Just In
- 3 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 4 hrs ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 4 hrs ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 5 hrs ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
Don't Miss
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಮೃದ್ಧ ಪೋಷಕಾಂಶಗಳ ಆಗರ- ಹಳ್ಳಿಗಾಡಿನ ಅವರೆಕಾಳು
ಬಿಡಿಸಲು ತುಂಬಾ ಸಮಯ ಹಿಡಿಯುತ್ತದೆ ಎಂಬ ಒಂದೇ ಕಾರಣಕ್ಕೆ ಅವರೆಕಾಳನ್ನು ಹೆಚ್ಚಿನವರು ಮನೆಗೆ ತರುವುದಿಲ್ಲ. ಭಾರತದ ಇತಿಹಾಸದಲ್ಲಿಯೇ ಅತಿ ಪ್ರಾಚೀನ ಎಂಬ ಹೆಗ್ಗಳಿಕೆ ಪಡೆದ ಅವರೆಕಾಳು ವಾಸ್ತವವಾಗಿ ಅಪಾರವಾದ ಪೋಷಕಾಂಶಗಳನ್ನು ಹೊಂದಿದೆ. ಇದರಲ್ಲಿ ಕೋಳಿಮಾಂಸಕ್ಕಿಂತಲೂ ಹೆಚ್ಚಿನ ಪ್ರೋಟೀನು ಇರುವ ಕಾರಣ ಸಸ್ಯಾಹಾರಿಗಳೂ ಮಾಂಸಾಹಾರಿಗಳಿಗಿಂತ ಹೆಚ್ಚಿನ ಪೌಷ್ಟಿಕಾಂಶಗಳನ್ನು ಪಡೆಯಲು ಸಾಧ್ಯ. ಅಲ್ಲದೇ ಇದರಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿರುವ ಕೊಬ್ಬು, ಹೆಚ್ಚಿನ ಪ್ರಮಾಣದಲ್ಲಿರುವ ಖನಿಜಗಳು, ವಿಟಮಿನ್ನುಗಳು, ಆಂಟಿ ಆಕ್ಸಿಡೆಂಟುಗಳು ಮತ್ತು ಕರಗುವ ನಾರು ಇದನ್ನೊಂದು ಅಗತ್ಯ ಆಹಾರವನ್ನಾಗಿಸಿದೆ. ಅವರೆಕಾಳಿನ ಭೂಗೋಳ, ಚರಿತ್ರೆ ಮತ್ತು ವರ್ತಮಾನ!
ಇದೊಂದು ದ್ವಿದಳಧಾನ್ಯವಾಗಿದ್ದು ಇದರ ಸೇವನೆಯಿಂದ ನಿಧಾನವಾಗಿ ರಕ್ತಕ್ಕೆ ಸಕ್ಕರೆ ಮತ್ತು ಪೋಷಕಾಂಶಗಳು ಬಿಡುಗಡೆಯಾಗುವ ಕಾರಣ ಪದೇ ಪದೇ ಆಹಾರ ಸೇವಿಸುವ ಬಯಕೆ ಕಡಿಮೆಯಾಗಿ ತೂಕ ಸಮಸ್ಥಿತಿಯಲ್ಲಿರಲು ನೆರವಾಗುತ್ತದೆ. ಯಾವುದೇ ದ್ವಿದಳಧಾನ್ಯಗಳಂತೆ ಅವರೆ ಸಹಾ ಸುಲಭವಾಗಿ ಜೀರ್ಣಗೊಳ್ಳುವ ಆಹಾರವಾಗಿದ್ದು ಇಡಿಯ ದಿನ ಚಟುವಟಿಕೆಯಿಂದಿರಲು ನೆರವಾಗುತ್ತದೆ.
ಅಲ್ಲದೇ
ನಿತ್ಯದ
ಅಗತ್ಯದ
ಪ್ರಮಾಣದ
ಕಬ್ಬಿಣ
ಮತ್ತು
ಪ್ರೋಟೀನ್
ನೀಡುವ
ಮೂಲಕ
ಜೀರ್ಣಕ್ರಿಯೆಯನ್ನು
ಸುಲಭಗೊಳಿಸುತ್ತದೆ,
ಸೋಂಕುಗಳಿಂದ
ರಕ್ಷಿಸುತ್ತದೆ
ಹಾಗೂ
ಕ್ಯಾನ್ಸರ್
ಕಾರಕ
ಕಣಗಳಿಂದ
ಕಾಪಾಡುತ್ತದೆ.
ಇಷ್ಟೇ
ಅಲ್ಲ,
ನಿತ್ಯವೂ
ಕೊಂಚವಾದರೂ
ಅವರೆಕಾಳುಗಳನ್ನು
ಆಹಾರದಲ್ಲಿ
ಸೇರಿಸಿಕೊಳ್ಳುವುದರಿಂದ
ಇನ್ನೂ
ಹಲವಾರು
ಪ್ರಯೋಜನಗಳಿವೆ.
ಇವುಗಳಲ್ಲಿ
ಪ್ರಮುಖವಾದುದನ್ನು
ಕೆಳಗಿನ
ಸ್ಲೈಡ್
ಶೋ
ಮೂಲಕ
ವಿವರಿಸಲಾಗಿದೆ..
ಅತಿಹೆಚ್ಚಿನ ಪ್ರಮಾಣದ ಪ್ರೋಟೀನ್
ಇದರ ಪೋಷಕಾಂಶಗಳ ಅಂಕಿ ಅಂಶಗಳನ್ನು ಗಮನಿಸಿದರೆ ಪ್ರತಿ ಕಪ್ನಲ್ಲಿ ಹದಿನೆಂಟು ಗ್ರಾಂ ನಷ್ಟು ಪ್ರೋಟೀನ್ ಇರುವುದು ಕಂಡುಬರುತ್ತದೆ. ಈ ಪ್ರಮಾಣ ಜಗತ್ತಿನಲ್ಲಿರುವ ಯಾವುದೇ ಆಹಾರದಲ್ಲಿ ಇರುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿರುವ ಕಾರಣ ಇದು ಅತ್ಯುತ್ತಮವಾದ ಆಹಾರವಾಗಿದೆ. ಅಲ್ಲದೇ ಇದರಲ್ಲಿ ಕೊಲೆಸ್ಟ್ರಾಲ್ ಇಲ್ಲದೇ ಇರುವ ಕಾರಣ ಹೃದ್ರೋಗಿಗಳೂ, ಮಧುಮೇಹಿಗಳೂ, ಹಿರಿಯರೂ, ಮಕ್ಕಳೂ ಸೇವಿಸಬಹುದಾದ ಆಹಾರವಾಗಿದೆ. ಆದ್ದರಿಂದ ಮಾಂಸಾಹಾರವನ್ನು ತ್ಯಜಿಸಿ ಅವರೆಕಾಳುಗಳನ್ನು ಊಟದಲ್ಲಿ ಸೇರಿಸಿಕೊಳ್ಳುವ ಮೂಲಕ ಮಾಂಸಾಹಾರದ ಮೂಲಕ ಪಡೆಯಬಹುದಾದುದಕ್ಕಿಂತಲೂ ಹೆಚ್ಚಿನ ಪ್ರೋಟೀನು ಪಡೆದೂ ಮಾಂಸಾಹಾರದ ಮೂಲಕ ಎದುರಾಗಬಹುದಾದ ತೊಂದರೆಗಳಿಂದ ತಪ್ಪಿಸಿಕೊಳ್ಳಬಹುದು.
ಜೀರ್ಣಾಂಗಗಳ ಕ್ಷಮತೆ ಹೆಚ್ಚಿಸುತ್ತದೆ
ಇದರಲ್ಲಿ ಉತ್ತಮ ಪ್ರಮಾಣದ ಕರಗುವ ಮತ್ತು ಕರಗದ ನಾರುಗಳಿವೆ. ಇದು ಜೀರ್ಣಗೊಂಡ ಆಹಾರವನ್ನು ಕರುಳುಗಳ ಒಳಗೆ ಸುಲಲಿತವಾಗಿ ಸಾಗಲು ನೆರವಾಗುವ ಮೂಲಕ ಕರುಳುಗಳ ಮೇಲಿನ ಒತ್ತಡವನ್ನು ಕಡಿಮೆಗೊಳಿಸುತ್ತದೆ. ತನ್ಮೂಲಕ ಕರುಳುಗಳ ವ್ರಣ, ಹುಣ್ಣು ಮತ್ತು ಕ್ಯಾನ್ಸರ್ ಮೊದಲಾದ ತೊಂದರೆಗಳು ಎದುರಾಗದಂತೆ ಕಾಪಾಡುತ್ತದೆ.
ಹೃದಯವನ್ನು ರಕ್ಷಿಸುತ್ತದೆ
ಹೃದಯಕ್ಕೆ ಉತ್ತಮವಾದ ಆಹಾರಗಳನ್ನು ಸೇವಿಸಿ ಎಂದು ವೈದ್ಯರು ಹೇಳಿದರೆ ನೀವು ಪರಿಗಣಿಸಬೇಕಾದ ಮೊದಲ ಆಹಾರವೆಂದರೆ ಅವರೆಕಾಳು. ಏಕೆಂದರೆ ಇದರಲ್ಲಿ ಉತ್ತಮ ಪ್ರಮಾಣದ ಫೋಲೇಟ್ ಮತ್ತು ಮೆಗ್ನೀಶಿಯಂ ಇದ್ದು ಇವು ಹೃದಯದ ಕ್ಷಮತೆಯನ್ನು ಹೆಚ್ಚಿಸುತ್ತವೆ. ಅಲ್ಲದೇ ಇದರಲ್ಲಿರುವ ಫೋಲಿಕ್ ಆಮ್ಲ ಹೃದಯದ ಕವಾಟ ಮತ್ತು ಗೋಡೆಗಳನ್ನು ದೃಢಗೊಳಿಸುವ ಮೂಲಕ ಹೃದಯಸಂಬಂಧಿ ಕಾಯಿಲೆಗಳಿಂದ ರಕ್ಷಿಸುತ್ತದೆ. ಇನ್ನೊಂದೆಡೆ ಮೆಗ್ನೀಶಿಯಂ ರಕ್ತಸಂಚಾರವನ್ನು ನಿಯಂತ್ರಿಸಿ ಸುಲಲಿತವಾಗಿ ಹರಿಯಲು ನೆರವಾಗುತ್ತದೆ.
ಉತ್ತಮ ಪ್ರಮಾಣದ ಕಬ್ಬಿಣ ದೊರಕುತ್ತದೆ
ಒಂದು ದಿನಕ್ಕೆ ಅಗತ್ಯವಿರುವ ಕಬ್ಬಿಣದ ಪ್ರಮಾಣವನ್ನು ಕೇವಲ ಒಂದು ಕಪ್ ಅವರೆಕಾಳು ನೀಡಬಲ್ಲದು.ಈ ಕಬ್ಬಿಣವನ್ನು ಬಳಸಿ ರಕ್ತದ ಕೆಂಪುಕಣಗಳ ಉತ್ಪತ್ತಿ ಹೆಚ್ಚಾಗುತ್ತದೆ. ಇದರಿಂದ ರಕ್ತಹೀನನೆಯ ತೊಂದರೆ ಕಡಿಮೆಯಾಗುತ್ತದೆ. ಬಾಣಂತಿಯರು ಮತ್ತು ಮಹಿಳೆಯರ ಮಾಸಿಕ ದಿನಗಳಲ್ಲಿ ಅವರೆ ಕಾಳನ್ನು ದಿನಕ್ಕೆ ಮೂರು ಹೊತ್ತೂ ತಿನ್ನುವ ಮೂಲಕ ಕಳೆದುಕೊಂಡಿದ್ದ ರಕ್ತದ ಪ್ರಮಾಣವನ್ನು ಪುನಃ ಪಡೆಯಲು ಸಾಧ್ಯವಾಗುತ್ತದೆ.
ವಿವಿಧ ಸೋಂಕುಗಳಿಂದ ರಕ್ಷಿಸುತ್ತದೆ
ಅವರೆಕಾಳಿನಲ್ಲಿ ಉತ್ತಮ ಪ್ರಮಾಣದ ಕಬ್ಬಿಣ, ಮೆಗ್ನೀಶಿಯಂ ಮತ್ತು ಸತುಗಳಿವೆ. ಇವು ವಿವಿಧ ಸೋಂಕುಗಳಿಂದ ರಕ್ಷಿಸಲು ನೆರವಾಗುತ್ತವೆ. ಅಲ್ಲದೇ ವಿವಿಧ ಆಂಟಿ ಆಕ್ಸಿಡೆಂಟುಗಳಾದ ವಿಟಮಿನ್ ಎ ಮತ್ತು ಸಿ ಸಹಾ ಉತ್ತಮ ಪ್ರಮಾಣದಲ್ಲಿದ್ದು ಕ್ಯಾನ್ಸರ್ ಕಾರಕ ಫ್ರೀ ರ್ಯಾಡಿಕಲ್ ಎಂಬ ಕಣಗಳ ವಿರುದ್ದ ಹೋರಾಡುತ್ತದೆ. ಪರಿಣಾಮವಾಗಿ ಹಲವು ವಿಧದ ಕ್ಯಾನ್ಸರ್ ಗಳಿಂದ ರಕ್ಷಣೆ ದೊರಕುತ್ತದೆ.
ಕ್ಯಾನ್ಸರ್ನಿಂದ ರಕ್ಷಣೆ ನೀಡುತ್ತದೆ
ಅವರೆಕಾಳಿನಲ್ಲಿರುವ ಇನ್ನೊಂದು ಪೋಷಕಾಂಶವೆಂದರೆ ಸಿಲಿನಿಯಂ. ಇದು ಉರಿಯೂತವಾಗುವುದನ್ನು ತಡೆಯುತ್ತದೆ ಹಾಗೂ ಕ್ಯಾನ್ಸರ್ ಉಂಟಾಗುವುದರಿಂದ ಮತ್ತು ಈಗಾಗಲೇ ಪ್ರಾರಂಭವಾಗಿದ್ದರೆ ಇದನ್ನು ಇನ್ನಷ್ಟು ಬೆಳೆಯುವುದನ್ನು ತಡೆಯುತ್ತದೆ. ಜೊತೆಗೇ ದೇಹದ ರಕ್ತನಿರೋಧಕ ಶಕ್ತಿಯನ್ನೂ ಹೆಚ್ಚಿಸಿ ವಿವಿಧ ಸೋಂಕುಗಳಿಂದ ರಕ್ಷಿಸುತ್ತದೆ. ಕ್ಯಾನ್ಸರ್ ಉಂಟು ಮಾಡುವ ಟಿ-ಸೆಲ್ಸ್ ಎಂಬ ಕೊಲೆಗಾರ ಜೀವಕೋಶಗಳಿಗೆ ತಡೆಯೊಡ್ಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಲು ನೆರವಾಗುತ್ತದೆ.