Latest Updates
-
ರೆಪೋ ದರ ಸ್ಥಿರ: ಸಾಲಗಾರರೇ ಎಚ್ಚರ, ನಿಮ್ಮ EMI ಹೊರೆಯನ್ನು ಕಡಿಮೆ ಮಾಡಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ಬೆಂಗಳೂರಿನಲ್ಲಿ 'ಫ್ರೀಡಂ ಫ್ರಮ್ ವೇಸ್ಟ್': ದಂಡದಿಂದ ಪಾರಾಗಲು ಆಗಸ್ಟ್ 15ರೊಳಗೆ ಈ ಕೆಲಸ ಮಾಡಿ! -
8,000mAh ಬ್ಯಾಟರಿಯ ರೆಡ್ಮಿ ನೋಟ್ 17 ಲಾಂಚ್: ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ಪ್ರಮುಖ ವಿಷಯಗಳಿವು! -
ಬಾಣಂತಿಯರಿಗೆ ಬೆಂಬಲ: ತಾಯಿಯ ಆರೋಗ್ಯಕ್ಕೆ ತಂದೆಯ ಸಣ್ಣ ಸಹಾಯ ಎಷ್ಟು ಮುಖ್ಯ? -
8,000mAh ಬ್ಯಾಟರಿಯ POCO M8 Power ಲಾಂಚ್: ಈ ಫೋನ್ ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ವಿಷಯಗಳಿವು! -
ರಾಷ್ಟ್ರೀಯ ಮೂಳೆ ಮತ್ತು ಕೀಲು ದಿನ: ಬೆನ್ನು ಮತ್ತು ಮೊಣಕಾಲು ನೋವಿಗೆ ಈ 10 ನಿಮಿಷದ ವ್ಯಾಯಾಮವೇ ಮದ್ದು! -
ಫ್ರೆಂಡ್ಶಿಪ್ ಡೇ ವಿಶ್ ಮಾಡೋಕೆ ಮರೆತಿದ್ದೀರಾ? ನಿಮ್ಮ ಸ್ನೇಹಿತರ ಮನ ಗೆಲ್ಲಲು ಇಲ್ಲಿದೆ ಸಿಂಪಲ್ ಟಿಪ್ಸ್! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು!
ಮುದ ನೀಡುವ ಆಹಾರಗಳಿವು! ತಿಂದರೆ ಖುಷಿ-ಖುಷಿ ಆಗಿರುವಿರಿ!
ಸಿಟ್ಟು ಬಂದ ಸಮಯದಲ್ಲಿ ಏನು ಮಾಡಬೇಕು? ಒಂದು ಲೋಟ ತಣ್ಣಗಿನ ಮಜ್ಜಿಗೆ ಕುಡಿಯಬೇಕು ಎಂದು ಹಿರಿಯರು ಹೇಳುತ್ತಾರೆ. ಏಕೆಂದರೆ ಮಜ್ಜಿಗೆ ಕುಡಿದ ಬಳಿಕ ರಕ್ತದ ಒತ್ತಡ ಕಡಿಮೆಯಾಗುವ ಮೂಲಕ ಸಿಟ್ಟು ಇಳಿಯುತ್ತದೆ. ಅಂತೆಯೇ ಮನೋಭಾವವನ್ನು ಬದಲಿಸುವ ಇನ್ನೂ ಕೆಲವು ಆಹಾರಗಳಿವೆ.
ಕೇವಲ ಮನೋಭಾವ ಬದಲಿಸುವುದು ಮಾತ್ರವಲ್ಲ, ನೋವನ್ನು ಕಡಿಮೆ ಮಾಡುವುದು, ಸ್ಮರಣ ಶಕ್ತಿ ಹೆಚ್ಚಿಸುವುದನ್ನು ಸಹಾ ಕೆಲವು ಆಹಾರಗಳ ಮೂಲಕ ಪಡೆಯಬಹುದು. ಕೆಲವು ಆಹಾರಗಳನ್ನು ಸೇವಿಸಿದಾಗ ರಕ್ತದಲ್ಲಿ ಬೆರೆಯುವ ಇದರ ಪೋಷಕಾಂಶಗಳು ಮೆದುಳಿನಲ್ಲಿ ಮನೋಭಾವವನ್ನು ಉತ್ತಮಗೊಳಿಸುವ ಕೆಲವು ಹಾರ್ಮೋನುಗಳನ್ನು ಉತ್ಪಾದಿಸುವುದೇ ಇದಕ್ಕೆ ಕಾರಣ. ನಿತ್ಯ ಹಣ್ಣು-ತರಕಾರಿ ತಿಂದು ಸಂತೋಷವಾಗಿರಿ
ಉತ್ತಮ ಆರೋಗ್ಯ ಮತ್ತು ಮನೋಭಾವವನ್ನು ಪಡೆಯಲು ಉತ್ತಮವಾದ ಆಹಾರಕ್ರಮ ಅಗತ್ಯ. ಆದರೆ ಕೆಲವು ಆಹಾರಗಳು ಮನೋಭಾವವನ್ನು ಅತ್ಯುತ್ತಮವಾಗಿ ಹೆಚ್ಚಿಸುತ್ತವೆ. ಬನ್ನಿ ಇವು ಯಾವುವೆಂದು ನೋಡೋಣ....

ಬ್ರೆಡ್
ಸಾಮಾನ್ಯವಾದ ಗೋಧಿಯ ಬ್ರೆಡ್ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾರ್ಬೋ ಹೈಡ್ರೇಟುಗಳಿವೆ. ಬ್ರೆಡ್ ಸೇವಿಸಿದ ಬಳಿಕ ರಕ್ತದ ಮೂಲಕ ಕೆಲವು ಪೋಷಕಾಂಶಗಳು ಶೀಘ್ರವಾಗಿ ಮೆದುಳಿಗೆ ತಲುಪಿ ಸೆರೋಟೋನಿನ್ ಎಂಬ ಹಾರ್ಮೋನನ್ನು ಉತ್ಪಾದಿಸಲು ನೆರವಾಗುತ್ತದೆ.

ಚಾಕಲೇಟು
ವಿಶೇಷವಾಗಿ ಕಪ್ಪು ಚಾಕಲೇಟಿನಲ್ಲಿರುವ ಪೋಷಕಾಂಶಗಳು ಮೆದುಳಿನಲ್ಲಿ ಮುದವನ್ನುಂಟು ಮಾಡುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ತಿಂದ ಕೆಲವೇ ಕ್ಷಣಗಳಲ್ಲಿ ಮೆದುಳಿನಲ್ಲಿ ಮುದನೀಡುವ ಹಾರ್ಮೋನುಗಳನ್ನು ಉತ್ಪಾದಿಸಿ ಉಲ್ಲಾಸದಿಂದಿರಲು ನೆರವಾಗುತ್ತದೆ. ವಿಶೇಷವಾಗಿ ಖಿನ್ನತೆಯ ಸಮಯದಲ್ಲಿ ಚಾಕಲೇಟು ಆಪತ್ಬಾಂಧವನಾಗಿದೆ.

ಪಾಲಕ್ ಸೊಪ್ಪು
ಪಾಲಕ್ ಸೊಪ್ಪಿನಲ್ಲಿಯೂ ಮೆದುಳಿಗೆ ಮುದ ನೀಡುವ ಕೆಲವು ಪೋಷಕಾಂಶಗಳಿವೆ. ವಿಶೇಷವಾಗಿ ಇದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಕಬ್ಬಿಣ ರಕ್ತದ ಹೀಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಅಲ್ಲದೇ ಮೆದುಳಿಗೆ ರಕ್ತಸಂಚಾರವೂ ಹೆಚ್ಚುತ್ತದೆ. ತನ್ಮೂಲಕ ಮನೋಭಾವವೂ ಉಲ್ಲಾಸಗೊಳ್ಳಲು ನೆರವಾಗುತ್ತದೆ.

ಕಿತ್ತಳೆ
ಖಿನ್ನತೆ, ಬೇಸರ, ಉದ್ವೇಗ ಮೊದಲಾದ ಸಂದರ್ಭಗಳಲ್ಲಿ ತಿನ್ನಲು ಕಿತ್ತಳೆ ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಇದರಲ್ಲಿರುವ ಸಿಟ್ರಸ್ ಆಮ್ಲ ಮತ್ತು ವಿಟಮಿನ್ ಸಿ ಹಾಗೂ ಫೋಲೇಟ್ ಗಳು ಮೆದುಳಿಗೆ ತಲುಪಿದ ಬಳಿಕ ಮೆದುಳಿನಲ್ಲಿ ಡೋಪಮೈನ್ ಎಂಬ ರಸದೂತವನ್ನು ಉತ್ಪಾದಿಸಲು ನೆರವಾಗುತ್ತದೆ. ಇದರಿಂದ ಮನೋಭಾವವೂ ಉಲ್ಲಸಿತವಾಗುತ್ತದೆ.

ಮೀನು
ಮೀನಿನಲ್ಲಿರುವ ಒಮೆಗಾ-3 ಕೊಬ್ಬಿನ ಆಮ್ಲ ರಕ್ತದಲ್ಲಿ ಬೆರೆತು ಮೆದುಳಿಗೆ ತಲುಪಿದ ಬಳಿಕ ಮೆದುಳಿನಲ್ಲಿ ಸೆರೋಟೋನಿನ್ ಪ್ರಮಾಣ ಹೆಚ್ಚಿಸಲು ನೆರವಾಗುತ್ತದೆ. ಇದು ಮನೋಭಾವವನ್ನು ಉಲ್ಲಸಿತಗೊಳಿಸಲು ನೆರವಾಗುತ್ತದೆ.

ಕೇಸರಿ

ತೆಂಗಿನ ಕಾಯಿ
ತೆಂಗಿನಲ್ಲಿಯೂ ಒಮೆಗಾ-3 ಕೊಬ್ಬಿನ ಆಮ್ಲದ ಪ್ರಮಾಣ ಉತ್ತಮವಾಗಿದ್ದು ಮೆದುಳಿನಲ್ಲಿ ಸೆರೋಟೋನಿನ್ ಪ್ರಮಾಣ ಹೆಚ್ಚಿಸಲು ನೆರವಾಗುತ್ತದೆ. ಅಲ್ಲದೇ ತೆಂಗಿನಲ್ಲಿರುವ ಪೋಷಕಾಂಶಗಳು ನರಗಳನ್ನು ಸಡಿಲಿಸಿ ರಕ್ತಸಂಚಾರ ಹೆಚ್ಚಿಸುವ ಮೂಲಕವೂ ಮನೋಭಾವವನ್ನು ಉತ್ತಮಗೊಳಿಸಲು ನೆರವಾಗುತ್ತದೆ.



Click it and Unblock the Notifications