Latest Updates
-
ಶನಿ ಕೃಪೆ ಶುರು.. ಹಣ, ಯಶಸ್ಸು, ಶುಭ ಸುದ್ದಿ! ಯುಗಾದಿ ಬಳಿಕ ಈ 3 ರಾಶಿಗಳಿಗೆ ಭಾರೀ ಅದೃಷ್ಟ -
ಯುಗಾದಿಗೆ ಸ್ಪೆಷಲ್ ಹೊಸ ರೀತಿಯ ಕ್ಯಾರೆಟ್ ಒಬ್ಬಟ್ಟು: ಬಾಯಲ್ಲಿ ನೀರು ತರಿಸುವ ಸಿಹಿ -
ಅಕ್ಕಿ ನೆನೆಸುವಂತೆಯೇ ಇಲ್ಲ! ಸೌತೆಕಾಯಿಯಿಂದ ಮಾಡಿ ರುಚಿಕರ ಇಡ್ಲಿ.. ಹೊಟ್ಟೆ ತುಂಬುತ್ತೆ, ತೂಕ ಇಳಿಯುತ್ತೆ -
March 17 Horoscope: ಕುಟುಂಬದಲ್ಲಿ ಸಂತಸ ಅನುಭವಿಸುವ ದಿನವಿದು! -
ಕೌಟುಂಬಿಕ ಸುಖ & ಸಂಬಂಧಗಳಲ್ಲಿ ಮಧುರತೆ ಹೆಚ್ಚಳ! ಸಂಗಾತಿಯಿಂದ ಸಂಪೂರ್ಣ ಬೆಂಬಲ -
ಯುಗಾದಿ ಮಂತ್ರಗಳು: ಹಬ್ಬದಲ್ಲಿ ಈ ಮಂತ್ರ ಪಠಿಸಿದ್ರೆ ಕಷ್ಟಗಳು ದೂರಾಗುತ್ತೆ, ಅದೃಷ್ಟ ನಿಮ್ಮದಾಗುತ್ತೆ! -
ಯುಗಾದಿ ಹಬ್ಬದಲ್ಲಿ ಸಿಹಿಯೊಂದಿಗೆ ಬೇಬಿ ಕಾರ್ನ್ 65 ಸಹ ಮಾಡಿ! ಅದ್ಭುತ ರುಚಿಯ ತಿಂಡಿ ಇದು! -
Ugadi 2026: ಬೇವಿನ ಕಹಿ ಇರಲಿ, ಬೆಲ್ಲದ ಸಿಹಿ ಇರಲಿ! ನಿಮ್ಮ ಆತ್ಮೀಯರಿಗೆ ಈ ರೀತಿ ವಿಶೇಷ ಶುಭಾಶಯ ಕಳಿಸಿ -
ರವೆ ಮತ್ತು ತುಪ್ಪ ಬಳಸಿ ಸ್ಪಂಜಿನಂಥ ಕೇಕ್ ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ.. ಓವನ್ ಇಲ್ಲದೆ ಮಾಡಬಹುದು -
ಯುಗಾದಿ ಭವಿಷ್ಯ: ಹಬ್ಬದ ಬಳಿಕ ಈ ರಾಶಿಯವರಿಗೆ ಲಕ್ಷ್ಮಿ ಆಶೀರ್ವಾದ, ಆರ್ಥಿಕ ಲಾಭ!
ಮುಖದ ಸೌಂದರ್ಯಕ್ಕೆ ನೈಸರ್ಗಿಕ ಫೇಸ್ ಪ್ಯಾಕ್, ಬೇಕೆ ಬೇಕು!
ಸೌಂದರ್ಯದ ಬಗ್ಗೆ ಕಾಳಜಿ ಇರುವವರಿಗೆಲ್ಲಾ ಮುಖಲೇಪಗಳ ಮಹತ್ವವೇನೆಂದು ತಿಳಿದೇ ಇರುತ್ತದೆ. ಅದರಲ್ಲೂ ನೈಸರ್ಗಿಕ ಮುಖ ಲೇಪಗಳೇ ಮುಖದ ಕೋಮಲ ಚರ್ಮಕ್ಕೆ ಅತಿ ಸೂಕ್ತ. ಏಕೆಂದರೆ ಇದರಲ್ಲಿ ಯಾವುದೇ ಅಡ್ಡಪರಿಣಾಮವಿರದ ಕಾರಣ ತಾರುಣ್ಯವನ್ನು ಬಹುಕಾಲದವರೆಗೆ ಕಾಪಾಡಿಕೊಳ್ಳಬಹುದು. ಸೌಂದರ್ಯತಜ್ಞರ ಪ್ರಕಾರ ವಾರಕ್ಕೊಮ್ಮೆಯಾದರೂ ಮುಖಲೇಪದ ಬಳಕೆ ಸೂಕ್ತ ಕ್ರಮವಾಗಿದೆ.
ಇದರಿಂದ ಮುಖದ ಚರ್ಮದಲ್ಲಿ ಆರ್ದ್ರತೆಯನ್ನು ಉಳಿಸಿಕೊಂಡು ಸಜಹ ಸೌಂದರ್ಯವನ್ನು ವೃದ್ದಿಸುವ ಮೂಲಕ ಚರ್ಮದಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬಹುದು. ಅಷ್ಟಕ್ಕೂ ಮುಖಲೇಪ ಹೇಗೆ ಕೆಲಸ ಮಾಡುತ್ತದೆಂದರೆ ಇದರಲ್ಲಿರುವ ಪೋಷಕಾಂಶಗಳು ಚರ್ಮದ ಸೂಕ್ಷ್ಮರಂಧ್ರಗಳ ಒಳಗೆ ಇಳಿದು ಕೆಳಚರ್ಮದಲ್ಲಿರುವ ಗ್ರಂಥಿಗಳಿಗೆ ಪೋಷಣೆ ನೀಡುವ ಜೊತೆಗೇ ಅತಿ ಸೂಕ್ಷ್ಮ ನರಾಗ್ರಗಳಿಗೆ ಪ್ರಚೋದನೆಯನ್ನು ನೀಡಿ ರಕ್ತಪರಿಚಲನೆ ಹೆಚ್ಚುವಂತೆ ಮಾಡುತ್ತವೆ.

ಮುಖಲೇಪ ಹಚ್ಚಿ ತೊಳೆದುಕೊಂಡ ಬಳಿಕ ಕೊಂಚ ಚರ್ಮ ಕೆಂಪಗಾಗಿ ಕಾಣಲಿಕ್ಕೆ ಇದೇ ಕಾರಣ. ಮುಖಲೇಪವನ್ನು ಗೋಡೆಗೆ ಸುಣ್ಣ ಬಳಿದಂತೆ ಬಳಿಯುವುದು ಸಲ್ಲದು, ಇದಕ್ಕೂ ಒಂದು ಕ್ರಮವಿದೆ. ಅಂದರೆ ತುಟಿಗಳ ಮೇಲೆ, ಕಣ್ಣುರೆಪ್ಪೆಗಳ ಮೇಲೆ, ಕೂದಲು ಪ್ರಾರಂಭವಾಗುವ ಚರ್ಮದ ಅಂಚುಗಳಿಗೆ ಹಚ್ಚಬಾರದು. ಮೂಗಿನ ಅಕ್ಕಪಕ್ಕ, ಮೂಗಿನ ಮೇಲೆ ಮತ್ತು ಕಣ್ಣುಗಳ ಕೆಳಭಾಗದಲ್ಲಿ ಇತರ ಭಾಗಗಳಿಗಿಂತ ಕೊಂಚ ದಪ್ಪನಾಗಿ ಹಚ್ಚಬೇಕು.
ಹೆಚ್ಚಿನ ಸಂದರ್ಭದಲ್ಲಿ ಈ ಲೇಪಗಳಲ್ಲಿ ಪ್ರಮುಖವಾಗಿ ಜೇಡಿ ಅಥವಾ ಜೆಲ್ ಉಪಯೋಗಿಸಲಾಗುತ್ತದೆ. ಇವು ಸಾಮಾನ್ಯವಾಗಿ ಕಡಿಮೆ ಪ್ರಾಬಲ್ಯ ಹೊಂದಿದ್ದು ಮುಖಲೇಪದ ಇತರ ಪೋಷಕಾಂಶಗಳು ಚರ್ಮಕ್ಕೆ ಇಳಿಯಲು ಸಹಾಯ ಮಾಡುತ್ತವೆ. ಮುಖಲೇಪ ಹಚ್ಚಿದ ಬಳಿಕ ಕಣ್ಣುಗಳನ್ನು ಮುಚ್ಚಿಕೊಂಡು ಕೆಲವಾರು ನಿಮಿಷಗಳಾದರೂ, ಸಾಮಾನ್ಯವಾಗಿ ಸುಮಾರು ಇಪ್ಪತ್ತು ನಿಮಿಷ, ಒಣಗಲು ಬಿಡಬೇಕು.
ಈ ಅವಧಿಯಲ್ಲಿ ಕಣ್ಣುಗಳ ಮೇಲೆ ಸೌತೆಯ ಬಿಲ್ಲೆಯೊಂದನ್ನು ಇರಿಸುವ ಮೂಲಕ ಕಣ್ಣುಗಳಿಗೆ ತಂಪು ನೀಡಬಹುದು. ಬಳಿಕ ಕೇವಲ ತಣ್ಣೀರಿನಿಂದ ಮಾತ್ರ ತೊಳೆದುಕೊಳ್ಳಬೇಕು. ಬಿಸಿನೀರು ಸಲ್ಲದು, ಏಕೆಂದರೆ ಬಿಸಿನೀರು ಸೂಕ್ಷ್ಮರಂಧ್ರಗಳ ಒಳಗೆ ಇಳಿದಿದ್ದ ಪೋಷಕಾಂಶಗಳನ್ನು ಮತ್ತೆ ಹೊರಗೆ ಸೆಳೆದುಬಿಡುತ್ತದೆ. ಹೆಚ್ಚಿನ ಮುಖಲೇಪಗಳಲ್ಲಿ ಈ ಸೂಕ್ಷ್ಮರಂಧ್ರಗಳಲ್ಲಿ ಹುದುಗಿದ್ದ ಕೊಳೆಯನ್ನು ಆಳದಿಂದ ನಿವಾರಿಸುವ ಮತ್ತು ಚರ್ಮಕ್ಕೆ ಆರ್ದ್ರತೆ ನೀಡುವ ಎರಡೂ ಗುಣಗಳಿರುತ್ತವೆ.
ಈ ಗುಣಗಳಿಂದಾಗಿ ಸೂಕ್ಷ್ಮರಂಧ್ರಗಳಲ್ಲಿ ಹುದುಗಿದ್ದ ಕೊಳೆ, ಕೀಟಾಣುಗಳು ಹಾಗೂ ಮೊಡವೆ ಮೂಡಲು ಆಸ್ಪದ ನೀಡುವ ಚರ್ಮದ ಆಳದಲ್ಲಿ ಸ್ರವಿಸಿರುವ ಕೀವು ಸಹಾ ನಿವಾರಣೆಯಾಗುತ್ತದೆ. ಅಲ್ಲದೇ ಹೊರಚರ್ಮದ ಪದರದ ಸತ್ತ ಜೀವಕೋಶಗಳು ಗಟ್ಟಿಯಾಗಿ ಅಂಟಿಕೊಂಡಿದ್ದುದನ್ನು ಸಡಿಲಗೊಳಿಸಿ ತೊಳೆದಾಗ ಸುಲಭವಾಗಿ ನಿವಾರಣೆಯಾಗಲು ನೆರವಾಗುತ್ತವೆ.
ಈ ಮೂಲಕ ಚರ್ಮದ ಹೊರಪದರಲ್ಲಿ ಕಳಕಳಿಸುವ ಹೊಸ ಜೀವಕೋಶಗಳು ಕಾಣಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ಜೀವಕೋಶಗಳು ಚರ್ಮದ ಸೆಳೆತವನ್ನು ಹೆಚ್ಚಿಸಿ ನೆರಿಗೆಗಳು ಮೂಡದಂತೆ ಮಾಡುತ್ತವೆ. ಅಲ್ಲದೇ ಹೆಚ್ಚಿನ ಸೆಳೆತ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.
ಅಲ್ಲದೇ ಈ ಮುಖಲೇಪಗಳು ಯಾವುದೇ ಉರಿ ತರಿಸದೇ ತಂಪಾಗಿಸುವ ಗುಣ ಹೊಂದಿರುವ ಕಾರಣ ಹಚ್ಚಿದ್ದಷ್ಟೂ ಹೊತ್ತು ಅಪ್ಯಾಯಮಾನವಾಗಿರುವುದು ಮಾತ್ರವಲ್ಲ, ತೊಳೆದಬಳಿಕವೂ ತಾಜಾತನವನ್ನು ವಾರವಿಡೀ ಉಳಿಸಿಕೊಳ್ಳಲು ನೆರವಾಗುತ್ತವೆ. ಮುಖಲೇಪವನ್ನು ಹಚ್ಚಲು ಪರಿಣಿತರೇ ಬೇಕೆಂದಿಲ್ಲ, ಆದರೆ ಪರಿಣಿತರು ಈ ಬಗ್ಗೆ ಹೆಚ್ಚಿನ ಅನುಭವ ಮತ್ತು ಪರಿಜ್ಞಾನ ಹೊಂದಿರುವ ಕಾರಣ ಸಾಧ್ಯವಾದರೆ ಇವರ ಸೇವೆ ಪಡೆಯುವುದೇ ಉತ್ತಮ.
ಅಲ್ಲದೇ ಇವರಿಗೆ ನಿಮ್ಮ ಚರ್ಮದ ಬಗೆ ಯಾವುದೆಂದು ತಿಳಿದು ಇದಕ್ಕೆ ಸೂಕ್ತವಾದ ಮುಖಲೇಪವನ್ನು ಸಲಹೆ ಮಾಡಲು ಸಾಧ್ಯ. ಅಲ್ಲದೇ ಮುಖಲೇಪದೊಂದಿಗೆ ನಯವಾದ ಮಸಾಜ್ ಸಹಾ ಹೆಚ್ಚಿನ ಪೋಷಣೆ ನೀಡುವ ಕಾರಣ ಈ ಸೇವೆ ಕೊಂಚ ದುಬಾರಿ ಎನಿಸಿದರೂ ಉತ್ತಮವಾಗಿದೆ. ಆದರೆ ಅನಿವಾರ್ಯವಲ್ಲ. ಮನೆಯಲ್ಲಿಯೇ ನೀವೇ ಸ್ವತಃ ನಿಮ್ಮ ಮುಖಕ್ಕೆ ಕೊಂಚ ಮಸಾಜ್ ಮಾಡಿಕೊಂಡು ನಿಮಗೆ ಸೂಕ್ತವಾದ ಮುಖಲೇಪವನ್ನು ಲೇಪಿಸಿಕೊಂಡು ಸಹಾ ಉತ್ತಮ ಆರೈಕೆ ಪಡೆಯಬಹುದು.
ಮುಖಲೇಪ ಹಚ್ಚಿಕೊಳ್ಳುವ ಮುನ್ನ ಮುಖವನ್ನು ಚೆನ್ನಾಗಿ ತೊಳೆದುಕೊಂಡ ಬಳಿಕ ಕೊಂಚ ಬಿಸಿನೀರಿನಿಂದ ಪ್ರೋಕ್ಷಳಿಸಿಕೊಳ್ಳಬೇಕು. ಇದರಿಂದ ಮುಖದ ಚರ್ಮದ ಸೂಕ್ಷ್ಮರಂಧ್ರಗಳು ಅಗಲವಾಗಿ ತೆರೆಯುತ್ತವೆ. ಮುಖಲೇಪ ಹಚ್ಚಿಕೊಳ್ಳುವ ಮುನ್ನ ಮುಖ ಒದ್ದೆಯಾಗಿಯೇ ಇರಲಿ. ಬಳಿಕ ಹಚ್ಚುವ ಮುಖಲೇಪವನ್ನು ವೃತ್ತಾಕಾರದ ಮಸಾಜ್ ಮೂಲಕ ಕೊಂಚವೇ ಒತ್ತಡ ನೀಡಿ ಹಚ್ಚಬೇಕು. ನಂತರ ಇಪ್ಪತ್ತು ನಿಮಿಷ ಒಣಗಲು ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ.



Click it and Unblock the Notifications














