Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಈರುಳ್ಳಿ ಹಾಕಿದ ಸಾಕ್ಸ್ ಧರಿಸಿ-ವ್ಯತ್ಯಾಸ ನೀವೇ ನೋಡಿ!
ರಾತ್ರಿ ಮಲಗುವ ಮುನ್ನ ಈರುಳ್ಳಿಯನ್ನು ಕಾಲುಚೀಲದೊಳಗೆ (ಸಾಕ್ಸ್) ಹಾಕಿ ಧರಿಸಿ ಮಲಗುವುದೇ? ವಿಚಿತ್ರವಾಗಿದೆಯೆಲ್ಲಾ, ಆದರೆ ತಜ್ಞರ ಪ್ರಕಾರ ಈ ರೀತಿಯ ಕ್ರಮ ಅನುಸರಿಸುವುದರಿಂದ ಹಲವು ಲಾಭಗಳಿವೆ.
ಪ್ರಮುಖವಾಗಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಬೆವರಿನ ದುರ್ವಾಸನೆಗೆ ಕಾರಣವಾಗಿರುವ ಬ್ಯಾಕ್ಟೀರಿಯಾಗಳನ್ನು ನಿವಾರಿಸಿ ದುರ್ವಾಸನೆಯಿಂದ ಮುಕ್ತಿ ನೀಡುತ್ತವೆ. ಈರುಳ್ಳಿಯ ಈ ಗುಣವನ್ನು ಉತ್ತಮಗೊಳಿಸಲು ಈರುಳ್ಳಿಯನ್ನು ಕೊಚ್ಚಿ ಕಾಲುಚೀಲದಲ್ಲಿ ಹಾಕಿ ಮಲಗುವುದರಿಂದ ಸಾಧ್ಯವಾಗುತ್ತದೆ. ಈ ವಿಧಾನದಿಂದ ಪಾದಗಳ ಅಡಿಯ ಚರ್ಮ ಈರುಳ್ಳಿಯ ರಸವನ್ನು ಹೀರಿಕೊಳ್ಳಲು ಸಾಧ್ಯವಾಗುತ್ತದೆ. ಸಮೃದ್ಧ ಪೋಷಕಾಂಶಗಳ ಆಗರ - ಬಿಳಿ ಈರುಳ್ಳಿ
ವಿಶೇಷವಾಗಿ ಈರುಳ್ಳಿ ರಸದ ಪಾಸ್ಪಾರಿಕ್ ಆಮ್ಲ ರಕ್ತವನ್ನು ಸೇರಿ ರಕ್ತವನ್ನು ಶುದ್ಧೀಕರಿಸುತ್ತದೆ. ಅಲ್ಲದೇ ರಕ್ತದಲ್ಲಿರುವ ವಿಷಕಾರಿ ವಸ್ತುಗಳನ್ನು ಪಾದದ ಚರ್ಮದ ಮೂಲಕ ಹೊರಗೆಳೆದುಕೊಳ್ಳಲು ಸಹಕರಿಸುತ್ತದೆ. ಈ ವಿಧಾನದಿಂದ ಇನ್ನು ಯಾವ ಯಾವ ಪ್ರಯೋಜನಗಳಿವೆ ಎಂದು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ...

ರಕ್ತವನ್ನು ಶುದ್ಧೀಕರಿಸುತ್ತದೆ
ಈರುಳ್ಳಿ ರಸದಲ್ಲಿರುವ ಫಾಸ್ಪಾರಿಕ್ ಆಮ್ಲವನ್ನು ಪಾದದ ಚರ್ಮದ ಮೂಲಕ ಹೀರಿಕೊಳ್ಳುವ ಮೂಲಕ ರಕ್ತವನ್ನು ಶುದ್ಧೀಕರಿಸಲು ನೆರವಾಗುತ್ತದೆ. ಈ ಕಾರ್ಯ ಮಲಗಿರುವ ಸಮಯದಲ್ಲಿ ಆಗುವುದರಿಂದ ಶುದ್ಧೀಕರಣ ಕಾರ್ಯ ಸುಗಮವಾಗಿ ನೆರವೇರುತ್ತದೆ.

ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ
ಈರುಳ್ಳಿಯಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಮತ್ತು ಜೀವಿರೋಧಿ ಗುಣಗಳು ಆರೋಗ್ಯಕ್ಕೆ ಹಾನಿಕರವಾದ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಗುಣವನ್ನು ಹೊಂದಿದೆ.

ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ
ಈ ಗುಣದ ಗರಿಷ್ಟ ಪರಿಣಾಮವನ್ನು ರಾತ್ರಿ ಕಾಲುಚೀಲದಲ್ಲಿ ಈರುಳ್ಳಿ ಇಟ್ಟು ಧರಿಸಿ ಮಲಗುವುದರಿಂದ ದೊರಕುತ್ತದೆ.

ಹೃದಯದ ಕ್ಷಮತೆ ಹೆಚ್ಚಿಸುತ್ತದೆ
ಈರುಳ್ಳಿಯನ್ನು ಪಾದದಡಿಗೆ ಇಟ್ಟು ಮಲಗುವುದರಿಂದ ರಕ್ತ ಸಂಚಾರ ಉತ್ತಮಗೊಳ್ಳುತ್ತದೆ ಹಾಗೂ ಒತ್ತಡವನ್ನು ಕಡಿಮೆಗೊಳಿಸುತ್ತದೆ. ಪರಿಣಾಮವಾಗಿ ಹೃದಯದ ಕ್ಷಮತೆ ಮತ್ತು ಆರೋಗ್ಯ ಉತ್ತಮಗೊಳ್ಳುತ್ತದೆ.

ಮೂಗು ಕಟ್ಟುವುದು, ಕುತ್ತಿಗೆ ನೋವು, ಕಿವಿಯ ಸೋಂಕು ಕಡಿಮೆಗೊಳಿಸುತ್ತದೆ
ಕಾಲುಚೀಲದಲ್ಲಿ ಈರುಳ್ಳಿ ಇಟ್ಟು ಮಲಗುವುದರಿಂದ ಸೈನಸ್ ಅಥವಾ ಕುಹರದಲ್ಲಿ ಸೋಂಕು, ಕುತ್ತಿಗೆ ನೋವು ಮತ್ತು ಕಿವಿಯೊಳಗೆ ಆಗಿರುವ ಸೋಂಕು ಕಡಿಮೆಯಾಗುತ್ತದೆ.

ಹೊಟ್ಟೆಯ ತೊಂದರೆಗಳನ್ನು ನಿವಾರಿಸುತ್ತದೆ
ಹೊಟ್ಟೆಯಲ್ಲಿ ತೊಂದರೆ ಇದ್ದರೆ ಈರುಳ್ಳಿಯ ಭಾಗವನ್ನು ಕಾಲುಚೀಲದ ನಟ್ಟನಡುವೆ ಇಟ್ಟು ಮಲಗುವುದರಿಂದ ಹೊಟ್ಟೇಯ ಸೋಂಕು ನಿವಾರಣೆಯಾಗುತ್ತದೆ. ಅಲ್ಲದೇ ಮೂತ್ರಪಿಂಡಗಳ ಕಲ್ಲುಗಳನ್ನು ಕರಗಿಸಲು ನೆರವಾಗುತ್ತದೆ.

ಕರುಳುಗಳಲ್ಲಿ ಹುಣ್ಣು ಮತ್ತು ಮೂತ್ರಕೋಶದಲ್ಲಿ ಸೋಂಕು ನಿವಾರಿಸುತ್ತದೆ
ಸಣ್ಣಕರುಳು ಮತ್ತು ಮೂತ್ರಕೋಶ, ಮೂತ್ರನಾಳದಲ್ಲಿ ಸೋಂಕು ಉಂಟಾಗಿದ್ದರೆ ಈರುಳ್ಳಿಯನ್ನು ಕಾಲುಚೀಲದಲ್ಲಿಟ್ಟು ಮಲಗುವುದರಿಂದ ಉತ್ತಮ ಪರಿಹಾರ ದೊರಕುತ್ತದೆ.

ಕಾಲಿನ ದುರ್ವಾಸನೆಯನ್ನು ನಿವಾರಿಸುತ್ತದೆ
ಕೆಲವರಿಗೆ ಪಾದದಲ್ಲಿ ವಿಪರೀತವಾದ ಬೆವರು ಹರಿದು ದುರ್ವಾಸನೆ ಶೀಘ್ರವೇ ಉಂಟಾಗುತ್ತದೆ. ಈ ವಿಧಾನದಿಂದ ಪಾದದ ದುರ್ವಾಸನೆ ಶೀಘ್ರವೇ ದೂರವಾಗುತ್ತದೆ.

ಜ್ವರ ದೂರವಾಗುತ್ತದೆ
ಈರುಳ್ಳಿಯನ್ನು ಕಾಲುಚೀಲದಲ್ಲಿಟ್ಟು ಮಲಗುವುದರಿಂದ ಜ್ವರ ಮತ್ತು ಇತರ ಚಿಕ್ಕಪುಟ್ಟ ಬಾಧೆಗಳು ಸುಲಭವಾಗಿ ನಿವಾರಣೆಯಾಗುತ್ತವೆ.



Click it and Unblock the Notifications
