Latest Updates
-
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ
ಸ್ನೇಹಿತರನ್ನು ಕಳೆದುಕೊಂಡಾಗ ಆಗುವ ನೋವು ಹೇಳಲು ಸಾಧ್ಯವೇ?
ಪ್ರಾಣ ಸ್ನೇಹಿತರಂತೆ ಇದ್ದವರು ಈಗ ದೂರವಾಗಿದ್ದಾರೆ ಎನ್ನುವ ಮಾತು ನಮ್ಮ ನಡುವಿನಿಂದಲೇ ಬರುತ್ತದೆ. ಯಾಕೆಂದರೆ ಕೆಲವರ ಸ್ನೇಹ ಆ ರೀತಿಯಾಗಿರುತ್ತದೆ. ಅವರು ದೂರವಾಗಲು ಸಾಧ್ಯವೇ ಇಲ್ಲ ಎಂದು ನಾವು ಭಾವಿಸಿರುತ್ತೇವೆ. ಆದರೆ ಪರಿಸ್ಥಿತಿ ಅವರನ್ನು ದೂರ ಮಾಡಿರುತ್ತದೆ. ಜೀವಕ್ಕೆ ಜೀವ ಕೊಡುವ ಸ್ನೇಹಿತರು ಕೂಡ ದೂರವಾಗುತ್ತಾರೆ. ಕಚೇರಿಯಲ್ಲಿ ಪುರುಷ ಸ್ನೇಹಿತರು: ಒಳಿತು-ಕೆಡುಕು
ಆದರೆ ಸ್ನೇಹಿತರಿಂದ ದೂರವಾಗಲು ನೋವನ್ನು ಸಹಿಸುವುದು ತುಂಬಾ ಕಷ್ಟವಾಗುತ್ತದೆ. ಯಾಕೆಂದರೆ ಅವರೊಂದಿಗೆ ಆ ರೀತಿಯ ಭಾಂದವ್ಯ ಬೆಸೆದಿರುತ್ತದೆ. ಪ್ರೀತಿಸಿದವರು ದೂರವಾಗುವಾಗ ಕಾಡುವ ನೋವಿಗಿಂತ ಸ್ನೇಹಿತರು ದೂರವಾದಾಗ ಕಾಡುವ ನೋವು ಹೆಚ್ಚು. ಇದನ್ನು ಕೆಲವೊಂದು ಅಧ್ಯಯನಗಳು ಕೂಡ ದೃಢಪಡಿಸಿಕೊಂಡಿವೆ. ಕೆಟ್ಟ ಗೆಳೆಯರನ್ನು ಗುರುತಿಸುವ ವಿಧಾನಗಳು
ಸಂಗಾತಿಗಳನ್ನು ಕಳಕೊಳ್ಳುವುದಕ್ಕಿಂತ ಸ್ನೇಹಿತರನ್ನು ಕಳಕೊಂಡಾಗ ವ್ಯಕ್ತಿಗೆ ಏನಾಗುತ್ತದೆ ಎಂದು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಸಂಗಾತಿಗಳಿಗಿಂತಲೂ ಹೆಚ್ಚಾಗಿ ವಿಶ್ವಾಸವಿರಿಸಿಕೊಂಡಿರುವ ಸ್ನೇಹಿತರನ್ನು ಕಳಕೊಂಡಾಗ ಅತಿಯಾದ ನೋವಾಗುವುದು. ಇದು ಹೇಗೆಂದು ಮುಂದೆ ಓದುತ್ತಾ ತಿಳಿಯಿರಿ......

ಸ್ನೇಹಿತರೊಂದಿಗೆ ಪ್ರತಿಯೊಂದನ್ನು ಹಂಚಿಕೊಳ್ಳುತ್ತೇವೆ
ಸ್ನೇಹಿತರನ್ನು ನಾವು ತುಂಬಾ ವಿಶ್ವಾಸಿಗಳೆಂದು ಭಾವಿಸಿರುತ್ತೇವೆ. ಎಷ್ಟೇ ಗೌಪ್ಯ ಅಥವಾ ವೈಯಕ್ತಿಕ ವಿಚಾರವಾದರೂ ಅವರೊಂದಿಗೆ ಏನನ್ನೂ ಮುಚ್ಚಿಡುವುದಿಲ್ಲ. ಇಂತಹ ವಿಷಯಗಳನ್ನು ನಾವು ಸಂಗಾತಿಗಳೊಂದಿಗೂ ಹಂಚಿಕೊಳ್ಳಲ್ಲ. ಆದರೆ ಸ್ನೇಹಿತ ವಿಶ್ವಾಸಘಾತ ಮಾಡಿದಾಗ ಭೂಮಿಯೇ ಬಿರುಕು ಬಿಟ್ಟಂತಹ ಭಾವನೆಯಾಗುತ್ತದೆ.

ಯಾವಾಗಲೂ ಅವರು ಬೆಂಬಲಿಗರು
ಪರಿಸ್ಥಿತಿ ಏನೇ ಆಗಿರಲಿ ಸ್ನೇಹಿತರು ಮಾತ್ರ ಯಾವಾಗಲೂ ನಮ್ಮ ಪರವಾಗಿ ನಿಲ್ಲುತ್ತಾರೆ. ಪ್ರಿಯತಮೆಯೊಂದಿಗಿನ ಪ್ರಥಮ ಚುಂಬನವಾಗಿರಲಿ ಅಥವಾ ಪ್ರಿಯತಮೆ ಕೈಕೊಟ್ಟ ಸಂದರ್ಭವಿರಲಿ, ಪ್ರತಿಯೊಂದನ್ನು ಹಂಚಿಕೊಳ್ಳುತ್ತೇವೆ. ಪ್ರತಿಯೊಂದು ವಿಚಾರವನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತೇವೆ. ಆದರೆ ಸಂಬಂಧ ದೂರವಾದಾಗ ನಮಗೆ ಏನೋ ಕಳಕೊಂಡ ಭಾವನೆಯಾಗುತ್ತದೆ.

ವಿವರಿಸುವುದು ತುಂಬಾ ಕಠಿಣ
ಸ್ನೇಹಿತರನ್ನು ಕಳಕೊಂಡಾಗ ನಮಗೆ ತುಂಬಾ ಕೆಟ್ಟ ಭಾವನೆಯಾಗುತ್ತದೆ. ಇದರ ಬಗ್ಗೆ ಸುತ್ತಲಿನವರಿಗೆ ವಿವರಿಸುವುದು ತುಂಬಾ ಕಠಿಣ. ಇದು ತುಂಬಾ ಭಯಾನಕ ಮತ್ತು ಗೊಂದಲದಿಂದ ಕೂಡಿರುತ್ತದೆ.

ಕಳಕೊಂಡಿರುವುದನ್ನು ತುಂಬಲು ಅಸಾಧ್ಯ
ಪ್ರೇಮ ಸಂಬಂಧ ದೂರವಾದಾಗ ಬಳಿಗೆ ಬಂದು ನಿಂತು ಸಮಾಧಾನ ಹೇಳುವುದು ಸ್ನೇಹಿತರು. ಅವರು ಪ್ರತಿಯೊಂದು ಹಂತದಲ್ಲೂ ಸಮಾಧಾನ ಮಾಡುತ್ತಾರೆ. ಸ್ನೇಹಿತರನ್ನು ಕಳಕೊಂಡಾಗ ಪ್ರೇಮಿಗಳು ಹಲವಾರು ರೀತಿಯಿಂದ ಸಮಾಧಾನಿಸಲು ಪ್ರಯತ್ನಿಸಿದರೂ ಸ್ನೇಹಿತರು ಯಾವತ್ತಿದ್ದರೂ ಸ್ನೇಹಿತರೇ. ಅವರ ಜಾಗವನ್ನು ಮತ್ತೊಬ್ಬರಿಂದ ತುಂಬಲು ಸಾಧ್ಯವಿಲ್ಲ.



Click it and Unblock the Notifications











