Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
ಮೂಲವ್ಯಾಧಿಗೆ ಆಯುರ್ವೇದ ಚಿಕಿತ್ಸೆ-ತ್ವರಿತ ಸಾಂತ್ವನ
ಹೇಳಿಕೊಳ್ಳಲು ಸಾಧ್ಯವಾಗದೇ ಇರುವ ಕಾಯಿಲೆಗಳಲ್ಲೊಂದು ಮೂಲವ್ಯಾಧಿ. ಮಲವಿಸರ್ಜನೆ ಕಷ್ಟವಾಗಿ ನೋವು ನೀಡುವುದು ಈ ವ್ಯಾಧಿಯ ಪ್ರಮುಖ ಲಕ್ಷಣ, ಚಿಂತಿಸದಿರಿ ಆಯುರ್ವೇದ ಈ ತೊಂದರೆಗೆ ಅತ್ಯುತ್ತಮವಾದ ಪರಿಹಾರವನ್ನು ಒದಗಿಸಿದೆ, ಮುಂದೆ ಓದಿ...
ಹೇಳಿಕೊಳ್ಳಲು ಸಾಧ್ಯವಾಗದೇ ಇರುವ ಕಾಯಿಲೆಗಳಲ್ಲೊಂದು ಮೂಲವ್ಯಾಧಿ. ಮಲವಿಸರ್ಜನೆ ಕಷ್ಟವಾಗಿ ನೋವು ನೀಡುವುದು ಈ ವ್ಯಾಧಿಯ ಪ್ರಮುಖ ಲಕ್ಷಣ. ಮೂಲವ್ಯಾಧಿಗೆ ಪ್ರಮುಖ ಕಾರಣ ಆಹಾರದಲ್ಲಿ ನಾರಿನ ಕೊರತೆ. ಉಳಿದಂತೆ ಮಲಬದ್ಧತೆ, ಅಜೀರ್ಣತೆ, ಹೆಚ್ಚಿನ ಭಾರದ ವಸ್ತುಗಳನ್ನು ಹೊರುವುದು, ಕರುಳುಗಳಲ್ಲಿನ ಸೋಂಕು, ಗರ್ಭಾವಸ್ಥೆಯ ತಾತ್ಕಾಲಿಕ ಪರಿಣಾಮಗಳು, ಸ್ಥೂಲಕಾಯ, ಗುದರತಿ ಮೊದಲಾದ ಕೆಲವಾರು ಕಾರಣಗಳಿವೆ. ಈ ವಿಧಾನದಿಂದ ಮೂಲವ್ಯಾಧಿ ಗುಣಪಡಿಸಬಹುದು
ಮೂಲವ್ಯಾಧಿಯ ಪರಿಣಾಮವಾಗಿ ಮಲವಿಸರ್ಜನೆಯ ಸಮಯದಲ್ಲಿ ರಕ್ತಸ್ರಾವ, ಊದಿಕೊಳ್ಳುವುದು, ಸತತ ತುರಿಕೆ, ಸೋಂಕು, ಕುಳಿತುಕೊಳ್ಳಲೂ ಆಗದಷ್ಟು ನೋವು ಮೊದಲಾದವು ಎದುರಾಗುತ್ತವೆ. ಮೂಲವ್ಯಾಧಿ ಸಮಸ್ಯೆಯೇ..? ಮೂಲಂಗಿಯೇ ಸಮರ್ಥ ಮದ್ದು
ಒಂದು ವೇಳೆ ಇದನ್ನು ಪ್ರಾರಂಭದ ಹಂತದಲ್ಲಿಯೇ ಚಿಕಿತ್ಸೆಗೆ ಒಳಪಡಿಸದಿದ್ದರೆ ಇದು ಉಲ್ಬಣಗೊಂಡು ಶಾಶ್ವತವಾಗಿ ಜೀವಮಾನವಿಡೀ ಕಾಡುವ ಭಯವೂ ಇದೆ. ಆಯುರ್ವೇದ ಈ ತೊಂದರೆಗೆ ಅತ್ಯುತ್ತಮವಾದ ಪರಿಹಾರವನ್ನು ಒದಗಿಸಿದೆ. ಬನ್ನಿ, ಈ ಪರಿಹಾರ ಯಾವುದು ಎಂಬುದನ್ನು ನೋಡೋಣ....

ಅಗತ್ಯವಿರುವ ಸಾಮಾಗ್ರಿಗಳು....
*ಎಳೆ ಬೆಂಡೆ ಕಾಯಿ : ಎರಡು (ಮಧ್ಯಮ ಗಾತ್ರ)
*ಆಲಿವ್ ಎಣ್ಣೆ: ಒಂದು ದೊಡ್ಡಚಮಚ

ಯಾವುದೇ ಹಾನಿಕಾರಕವಲ್ಲ....
ಈ ಸರಳವಾದ ಮದ್ದು ಮೂಲವ್ಯಾಧಿಯನ್ನು ಮೂಲದಿಂದಲೇ ನಿವಾರಿಸಲು ಸಕ್ಷಮವಾಗಿದ್ದು ಇದಕ್ಕಾಗಿ ವಿರೇಚಕಗಳ ಅಗತ್ಯವಿಲ್ಲ ಅಥವಾ ಹಾನಿಕಾರಕ ರಾಸಾಯನಿಕಗಳ ಅಗತ್ಯವೂ ಇಲ್ಲ. ಆಯುರ್ವೇದದ ಯಾವುದೇ ಔಷಧಿಯಂತೆ ಈ ಮದ್ದು ಸಹಾ ಕೊಂಚ ನಿಧಾನವಾಗಿ ಕೆಲಸ ಮಾಡುವುದರಿಂದ ಸತತವಾಗಿ ಮತ್ತು ನಿಯಮಿತವಾಗಿ ಈ ಮದ್ದನ್ನು ಸೇವಿಸ್ತುತಾ ಬರಬೇಕು.

ಬೆಂಡೆಕಾಯಿ...
ಬೆಂಡೆಕಾಯಿಯಲ್ಲಿ ಕರಗದ ಮತ್ತು ಕರಗುವ ನಾರು ಎರಡೂ ಉತ್ತಮ ಪ್ರಮಾಣದಲ್ಲಿದೆ. ಅಲ್ಲದೇ ಬೆಂಡೆಕಾಯಿ ಕತ್ತರಿಸಿದಾದ ಒಸರುವ ಅಂಟುಅಂಟಾದ ದ್ರವವೇ ಕರುಳುಗಳಲ್ಲಿ ಜಾರುವಿಕೆಯನ್ನು ಹೆಚ್ಚಿಸಿ ತ್ಯಾಜ್ಯ ಸುಲಭವಾಗಿ ಹೊರಹೋಗಲು ನೆರವಾಗುತ್ತವೆ.

ಆಲಿವ್ ಎಣ್ಣೆ
ಆಲಿವ್ ಎಣ್ಣೆ ಸಹಾ ಹಲವು ಪೋಷಕಾಂಶಗಳ ಆಗರವಾಗಿದ್ದು ಹೊಟ್ಟೆಯಲ್ಲಿಯೇ ಪೂರ್ಣವಾಗಿ ಜೀರ್ಣಗೊಳ್ಳದೇ ಕರುಳುಗಳಲ್ಲಿಯೂ ಎಣ್ಣೆಯ ಜಾರುವಿಕೆಯನ್ನು ಒದಗಿಸುವ ಮೂಲಕ ಮಲವನ್ನು ಸಡಿಲಗೊಳಿಸಿ ವಿಸರ್ಜನೆಗೆ ಬೇಕಾದ ಒತ್ತಡವನ್ನು ಕಡಿಮೆ ಮಾಡುತ್ತದೆ. ಮಲಬದ್ಧತೆ ಸಮಸ್ಯೆಗೆ 'ಆಲೀವ್ ಎಣ್ಣೆ'ಯೇ ದಿವ್ಯೌಷಧ

ತಯಾರಿಸುವ ಮತ್ತು ಸೇವಿಸುವ ವಿಧಾನ
*ಬೆಂಡೆಕಾಯಿಗಳನ್ನು ಚಿಕ್ಕದಾಗಿ ಹೆಚ್ಚಿ ಆಲಿವ್ ಎಣ್ಣೆಯೊಂದಿಗೆ ಒಂದು ಚಿಕ್ಕ ಬೋಗುಣಿಯಲ್ಲಿ ಬೆರೆಸಿ. ಎರಡನ್ನೂ ಚೆನ್ನಾಗಿ ಕಲಕಿ ಮಿಶ್ರಣ ಮಾಡಿ. ಅಷ್ಟೇ! ಮಲಬದ್ಧತೆಯ ನಿವಾರಣೆಯ ಮದ್ದು ಸಿದ್ಧವಾಗಿದೆ.

ತಯಾರಿಸುವ ಮತ್ತು ಸೇವಿಸುವ ವಿಧಾನ
ಈ ಮಿಶ್ರಣವನ್ನು ನಿಮ್ಮ ರಾತ್ರಿಯ ಊಟದ ಬಳಿಕ ದಿನದ ಅಂತಿಮ ಆಹಾರವಾಗಿ ಸೇವಿಸಿ. ಕನಿಷ್ಠ ಎರಡು ತಿಂಗಳಾದರೂ ನಿತ್ಯವೂ ಸೇವಿಸಬೇಕು. ಸಾಮಾನ್ಯವಾದ ಎಲ್ಲಾ ಮೂಲವ್ಯಾಧಿಗಳು ಈ ವಿಧಾನದಿಂದ ಗುಣವಾಗುತ್ತವೆ. ಇದಕ್ಕೂ ಹೊರತಾಗಿ ನೋವು ಉಳಿದುಕೊಂಡಿದ್ದರೆ ವೈದ್ಯರನ್ನು ಕಾಣುವುದು ಅನಿವಾರ್ಯ.



Click it and Unblock the Notifications