹಾಸಿಗೆಯಿಂದ ಏಳಬೇಕಾದರೆ ದೇಹಪೂರ್ತಿ ನೋವು ಕಾಣಿಸಿಕೊಂಡರೆ ಆ ದಿನ ಯಾವುದೇ ಕೆಲಸ ಕಾರ್ಯಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಮೈ ಪೂರ್ತಿ ನೋವು ಕಾಣಿಸಿಕೊಂಡರೆ ಅದಕ್ಕೆ ಒಂದು ನೋವು ನಿವಾರಕ ಮಾತ್ರೆ ತೆಗೆದುಕೊಂಡು ಸುಮ್ಮನಿರುವುದು ಹೆಚ್ಚಿನವರ ಅಭ್ಯಾಸವಾಗಿದೆ. ಪ್ರಯಾಣದ ನಂತರ ಕಾಡುವ ಮೈ ಕೈ ನೋವಿಗೆ ಮನೆಮದ್ದು
ಆದರೆ ಈ ಮೈ ನೋವು ಹಿಂದೆ ಆಗಿರುವಂತಹ ಅಪಘಾತದಲ್ಲಿ ಆದಂತಹ ಗಾಯಗಳು, ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳದೆ ಇರುವುದು, ಭಾರವಾದ ವಸ್ತುವನ್ನು ಒಮ್ಮೆಲೇ ಎತ್ತುವುದರಿಂದ ಬೆನ್ನಿಗೆ ನೋವಾಗಬಹುದು. ದೇಹಕ್ಕೆ ಅತಿಯಾಗಿ ಶ್ರಮವಹಿಸಿದರೂ ಮೈಕೈ ನೋವು ಕಾಣಿಸಿಕೊಳ್ಳುವುದು. ಈ ನೋವಿನಿಂದ ಯಾವುದೇ ಕೆಲಸಗಳನ್ನು ಮಾಡುವುದು ಅಸಾಧ್ಯವೆನಿಸುತ್ತದೆ. ದೇಹದ ನೋವನ್ನು ಕಡಿಮೆ ಮಾಡುವ ಆಹಾರಗಳು
ಇಂತಹ ಸಮಯದಲ್ಲಿ ನೀವು ನೈಸರ್ಗಿಕವಾಗಿರುವ ಒಂದು ಪಾನೀಯವನ್ನು ಕುಡಿದರೆ ನೋವು ಮಾಯವಾಗಿ ನೀವು ಉಲ್ಲಾಸದಿಂದ ಓಡಾಡಬಹುದು. ನೋವು ಯಾವಾಗಲೂ ಕಾಡುತ್ತಾ ಇದ್ದರೆ ಅಗತ್ಯವಾಗಿ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯಿರಿ. ನೈಸರ್ಗಿಕ ಪಾನೀಯ ತಯಾರಿಸುವ ಬಗ್ಗೆ ಮುಂದೆ ತಿಳಿಯಿರಿ....
ಅರಿಶಿನ
ಒಂದು ಚಮಚ ಅರಿಶಿನ ಹುಡಿಯನ್ನು ಹಾಕಿಕೊಂಡು ಅದಕ್ಕೆ ಸ್ವಲ್ಪ ನೀರು ಹಾಕಿ ದಪ್ಪಗಿನ ಪೇಸ್ಟ್ ಮಾಡಿಕೊಳ್ಳಿ. ಅರಿಶಿನದಲ್ಲಿ ಇರುವಂತಹ ಕುರ್ಕುಮಿನ್ ಎನ್ನುವ ಅಂಶವು ಉರಿಯೂತ ಶಮನಕಾರಿ ಗುಣವನ್ನು ಹೊಂದಿದೆ.
ಅರಿಶಿನ
ಒಂದು ಚಮಚ ಅರಿಶಿನ ಹುಡಿಯನ್ನು ಹಾಕಿಕೊಂಡು ಅದಕ್ಕೆ ಸ್ವಲ್ಪ ನೀರು ಹಾಕಿ ದಪ್ಪಗಿನ ಪೇಸ್ಟ್ ಮಾಡಿಕೊಳ್ಳಿ. ಅರಿಶಿನದಲ್ಲಿ ಇರುವಂತಹ ಕುರ್ಕುಮಿನ್ ಎನ್ನುವ ಅಂಶವು ಉರಿಯೂತ ಶಮನಕಾರಿ ಗುಣವನ್ನು ಹೊಂದಿದೆ.
ಕರಿಮೆಣಸು
ಒಂದು ಚಿಟಿಕೆ ಕರಿಮೆಣಸಿನ ಹುಡಿಯನ್ನು ತೆಗೆದುಕೊಳ್ಳಿ. ಇದು ಆ್ಯಂಟಿಆಕ್ಸಿಡೆಂಟ್ ಮತ್ತು ಉರಿಯೂತ ಶಮನಕಾರಿ, ಬ್ಯಾಕ್ಟೀರಿಯಾ ವಿರೋಧಿ ಗುಣವನ್ನು ಹೊಂದಿದೆ. 9 ಭಯಂಕರ ಕಾಯಿಲೆಗೆ ಮನೆಮದ್ದು ಈ ಕರಿಮೆಣಸು!
ಬಾದಾಮಿ ಹಾಲು/ತೆಂಗಿನ ಹಾಲು
ಒಂದು ಕಪ್ ಬಾದಾಮಿ ಹಾಲು ಅಥವಾ ತೆಂಗಿನ ಹಾಲು ತೆಗೆದುಕೊಳ್ಳಿ. ಬಾದಾಮಿ ಹಾಲಿನಲ್ಲಿ ವಿಟಮಿನ್ ಸಿ, ಇ, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಯಥೇಚ್ಛವಾಗಿದೆ. ತೆಂಗಿನ ಹಾಲಿನಲ್ಲಿ ನಾರಿನಾಂಶ, ವಿಟಮಿನ್ ಸಿ, ಇ, ಕಬ್ಬಿಣ ಮತ್ತು ಕ್ಯಾಲ್ಸಿಯಂ ಇದೆ.ಬಾದಾಮಿ ಹಾಲು+ ಜೇನುತುಪ್ಪದ ಜೋಡಿಗೆ ನಮ್ಮದೊಂದು ಸಲಾಂ!
ತೆಂಗಿನ ಹಾಲು
ಒಂದು ಚಮಚ ತೆಂಗಿನ ಹಾಲು ತೆಗೆದುಕೊಳ್ಳಿ. ತೆಂಗಿನ ಹಾಲಿನಲ್ಲಿ ಉರಿಯೂತ ಶಮನಕಾರಿ ಗುಣಗಳು ಸಮೃದ್ಧವಾಗಿದೆ.
ಜೇನುತುಪ್ಪ
ಜೇನುತುಪ್ಪದಲ್ಲಿ ಉರಿಯೂತ ಶಮನಕಾರಿ ಗುಣ ಹಾಗೂ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಒಂದು ಚಮಚ ತಾಜಾ ಜೇನುತುಪ್ಪ ತೆಗೆದುಕೊಳ್ಳಿ.
ತಯಾರಿಸುವ ವಿಧಾನ
*ಜೇನುತುಪ್ಪವನ್ನು ಬಿಟ್ಟು ಬೇರೆ ಎಲ್ಲಾ ಸಾಮಗ್ರಿಗಳನ್ನು ಒಂದು ತವಾಗೆ ಹಾಕಿಕೊಂಡು ಬಿಸಿ ಮಾಡಿ.
ತಯಾರಿಸುವ ವಿಧಾನ
*ಇದು ಕುದಿಯುವುದು ಬೇಡ, ಉಗುರು ಬೆಚ್ಚಗೆ ಬಿಸಿಯಾದರೆ ಸಾಕು. ಇದು ತಯಾರಾದರೆ ಅದಕ್ಕೆ ಜೇನುತುಪ್ಪ ಹಾಕಿಕೊಳ್ಳಿ ಮತ್ತು ಸರಿಯಾಗಿ ಮಿಶ್ರಣ ಮಾಡಿ.
ತಯಾರಿಸುವ ವಿಧಾನ
*ಮಲಗುವ ಮೊದಲು ಒಂದು ಕಪ್ ಬಿಸಿಯಾಗಿರುವ ಪಾನೀಯವನ್ನು ಸೇವಿಸಿದರೆ ಮೈ ನೋವು ಮಾಯವಾಗುವುದು.